Published: 2025-07-15

Table of Contents

Table of Contents

I to XVII

ಬಸವಣ್ಣನವರ ವಚನಗಳಲ್ಲಿ ಆಧುನಿಕ ಚಿಂತನೆಗಳ ಪ್ರತಿನಿಧೀಕರಣದ ಅನುಸಂಧಾನಗಳು

ಅನಿತಾ ಕೆ. ಗುಡಿ

02 to 12

ಹನ್ನೆರಡನೆಯ ಶತಮಾನ ಎಂದಾಕ್ಷಣ ನಮಗೆಲ್ಲ ಮೈತುಂಬಿಕೊಳ್ಳುವುದು: ಕಲ್ಯಾಣ ಪಟ್ಟಣ. ಬಾಗೇವಾಡಿಯಿಂದ ಕೂಡಲಸಂಗಮ, ಕೂಡಲಸಂಗಮದಿಂದ ಕಲ್ಯಾಣ, ಕಲ್ಯಾಣ ರಾಜ್ಯದ ರಾಜ ಬಿಜ್ಜಳ, ಬಿಜ್ಜಳನ ರಾಜಧಾನಿ ಕಲ್ಯಾಣ ಪಟ್ಟಣ, ಬಸವಣ್ಣನವರು ಕಲ್ಯಾಣ ಬೊಕ್ಕಸದ ಭಂಡಾರಿಯಾಗಿ, ಮಹಾಮಂತ್ರಿಗಳಾಗಿ ಕಲ್ಯಾಣದ ಕೀರ್ತಿಯನ್ನು ಲೋಕದ ಇತಿಹಾಸದಲ್ಲಿ ಬೆಳಗಿ, ನಾಡಿನ ನಾನಾ ಭಾಗಗಳಿಂದ ಸಾಧಕರನ್ನು ಬರಮಾಡಿಕೊಂಡು, ವರ್ಗ, ವರ್ಣ, ಲಿಂಗಭೇದ ರಹಿತ ಶರಣ ಸಮಾಜ ನಿರ್ಮಾಣ ಮಾಡಿದ್ದು, ಬಸವಣ್ಣನವರ ವೈಚಾರಿಕತೆ ಒಪ್ಪದ ಸನಾತನಿಗಳು ರಾಜಶಕ್ತಿಯ ಬಲದಿಂದ ಶರಣರಿಗೆ ಮರಣದಂಡನೆ, ಬಿಜ್ಜಳ ರಾಜನ ಕೊಲೆ, ಕಲ್ಯಾಣ ಕ್ರಾಂತಿ, ಬಸವಣ್ಣನವರ ಸುತ್ತಲೂ ಕಟ್ಟಿ ನಿಂತ ಅನಂತ ಸಾಧಕ ಶರಣರು ಇವೆಲ್ಲವೂ ನಡೆದದ್ದು ಏಕಕಾಲದಲ್ಲಿ. ಬಸವಯುಗವನ್ನು ಎಷ್ಟು ಸಲ ಯಾವ ಮಗ್ಗಲಿನಿಂದಲೂ ಓದಿದರೂ, ಕೇಳಿದರೂ, ಹಾಡಿದರೂ, ತೃಪ್ತಿಯಾಗುವುದಿಲ್ಲ. ಮತ್ತೆ ಮತ್ತೆ ಓದಬೇಕು, ನೋಡಬೇಕು, ಕೇಳಬೇಕು ಬಸವಯುಗದ ಚರಿತ್ರೆಯನ್ನು ಅನ್ನಿಸುವುದು. ಅಷ್ಟೊಂದು ರೋಮಾಂಚನದ ಐತಿಹಾಸಿಕ ಯುಗ ಬಸವಯುಗ.
ಬಾಗೇವಾಡಿಯಿಂದ ಬಸವಣ್ಣನವರ ಬಾಲ್ಯಜೀವನ, ಕೂಡಲಸಂಗಮದಲ್ಲಿ ಸಾಧಕ ಜೀವನ, ಕಲ್ಯಾಣದಲ್ಲಿ ಭಕ್ತಿ ಜೀವನ. ಈ ಮೂರು ಹಂತಗಳಲ್ಲಿ ವರ್ಗ ವ್ಯವಸ್ಥೆ, ಲಿಂಗ ವ್ಯವಸ್ಥೆ, ಪದಾರ್ಥಮಯ ವ್ಯವಸ್ಥೆಯಲ್ಲಿ ಸಮಾಜ ಕಂಡ ಬಸವಣ್ಣನವರು ಭವಿಗಳನ್ನು ಭಕ್ತರನ್ನಾಗಿ, ಅಂಗವ್ಯಸನಿಗಳನ್ನು ಲಿಂಗವ್ಯಸನಿಗಳನ್ನಾಗಿ, ಪದಾರ್ಥವನ್ನು ಪ್ರಸಾದವನ್ನಾಗಿ ಮಾಡಿದವರು. ಜಗತ್ತಿನ ಪ್ರಥಮ ಜನತಾ ಪಾರ್ಲಿಮೆಂಟ್ ಅನುಭವ ಮಂಟಪ ಸ್ಥಾಪಿಸಿ ಅರಮನೆ, ಗುರುಮನೆಯಲ್ಲಿ ಬಂಧಿಸಿದ್ದ ಜ್ಞಾನವನ್ನು ಸಾಮಾನ್ಯರಿಗೆ ದೊರಕುವಂತೆ ಮಾಡಿದವರು ಬಸವಣ್ಣನವರು. ಅದಕ್ಕಾಗಿಯೇ ಬಸವಣ್ಣನವರು ಸಮಾಜದ ಸಮಾನತೆಗಾಗಿ ಮನತುಂಬಿ ಹಾಡಿದ್ದಾರೆ. ಬಸವಣ್ಣನವರ ವಚನಗಳಲ್ಲಿ ಆಧುನಿಕ ಚಿಂತನೆಗಳ ಪ್ರತಿನಿಧೀಕರಣದ ಅನುಸಂಧಾನಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.

 

Read More »

ಬುದ್ಧಚಿಂತನೆ: ಅಹಿಂಸೆ

ಅರುಣ್ ಕುಮಾರ್ ಎ.ವೈ., ಶಿವಕುಮಾರ ಡಿ.ಸಿ.

13 to 22

ಜಗತ್ತಿನ ಮಾನವತಾ ಸಾಕಾರಮೂರ್ತಿಗಳಲ್ಲಿ ಬುದ್ಧನು ಮುಖ್ಯನಾದವನು. ಆತನ ವಿಚಾರಧಾರೆಗಳನ್ನು ಚರ್ಚಿಸುವಾಗ ಮಾನವೀಯ ಮೌಲ್ಯಗಳನ್ನು ಬಿತ್ತರಿಸುವಲ್ಲಿ ಮುಖ್ಯವಾದದ್ದಾಗಿದೆ. ಈ ಹಿನ್ನೆಲೆಯಲ್ಲಿ ಬುದ್ಧನ ವಿಚಾರಧಾರೆಗಳು ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ವ್ಯಾಪಿಸಿರುವುದು ಕಾಣಬಹುದಾಗಿದೆ. ಹೀಗಾಗಿ ಭೇದಭಾವ, ಅಸಮಾನತೆ, ಅನ್ಯಾಯ, ಹಿಂಸಾಚಾರ ಇವುಗಳಿಗೆ ವಿರುದ್ಧವಾಗಿ ಬುದ್ಧನ ವಿಚಾರಧಾರೆಗಳು ಮಾನವೀಯ ಅಂಶಗಳನ್ನು ಪ್ರಧಾನವಾಗಿರಿಸಿದೆ. ಸಮಾನತೆ, ಭ್ರಾತೃತ್ವ, ಸೌಹಾರ್ದತೆ, ಸ್ವಾತಂತ್ರ್ಯ ಈ ಅಂಶಗಳನ್ನು ಬುದ್ಧನ ನಿಲುವುಗಳು ಮಾನವ ಸಮಾಜಕ್ಕೆ ನೀಡಿದೆ ಎಂಬುದನ್ನು ಇಲ್ಲಿ ಅರ್ಥೈಸಬಹುದಾಗಿದೆ. ಶತಶತಮಾನಗಳಿಂದಲೂ ಉಳ್ಳವರು ಮತ್ತು ಇಲ್ಲದವರ ನಡುವಿನ ವ್ಯತ್ಯಾಸವನ್ನು ಕಾಣುವಾಗ ಇಲ್ಲದವರ ಮೇಲೆ ನಡೆದ ದೌರ್ಜನ್ಯ ಹಾಗೂ ದಬ್ಬಾಳಿಕೆಯನ್ನು ಬುದ್ಧನ ವಿಚಾರಧಾರೆಗಳು ಆರೋಗ್ಯಕರವಾಗಿಯೇ ಸವಾಲೆಸೆಗಿದೆ.
ಪ್ರಸ್ತುತ ಈ ಲೇಖನವು ಗೌತಮ ಬುದ್ಧನು ಜಗತ್ತಿಗೆ ತೋರ್ಪಡಿಸಿದ ಅಹಿಂಸಾ ಚಿಂತನೆಯನ್ನು ಇಲ್ಲಿ ಮುಖ್ಯವಾಗಿರಿಸಿಕೊಂಡು ಚರ್ಚಿಸಲಾಗಿದ್ದು, ಹಿಂಸೆ ಮತ್ತು ಅಹಿಂಸಾ ಪ್ರವೃತ್ತಿಗಳನ್ನು ತಿಳಿಯಪಡಿಸುವ ಮೂಲಕ ಸಕಲ ಜೀವರಾಶಿಗಳಲ್ಲೂ ಅಹಿಂಸೆಯೇ ಪ್ರಧಾನವಾಗಿರುವುದನ್ನು ಇಲ್ಲಿ ತಿಳಿಯಬಹುದಾಗಿದೆ. ಹೀಗಾಗಿ ಬುದ್ಧನ ಚಿಂತನೆಗಳಲ್ಲೊಂದಾದ ಅಹಿಂಸೆ’ಯನ್ನು ಸೂಕ್ಷ್ಮವಾಗಿ ಗ್ರಹಿಸುವ ಮೂಲಕ ಬುದ್ಧನ ಅಹಿಂಸೆಯಾವುದೆಂದು ಅರಿಯುವುದು ಇಲ್ಲಿನ ಲೇಖನದಲ್ಲಿ ಕಾಣಬಹುದಾಗಿದೆ.ಬುದ್ಧಚಿಂತನೆ’ ಎನ್ನುವುದು ಒಂದು ಅರಿವು, ಎಚ್ಚರ ಹಾಗೂ ಮಾನವೀಯ ಪರವಾದದ್ದು ಎಂಬುದನ್ನು ಇಲ್ಲಿ ತಿಳಿಯಬಹುದು.

Read More »

ವಚನ ಸಾಹಿತ್ಯದಲ್ಲಿ ಪರಂಪರೆ ಮತ್ತು ಆಧುನಿಕತೆ

ಅರುಂಧತಿ ಎಫ್. ಬದಾಮಿ

23 to 33

ಪ್ರಸ್ತುತ ವಚನ ಸಾಹಿತ್ಯದಲ್ಲಿ ಪರಂಪರೆ ಮತ್ತು ಆಧುನಿಕತೆ ಎಂಬ ಲೇಖನದಲ್ಲಿ ಪರಂಪರೆ ಮತ್ತು ಆಧುನಿಕತೆ ಎಂದರೇನು? ವಚನಸಾಹಿತ್ಯದಲ್ಲಿ ಪರಂಪರೆ ಮತ್ತು ಆಧುನಿಕತೆಗಳು ಹೇಗೆ ಮುಖಾಮುಖಿಯಾಗುತ್ತವೆ? ಎಂಬುದನ್ನು ಚರ್ಚೆಗೊಳಪಡಿಸಲಾಗಿದೆ. ಶರಣರು ಸಂಪ್ರದಾಯ ಹೇಳಿದ ಪ್ರತಿ ವಿಚಾರಗಳನ್ನು ಮಾನವೀಯತೆ, ವೈಜ್ಞಾನಿಕ ತಳಹದಿಯ ಮೇಲೆ ಗಮನಿಸುತ್ತಾರೆ. ಹನ್ನೆರಡನೆಯ ಶತಮಾನಕ್ಕಿಂತ ಪೂರ್ವದಲ್ಲಿದ್ದ ಸಾಹಿತ್ಯ, ಮತ್ತು ಸಾಂಸ್ಕೃತಿಕ ಅಂಶಗಳು ಹನ್ನೆರಡನೇ ಶತಮಾನದಲ್ಲಿ ಏನೆಲ್ಲ ಬದಲಾವಣೆಗಳನ್ನು ಪಡೆದುಕೊಂಡವು, ಮತ್ತು ಅದಕ್ಕೆ ಕಾರಣಗಳನ್ನು ಈ ಲೇಖನದಲ್ಲಿ ವಿಶ್ಲೇಷಿಸಲಾಗಿದೆ. ಪ್ರಸ್ತುತ ಲೇಖನವನ್ನು ಎರಡು ದೃಷ್ಟಿಕೋನದಿಂದ ಅಧ್ಯಯನಕ್ಕೊಳಪಡಿಸಲಾಗಿದೆ. ಒಂದು ವಚನ ಸಾಹಿತ್ಯದ ಬಾಹ್ಯ ಸ್ವರೂಪ, ಇನ್ನೊಂದು ಅದರ ಆಂತರಿಕ ಸ್ವರೂಪ.
ವಚನವೆಂಬ ಪ್ರಕಾರವೇ ಕನ್ನಡ ಸಾಹಿತ್ಯಕ್ಕೆ ಒಂದು ಹೊಸ ಮಾದರಿಯಾಗಿದೆ. ಇಲ್ಲಿ ಪರಂಪರಾಗತವಾಗಿ ಜನರೂಢಿಯಲ್ಲಿದ್ದ ಒಡಪು, ಒಗಟುಗಳು, ಗಾದೆ ಮಾತುಗಳನ್ನು ತಮ್ಮ ವಚನದಲ್ಲಿ ಸಹಜವೆಂಬಂತೆ ಬಳಕೆ ಮಾಡಿರುವುದನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ. ಅಂಕಿತನಾಮದ ಬಳಕೆ ವಚನ ಸಾಹಿತ್ಯದ ನೂತನ ಪರಿಕಲ್ಪನೆಯಾಗಿರುವುದನ್ನು ಇಲ್ಲಿ ಗಮನಿಸಲಾಗಿದೆ. ಪರಂಪರಾಗತವಾಗಿ ಕೆಲವರಿಗಷ್ಟೇ ಮೀಸಲಾಗಿದ್ದ ಸಾಹಿತ್ಯ ರಚನೆ ವಚನ ಸಾಹಿತ್ಯದ ಸಂದರ್ಭದಲ್ಲಿ ಆ ಪರಂಪರೆಯನ್ನು ಮುರಿದು ಎಲ್ಲ ಜಾತಿ ವರ್ಗದ ಜನರೂ ಸಾಹಿತ್ಯ ರಚನೆಗೆ ತೊಡಗಿಕೊಂಡರು. ಶರಣರ ದೃಷ್ಟಿಯಲ್ಲಿ ಸ್ವರ್ಗ-ನರಕ, ಪುಣ್ಯ-ಪಾಪ-ಮೋಕ್ಷಗಳ ಪರಿಕಲ್ಪನೆಯೇ ಬೇರೆಯಾಗಿದೆ. ಕಾಯಕ ಮತ್ತು ದಾಸೋಹಗಳು ಶರಣರ ಬಹು ದೊಡ್ಡ ಹೊಸ ಪರಿಕಲ್ಪನೆಗಳು. ಕಾಯಕ ತತ್ವದ ಮೂಲಕ ಅಂದಿನ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿರುವುದನ್ನು ಗಮನಿಸಬಹುದು. ಸ್ತ್ರೀಯರಿಗಂತೂ ವಚನಸಾಹಿತ್ಯದಲ್ಲಿ ಅತ್ಯುನ್ನತ ಸ್ಥಾನವನ್ನು ನೀಡಿದರು. ಆಧ್ಯಾತ್ಮಿಕತೆಯ ಸಾಧನೆಗೆ ಸ್ತ್ರೀಯರೇ ದೊಡ್ಡ ತೊಡಕು ಎಂದು ಪರಂಪರಾಗತವಾಗಿ ಬಂದ ಮಾತುಗಳನ್ನು ಶರಣರು ಅಲ್ಲಗಳೆಯುತ್ತಾರೆ. ಮತ್ತು ಎಲ್ಲದರಲ್ಲಿಯೂ ಸ್ತ್ರೀಯರಿಗೆ ಸಮಾನ ಸ್ಥಾನವನ್ನು, ಗೌರವವನ್ನೂ ನೀಡುತ್ತಾರೆ. ಹಾಗೆಯೇ ರಾಜಕೀಯ ಚಿಂತನೆಯಿಂದ ಗಮನಿಸಿದಾಗ ಸಾಮಾಜಿಕ ಸುಧಾರಣೆ ಶರಣಾಂಧೋಲನದ ಮುಖ್ಯ ಗುರಿಯಾದ್ದರಿಂದ ಸ್ವತಃ ಅರಸನೇ ಅಡ್ಡಿ ಬಂದರೂ ಅವರು ಅಳುಕದೆ ಅರಸೊತ್ತಿಗೆಯನ್ನು ಹೇಗೆ ಎದುರಿಸಿದರು ಎಂಬುದನ್ನು ಪ್ರಸ್ತುತ ಲೇಖನದಲ್ಲಿ ಚರ್ಚಿಸಲಾಗಿದೆ.

Read More »

ತತ್ವಪದ ಸಾಹಿತ್ಯದಲ್ಲಿ ಸಾಂಸ್ಕೃತಿಕ ನೆಲೆಗಳು

ಆಶಾಲತಾ

34 to 48

ತತ್ವಪದ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯನ್ನು ನೀಡಿದೆ. ಗಗನಕುಸುಮವಾಗಿದ್ದ ಸಾಹಿತ್ಯವನ್ನು ಜನಸಾಮಾನ್ಯರ ನಡುವೆ ತಂದ ಕೀರ್ತಿ ತತ್ವಪದಕಾರರದ್ದಾಗಿದೆ. ಅತೀತ ಬದುಕು ಬದುಕಿದ ತತ್ವಪದಕಾರರು ತಾವು ಕಂಡ ಅನುಭವವನ್ನು ಹೃದ್ವೇದ್ಯವಾಗುವ ವಿಶಿಷ್ಟ ರೀತಿಯ ತತ್ವಪದಗಳಲ್ಲಿ ಕಾಣಿಸಿದರು. ಸಾರ್ವಕಾಲಿಕ ಮಾನವೀಯ ಮೌಲ್ಯಗಳಾದ ಸತ್ಯ, ಅಹಿಂಸೆ, ದಯೆ, ಕರುಣೆ, ಅನುಕಂಪ, ಸಮಾನತೆ, ಸಹಕಾರ, ಜಾತ್ಯಾತೀತ, ಕಾಯಕ, ದಾಸೋಹ ಇತ್ಯಾದಿಗಳು 12ನೇ ಶತಮಾನದಿಂದ ಇವತ್ತಿನವರೆಗೂ ಹೊಸ ರೂಪ ಪಡೆದು ಸಮಕಾಲೀನತೆ ಪಡೆದುಕೊಂಡಿದೆ.

Read More »

ಕುವೆಂಪು ಮತ್ತು ಭಾರತೀಯ ಜ್ಞಾನ ಪರಂಪರೆ: ಬುದ್ಧ-ಬಸವ-ಗಾಂಧೀಜಿ ಅವರನ್ನು ಅನುಲಕ್ಷಿಸಿ

ಬಿ.ಆರ್. ಸತ್ಯನಾರಾಯಣ

49 to 67

ರಾಷ್ಟ್ರಕವಿ ಕುವೆಂಪು ಅವರ ಬದುಕು-ಬರಹಗಳೆರಡೂ ಕಾಲದೇಶಗಳನ್ನು ಮೀರಿದ ಅಚ್ಚರಿಗೆ ಕಾರಣವಾಗಿವೆ. ಆ ಮಹಾಪ್ರತಿಭೆಯ ಅನಾವರಣಕ್ಕೂ ಮೊದಲು, ಬುದ್ಧ, ಬಸವ, ಪರಮಹಂಸ-ವಿವೇಕಾನಂದ ಮತ್ತು ಗಾಂಧಿ ಮೊದಲಾದವರ ಪ್ರಭಾವಕ್ಕೆ ಕುವೆಂಪು ಒಳಗಾಗಿದ್ದಾರೆ. ಹಲವಾರು ಪರಂಪರೆಗಳ, ಜ್ಞಾನಶಾಖೆಗಳ, ಮತಧರ್ಮಗಳ ಸಾರಸರ್ವಸ್ವವನ್ನೂ, ಮಹಾಪುರುಷರ ಬದುಕನ್ನಷ್ಟೇ ಅಲ್ಲದೆ ಜನಸಾಮಾನ್ಯರ ಬದುಕನ್ನೂ ಕುವೆಂಪು ಪರಿಭಾವಿಸಿದ್ದಾರೆ.
ಕುವೆಂಪು ಅವರ ಬದುಕು ಬರಹಗಳನ್ನು ಬಹುವಾಗಿ ಪ್ರಭಾವಿಸಿದ ಇಬ್ಬರು ಮಹನೀಯರೆಂದರೆ ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರು. ಇವರಿಬ್ಬರ, ಕುವೆಂಪು ಅವರ ಮೇಲಿನ ಪ್ರಭಾವ ಪ್ರೇರಣೆಗಳನ್ನು ಕುರಿತು ಹಾಗೂ ಅವರಿಬ್ಬರ ಬಗೆಗಿನ ಕುವೆಂಪು ಗ್ರಹಿಕೆ ಮತ್ತು ಅಭಿವ್ಯಕ್ತಿಯನ್ನು ಕುರಿತು ಹಲವಾರು ಅಧ್ಯಯನಗಳು ನಡೆದಿವೆ. ಇದೇ ಮಾತನ್ನು ಬುದ್ಧ, ಬಸವ ಮತ್ತು ಮಹಾತ್ಮಾ ಗಾಂಧಿಯವರ ಬಗ್ಗೆ ಹೇಳಲಾಗುವುದಿಲ್ಲ. ಗಾಂಧಿಯವರ ಬಗ್ಗೆ ಹಲವಾರು ಕವನಗಳನ್ನು, ಲೇಖನಗಳನ್ನು ಬರೆದಿದ್ದಾರೆ, ಭಾಷಣಗಳನ್ನು ಮಾಡಿದ್ದಾರೆ. ಗಾಂಧಿಯವರನ್ನು ನೋಡಲು ಬೆಳಗಾವಿಗೂ ಹೋಗಿದ್ದರು. ಬುದ್ಧ ಮತ್ತು ಬಸವಣ್ಣನವರ ಬಗ್ಗೆ ಮೂರ್ನಾಲ್ಕು ಪದ್ಯಗಳು ಮತ್ತು ಬಸವಣ್ಣನವರ ಬಗ್ಗೆ ಒಂದು ಪುಟ್ಟ ಲೇಖನವನ್ನೂ ಬರೆದಿದ್ದಾರೆ. ಅವರ ‘ಮಹಾರಾತ್ರಿ’ ಬುದ್ಧನ ಕುರಿತಾದ ಮಹತ್ವದ ನಾಟಕಗಳಲ್ಲಿ ಒಂದಾಗಿದೆ. ಆದರೆ, ಇವುಗಳನ್ನು ಯಾರೂ ಪರಿಶೀಲಿಸಿದಂತೆ ಕಾಣುವುದಿಲ್ಲ. ಕುವೆಂಪು ಅವರು ಬುದ್ಧ, ಬಸವ ಮತ್ತು ಗಾಂಧಿಯವರನ್ನು ಹೇಗೆ ಪರಿಭಾವಿಸಿದ್ದಾರೆ ಮತ್ತು ಅವರನ್ನು ಅಭಿವ್ಯಕ್ತಿಯಲ್ಲಿ ಹೇಗೆ ಕಂಡರಿಸಿದ್ದಾರೆ ಎಂಬ ಬಗ್ಗೆ ಹಾಗೂ ಕುವೆಂಪು ಅವರ ಮೇಲೆ ಅವರ ಪ್ರಭಾವಗಳೇನು ಎಂಬುದರ ಬಗ್ಗೆ ಅಧ್ಯಯನ ನಡೆಯಬೇಕಿದೆ.
ಕುವೆಂಪು ಅವರ ಸಾಹಿತ್ಯವನ್ನು ಓದಿದ ಯಾರಿಗಾದರೂ, ವಿಭಿನ್ನ ವಿಚಾರಧಾರೆಗಳ ನಡುವೆಯೂ ಸಮನ್ವಯ ಸೂತ್ರವನ್ನು ಕಾಣುವ ಪೂರ್ಣದೃಷ್ಟಿಯನ್ನು ಕವಿ ಸಾಧಿಸಿರುವುದು ಮೇಲ್ನೋಟಕ್ಕೇ ಗೋಚರಿಸುತ್ತದೆ. ಪ್ರಸ್ತುತ, ಉದ್ದೇಶಿತ ಪ್ರಬಂಧದಲ್ಲಿ, ಕುವೆಂಪು ಅವರು ಬುದ್ಧ, ಬಸವ, ಮತ್ತು ಗಾಂಧೀಜಿ – ಈ ಮೂರೂ ಸಾಧಕರನ್ನು ಕುವೆಂಪು ಹೇಗೆ ಗ್ರಹಿಸಿದ್ದಾರೆ ಹಾಗೂ ಅವರನ್ನು ತಮ್ಮ ಬರಹಗಳಲ್ಲಿ ಅಭಿವ್ಯಕ್ತಿಸಿದ್ದಾರೆ ಎಂಬುದನ್ನು ಪರಿಶೋಧಿಸುವ ಪ್ರಯತ್ನ ನಡೆದಿದೆ.
ಮಾನವೀಯ ಹಾಗೂ ಮೌಲ್ಯಯುತ ಪರಂಪರೆ ಮಾತ್ರ ಸಶಕ್ತ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಂತಹ ಅಧ್ಯಯನಗಳು ನಮ್ಮ ಪರಂಪರೆಯ ಮಹತ್ವವನ್ನು ಅರಿಯಲು ನೆರವಾಗುತ್ತವೆ ಹಾಗೂ ಮುಂದಿನ ತಲೆಮಾರುಗಳಿಗೆ ಸಾಗಿಸುವ ವಾಹಿನಿಗಳೂ ಆಗಿರುತ್ತವೆ.

Read More »

ತತ್ವಪದ ಸಾಹಿತ್ಯದಲ್ಲಿ ಪರಂಪರೆ ಮತ್ತು ಆಧುನಿಕತೆ

ಗಾಯತ್ರಿ ದೇವಿ

68 to 79

‘ತತ್ವ’ ಮತ್ತು ‘ಪದ’ಗಳಿಂದ ತತ್ವಪದದ ನಿಷ್ಪತ್ತಿಯನ್ನು ನಾವು ನೋಡುವುದಾದರೆ, ‘ತತ್ವ’ ಎಂದರೆ ‘ಯಥಾರ್ಥತೆ’, ನಿಜಸ್ಥಿತಿ, ಬ್ರಹ್ಮ, ಸಾರಸ್ವರೂಪ, ಸ್ವಭಾವ, ವಸ್ತು, ಪಂಚಭೂತ, ಮೂಲ ಪದಾರ್ಥ, ಸಿದ್ಧಾಂತ, ದರ್ಶನ ಎಂಬ ಅರ್ಥಗಳನ್ನು ಒಳಗೊಂಡಿದೆ. ‘ಪದ’ ಎಂದರೆ ‘ಹಾಡು’, ‘ಹದಗೊಂಡ ಶಬ್ದ’ ಎಂಬ ಅರ್ಥ ನಮಗೆ ತಿಳಿಯುತ್ತದೆ. ಒಟ್ಟಾರೆಯಾಗಿ ತತ್ವಪದ ಎಂದರೆ ಪರಮಾರ್ಥಕ್ಕೆ ಸಂಬಂಧಿಸಿದ ಸಿದ್ಧಾಂತವನ್ನು ಹಾಡಿನ ಮೂಲಕ ಅಭಿವ್ಯಕ್ತಿಸುವ ಕ್ರಿಯೆಗೆ ತತ್ವಪದ ಎನ್ನುತ್ತಾರೆ.
ಕರ್ನಾಟಕದಾದ್ಯಂತ ದೇಸಿ ಸಾಹಿತ್ಯ ಪರಂಪರೆಯ ಸಾಲಿನಲ್ಲಿ ಈ ತತ್ವಪದವನ್ನು ಅವಲೋಕಿಸಲು ಸಾಧ್ಯ. ತತ್ವಪದಗಳ ವಿಶೇಷತೆ ಎಂದರೆ ಈ ಸಾಹಿತ್ಯ ಪರಂಪರೆ ಹುಟ್ಟುವ ಸ್ಥಳ, ಕಾಲ ಹಾಗೂ ಅಲ್ಲಿನ ಜನರ ಮನಸ್ಥಿತಿಗಳನ್ನು ಒಳಗೊಂಡಿರುತ್ತದೆ. ಇಂತಹ ಅನುಭವ ಸಾಹಿತ್ಯದಲ್ಲಿ ಆ ಕಾಲದ ವೈರುಧ್ಯಗಳು ಎದ್ದು ಕಾಣುತ್ತವೆ. ಅಂತಹ ವೈರುಧ್ಯಗಳಲ್ಲಿ ಪರಂಪರೆ ಮತ್ತು ಆಧುನಿಕತೆ ಎಂಬ ಪರಿಕಲ್ಪನೆಗಳು ಮುಖ್ಯವಾಗಿವೆ.
ಆಧುನಿಕತೆ ಎಂದರೆ ಹೊಸತು, ವರ್ತಮಾನಕ್ಕೆ ಸಂಬಂಧಿಸಿದ್ದು, ಪರಂಪರೆಗೆ ವಿರುದ್ಧವಾದದ್ದು, ಬೇರೆ ಮೂಲದಿಂದ ಬಂದದ್ದು, ಹೀಗೆ ಬೇರೆ ಬೇರೆ ಅರ್ಥಗಳಲ್ಲಿ ಅರ್ಥೈಸಿಕೊಂಡಿದ್ದೇವೆ. ಆಧುನಿಕತೆ ಎಂಬುದು ಜೀವನಶೈಲಿಗೆ ಸಂಬಂಧಿಸಿದ್ದು. ಕೆಲವೊಂದು ಸಂದರ್ಭದಲ್ಲಿ ಒಂದೇ ಸಂಸ್ಕೃತಿಯಲ್ಲಿ ಚಾರಿತ್ರಿಕವಾಗಿ ನಡೆಯುವ ಬದಲಾವಣೆಗಳನ್ನು ಸೂಚಿಸಲು ಕಾಲದ ದೃಷ್ಟಿಯಿಂದ ಆಧುನಿಕತೆ ಬಳಕೆಯಾಗುತ್ತದೆ. ಆದರೆ ನಮ್ಮಲ್ಲಿ ವಸಾಹತು ಆಡಳಿತದಿಂದಾಗಿ ಆಧುನಿಕತೆಗೆ ಬೇರೆ ಅರ್ಥವಿದೆ.
ಸಾಹಿತ್ಯ ಚರ್ಚೆಯಲ್ಲಿ ಮತ್ತೆ ಮತ್ತೆ ಔಪಚಾರಿಕವಾಗಿ ಮತ್ತು ಅರೆಔಪಚಾರಿಕವಾಗಿ ಈ ಪರಂಪರೆ ಎಂಬ ಪದವನ್ನು ಬಳಸಲಾಗುತ್ತಿದೆ. ಇದರ ಔಪಚಾರಿಕ ಬಳಕೆ ಸಂಸ್ಕೃತದಲ್ಲಿ ‘ಪರಂಪರಾ’ದಿಂದ ವ್ಯುತ್ಪತ್ತಿಯಾಗಿದ್ದು ಈಗ ದೇಶೀಯವಾಗಿ ಬಳಕೆಯಾಗುತ್ತಿದೆ. ಆಕ್ಸ್ ಫೋರ್ಡ್ ಡಿಕ್ಷನರಿ ಪ್ರಕಾರ ಪರಂಪರೆ ಎಂದರೆ “Handing down” ಮುಂದಿನ ಪೀಳಿಗೆಗೆ ಹಸ್ತಾಂತರಿಸು ಎಂದರ್ಥ. “ಯಾವುದಾದರೂ ಕ್ಷೇತ್ರ, ಕಲಾಶಾಲೆ ಅಥವಾ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಪೂರ್ವಜರು ಕೊಡಮಾಡಿದ ಮತ್ತು ಸಾಮಾನ್ಯವಾಗಿ ಅನುಸರಿಸಿದ ಅನುಭವ ಸಂಗ್ರಹ ಮತ್ತು ಬಳಕೆಯೇ ಪರಂಪರೆ.” ಪರಂಪರೆ ಮತ್ತು ಆಧುನಿಕತೆ ಎಂಬ ಎರಡು ಪರಿಕಲ್ಪನೆಗಳು ತೀರಾ ಭಿನ್ನವಾದದ್ದು. ಪರಂಪರೆ ಮತ್ತು ಆಧುನಿಕತೆಯ ನಡುವೆ ಪರಸ್ಪರ ದೀರ್ಘ ಕಾಲೀನ ಸಂಘರ್ಷ ಮತ್ತು ಪರಸ್ಪರ ವಿನಿಮಯದ ಇತಿಹಾಸವಿದೆ.
ಈ ಲೇಖನದಲ್ಲಿ ಪರಂಪರೆ ಹಾಗೂ ಆಧುನಿಕತೆಯ ಅರ್ಥ ಸ್ವರೂಪ, ಅವುಗಳ ಅಸ್ತಿತ್ವ ಹಾಗೂ ತತ್ವಪದಕಾರರು ಅವುಗಳನ್ನು ಎದುರುಗೊಂಡಂತಹ ನೆಲೆಗಳನ್ನು ಚರ್ಚಿಸಲಾಗಿದೆ. ಪರಂಪರೆ ಮತ್ತು ಆಧುನಿಕತೆ ಏಕಕಾಲದಲ್ಲಿ ಸದಾ ಘರ್ಷಣೆ, ಜನಸಾಮಾನ್ಯರ ಬದುಕಿನಲ್ಲಿ ಒಳಗೊಂಡಿರುವಂತಹ ಪರಿ. ಅದನ್ನು ಎದುರಿಸಬೇಕಾದ ಅಂಶಗಳನ್ನು ಪ್ರಸ್ತಾಪಿಸಲಾಗಿದೆ.

Read More »

ತತ್ವಪದಗಳ ಪಾರಂಪರಿಕತೆ ಮತ್ತು ಆಧುನಿಕತೆ

ಗೌರಮ್ಮ ಟಿ. ರಾಜು

80 to 92

ಕನ್ನಡ ಸಾಹಿತ್ಯ ತನ್ನ ಸೃಜನಶೀಲ ಶಕ್ತಿಯಿಂದ ಹಾಗೂ ಕಲ್ಪನಾಶೀಲ ಆಯಾಮಗಳಿಂದ ಸಮೃದ್ಧವಾಗಿರುವುದರ ಜೊತೆಗೆ ಈ ಲೋಕ ಮತ್ತು ಆ ಲೋಕಗಳ ಅನುಭವವನ್ನು ಹಾಗೂ ದೈವ ಪರವಾದ ನಂಬಿಕೆಗಳನ್ನು ಒಳಗೊಂಡ ಆಧ್ಯಾತ್ಮಿಕ ಸಂಗತಿಗಳನ್ನು ಜೀವದ್ರವ್ಯವಾಗಿಸಿಕೊಂಡ ವಿಶಿಷ್ಟ ಮೌಲಿಕತೆಯನ್ನು ಕೂಡ ಪಡೆದಿದೆ. ಕನ್ನಡ ಜನಪದ ಸಾಹಿತ್ಯ ಕೂಡ ಇದಕ್ಕೆ ಹೊರತಾಗಿಲ್ಲ. ದೈನಂದಿನ ಜೀವನಾನುಭವಗಳನ್ನು ಅತ್ಯಂತ ಹೃದಯಂಗಮವಾಗಿ ತಮ್ಮದೇ ಆದ ವಿಶಿಷ್ಟ ಅಭಿವ್ಯಕ್ತಿ ಕ್ರಮದಲ್ಲಿ ಸಾದರಪಡಿಸುವ ಜನಪದ ಕವಿಗಳು ಭಕ್ತಿ, ವೈರಾಗ್ಯ, ಅನುಭವ ಹಾಗೂ ಅನುಭಾವಗಳನ್ನು ತುಂಬಾ ಸಮರ್ಥವಾಗಿ ಮತ್ತು ಸಹೃದಯರ ಮನದಲ್ಲಿ ನೆಟ್ಟು ನಿಲ್ಲುವಂತೆ ಸಂಗೀತ ಮತ್ತು ಭಾಷೆಗಳ ಸಮ್ಮಿಲನದೊಡನೆ ಪ್ರಕಟಿಸಿದ್ದಾರೆ.

Read More »

ಪಾರಂಪರಿಕ ತತ್ವಪದಗಳ ಅನುಸರಣೆ ಮತ್ತು ಸಮಕಾಲೀನ ವಿಶ್ಲೇಷಣೆ

ಹೇಮಲತ ಜಿ.ಎಂ.

93 to 105

ತತ್ವಪದಕಾರರು ಅನುಭವದ ಚಳುವಳಿಯನ್ನು ಹುಟ್ಟುಹಾಕಿ ತಮ್ಮ ತತ್ವಪದಗಳ ರಚನೆಯ ಮೂಲಕ ಜೀವಂತವಾಗಿರಿಸಿದ್ದಾರೆ. ಅವರು ಸಂಚರಿಸಿದಲ್ಲೆಲ್ಲಾ ಅನುಭಾವದ ಹೊಳೆಯನ್ನೇ ಹರಿಸಿದ್ದಾರೆ. ತಮಗೆ ತಾವೇ ಗುರುವಾಗಿ, ಅರಿವಾಗಿ, ಗುರುವಿನ ಮಹತ್ವವನ್ನು ಸಾರುತ್ತಾ ಬಂದಿದ್ದಾರೆ. ಆಧ್ಯಾತ್ಮದ ಸಾಮರ್ಥ್ಯವನ್ನು ಸಿದ್ಧಿಸಿಕೊಂಡು ಬಹುಮುಖಿ ಚಿಂತನೆಯ ಪ್ರತೀಕದಂತೆ ಗೋಚರಿಸುತ್ತಾರೆ. ತತ್ವಪದಕಾರರಿಗೆ ನಾಥ, ಸಿದ್ಧ, ಆರೂಢ, ಅವಧೂತ, ಸೂಫಿ ಮೊದಲಾದ ಧಾರೆಗಳ ಪ್ರಭಾವ ಆಗಿರುವುದನ್ನು ಕಾಣುತ್ತೇವೆ. ಸಾಮಾನ್ಯವಾಗಿ ತತ್ವದ ಉದ್ದೇಶ ಅರಿವು ಅಥವಾ ವಿವೇಕವನ್ನು ನೀಡುವುದು. ಜಟಿಲವಾದ ಆಧ್ಯಾತ್ಮವನ್ನು ಸರಳೀಕರಣಗೊಳಿಸುವುದು ತತ್ವಪದಕಾರರ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ದೇವರು ಅಥವಾ ಪರಮಾತ್ಮನಿಗೆ ಸಂಬಂಧಿಸಿದ ಹದಗೊಂಡ ಸಿದ್ಧಾಂತವನ್ನು ಸುಂದರವಾದ ಹಾಡಿನ ಮೂಲಕ ಅಭಿವ್ಯಕ್ತಿಸುವ ಕ್ರಿಯೆಗೆ ತತ್ವಪದ ಎಂದು ಕರೆಯಲಾಗುತ್ತದೆ. ಆಧುನಿಕ ಸಮಾಜದಲ್ಲಿ ತತ್ವಪದಗಳು ಕೇವಲ ಭಕ್ತಿ ಮತ್ತು ತಾತ್ತ್ವಿಕ ವಿಚಾರಗಳನ್ನು ಮಾತ್ರವಲ್ಲದೆ, ಮೌಲ್ಯಮಾಪನ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಪ್ರೇರಕಶಕ್ತಿಯಾಗಿ ಮುಂದುವರಿಯುತ್ತಿವೆ. ತತ್ತ್ವಪದಗಳ ಮೂಲಕ ಜೀವನದ ನೈತಿಕ ಮೌಲ್ಯಗಳನ್ನು, ಸಹಜ ಶ್ರೇಣಿಭೇದ ವಿರೋಧವನ್ನು, ಸಮಾನತೆ ಮತ್ತು ಸತ್ಯಾಸತ್ಯತೆಯ ಪ್ರಭಾವವನ್ನು ವಿಶ್ಲೇಷಿಸಲು ಸಾಧ್ಯವಾಗಿದೆ. ನಾವು ಬಸವಣ್ಣನವರ, ಅಲ್ಲಮಪ್ರಭು, ಅಕ್ಕಮಹಾದೇವಿ ಹಾಗೂ ದಾಸಸಾಹಿತ್ಯದ ತತ್ವಪದಗಳನ್ನು ಆಧುನಿಕ ದೃಷ್ಟಿಕೋನದಿಂದ ನೋಡಿದರೆ, ಅವುಗಳು ತತ್ವಜ್ಞಾನ ಮತ್ತು ಸಾಮಾಜಿಕ ನಿಲುವುಗಳ ಹೊಸ ಅರ್ಥಗಳನ್ನು ನೀಡುತ್ತವೆ. ಉದಾಹರಣೆಗೆ, ಬಸವಣ್ಣನವರ “ಕಾಯಕವೇ ಕೈಲಾಸ” ಎಂಬ ತತ್ವಪದ ಇಂದು ಉದ್ಯೋಗನೀತಿ, ಶ್ರಮದ ಗೌರವ, ಮತ್ತು ಆರ್ಥಿಕ ಸ್ವಾವಲಂಬನೆಯ ತತ್ವವಾಗಿ ವ್ಯಾಖ್ಯಾನಿಸಲಾಗುತ್ತಿದೆ. ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನ, ಮಾಧ್ಯಮ ಮತ್ತು ಸಾಮಾಜಿಕ ಚಿಂತನೆಗಳಲ್ಲಿ ಆದ ಬದಲಾವಣೆಗಳು ತತ್ವಪದಗಳ ಮೇಲೂ ಪರಿಣಾಮ ಬೀರಿವೆ. ಆದರೂ ಅವು ತಮ್ಮ ಮೂಲ ಸತ್ವವನ್ನು ಉಳಿಸಿಕೊಂಡು ಹೊಸ ಆಯಾಮಗಳನ್ನು ಪಡೆದುಕೊಂಡಿವೆ.

Read More »

ವಚನ ಸಾಹಿತ್ಯದಲ್ಲಿ ಪರಂಪರೆ ಮತ್ತು ಆಧುನಿಕ ಚಿಂತನೆಗಳು

ಶ್ರೀಮತಿ ಜೀವಿತ ಡಿ.

106 to 109

ವಚನ ಸಾಹಿತ್ಯವು ಭಕ್ತಿಯ ಆಳವಾದ ಅಭಿವ್ಯಕ್ತಿ ಮಾತ್ರವಲ್ಲ, ಸಮಾಜವನ್ನು ಹೊಸ ದಿಕ್ಕಿನಲ್ಲಿ ಕರೆದೊಯ್ಯುವ ಬದಲಾವಣೆಯ ದಾರಿಯಾಗಿದೆ. 12ನೇ ಶತಮಾನದ ಶರಣ ಸಾಹಿತ್ಯವು ಧರ್ಮ, ಸಮಾಜ, ಲಿಂಗ, ಶ್ರಮದ ಬಗ್ಗೆ ಕ್ರಾಂತಿಕಾರಕ ಚಿಂತನೆಗಳನ್ನು ಒಳಗೊಂಡಿದೆ. ಈ ಮೂಲಕ ನಡುಗನ್ನಡ ಕಾಲದ ಪರಂಪರೆಗಳನ್ನು ಪ್ರಶ್ನಿಸುತ್ತಾ ಆಧುನಿಕ ಚಿಂತನೆಗಳಿಗೆ ದಾರಿ ತೆರೆದಿದೆ. ಆ ಕಾಲದಲ್ಲಿ ಜಾತಿ ವ್ಯವಸ್ಥೆ ಕಠಿಣವಾಗಿದ್ದು, ಪುರೋಹಿತರ ಪ್ರಭಾವ, ಯಜ್ಞದ ಆಚಾರಗಳು, ಲಿಂಗ ವೈಷಮ್ಯ ಸಮಾಜದಲ್ಲಿ ಆಳವಾಗಿ ನೆಲೆಸಿದ್ದವು. ಶರಣರು ಈ ಮೂಢನಂಬಿಕೆಗಳನ್ನು ಧೈರ್ಯದಿಂದ ಪ್ರಶ್ನಿಸಿದರು ಹಾಗೂ ತಮ್ಮ ಸಾಹಿತ್ಯದ ಮೂಲಕ ಶುದ್ಧ ಭಕ್ತಿ, ಸಮಾನತೆ, ನೈತಿಕ ವಿಚಾರಗಳ ಕುರಿತಾದ ಹೊಸ ಚಿಂತನೆಗಳನ್ನು ರೂಪಿಸಿದರು. ದೇವರನ್ನು ಒಲಿಸಿಕೊಳ್ಳಲು ಪ್ರಾಮಾಣಿಕ ಶ್ರಮ ಮತ್ತು ನೈತಿಕ ಜೀವನವನ್ನೇ ದೇವಭಕ್ತಿಯ ಪರಮ ರೂಪವೆಂದು ಪರಿಗಣಿಸಿದರು. ವಚನಗಳಲ್ಲಿ “ಕಾಯಕವೇ ಕೈಲಾಸ” ಎಂಬ ತತ್ವವು ಶ್ರಮದ ಪಾವಿತ್ರ್ಯತೆಯನ್ನು ಹೊತ್ತಿದೆ. ಯಾವುದೇ ಕೆಲಸ ದೇವರ ಸೇವೆಗೆ ಸಮಾನ ಹಾಗೂ ಪಾವನವಾದುದು. ಈ ತತ್ವವು ಕಾರ್ಮಿಕ ವರ್ಗದ ಮಾನವ ಹಕ್ಕುಗಳ ಪರಿಪೂರ್ಣ ಪರಿಕಲ್ಪನೆ ನೀಡುತ್ತದೆ. ಮಹಿಳಾ ಶರಣರು ಆಧುನಿಕ ಚಿಂತನೆಗಳಿಗೆ ದಾರಿ ತೆರೆದಿದ್ದಾರೆ. ಅಕ್ಕಮಹಾದೇವಿ ತಮಗೆ ಬೇಕಾದ ಜೀವನದ ಹಾದಿಯನ್ನು ಆಯ್ಕೆಮಾಡಿಕೊಂಡು ಮಾತೃತ್ವ ಮತ್ತು ಪತಿತ್ವ ಮುಂತಾದ ಸಾಂಪ್ರದಾಯಿಕ ಬಂಧನಗಳನ್ನು ತಿರಸ್ಕರಿಸಿದ ಉದಾಹರಣೆಯೂ ಕಾಣಬಹುದು. ವಚನಗಳ ಭಾಷಾಶೈಲಿಯು ಪರಂಪರೆಯಿಂದ ಭಿನ್ನವಾಗಿದೆ. ಜನಸಾಮಾನ್ಯರು ಬಳಸುವ ಸರಳ ಕನ್ನಡದಲ್ಲಿ ಸಾಹಿತ್ಯ ರಚಿಸಿದರು. ಇದು ಭಕ್ತ-ಭಗವಂತನ ಬಾಂಧವ್ಯವನ್ನು ಹೆಚ್ಚಿಸಿತು. ಧಾರ್ಮಿಕ ಪರಂಪರೆಗಳ ಪುನಃ ಪರಿಶೀಲನೆಯ ದೃಷ್ಟಿಕೋನವನ್ನು ಹೊಂದಿವೆ. ಧರ್ಮವು ಕೇವಲ ಆಚರಣೆಯಲ್ಲ, ಅದು ವ್ಯಕ್ತಿಗತ ಅನುಭವ ಮತ್ತು ನೈತಿಕ ಬದುಕಿನ ಪ್ರಾತಿನಿಧ್ಯವಾಗಿದೆ.

Read More »

ಕನಕದಾಸರ ಕೀರ್ತನೆಗಳಲ್ಲಿನ ಪಾರಂಪರಿಕ ಹಾಗೂ ಆಧುನಿಕ ಅಂಶಗಳು

ಕವಿತಾ ಬಾಯಿ

110 to 119

ಕನಕದಾಸರು (1509–1609) ಕನ್ನಡದ ಪ್ರಸಿದ್ಧ ಹರಿದಾಸರು, ಭಕ್ತಿಪಂಥದ ಪ್ರಮುಖ ಶರಣರು, ಕವಿಗಳು ಮತ್ತು ದಾರ್ಶನಿಕರು. ಅವರು ವಿಷ್ಣುವಿನ ಭಕ್ತರಾಗಿದ್ದು, ವಿಷ್ಣುಭಕ್ತಿಯಿಂದ ತುಂಬಿದ ಹಲವಾರು ಕೀರ್ತನೆಗಳು, ಉಗಾಭೋಗಗಳು, ಹರಿಕಥೆಗಳು ಮತ್ತು ತಾತ್ವಿಕ ಬರಹಗಳನ್ನು ರಚಿಸಿದ್ದಾರೆ. “ಧರ್ಮವಿಲ್ಲದ ಅರಸು ಮುರಿದ ಕಾಲಿನ ಹೊರಸು” ಎಂಬ ಕೀರ್ತನೆಯ ಸಾಲು ಸಮಾಜದ ಒಳಿತಿಗೆ ಧರ್ಮಾಚರಣೆಯ ಅಗತ್ಯತೆಯನ್ನು ಒತ್ತಿ ಹೇಳುತ್ತದೆ. ಕನ್ನಡದಲ್ಲಿ ದಾಸವಾಙ್ಮಯದ ದೊಡ್ಡ ಭಂಡಾರವಿದೆ. ಕೀರ್ತನ ಸಾಹಿತ್ಯ ಕನ್ನಡ ಜನತೆಯ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಕನಕದಾಸರ ಕೀರ್ತನೆಗಳಲ್ಲಿ ತತ್ವಚಿಂತನೆಯ (ದಾರ್ಶನಿಕ) ಅಂಶಗಳು ತುಂಬಾ ಪ್ರಬಲವಾಗಿವೆ. ಅವರು ಭಕ್ತಿ ಭಾಷೆಯಲ್ಲಿ ಸಾಮಾನ್ಯ ಜನರಿಗೂ ತಲುಪುವ ರೀತಿ ತಮ್ಮ ತಾತ್ವಿಕ ವಿಚಾರಗಳನ್ನು ಮಂಡಿಸುತ್ತಾರೆ. ಈ ಕೀರ್ತನೆಗಳು ಅತೀವ ಭಾವನಾತ್ಮಕವಾಗಿದ್ದರೂ, ಅದರಲ್ಲಿ ದಾರ್ಶನಿಕವಾದ, ನೈತಿಕತೆ, ಶರಣಪಥ, ಅಹಂಕಾರತ್ಯಾಗ, ಜಗತ್ತಿನ ನಾಶವರ್ತಿತ್ವ ಇತ್ಯಾದಿ ಮಹತ್ವದ ವಿಚಾರಗಳು ಇಲ್ಲಿವೆ. ಸಂಸಾರದ ಅಶಾಶ್ವತತೆಯನ್ನು ಎತ್ತಿ ಹಿಡಿದು ಆ ಮೂಲಕ ಲೌಕಿಕ ಆಸೆ ಆಮಿಷಗಳಲ್ಲಿ ತುಂಬಿ ತುಳುಕುವ ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸುವ ಉತ್ತಮ ಸಾಧನವೆಂಬುದನ್ನು ಮನಗಂಡು ಕೀರ್ತನೆಗಳನ್ನು ರಚಿಸಿದರು. ವೈಯಕ್ತಿಕ ಮೋಕ್ಷವಲ್ಲದೆ ಸಾಮಾಜಿಕ ವಿಮುಕ್ತಿಗೂ, ಸಮಾಜದ ಉನ್ನತಿಗೂ ಪ್ರಯತ್ನಿಸಿದ ಈ ಭಕ್ತ ಪರಂಪರೆಯ ದೃಷ್ಟಿ ವಿಶಿಷ್ಟವಾದುದು ಮತ್ತು ಸಾಮಾಜಿಕವಾಗಿ ಮಹತ್ವಪೂರ್ಣವಾದದ್ದು. ಈ ಹಿನ್ನೆಲೆಯಲ್ಲಿ ಸಂಶೋಧನಾ ಪ್ರಬಂಧ ಸಂರಚನೆಗೊಂಡಿದೆ.

Read More »

ತತ್ವ ಪದಗಳು ಸಮಾಜಕ್ಕೆ ಕನ್ನಡಿ; ಭವಿಷ್ಯಕ್ಕೆ ಮುನ್ನುಡಿ

ಮಾಧವ ಎಂ.ಕೆ.

120 to 129

ತತ್ವಪದಗಳು ತಾತ್ವಿಕ ಬದುಕಿನ ಅನುಭವಗಳ ಸಾರಸಂಗ್ರಹವಾಗಿದೆ. ತತ್ವಪದಗಳು ಭಾರತೀಯ ಸಂಸ್ಕೃತಿಗೆ ಒಂದು ಕನ್ನಡಿಯಾಗಿ ನೈತಿಕ ಮೌಲ್ಯಗಳ ಪ್ರತಿಬಿಂಬವಾಗಿ ಗೋಚರಿಸುತ್ತವೆ. ತತ್ವಪದ ಎಂಬ ಸಾಹಿತ್ಯ ಪ್ರಕಾರವು ಜನರ ವರ್ಗ, ವರ್ಣ, ಜಾತಿ, ಲಿಂಗ ಭೇದಗಳನ್ನು ಮೀರಿ ನಿಂತ ಸಮನ್ವಯದ ಬದುಕಿಗೆ ಸಂದೇಶ ಸಾರುವ ಮಹತ್ವದ ಸಾಹಿತ್ಯ ಪ್ರಕಾರವಾಗಿದೆ ಎಂದು ತಿಳಿಯಬಹುದು.
ತತ್ವಪದಗಳು ಸಮಾಜದ ಲೋಪದೋಷಗಳ ಮೇಲೆ ಕನ್ನಡಿ ಹಿಡಿಯುವ ಕಾರ್ಯವನ್ನು ಮಾಡುವುದಲ್ಲದೆ ನೈತಿಕ ಮತ್ತು ಮಾನವಿಕ ನೆಲೆಯಲ್ಲಿ ಸಮಾಜವನ್ನು ವಿಂಗಡಿಸದೆ ಏಕತ್ರಗೊಳಿಸಿ ಮಾನವ ಸಂಬಂಧವನ್ನು ಛಿದ್ರಗೊಳ್ಳದಂತೆ ಭದ್ರಗೊಳಿಸುವ ನಿಟ್ಟಿನಲ್ಲಿ ಪ್ರೇರಣೆ ಹಾಗೂ ಶಕ್ತಿ ತುಂಬುವಲ್ಲಿ ಸಹಕರಿಸುತ್ತವೆ.
ಭಾಷೆ ಸಂಸ್ಕೃತಿ ಪರಂಪರೆಯ ವಾಹಕ. ಈ ರಚನೆಗಳು ಮೇಲುನೋಟಕ್ಕೆ ‘ಕಾವ್ಯಾತ್ಮಕತೆ’ಯನ್ನು ಹೊಂದಿದಂತೆ ಕಾಣುವುದಿಲ್ಲ. ಈ ರಚನೆಯ ಶಾಬ್ದಿಕ ಮಾಧ್ಯಮವು ಗಾಯನದೊಂದಿಗೆ ಹೊಸ ಸಂವಿಧಾನವನ್ನು ಪಡೆದುಕೊಳ್ಳುತ್ತದೆ. ಸಾಮಾನ್ಯ ಅನುಭವಗಳಿಂದ ಬೇರೆಯಾದ ಅನುಭವಗಳನ್ನು ಬೇರೆಯಾದ ಅನುಭವಗಳನ್ನು ನಾವು ಪಡೆಯುವುದು ಭಾಷೆಯ ಮಾಧ್ಯಮದಿಂದ ಮಾತ್ರ ಸಾಧ್ಯ. ಆಗ ಭಾಷೆಯ ಸ್ವರೂಪ ಸಾಮಾನ್ಯ ಸ್ವರೂಪದ್ದಾಗಿರದೆ ವಿಶಿಷ್ಟವಾಗುತ್ತದೆ. ಸಾಮಾನ್ಯ ಭಾಷೆಯಿಂದ ಬೇರೆಯಾದ ಭಾಷಾಪ್ರಯೋಗದ ಕೌಶಲ ಒಂದು ಹಂತದ ಕಾವ್ಯಾತ್ಮಕತೆಯನ್ನು ಖಚಿತಗೊಳಿಸುತ್ತದೆ. ಅನುಭವದ ಕಥನಾತ್ಮಕವಾದ ಅಂಶವನ್ನು ಭಾಷೆಯ ಮತ್ತು ಛಂದೋವಿಧಾನದ ಲಕ್ಷಣದೊಂದಿಗೆ ಹೊಂದಿಸುವ ಅಭಿನ್ನವಾದ ಸಂಬಂಧವನ್ನು ಈ ಗೀತೆಗಳಲ್ಲಿ ಕಾಣುತ್ತೇವೆ. ಆದ್ದರಿಂದ ಇಲ್ಲಿ ಬಳಕೆಯಾಗುವ ಭಾಷಿಕ ವಿನ್ಯಾಸವು ಬಹುಮುಖಿಯಾದುದು.
ತತ್ವಪದಗಳು ಜನಸಾಮಾನ್ಯರಿಗೆ ಬದುಕಿನ ಬಗ್ಗೆ ಅರಿವು; ಆಧ್ಯಾತ್ಮಿಕ ಅರ್ಥ ನೀಡುತ್ತವೆ. ಅವುಗಳು ಜನರನ್ನು ನೈತಿಕ ಮಾರ್ಗದಲ್ಲಿ ನಡೆಯಲು ಬಲ ನೀಡುತ್ತವೆ. ತತ್ವಪದಕಾರರನ್ನು ಬಂಡಾಯ ಮನೋಧರ್ಮದ ಸ್ಥಾಪಕರೆಂದು ಭಾವಿಸುವುದುಂಟು. ಅವುಗಳಲ್ಲಿ ಮೌಲಿಕ ಅಂಶಗಳು ತುಂಬಿಕೊಂಡಿರುವುದು ನಮಗೆ ಗೋಚರಿಸುತ್ತದೆ. 17ನೇ ಶತಮಾನದಿಂದ ಕಂಡು ಬರುವ ತತ್ವಪದಕಾರರು ಆ ಹಿಂದಿನ ತತ್ವಪದಕಾರರಿಗಿಂತ ಭಿನ್ನವಾಗಿರುವುದನ್ನು ಗುರುತಿಸಬಹುದು.
ತತ್ವಪದಗಳು ಸಮಾಜದ ಅಂಕುಡೊಂಕುಗಳಿಗೆ ಕನ್ನಡಿಯಾಗಿ ಸದ್ಭವಿಷ್ಯಕ್ಕೆ ಮುನ್ನುಡಿ ಬರೆಯುವಲ್ಲಿ ಪ್ರಭಾವ ಬೀರಿರುವುದನ್ನು ನಾವು ಗಮನಿಸಬಹುದಾಗಿದೆ. ತತ್ವ ಎಂದರೆ ಅದು ಲೌಕಿಕ ಜಗತ್ತಿನ ವಸ್ತುವಿಷಯಗಳನ್ನು ಪಾರಲೌಕಿಕ ಮತ್ತು ಸಾರಸತ್ವದ ಸಾರ್ವಕಾಲಿಕ ನೆಲೆಯಲ್ಲಿ ಜನಸಾಮಾನ್ಯರಲ್ಲೂ ಜಾಗೃತಿ, ವಿವೇಕ, ಆಧ್ಯಾತ್ಮಿಕ ಚಿಂತನೆ ಒಟ್ಟಿನಲ್ಲಿ ಲೋಕಹಿತಕಾರಿ ಜನಸಮುದಾಯವನ್ನು ಸೃಷ್ಟಿಸುವ ಹಾಗೂ ಅದಕ್ಕಾಗಿ ಪ್ರೇರಣೆ ನೀಡುವ ಮಹತ್ಕಾರ್ಯವನ್ನು ನಿರ್ವಹಿಸುತ್ತದೆ.

Read More »

ಮುಕ್ತಾಯಕ್ಕಳ ವಚನಗಳಲ್ಲಿ ಅನುಭಾವದ ನೆಲೆಗಳು

ಮಹಾದೇವಿ ಹುಣಶೀಬೀಜ

130 to 143

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 12ನೇ ಶತಮಾನವು ಸಾಮಾಜಿಕ, ಧಾರ್ಮಿಕ, ವೈಚಾರಿಕ ನೆಲೆಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮುಕ್ತವಾಗಿಸಿದ ಸುವರ್ಣಕಾಲವೆಂದು ಕರೆಸಿಕೊಳ್ಳುತ್ತದೆ. ಈ ಅವಧಿಯಲ್ಲಿ ಪುರುಷರಂತೆ ಮಹಿಳೆಯರು ಸ್ವಭಿಪ್ರಾಯಗಳನ್ನು ವ್ಯಕ್ತಪಡಿಸಲು ವಚನ ಸಾಹಿತ್ಯವು ವೇದಿಕೆಯನ್ನು ಒದಗಿಸಿತು. ಬಸವಾದಿ ಪ್ರಮಥರು ನೀಡಿದ ಪ್ರೋತ್ಸಾಹದಿಂದಾಗಿ ಹಲವಾರು ಶರಣೆಯರು ವಚನಗಳನ್ನು ರಚಿಸಿ ಅನುಭಾವ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಮಹಾಮನೆಯಲ್ಲಿ ಚರ್ಚೆಗಿಳಿದು ತಮ್ಮ ಗೊಂದಲಗಳಿಗೆ ಪರಿಹಾರವನ್ನೂ ಕಂಡುಕೊಂಡಿದ್ದಾರೆ. ಅವರಲ್ಲಿ ಮುಖ್ಯವಾಗಿ ಅಕ್ಕಮಹಾದೇವಿ ಮತ್ತು ಮುಕ್ತಾಯಕ್ಕ ಪ್ರಮುಖರು. ಅದರಲ್ಲೂ ಅಲ್ಲಮಪ್ರಭುಗಳನ್ನೇ ಪರೀಕ್ಷಿಸಿ ಗುರುವಾಗಿ ಸ್ವೀಕರಿಸಿದ ಮುಕ್ತಾಯಕ್ಕಳ ಅನುಭಾವದ ನೆಲೆ ಇತರ ಶರಣೆಯರಿಗಿಂತ ಭಿನ್ನವಾದುದು. ಸಹೋದರ ಅಜಗಣ್ಣನ ಮಾರ್ಗದಲ್ಲಿ ನಡೆದ ಮುಕ್ತಾಯಕ್ಕ ಅದ್ವೈತದ ಅನುಭೂತಿಯನ್ನು ಪಡೆದವಳು. ಮುಕ್ತಾಯಕ್ಕಳ ಸುಮಾರು 37 ವಚನಗಳು ದೊರೆತಿವೆ. ಅವು ಅಲ್ಲಮ ಮುಕ್ತಾಯಕ್ಕರ ಸಂವಾದದ ರೂಪದಲ್ಲಿವೆ ಎಂದು ಮೇಲ್ನೋಟಕ್ಕೆ ಕಂಡರೂ ಅವುಗಳಲ್ಲಿ ವ್ಯಕ್ತವಾಗಿರುವ ವಿಚಾರಧಾರೆಗಳು ಆಕೆಯು ಕಂಡ ಆಧ್ಯಾತ್ಮಿಕ ಅನುಭೂತಿಯ ಉತ್ತುಂಗಕ್ಕೆ ಸಾಕ್ಷಿಯಾಗಿವೆ. ಈ ಪ್ರಬಂಧದಲ್ಲಿ ಮುಕ್ತಾಯಕ್ಕಳ ವಚನಗಳನ್ನು ಅನುಭಾವದ ನೆಲೆಯಲ್ಲಿ ಅಧ್ಯಯನಕ್ಕೆ ಆಯ್ದುಕೊಳ್ಳಲಾಗಿದೆ.

Read More »

ವಚನಕಾರ್ತಿಯರ ವಚನಗಳಲ್ಲಿ ಗುರು, ಲಿಂಗ, ಜಂಗಮದ ಕಲ್ಪನೆ

ಮಹಾಲಿಂಗಪ್ರಭು

144 to 148

ಕನ್ನಡ ಸಾಹಿತ್ಯವು ಅಪಾರ ಸಂಪತ್ತನ್ನು ಒಳಗೊಂಡ ಶ್ರೇಷ್ಠ ಪರಂಪರೆಯನ್ನು ಹೊಂದಿದೆ. 12ನೇ ಶತಮಾನವು ಎಲ್ಲಾ ಶಿವಶರಣರು ನಿರ್ಭಯವಾಗಿ ತಮ್ಮ ಆಲೋಚನೆಗಳನ್ನು, ಭಾವನೆಗಳನ್ನು ವಚನಗಳ ಮೂಲಕ ಹಂಚಿಕೊಳ್ಳಲು ಅವಕಾಶ ದೊರೆತ ಕಾಲ. ರಾಜರ ಆಶ್ರಯವಿಲ್ಲದೆ, ತಮ್ಮನ್ನು ತಾವು ತೊಡಗಿಸಿಕೊಂಡು, ಯಾರ ಆಶ್ರಯವೂ ಇಲ್ಲದೆ, ಜಾತಿ, ಧರ್ಮ, ಸ್ತ್ರೀ-ಪುರುಷ ಎಂಬ ಎಲ್ಲಾ ಭೇದಗಳನ್ನು ಮರೆತು ಆತ್ಮವಿಶ್ವಾಸದ ಮೂಲಕ ಪರಿವರ್ತನೆಗೆ ನಾಂದಿ ಹಾಡಿದ ಕಾಲವದು. ಭಾರತೀಯ ಪರಂಪರೆಯಲ್ಲಿ ಹೆಣ್ಣಿಗೆ ಪೂಜ್ಯ ಭಾವನೆಯಿದೆ. ಹೆಣ್ಣನ್ನು ದೇವತೆಗೆ ಹೋಲಿಸುತ್ತಾರೆ, ಆದರೂ ಕೂಡ ಹೆಣ್ಣಿಗೆ ಯಾವುದೇ ಸ್ವಾತಂತ್ರ್ಯವಿಲ್ಲ, ಗಂಡಿನ ಗುಲಾಮಳಾಗಿ ಇರಬೇಕು ಎಂಬುದನ್ನು ದಿಕ್ಕರಿಸಿ ಹೆಣ್ಣಿಗೆ ಸ್ವಾತಂತ್ರ್ಯವನ್ನು ವಚನ ಚಳುವಳಿಯಲ್ಲಿ ನೀಡಲಾಯಿತು. ಧಾರ್ಮಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಪುರುಷನಷ್ಟೇ ಸ್ತ್ರೀಯು ಕೂಡ ಸಮಾನಳು ಎಂಬುದನ್ನು ವಚನಗಳ ಮೂಲಕ ಸಾರಿ ಹೇಳಿದರು.
“ಸತಿಪತಿಗಳೊಂದಾದ ಭಕ್ತಿ, ಹಿತದಾಗಿಪ್ಪುದು ಶಿವಂಗೆ. ಸತಿಪತಿಗಳೊಂದಾಗದವನ ಭಕ್ತಿ ಅಮೃತದೊಳು ವಿಷ ಬೆರೆದಂತೆ” ಎಂದು ಜೇಡರ ದಾಸಿಮಯ್ಯನು ಕೂಡ ಹೆಣ್ಣಿನ ಅವಶ್ಯಕತೆ ಮತ್ತು ಗೌರವಗಳನ್ನು ತನ್ನ ವಚನದಲ್ಲಿ ಎತ್ತಿ ಹಿಡಿದಿದ್ದಾರೆ.
ಅನುಭವಮಂಟಪದಲ್ಲಿ ಸ್ತ್ರೀ-ಪುರುಷ ಎಂಬ ತಾರತಮ್ಯವಿಲ್ಲದೆ ಎಲ್ಲರೂ ನಿರ್ಭಯವಾಗಿ ತಮ್ಮ ಎಲ್ಲಾ ವಿಚಾರಗಳನ್ನು, ಅಭಿಪ್ರಾಯಗಳನ್ನು ಮಂಡಿಸುವ ಅವಕಾಶ ದೊರೆಯಿತು. ಅಕ್ಕಮಹಾದೇವಿ ಕೂಡ ತನ್ನ ನಿಷ್ಠೆಯನ್ನು ಅನುಭವಮಂಟಪದಲ್ಲಿ ನಿರೂಪಿಸಿದ್ದಾಳೆ. ಹಾಗೆಯೇ ಪುರುಷ ಪ್ರಧಾನ ವ್ಯವಸ್ಥೆಯನ್ನೇ ಧಿಕ್ಕರಿಸಿ ತನ್ನ ಮಲ್ಲಿಕಾರ್ಜುನನ್ನೇ ಗಂಡನೆಂದು ಭಾವಿಸಿದ ಅಕ್ಕನ ಆತ್ಮಸ್ಥೈರ್ಯವು ಮೆಚ್ಚುವಂತದ್ದು.
“ಲೋಕದ ಗಂಡರನೊಯ್ದು ಒಲೆಯೊಳಗಿಕ್ಕು” ಎಂಬ ಮಾತು, ತನ್ನ ಗಂಡ ಕೌಶಿಕನನ್ನು ಬಿಟ್ಟು ದಿಗಂಬರಳಾಗಿ ಶಿವನನ್ನು ಅರಸುತ್ತಾ ಹೊರಟಳು. ಹಾಗೆಯೇ ಆಯ್ದಕ್ಕಿ ಲಕ್ಕಮ್ಮ, ಗಂಗಾಂಬಿಕೆ, ನೀಲಾಂಬಿಕೆ, ಕಾಳವ್ವೆ, ಮುಕ್ತಾಯಕ್ಕ, ಸತ್ಯಕ್ಕ, ಅಮುಗೆ ರಾಯಮ್ಮ ಮುಂತಾದ ಅನೇಕ ವಚನಕಾರ್ತಿಯರು ಸ್ವತಂತ್ರವಾಗಿ ವಚನಗಳನ್ನು ರಚಿಸಿ ಗುರು, ಲಿಂಗ, ಜಂಗಮದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಗುರು, ಲಿಂಗ, ಜಂಗಮದ ಕಲ್ಪನೆಯು 12ನೇ ಶತಮಾನದಲ್ಲಿ ಕಲ್ಪಿತವಾಗಿದ್ದರೂ ಕೂಡ ಪ್ರಸ್ತುತ ಸಂದರ್ಭದಲ್ಲಿ ಆಕರ್ಷಕವೂ, ಅವಶ್ಯಕತೆಯೂ ಇದೆ ಎಂಬುದನ್ನು ಕಾಣಬಹುದು.

Read More »

ತುಳುನಾಡ ಸಿರಿ ಕಾವ್ಯ: ಆಧುನಿಕ ಒಳನೋಟ

ಮಂಗಳ ಬಿ.ಎನ್.

149 to 156

ಸತ್ಯನಾಪುರ ಅರಮನೆಯ ಸೋಮಲಾದೇವಿಯು ಮಜಲೊಟ್ಟುಬೂದುವಿನ ಬರ್ಮನ್ನಯ್ಯ ವಂಶದ ಬರ್ಮನಾಳ್ವಳನ್ನು ವಿವಾಹವಾದರು. ಅವರಿಗೆ ಹೆಣ್ಣು ಮಗು ಬೇಕೆಂದು ಆಸೆ ಇತ್ತು. ಬರ್ಮನಾಳ್ವ ಸತ್ಯನಾಪುರದ ಬರ್ಮೆರನನ್ನು ಪೂಜಿಸಿ ಮಗುವಿನ ಜನನವನ್ನು ಆಶೀರ್ವದಿಸಿದನು. ನಂತರ ಬರ್ಮೆರನು ಬ್ರಾಹ್ಮಣನ ವೇಷದಲ್ಲಿ ಬರ್ಮನಾಳ್ವನ ಕಡೆಗೆ ಬಂದು ಅವನಿಗೆ ಪಿಂಗಾರ (ಅಡಿಕೆ ಮರದ ಹೂವು) ಎಲೆಯನ್ನು ಕೊಟ್ಟನು. ಬರ್ಮನಾಳ್ವ ಪಿಂಗಾರವನ್ನು ತಂದು ಮನೆಯಲ್ಲಿದ್ದ ಕಲ್ಲಿನ ಪೆಟ್ಟಿಗೆಯಲ್ಲಿ ಇಟ್ಟನು. ಆಗ ಕಲ್ಲ ಕಲೆಂಬಿ (ಕಲ್ಲಿನ ಪೆಟ್ಟಿಗೆ) ಒಳಗಿನಿಂದ, ಅದು ಮಗುವಿನ ಅಳುವಿಕೆಯಂತೆ ಸದ್ದು ಮಾಡಿತು. ಕಲ್ಲಿನ ಪೆಟ್ಟಿಗೆಯಲ್ಲಿ ಹೆಣ್ಣು ಮಗುವನ್ನು ನೋಡಿ ಬರ್ಮನಾಳ್ವ ಆಶ್ಚರ್ಯಚಕಿತನಾದನು ಮತ್ತು ನಂತರ ಅದಕ್ಕೆ ಅಕ್ಕೆರುಸು ಸಿರಿ ಎಂದು ಹೆಸರಿಸಿದನು.
ಅಕ್ಕೇರುಸು ವಯಸ್ಕನಾದ ನಂತರ, ಬರ್ಮನಾಳ್ವ ಬಸ್ರೂರ್ ಅರಮನೆಯ ಕಾಂತುಪೂಂಜನೊಂದಿಗೆ ಸಿರಿಯ ವಿವಾಹವನ್ನು ಏರ್ಪಡಿಸಿದನು. ಕಾಂತು ಪೂಂಜ ಎರಡೂ ಸಂಸ್ಥಾನಗಳ (ಮಜಲುಟ್ಟು ಬೂದು ಮತ್ತು ಬಸ್ರೂರ್ ಬೂದು) ಆಡಳಿತವನ್ನು ಯಾವುದೇ ಶ್ರೇಣಿಯ ವ್ಯತ್ಯಾಸವಿಲ್ಲದೆ ನೋಡಿಕೊಳ್ಳುತ್ತಾನೆ ಮತ್ತು ಅವನು ಸತ್ತ ನಂತರ ಅಂತ್ಯಕ್ರಿಯೆ ಮಾಡುತ್ತಾನೆ ಎಂದು ಬರ್ಮನಾ ಆಳ್ವನಿಗೆ ಭರವಸೆ ನೀಡಿದನು. ಈ ಸಂಗತಿಗಳನ್ನು ತುಳುನಾಡ ಸಿರಿ ಕಾವ್ಯ: ಆಧುನಿಕ ಒಳನೋಟ ಲೇಖನದಲ್ಲಿ ವಿವರಣಾತ್ಮಕವಾಗಿ ಚರ್ಚಿಸಲಾಗಿದೆ.

Read More »

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಪರಂಪರೆ ಹಾಗೂ ಡಿಜಿಟಲೀಕರಣ

ನವೀನ್ ಕುಮಾರ್ ಸಿ.

157 to 164

ಈ ಲೇಖನವು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಪರಂಪರೆಯ ಪಾತ್ರ ಹಾಗೂ ಡಿಜಿಟಲೀಕರಣದ ಪರಿಣಾಮವನ್ನು ವಿಶ್ಲೇಷಿಸುತ್ತದೆ. ಕನ್ನಡ ಸಾಹಿತ್ಯವು ಶತಮಾನಗಳ ಹಿಂದಿನ ಸಂಸ್ಕೃತಿಯ ಪ್ರತಿರೂಪವಾಗಿದ್ದು, ಆಧ್ಯಾತ್ಮಿಕತೆ, ನೈತಿಕತೆ ಹಾಗೂ ಸಾಮಾಜಿಕ ಮೌಲ್ಯಗಳನ್ನು ವರ್ಣಿಸಿಕೊಂಡು ಬಂದಿದೆ. ಆದರೆ ಇತ್ತೀಚಿನ ಡಿಜಿಟಲ್ ಯುಗದಲ್ಲಿ ಈ ಪರಂಪರೆಯು ಹೊಸ ತಂತ್ರಜ್ಞಾನಗಳೊಡನೆ ಹೊಂದಾಣಿಕೆಯಾಗುತ್ತಿರುವುದು ಗಮನಾರ್ಹವಾಗಿದೆ. ಇ-ಪುಸ್ತಕಗಳು, ಆಡಿಯೋ ಪುಸ್ತಕಗಳು, ಡಿಜಿಟಲ್ ಗ್ರಂಥಾಲಯಗಳು, ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಾಹಿತ್ಯದ ಪಠನ ಮತ್ತು ಪ್ರಸಾರ ಕ್ರಮದಲ್ಲಿ ಸಂವೇದನಾಶೀಲ ಬದಲಾವಣೆಗಳು ಉಂಟಾಗಿವೆ. ಈ ಬೆಳವಣಿಗೆಗಳು ಸಾಹಿತ್ಯದ ವ್ಯಾಪ್ತಿಯನ್ನು ವಿಸ್ತರಿಸಿದರೂ, ಅದರ ಮೂಲ ಪರಂಪರೆಯ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳುವುದು ಒಂದು ಸವಾಲಾಗಿ ಉಳಿದಿದೆ. ಈ ಅಧ್ಯಯನವು ಪರಂಪರೆ ಮತ್ತು ಆಧುನಿಕತೆಯ ನಡುವಿನ ತಾತ್ವಿಕ ಅನ್ವೇಷಣೆಯೊಂದಿಗೆ, ಡಿಜಿಟಲೀಕರಣದ ಪ್ರಭಾವವನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸುತ್ತದೆ. ಪರಂಪರೆ ಎಂದರೆ ಪೂರಕವಾಗಿ ಬೆಳೆದ ಮಾನವೀಯ ಸಾಂಸ್ಕೃತಿಕ ಮೌಲ್ಯಗಳು, ಬದುಕಿನ ಶೈಲಿ ಮತ್ತು ಜ್ಞಾನ ಪರಂಪರೆಯ ಸಂಕೇತವಾಗಿದೆ. ಕಾಲಚಕ್ರದ ಬದಲಾವಣೆಯ ಶಕ್ತಿಯಾದ ಆಧುನಿಕತೆ, ಪರಂಪರೆಯ ಮೌಲ್ಯಗಳನ್ನು ಪ್ರಶ್ನಿಸುವುದು, ಹೊಸ ತಳಹದಿಗಳನ್ನು ಸೃಜಿಸುವುದು ಸೇರಿದಂತೆ ವಿವಿಧ ಬಗೆಯ ಪ್ರಭಾವಗಳನ್ನು ತರುವಲ್ಲಿ ಪ್ರಮುಖ ಪಾತ್ರವಹಿಸಿದೆ. ಈ ಅಧ್ಯಯನದಲ್ಲಿ, ವಿಶೇಷವಾಗಿ ಕನ್ನಡ ಸಾಹಿತ್ಯದ ಕ್ಷೇತ್ರವನ್ನು ಆಧಾರವಾಗಿ ತೆಗೆದುಕೊಂಡು, 21ನೇ ಶತಮಾನದಲ್ಲಿ ಡಿಜಿಟಲ್ ತಂತ್ರಜ್ಞಾನದ ಪ್ರವೇಶವು ಸಾಹಿತ್ಯದ ಸ್ವರೂಪ, ಪ್ರಪಂಚ, ಪ್ರಸರಣ ಮತ್ತು ಗ್ರಹಿಕೆಯಲ್ಲಿ ತಂದುಕೊಂಡಿರುವ ಬದಲಾವಣೆಗಳನ್ನು ವಿಶ್ಲೇಷಿಸಲಾಗಿದೆ.

Read More »

ವಚನ ಸಾಹಿತ್ಯದಲ್ಲಿ ಪರಂಪರೆ ಹಾಗೂ ಆಧುನಿಕ ಚಿಂತನೆಗಳು

ರಾಮರೆಡ್ಡಿ ಕೆ.

165 to 172

ಹನ್ನೆರಡನೆಯ ಶತಮಾನ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಲಿಂಗತ್ವದ ನೆಲೆಯಲ್ಲಿ ಅಸಮಾನತೆಯನ್ನು ಜೀವಂತವಾಗಿಟ್ಟಿರುವಂತಹ ಕಾಲವಾಗಿತ್ತು. ಇಂತಹ ಕಾಲದಲ್ಲಿ ಬದುಕಿದ್ದ ಬಸವಣ್ಣ, ಅಲ್ಲಮಪ್ರಭು, ದೇವರ ದಾಸಿಮಯ್ಯ, ಮಾದಾರ ಚನ್ನಯ್ಯ, ಅಂಬಿಗರ ಚೌಡಯ್ಯ ಮುಂತಾದ ಶರಣರೆಲ್ಲರೂ ಜೀವಪರ, ಸಮಾನತೆಯ ಪರ ಕಾಳಜಿಯನ್ನು ಹೊಂದಿದ ಮಾನವತಾವಾದಿಗಳಾಗಿದ್ದರು. ಇವರೆಲ್ಲರೂ ಈ ಅಸಮಾನತೆಯ ವಿರುದ್ಧ ಪ್ರತಿಭಟಿಸಿದರು. ಶರಣರು ನಡೆ-ನುಡಿ, ಸಮಾನತೆ, ಕಾಯಕ, ದಾಸೋಹ, ವೈಚಾರಿಕತೆ, ವೈಜ್ಞಾನಿಕ ಚಿಂತನೆ, ಅಂತರಂಗ ಮತ್ತು ಬಹಿರಂಗ ಶುದ್ಧಿ, ಮೌಢ್ಯ ನಿವಾರಣೆ ಮುಂತಾದ ವಿಷಯಗಳನ್ನು ತಲಸ್ಪರ್ಶಿಯಾಗಿ ವಾಸ್ತವದ ನೆಲೆಯಲ್ಲಿ ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಿದರು. ಇವರುಗಳು ಪರಂಪರೆ ಮತ್ತು ಆಧುನಿಕ ಚಿಂತನೆಯ ಪ್ರಜ್ಞೆಯನ್ನು ಹೊಂದಿದ್ದವರಾಗಿದ್ದರೆಂಬುದನ್ನು ಅವರ ವಚನಗಳಲ್ಲಿಯೇ ಕಾಣಬಹುದು.

Read More »

ವಚನಗಳ ಪ್ರಕೃತಿ ಮೀಮಾಂಸೆಯಲ್ಲಿ ಪರಂಪರೆ ಮತ್ತು ಆಧುನಿಕತೆ

ಸವಿತಾ ರವಿಶಂಕರ್

173 to 182

ಜಗತ್ತಿನ ಗ್ರಹಿಕೆಯ ಭಾಗವಾಗಿರುವ ರೂಪಕದ ಹಿನ್ನಲೆಯಲ್ಲಿ ಪ್ರಕೃತಿ ಸೌಂದರ್ಯ ಪ್ರಜ್ಞೆ ಅಕ್ಕನ ವಚನಗಳಲ್ಲಿ ಹೇಗೆ ಅಭಿವ್ಯಕ್ತಗೊಂಡಿದೆ ಎಂಬುದು ನನ್ನ ಇವತ್ತಿನ ಆಸಕ್ತಿಯ ಭಾಗ. ರೂಪಕ ಎಂದರೆ ಅಲಂಕಾರ, ಅಲಂಕಾರ ಎಂದರೆ ಸೌಂದರ್ಯ, ಸೌಂದರ್ಯ ಎಂದರೆ ಪ್ರಕೃತಿ. ಪ್ರಕೃತಿಯಲ್ಲಿ ಅವಳು ಕಂಡುಕೊಂಡ ಬದುಕು ಆ ಬದುಕೇ ಭಕ್ತಿಯಾದ ಬಗೆ ಅಕ್ಕನಲ್ಲಿ ಮುಖ್ಯವಾದದ್ದು. ಪ್ರಕೃತಿ ಅವಳ ಭಾವನೆಗಳ ಸಂವಹನ ಮಾಧ್ಯಮ. ಪ್ರಕೃತಿಯನ್ನು ಮೂರು ಭಾಗವನ್ನಾಗಿ ಮಾಡಿಕೊಂಡು ಅಕ್ಕನ ವಚನಗಳಲ್ಲಿ ನೋಡಬಯಸುತ್ತೇನೆ.
ಮರ, ಬೆಟ್ಟ, ಪ್ರಾಣಿ, ಪಕ್ಷಿಗಳ ಹಿನ್ನಲೆಯಲ್ಲಿ ಅವಳ ವಚನಗಳನ್ನು ಗುರುತಿಸುವ ಪ್ರಯತ್ನವಿದೆ. ಅಂದರೆ ಪರಿಸರದೊಂದಿಗಿನ ಚಲನೆ. (ಅರಿವಿನ ಕದಳಿಯೇ ಆಗುವ ಪ್ರಕೃತಿ)
ದೇಹ, ಇಂದ್ರಿಯಗಳ ಒಡನಾಟಗಳಲ್ಲಿನ ಅನುಸಂಧಾನದ ವಚನಗಳು. (ದೇಹ, ಇಂದ್ರಿಯಗಳು ಪ್ರಕೃತಿ ಮೀಮಾಂಸೆಯಾಗುವ ವಚನಗಳು)
ಸಮಾಜ, ಸಂಸ್ಕೃತಿ ಕುರಿತ ನಿಲುವುಗಳಲ್ಲಿನ ದ್ವಂದ್ವಗಳ ಬಗೆಹರಿಸಿದ ತಾಣ ವಚನಗಳು. ಅದನ್ನು ಪ್ರಕೃತಿಯ ಮೂಲಕ ಸಮೀಕರಿಸಿಕೊಳ್ಳುವುದೋ ಹೋಲಿಸಿಕೊಳ್ಳುವುದೋ ವಚನಗಳಲ್ಲಿ ಅಕ್ಕ ಕೈಗೊಳ್ಳುವುದನ್ನು ಗುರುತಿಸಲು ಪ್ರಯತ್ನಿಸಿದೆ.
(ಪ್ರಕೃತಿ ಮೀಮಾಂಸೆಯ ಮಾನುಷ ಲೋಕ)
ಈ ಮೇಲಿನ ವಿಭಾಗೀಕರಣದಲ್ಲಿ ಅಕ್ಕಳ ಸೌಂದರ್ಯಪ್ರಜ್ಞೆ ಭಾಷೆಯ ನೆಲೆಯಲ್ಲಿ ಮೊದಲಿಗೆ ಗುರುತಿಸಬಹುದು. ಅವಳ ಭಾವ ಅನುಭಾವಗಳ ವಿಶ್ಲೇಷಣೆ ತನಗೆ ಸ್ಪಷ್ಟಗೊಳಿಸಿಕೊಳ್ಳುವ ನೆಲೆಗಳು ಕಾವ್ಯಾತ್ಮಕ, ಉಪಮೆ, ರೂಪಕಗಳಲ್ಲಿ ಅಡಗಿರುವುದು ಕಾಣುತ್ತೇವೆ. ತತ್ವ ಚಿಂತನೆ, ಪರಂಪರೆಯ ಮುಂದುವರೆದ ಭಾಗದ ವಿವೇಚನೆಗಳು, ಜಿಜ್ಞಾಸೆಗಳು, ಸಿದ್ಧಾಂತರೀತಿಯ ವಿಚಾರಗಳು ಗದ್ಯಾತ್ಮಕವಾಗಿ ವಚನಗಳಲ್ಲಿ ಹರಿದಿರುವುದು ಕಾಣುತ್ತೇವೆ.
ಈ ಲೇಖನದಲ್ಲಿ ಕಾವ್ಯಾತ್ಮಕವಾದ ಕೆಲವು ವಚನಗಳನ್ನು ಆರಿಸಿಕೊಂಡು ಪ್ರಕೃತಿಯ ಸೌಂದರ್ಯ ಪ್ರಜ್ಞೆಯ ಮೂರು ಮುಖಗಳು ಅವಳಿಗೆ ಏನೆಲ್ಲ ಆಗಿತ್ತು ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಲು ಬಯಸುತ್ತೇನೆ.

Read More »

ತತ್ವಪದಗಳಲ್ಲಿನ ಪಾರಂಪರಿಕತೆ ಹಾಗೂ ಆಧುನಿಕತೆ

ಶೈಲಜ ವಿ.

183 to 188

ತತ್ವಪದ ಸಾಹಿತ್ಯವು ಅನುಭಾವಿಕ ಅಥವಾ ಆಧ್ಯಾತ್ಮಿಕ ಎಂದು ಕರೆಯುವ ಗುರು ಪರಂಪರೆಗೆ ಒಳಗಾಗಿರುವ ಸಾಹಿತ್ಯ. ತತ್ವಪದಗಳು ಆತ್ಮ ಮತ್ತು ಪರಮಾತ್ಮರ ನಡುವಿನ ಸಂಬಂಧವನ್ನು ಪ್ರತಿಪಾದಿಸುತ್ತವೆ. ತತ್ವಪದ ಸಾಹಿತ್ಯವು ಶರಣರು, ದಾಸರು, ಸೂಫಿಗಳು, ಜೈನ ಧರ್ಮೀಯರು, ಆರೂಢರು, ಅವಧೂತರು, ಸಿದ್ಧರು, ನಾಥರು, ಪಾಂಚಾಳರು ಮುಂತಾದ ಅನೇಕ ಅನುಭಾವ ಪಂಥದ ಸಾಧಕರಿಂದ ರಚನೆಯಾದ ಗೇಯಾತ್ಮಕ ಗೀತೆಗಳಾಗಿವೆ. ಜನಸಮುದಾಯಗಳಲ್ಲಿ ಮೌಖಿಕ ಪರಂಪರೆಯ ಮೂಲಕ ನೆಲೆ ನಿಂತಿವೆ. ಇದು ಭಕ್ತಿ ಸಾಹಿತ್ಯ ಅಲ್ಲ, ದೈವ ಮಾರ್ಗದ ಸಾಹಿತ್ಯವೂ ಅಲ್ಲ. ಕೇವಲ ಹಾಡುವ, ಹಾಡಿಕೊಳ್ಳುವ ಸಾಹಿತ್ಯವೂ ಅಲ್ಲ. ಇದು ಸಾಧಕ ಸಾಹಿತ್ಯ.
ಸಮಾಜ ಮತ್ತು ತನ್ನ ನಡುವೆ ಸಾಮರಸ್ಯತೆ ತಂದು ಕೊಡುತ್ತದೆ. ನಿತ್ಯ ಜೀವನದ ಅಂತಃಸತ್ವ ಎತ್ತಿ ತೋರುತ್ತದೆ. ಸ್ವರ ವಚನ, ಭಜನೆ, ತತ್ವ ಪದ ಎನ್ನುತ್ತೇವೆ. ಇದು ನಡುರಾತ್ರಿಯ ಕಾವ್ಯ. ಲೋಕ ಮಲಗಿರುವಾಗ ತತ್ವಪದಕಾರರು ಎಚ್ಚರವಾಗಿರುತ್ತಾರೆ. ಲೋಕವನ್ನು ಅರಿಯಲು ಬೇಕಾದ ವಿವೇಕ, ಭಕ್ತಿ, ಜ್ಞಾನ ರೂಪದ ಗುರು ಒಳಗಿನ ಅರಿವಿನ ಗುರುವಾಗಿರುತ್ತಾನೆ. ಸಾಮಾಜಿಕವಾಗಿ ಕ್ಷೋಭೆಗಳಿಂದ ತಲ್ಲಣಗೊಳ್ಳುತ್ತಿರುವ ಇಂದಿನ ಸಂದರ್ಭಗಳಲ್ಲಿ ಅವರ ನೀತಿ ಬೋಧನೆಗಳು, ಸಾಮಾಜಿಕ ವಿಡಂಬನೆಗಳು ಹಾಗೂ ಅರಿವಿನ ತತ್ವಗಳು ನಿಜಕ್ಕೂ ಪರಿಣಾಮಕಾರಿಯಾಗಿವೆ.

Read More »

ವಚನ ಸಾಹಿತ್ಯದಲ್ಲಿ ಪರಂಪರೆ ಹಾಗೂ ಆಧುನಿಕ ಚಿಂತನೆಗಳು

ಶೆಲ್ವಿ ಬಾಲಕೃಷ್ಣನ್, ಲೇಖನ ಶ್ರೀ, ಚಂದನ ಎಚ್.ಎಸ್.

189 to 195

ವಚನ ಸಾಹಿತ್ಯದಲ್ಲಿ ಪರಂಪರೆ ಹಾಗೂ ಆಧುನಿಕ ಚಿಂತನೆಗಳು ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯಕ್ಕೆ ವಿಶಿಷ್ಟವಾದ ಸ್ಥಾನವಿದೆ. ನಡುಗನ್ನಡ ಸಾಹಿತ್ಯದ ಮೂಲಕ ದೇಶೀ ಛಂದಸ್ಸಿನ ಕಡೆಗೆ ಗಮನ ಹರಿಸಿದ ಕಾಲಘಟ್ಟದಲ್ಲಿ ಹಲವಾರು ಕವಿಗಳು ದೇಶೀ ಸಾಹಿತ್ಯ ಪ್ರಕಾರಗಳನ್ನು ಬಳಸಿಕೊಳ್ಳುವ ಮೂಲಕ ಕನ್ನಡ ಭಾಷೆಯನ್ನು ಬೆಳೆಸಿ ಶ್ರೀಮಂತಗೊಳಿಸುತ್ತಾರೆ. ಇಂತಹ ಆಶಾದಾಯಕ ಪರಿವರ್ತನೆಯನ್ನು ಮಾಡಿದ ಘನತೆಯು ನಮ್ಮ ವಚನಕಾರರಿಗೆ ಸಲ್ಲುತ್ತದೆ ಎಂಬುದನ್ನು ತಿಳಿಯಬಹುದಾಗಿದೆ. ಹನ್ನೆರಡನೆಯ ಶತಮಾನದಲ್ಲಿ ಒಂದು ಹೊಸ ಕ್ರಾಂತಿಯನ್ನೇ ಉಂಟುಮಾಡಿದ ವಚನ ಸಾಹಿತ್ಯದ ಉಗಮವು ಭಾಗವತ ಪಂಥದ ಬುಡವನ್ನೇ ಅಲುಗಾಡಿಸುವ ಮೂಲಕ ಅದನ್ನು ಸಂಪೂರ್ಣವಾಗಿ ಮರೆಮಾಡುವ ಮುಖೇನ ವಚನ ಸಾಹಿತ್ಯವು ತನ್ನ ಪ್ರಭುತ್ವವನ್ನು ಸ್ಥಾಪಿಸಿಕೊಂಡಿರುವುದನ್ನು ನಾವು ಗಮನಿಸಬಹುದಾಗಿದೆ. ಇಲ್ಲಿ ಪ್ರಮುಖವಾಗಿ ಸಾಹಿತ್ಯವೆಂಬುದು ಒಂದು ನಿಂತ ನೀರಲ್ಲ; ಅದು ನಿರಂತರವಾಗಿ ಹರಿಯುವ ಮೂಲಕ ಹೊಸದಾಗಿ ಬದಲಾವಣೆಗಳನ್ನು ನಾವು ಕಾಣಬಹುದಾಗಿದೆ. ಕಾಲಕಾಲಕ್ಕೆ ಮಾನವ ಸಮಾಜವು ಬದಲಾವಣೆಗಳನ್ನು ಹೊಂದುತ್ತಿರುವಂತೆಯೇ ಸಾಹಿತ್ಯವೂ ಕೂಡ ಬದಲಾವಣೆಗಳನ್ನು ಹೊಂದುತ್ತಿರುವುದನ್ನು ನಾವು ಗಮನಿಸಬಹುದಾಗಿದೆ. ಇಂತಹ ಬದಲಾವಣೆಗಳು ಎಂಬುದು ಏಕಕಾಲಕ್ಕೆ ಆಗುವಂತಹುದು ಸಾಧ್ಯವಿಲ್ಲ, ಇದಕ್ಕೆ ಬಹುಕಾಲಗಳ ಅವಶ್ಯಕತೆ ಎಂಬುದು ಇರುತ್ತದೆ. ನಮ್ಮ ಕನ್ನಡ ಸಾಹಿತ್ಯದಲ್ಲಿಯೂ ಕೂಡ ಶತಮಾನದಲ್ಲಿ ಮಹತ್ತರವಾದ ಬದಲಾವಣೆಗಳ ಮೂಲಕ ಬಂದು ಬಹುದೊಡ್ಡ ವಚನಕಾರರ ಕ್ರಾಂತಿಯೇ ನಡೆದು ಹೋಗಿತ್ತು ಎಂಬುದನ್ನು ನಾವು ಗಮನಿಸಬಹುದಾಗಿದೆ.
ವಚನ ಸಾಹಿತ್ಯದಲ್ಲಿ ವಚನಕಾರರು ಸರಳವೂ ಸುಂದರವೂ ಆದ ಮತ್ತು ಜನಸಾಮಾನ್ಯರ ಮನಮುಟ್ಟುವಂತಹ ವಚನಗಳನ್ನು ರಚಿಸಿದರು. ಈ ವಚನಗಳೆಲ್ಲವೂ ಕನ್ನಡಿಗರ ಆಸ್ತಿ ಎಂದರೂ ತಪ್ಪಾಗಲಾರದು. ಪ್ರತಿಯೊಬ್ಬ ಶಿವಶರಣ ಹಾಗೂ ಶರಣೆಯರು ಹಾಡಿದಂತಹ ವಚನಗಳು ಎಲ್ಲವೂ ಗದ್ಯ ರೂಪದ ಮಾದರಿಯಲ್ಲಿಯೇ ಇದ್ದ ಕಾರಣ ಅವುಗಳಿಗೆ ವಚನಗಳೆಂಬ ಹೆಸರು ರೂಢಿಗೆ ಬಂದಿರಬಹುದು ಎಂಬುದಾಗಿ ತಿಳಿಯಬಹುದಾಗಿದೆ. ವಚನಗಳೆಲ್ಲವೂ ಆಧ್ಯಾತ್ಮಪರವಾದವುಗಳಾಗಿವೆ. ವಚನಕಾರರ ಮೂಲ ಉದ್ದೇಶ ಸಮಾಜದಲ್ಲಿ ಸಮಾನತೆ, ಪ್ರೀತಿ, ವಿಶ್ವಾಸ, ಭ್ರಾತೃತ್ವದ ಅಂಶಗಳನ್ನು ಮೂಡಿಸುವುದೇ ಆಗಿದೆ. ಅಂಧಕಾರ ಅಥವಾ ಅಜ್ಞಾನ ಹಾಗೂ ಮೂಢತನದಲ್ಲಿ ಮುಳುಗಿರುವ ಜನರನ್ನು ಬಡಿದೆಚ್ಚರಿಸುವ ಮೂಲಕ ಅವರಿಗೆ ಜ್ಞಾನೋದಯವನ್ನು ಮೂಡಿಸುವ ಕಾರ್ಯ ವೈಖರಿಗಳನ್ನು ನಾವಿಲ್ಲಿ ಕಾಣಬಹುದಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದು ಉತ್ತಮ ಮಾರ್ಗದಲ್ಲಿ ತನ್ನ ಬದುಕನ್ನು ಸಾಗಿಸುವ ಮೂಲಕ ತಮ್ಮ ಆತ್ಮೋದ್ಧಾರದ ಹೆದ್ದಾರಿಯಲ್ಲಿ ನಡೆಯಬೇಕು ಎಂಬುದೇ ಶರಣರ ಆಶಯ ಆಗಿರುತ್ತದೆ. ಸಮಾಜದಲ್ಲಿ ಪ್ರತಿಯೊಬ್ಬ ಮಾನವನ ಬದುಕು ಕೂಡ ಸಾರ್ಥಕವಾಗಬೇಕು ಎಂಬುದಾಗಿ ಆಶಿಸುವವರು ನಮ್ಮ ವಚನಕಾರರು. ವಚನ ಸಾಹಿತ್ಯವು ನಮ್ಮ ಭಾರತೀಯ ಧಾರ್ಮಿಕತೆ ಮತ್ತು ತಾತ್ವಿಕತೆಗಳ ಪರಂಪರೆಯ ವಿಚಾರಗಳನ್ನು ಪರಿಚಯಿಸುತ್ತಲೇ, ಆಧುನಿಕ ಸಮಾಜಕ್ಕೆ ಬೇಕಾದ ಸಮಾನತೆ, ನ್ಯಾಯ, ಸ್ವಾತಂತ್ರ್ಯ, ಪ್ರೀತಿ, ಸೌಹಾರ್ದತೆ ಎಂಬ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಒಟ್ಟಾರೆ ವಚನ ಸಾಹಿತ್ಯವು ಪರಂಪರೆಯ ಮೂಲ ಅಡಿಪಾಯಗಳ ಮೇಲೆ ನಿಂತು ಸಮಾಜದಲ್ಲಿ ತನ್ನ ವಿಶಿಷ್ಟ ಚಿಂತನೆಗಳ ಮೂಲಕ ಹೊಸತನವನ್ನು ಮೂಡಿಸುವಲ್ಲಿ ತನ್ನದೇ ಆದ ಛಾಪನ್ನು ಹೊಂದಿದ್ದು ಮೌಲ್ಯಗಳ ಬೆಳಕನ್ನು ಚೆಲ್ಲುವ ಪ್ರಯತ್ನವನ್ನು ಮಾಡಿರುವುದನ್ನು ಕಾಣಬಹುದಾಗಿದೆ.

Read More »

ವಚನ ಸಾಹಿತ್ಯದಲ್ಲಿ ಪರಂಪರೆ ಹಾಗೂ ಆಧುನಿಕ ಚಿಂತನೆಗಳು

ಶೋಭ ಎನ್.

196 to 205

ಕನ್ನಡ ಸಾಹಿತ್ಯದಲ್ಲಿ ಪ್ರಾಚೀನ ಕಾಲದಿಂದ ಇಂದಿನವರೆಗೆ ಚಳುವಳಿಗಳು ಎಂದು ನೋಡಿದಾಗ ಅದು ಪಂಪನಿಂದಲೇ ಆರಂಭವಾಗಿರುವುದನ್ನು ಕಾಣಬಹುದು. ಆತ ಬಂಡಾಯದ ದನಿ ಎತ್ತಿದ ಮೊದಲ ಕವಿಯಾಗಿದ್ದಾನೆ. ನಂತರದಲ್ಲಿ ವಚನ ಸಾಹಿತ್ಯದಲ್ಲಿ ಆದ ಚಳುವಳಿಯನ್ನು ನಿಜವಾದ ಸಾಮಾಜಿಕ ಚಳುವಳಿ ಎಂದೇ ಹೇಳಲಾಗಿದೆ. ಇದುವರೆಗೂ ಅರಮನೆಯಲ್ಲಿ ಪಂಡಿತಮಾನ್ಯರಿಗೆ ಮಾತ್ರ ಸೀಮಿತವಾಗಿದ್ದ ಸಾಹಿತ್ಯ, ಜನಸಾಮಾನ್ಯರ ಮನೆಯ ಅಂಗಳಕ್ಕೆ ಬಂದ ಸಾಹಿತ್ಯವೆಂದರೆ ಅದು ವಚನ ಸಾಹಿತ್ಯ. ಇಲ್ಲಿ ಎಲ್ಲಾ ಸ್ತರದ ಜನರು ಇದ್ದಾರೆ. ಇದು ಪ್ರಮುಖವಾಗಿ ಭಕ್ತಿ ಚಳುವಳಿ ಆದರೂ ಸಮಾಜದ ಓರೆ ಕೋರೆಗಳನ್ನು ತಿದ್ದುವ ಪ್ರಯತ್ನವನ್ನು ಮಾಡಿತು. ಜೇಡರ ದಾಸಿಮಯ್ಯ, ಅಲ್ಲಮ ಪ್ರಭು, ಬಸವಣ್ಣ, ಚೆನ್ನಬಸವಣ್ಣ, ಸಿದ್ದರಾಮ, ಅಕ್ಕಮಹಾದೇವಿ ಮುಂತಾದ ಪ್ರಮುಖ ವಚನಕಾರರನ್ನು ಕಾಣುತ್ತೇವೆ. ಇವರುಗಳು ಕಾಯಕವೇ ಕೈಲಾಸ ಎಂದು ನುಡಿದಂತೆ ನಡೆದು, ಅದನ್ನು ಸಮಾಜದ ಜನತೆಗೂ ಸಾರಿದರು. ಇವರ ಕಾಲದಲ್ಲಿ ಕೇಂದ್ರೀಕೃತ ರಾಜವ್ಯವಸ್ಥೆ ಇದ್ದರೂ ಅಂದಿನ ಸಮಾಜದಲ್ಲಿ ಜನರು ಎದುರಿಸುತ್ತಿದ್ದ ಸಮಸ್ಯೆಗಳು ಅಂದರೆ ವರ್ಗ ಸಂಘರ್ಷ, ಜಾತಿ ವ್ಯವಸ್ಥೆ, ಮೇಲು-ಕೀಳು, ಬಡವ-ಬಲ್ಲಿದ, ಲಿಂಗ ತಾರತಮ್ಯ, ಮೂಢನಂಬಿಕೆಗಳು ಮುಂತಾದವುಗಳ ವಿರುದ್ಧ ಹೋರಾಡಿ ಎಲ್ಲರೂ ಸಮಾನರು, ಸಾಮರಸ್ಯದಿಂದ ಬದುಕಬೇಕು, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಭಕ್ತಿಯಿಂದ ಎಲ್ಲರೂ ಮುಕ್ತಿ ಪಡೆಯಲು ಸಾಧ್ಯ ಎಂಬುದನ್ನು ಸಾರಿದರು. ಹೀಗೆ ಪ್ರಭುತ್ವ ವ್ಯವಸ್ಥೆಯಲ್ಲಿದ್ದುಕೊಂಡೇ ಅವರು ಅಷ್ಟೆಲ್ಲಾ ಸುಧಾರಣೆಗಳನ್ನು ತಂದಿದ್ದಾರೆಂದರೆ ಇಂದು ಸಮಾಜದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ಜೊತೆಗೆ ಎಲ್ಲಾ ಅನುಕೂಲಗಳಿದ್ದರೂ ಏನಾಗುತ್ತಿದೆ? ಅದೇ ಸಮಸ್ಯೆಗಳನ್ನು ಇಂದಿಗೂ ಕಾಣುತ್ತಿದ್ದೇವೆ, ಅವು ಎಷ್ಟರಮಟ್ಟಿಗೆ ಸುಧಾರಣೆಯಾಗಿದೆ? ಎಂಬುದನ್ನು ಮೊದಲು ಮನಗಾಣಬೇಕು. ಆದ ಕಾರಣ ನಮ್ಮ ಕನ್ನಡ ಸಾಹಿತ್ಯದಲ್ಲಿ ಇಂದಿಗೂ ಅಂತಹ ಬರವಣಿಗೆಗಳು, ಚಳುವಳಿಗಳು ನಡೆದು ಎಲ್ಲರೂ ಸಮಾನತೆ, ಸಾಮರಸ್ಯ ಬದುಕು ಹಾಗೂ ಮಾನವೀಯ ಮೌಲ್ಯಗಳ ಮುಖಾಂತರ ಉತ್ತಮ ಜೀವನವನ್ನು ನಡೆಸಬೇಕೆಂಬುದು ಈ ಲೇಖನದ ಆಶಯವಾಗಿದೆ.

Read More »

ಮಹಿಳಾ ಕಥಾ ಬರಹದಲ್ಲಿ ಆಧುನಿಕತೆ ಹಾಗೂ ಪರಂಪರೆ

ಶ್ವೇತಾ ಎಂ., ಶಿವಕುಮಾರ. ಡಿ.ಸಿ.

206 to 214

ಮಹಿಳಾ ಕಥಾ ಸಾಹಿತ್ಯವು ಇಂದಿನ ಕಾಲಘಟ್ಟದಲ್ಲಿ ಒಂದು ಪ್ರಬಲ ಧ್ವನಿಯಾಗಿ ರೂಪುಗೊಂಡಿದೆ. ಈ ಸಾಹಿತ್ಯದಲ್ಲಿ ಮಹಿಳೆಯರ ಅನುಭವ, ಸಾಮಾಜಿಕ ಸ್ಥಿತಿ, ಆಂತರಿಕ ಸಂವೇದನೆಗಳು ಹಾಗೂ ತಾತ್ವಿಕ ಚಿಂತನೆಗಳು ಪ್ರಮುಖವಾಗಿ ವ್ಯಕ್ತವಾಗುತ್ತವೆ. ವಿಶೇಷವಾಗಿ ಆಧುನಿಕತೆ ಮತ್ತು ಪರಂಪರೆ ಎಂಬ ಎರಡು ಪ್ರಮುಖ ಬಿಂದುಗಳ ನಡುವಿನ ಸಂಬಂಧವನ್ನು ಮಹಿಳಾ ಲೇಖಕಿಯರು ತಮ್ಮ ಬರವಣಿಗೆಯ ಮೂಲಕ ಸೂಕ್ಷ್ಮವಾಗಿ ಅನಾವರಣಗೊಳಿಸುತ್ತಿದ್ದಾರೆ.
ಈ ಲೇಖನವು ಕನ್ನಡದ ಪ್ರಮುಖ ಮಹಿಳಾ ಲೇಖಕಿಯರಾದ ವೈದೇಹಿ, ವಸುಮತಿ ಉಡುಪ ಮತ್ತು ಸುನಂದಾ ಪ್ರಕಾಶ ಕಡಮೆ ಅವರ ಕಥೆಗಳ ವಿಶ್ಲೇಷಣೆಯ ಮೂಲಕ ಆಧುನಿಕತೆ ಹಾಗೂ ಪರಂಪರೆಯ ಪರಸ್ಪರ ಸಂಬಂಧವನ್ನು ವಿಶ್ಲೇಷಿಸುತ್ತದೆ. ಆಧುನಿಕತೆ ಹೆಸರಿನಲ್ಲಿ ಪರಂಪರೆಯ ತ್ಯಾಗವಲ್ಲದೆ, ಪರಂಪರೆಯ ಒಳಘಟ್ಟವನ್ನು ಗ್ರಹಿಸಿ, ಹೊಸದನ್ನು ಅಳವಡಿಸಿಕೊಂಡು ಅವರು ತಮ್ಮ ಕಥನ ಶೈಲಿಯನ್ನು ರೂಪಿಸುತ್ತಾರೆ.
ಈ ಕಥೆಗಳು ಕುಟುಂಬ, ಸಮಾಜ, ಧರ್ಮ, ಮಹಿಳಾ ಶೋಷಣೆ, ಜಾತಿ, ಲಿಂಗ, ಸಾಂಸ್ಕೃತಿಕ ಅನ್ವಯತೆ ಮೊದಲಾದ ಹಲವು ವಿಷಯಗಳನ್ನು ಒಳಗೊಂಡಿವೆ. ಆಧುನಿಕ ಮಹಿಳೆಯ ಆತ್ಮಅಭಿವ್ಯಕ್ತಿಗೆ ಈ ಕಥೆಗಳು ವೇದಿಕೆಯಾಗುತ್ತವೆ. ಇವುಗಳಲ್ಲಿ ಕಾಣಿಸುವ ಪಾತ್ರಗಳು ಪರಂಪರೆಗನುಗುಣವಾಗಿ ನಡೆದು, ಆಧುನಿಕ ಪ್ರಶ್ನೆಗಳನ್ನು ಎತ್ತಿ ಹಿಡಿಯುವ ಮೂಲಕ ಕಥೆಯೊಳಗೆ ಆಳವಾದ ಅರ್ಥವತ್ತಿತ್ವವನ್ನು ನೀಡುತ್ತವೆ.
ಆಧುನಿಕತೆ ಕೇವಲ ಪಶ್ಚಿಮೀಕರಣ ಅಥವಾ ತಂತ್ರಜ್ಞಾನಕ್ಕೆ ಸೀಮಿತವಾಗಿಲ್ಲ. ಇದು ಮಹಿಳೆಯ ಆತ್ಮಬಲ, ಆತ್ಮಜ್ಞಾನದ ಪ್ರಗಟನೆಯಾಗಿ ಪರಿಗಣಿಸಲಾಗುತ್ತದೆ. ಅದೆಷ್ಟೋ ಬಾರಿ ಈ ಆಧುನಿಕ ಪ್ರಬುದ್ಧತೆ ಪರಂಪರೆಯೊಂದಿಗೇ ಬೆರೆತು ಹೊಸ ರೀತಿಯ ಕಥನತಂತ್ರಗಳಿಗೆ ದಾರಿ ಮಾಡಿಕೊಡುತ್ತದೆ. ಈ ದ್ವಂದ್ವದ ನಡುವೆಯೂ ಲೇಖಕಿಯರು ತಮ್ಮ ಸಾಹಿತ್ಯ ಶೈಲಿಯ ಮೂಲಕ ಪ್ರಬಲವಾಗಿ ಮಹಿಳಾ ಮನಸ್ಸಿನ ಆಳವನ್ನು ತೆರೆದಿಟ್ಟಿದ್ದಾರೆ.

Read More »

ಪರಂಪರೆ ಮತ್ತು ನವೋದಯ ಸಾಹಿತ್ಯ

ಶ್ಯಾಮೂರ್ತಿ ಜಿ.

215 to 229

ಮಾನವನ ಸಂಸ್ಕೃತಿ ಮತ್ತು ನಾಗರಿಕತೆಗೆ ಸುದೀರ್ಘವಾದ ಪರಂಪರೆ ಇದೆ. ಪ್ರಾಣಿಯಂತಿದ್ದ ಅಂದಿನ ಮಾನವ ಜೀವನಕ್ಕೂ, ವೈವಿಧ್ಯಮಯವಾಗಿ ಜೀವನ ಕ್ರಮವನ್ನು ಕಂಡುಕೊಂಡ ಇಂದಿನ ಮಾನವನ ಜೀವನ ಕ್ರಮಕ್ಕೂ ಅಜಗಜಾಂತರದ ವ್ಯತ್ಯಾಸವನ್ನು ಕಾಣುತ್ತೇವೆ. ಈ ವೈಪರೀತ್ಯವನ್ನು ಗಮನಿಸಿದಾಗ, ಮಾನವನು ಅನೇಕ ಮಜಲುಗಳನ್ನು ದಾಟಿಕೊಂಡು ಬಂದಿದ್ದಾನೆ ಎಂಬುದು ಸರಿ. ಮಾನವನ ಈ ವಿಕಾಸದ ಚರಿತ್ರೆಯನ್ನು, ಬೌದ್ಧಿಕ ಮಜಲುಗಳನ್ನು ಸಾಹಿತ್ಯ ಪರಂಪರೆ ನಮಗೆ ತಿಳಿಸಿಕೊಡುತ್ತದೆ.
ಸಾಹಿತ್ಯ ರಚನೆ ಮಾನವನು ಸಾಧಿಸಿದ ಅದ್ಭುತಗಳಲ್ಲಿ ಒಂದು. ಮಾನವನ ಜೀವನ ಮತ್ತು ಸಾಹಿತ್ಯಗಳೆರಡೂ ಪರಸ್ಪರ ಪೂರಕ ಮತ್ತು ಪೋಷಕವಾದವುಗಳು. ಒಂದರಿಂದ ಒಂದು ಪ್ರಭಾವಿತವಾಗಿ ಬೆಳೆಯುತ್ತಾ ಹೋಗುತ್ತವೆ. ಸೂಕ್ಷ್ಮವಾಗಿ ಗಮನಿಸಿದಾಗ ಸಾಹಿತ್ಯ ರಚನೆ ಮಾನವನು ವಿಚಾರಶೀಲನಾದಾಗಿನಿಂದ ಒಂದಲ್ಲ ಒಂದು ವಿಧದಲ್ಲಿ, ಒಂದಲ್ಲ ಒಂದು ರೂಪದಲ್ಲಿ ರಚಿಸುತ್ತಾ, ರಕ್ಷಿಸುತ್ತಾ ಬಂದಿದ್ದಾನೆ. ಸಾಹಿತ್ಯವೆಂಬುದು ಮನುಷ್ಯನ ಸಮಸ್ತ ಅನುಭವಗಳ ಅಭಿವ್ಯಕ್ತಿಯಾಗಿರುವುದರಿಂದ ಸಹಜವಾಗಿ ಅದರಲ್ಲಿ ವೈವಿಧ್ಯತೆ ಮತ್ತು ಸಂಕೀರ್ಣತೆಗಳು ಉಂಟಾಗುತ್ತವೆ. ಸೃಜನಶೀಲ ಲೇಖಕರು ಸಾಹಿತ್ಯವನ್ನು ವಿವಿಧ ರೂಪಗಳಲ್ಲಿ ಸೃಷ್ಟಿಸುತ್ತಾ ಹೋಗುತ್ತಾರೆ. ಇದರ ಪರಿಣಾಮವಾಗಿಯೇ ಸಾಹಿತ್ಯ ಪರಂಪರೆಗಳು ವೈವಿಧ್ಯಮಯವಾಗಿ ಬೆಳೆದಿವೆ. ಇದಕ್ಕೆ ಕನ್ನಡವೂ ಹೊರತಲ್ಲ. ಪರಂಪರೆಯುದ್ದಕ್ಕೂ ಅನೇಕ ಪ್ರಕಾರಗಳಲ್ಲಿ, ಅಭಿವ್ಯಕ್ತಿ ಮತ್ತು ಆಶಯಗಳಿಗನುಗುಣವಾಗಿ ಬಹುಮುಖಿಯಾಗಿ ಸಾಗಿಬಂದಿದೆ. ಮೌಖಿಕ ಪರಂಪರೆಯಲ್ಲಿ ಕಂಠಸ್ಥವಾಗಿ, ಲಿಖಿತ ಪರಂಪರೆಯಲ್ಲಿ ಅಕ್ಷರ ರೂಪದಲ್ಲಿ - ಹಳಗನ್ನಡ, ನಡುಗನ್ನಡ, ಹೊಸಗನ್ನಡ ಸಾಹಿತ್ಯ ಪರಂಪರೆಯ ಆವಸ್ಥೆಗಳಾಗಿ ಬೆಳೆದುಬಂದರೆ, ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಿಂದ ಪ್ರಾರಂಭಗೊಂಡು ವೈವಿಧ್ಯಮಯವಾಗಿ ಮುನ್ನಡೆಯುತ್ತಿರುವ ಸಾಹಿತ್ಯವೇ ‘ಆಧುನಿಕ’ ಅಥವಾ ‘ಹೊಸಗನ್ನಡ ಸಾಹಿತ್ಯ’ ಎಂದು ಪ್ರಚಲಿತವಾಗಿದೆ. ಈ ಕಾಲಘಟ್ಟದ ಸಾಹಿತ್ಯ ಪರಂಪರೆಯು ಕಾವ್ಯ, ಮಹಾಕಾವ್ಯ, ಕಥೆ, ಕಾದಂಬರಿ, ನಾಟಕ ಮುಂತಾದ ಹಲವಾರು ರೂಪಗಳಲ್ಲಿ ಸಮಕಾಲೀನ ಸಾಂಸ್ಕೃತಿಕ ಪರಂಪರೆಯನ್ನು ಕಟ್ಟಿಕೊಟ್ಟಿದೆ. ದೃಷ್ಟಿ ಧೋರಣೆಗಳಿಗೆ ಅನುಗುಣವಾಗಿ ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ ಎಂದು ನಾಲ್ಕು ಘಟ್ಟಗಳಾಗಿ ವರ್ಗೀಕರಿಸಲಾಗಿದೆ. ಕಾಲಮಾನಕ್ಕೆ ಅನುಗುಣವಾಗಿ ಸಾಹಿತ್ಯ ರಚನೆಯ ಮನೋಧರ್ಮದಲ್ಲಿ ಆಗಿರುವ ಬದಲಾವಣೆಗಳನ್ನು ಈ ನಾಲ್ಕು ಘಟ್ಟಗಳ ಮೂಲಕ ಗುರುತಿಸಲಾಗಿದೆ. ಈ ಮುಖೇನ ಮೂಡಿಬಂದ ಸಾಹಿತ್ಯ ರೂಪಗಳು, ಸಮಕಾಲೀನ ಸ್ಥಿತಿಗತಿಗಳು, ಸಾಮಾಜಿಕ ಮೌಲ್ಯಗಳು ಸಾಹಿತ್ಯ ಪರಂಪರೆಯಲ್ಲಿ ಹೇಗೆ ಮೂಡಿಬಂದಿವೆ ಎನ್ನುವ ವಿಚಾರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, “ಪರಂಪರೆ ಮತ್ತು ನವೋದಯ ಸಾಹಿತ್ಯ” ವಿಷಯವನ್ನು ಆಯ್ಕೆ ಮಾಡಿಕೊಂಡು ಪ್ರಮುಖ ವಿಚಾರ ಪರಂಪರೆಗಳನ್ನು ಈ ಸಂಶೋಧನಾ ಲೇಖನದಲ್ಲಿ ಮಂಡಿಸಲಾಗಿದೆ. ಪ್ರಸ್ತುತ ಈ ಲೇಖನದ ಸಂಕ್ಷಿಪ್ತ ಸಾರಲೇಖ ಇದಾಗಿದೆ.

Read More »

ಕೊಡಗಿನ ಆದಿಕವಿ ಹರದಾಸ ಅಪ್ಪಚ್ಚಕವಿಯ ‘ಯಯಾತಿ ನಾಟಕದಲ್ಲಿನ ಪರಂಪರೆ ಮತ್ತು ಆಧುನಿಕ ಚಿಂತನೆಯ ಸ್ವರೂಪ’

ಸೌಮ್ಯ ಕೆ.ಎ.

230 to 235

ಕನ್ನಡ ಸಾಹಿತ್ಯ ಲೋಕದಲ್ಲಿ ಕ್ರಿ.ಶ 1960ರಲ್ಲಿ ಗಿರೀಶ್ ಕಾರ್ನಾಡರು ರಚಿಸಿದ ‘ಯಯಾತಿ’ ನಾಟಕ ತನ್ನದೇ ಆದ ಛಾಪನ್ನು ಮೂಡಿಸಿದ ವಿಶಿಷ್ಟವಾದ ಕೃತಿ. ಕ್ರಿ.ಶ 1959ರಲ್ಲಿ ಮರಾಠಿ ಲೇಖಕರಾದ ವಿ.ಎಸ್. ಖಾಂಡೇಕರ್‌ರವರು ‘ಯಯಾತಿ’ ಕೃತಿಯನ್ನು ಮರಾಠಿ ಭಾಷೆಯಲ್ಲಿ ಪ್ರಕಟಿಸಿದರು. ವಿಭಿನ್ನ ಸಂಸ್ಕೃತಿ, ವಿಶೇಷ ಪರಿಸರವನ್ನು ಹೊಂದಿದ ಕೊಡಗು ಭಾಗದಲ್ಲಿ ಆದಿಕವಿ ಎಂದು ಬಿರುದಾಂಕಿತ ಹರದಾಸ ಅಪ್ಪಚ್ಚಕವಿ ಎಲೆ ಮರೆಯ ಕಾಯಿಯಂತೆ ಕ್ರಿ.ಶ 1906ರ ಇಸವಿಯಲ್ಲಿ ‘ಯಯಾತಿ’ ಎಂಬ ಪೌರಾಣಿಕ ನಾಟಕವನ್ನು ಕೊಡವ ಭಾಷೆಯಲ್ಲಿ ರಚಿಸಿದ್ದರೆಂಬುದು ಗಮನಾರ್ಹ. ಯಯಾತಿ ರಾಜನ ಚರಿತೆಯಾದರೂ, ವೃಷಪರ್ವ ರಾಜನ ಮಗಳಾದ ರಾಜಕುಮಾರಿ ಶರ್ಮಿಷ್ಟೆ ಹಾಗೂ ಶುಕ್ರಾಚಾರಿ ಋಷಿಯ ಪುತ್ರಿಯಾದ ದೇವಯಾನಿಯರ ಸುತ್ತ ಹೆಣೆದ ಕಥೆಯಾಗಿದೆ. ಅಪ್ಪಚ್ಚಕವಿಯ ಈ ನಾಟಕದ ವಿಶೇಷತೆಯೆಂದರೆ ಬ್ರಿಟೀಷರ ಆಳ್ವಿಕೆಯ ಪರಿಣಾಮವಾಗಿ ಪರಂಪರೆಯ ಮೇಲಾದ ಪ್ರಭಾವ ಹಾಗೂ ಆಧುನಿಕ ಸಂಸ್ಕೃತಿಯ ಚಿತ್ರಣ. ನಾಟಕದ ಆರಂಭದ ಸನ್ನಿವೇಶದಲ್ಲಿ ರಾಜಕುಮಾರಿ ಶರ್ಮಿಷ್ಟೆ ದೇವಯಾನಿಗೆ ‘ಗುಡ್ ಮಾರ್ನಿಂಗ್’ ಎಂದು ಶೇಕ್‌ಹ್ಯಾಂಡ್ ಮಾಡುತ್ತಾಳೆ. ಆಗ ದಾಸಿ “ಹಿಂದೆಲ್ಲಾ ಅದೆಂತಹ ಸಂಪ್ರದಾಯವಿತ್ತು. ಇದೀಗ ಎಲ್ಲವೂ ಬದಲಾಗಿದೆ. ವಿಚಿತ್ರ ಉಡುಗೆ-ತೊಡುಗೆಯಾಗಿ ಬೂಟು, ಸೂಟುಗಳು ಬಂದಿದೆ!” ಎಂದು ಬದಲಾದ ಆಧುನಿಕ ಸ್ಥಿತಿಯನ್ನು ನೆನೆಯುತ್ತಾಳೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ವಿಸ್ಕಿ, ಬ್ರಾಂಡಿಯಂತಹ ಆಧುನಿಕ ಜೀವನ ಶೈಲಿಯ ವಿವರಣೆ ಪೌರಾಣಿಕ ಪಾತ್ರಗಳೊಂದಿಗೆ ನಾಟಕದಲ್ಲಿ ಸಾಗಿ ಬಂದಿದೆ. ಪರಂಪರಾಗತವಾಗಿ ಬಂದ ಸಂಪ್ರದಾಯಗಳಿಗೆ ವಿರುದ್ಧವಾದ ಆಧುನಿಕ ನಡಾವಳಿಯ ಕುರಿತ ವಿಷಾದದ ನೋಟವನ್ನು ಕಾಣಬಹುದು. 1906ರ ಕಾಲಘಟ್ಟದಲ್ಲೇ ಈ ರೀತಿಯ ಚಿಂತನೆ ಕಂಡುಬರುತ್ತದೆ. ‘ಯಯಾತಿ’ ನಾಟಕದಲ್ಲಿ ಪರಂಪರೆ ಹಾಗೂ ಆಧುನಿಕತೆ ಮುಖಾಮುಖಿಯಾದ ಸಂದರ್ಭ, ಆಧುನಿಕತೆಯ ಕುರಿತ ವಿಭಿನ್ನ ವ್ಯಾಖ್ಯಾನವಿದೆ. ಪರಂಪರೆಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಈ ನಾಟಕವು ಪ್ರಸ್ತುತ ಎಂದೆನಿಸುತ್ತದೆ.
ಪೂರ್ಣ ಲೇಖನದಲ್ಲಿ ಹರದಾಸ ಅಪ್ಪಚ್ಚಕವಿ ‘ಯಯಾತಿ’ ನಾಟಕದಲ್ಲಿ ಚಿತ್ರಿಸಿದ ಪರಂಪರೆ ಹಾಗೂ ಆಧುನಿಕತೆಯ ಸ್ವರೂಪವನ್ನು ತಿಳಿಸಲಾಗುವುದು.

Read More »

ಪುರಂದರ ದಾಸರ ಕೀರ್ತನೆಗಳಲ್ಲಿ ಲೋಕ ನೀತಿಯ ಅಂಶಗಳು

ಉಮಾ ಮಹೇಶ್ವರಿ ಎಂ.

236 to 243

“ಪುರಂದರದಾಸರು ಕರ್ನಾಟಕ ಸಂಗೀತ ಪಿತಾಮಹರೆಂದು ಪ್ರಸಿದ್ಧರಾದವರು.” ಪುರಂದರದಾಸರು 1480 ರಲ್ಲಿ ಜನಿಸಿದರು ಮತ್ತು 1564, ಜನವರಿ ಎರಡರಂದು ನಿಧನರಾದರು. ವರದಪ್ಪ ನಾಯಕ ಮತ್ತು ತಾಯಿ ರುಕ್ಮಿಣಿಯವರು ಪುರಂದರದಾಸರ ತಂದೆ ತಾಯಿಗಳು. ಪುರಂದರದಾಸರ ತಂದೆ ಚಿನ್ನ, ಬೆಳ್ಳಿ ಮತ್ತು ರತ್ನಭರಣಗಳ ವ್ಯಾಪಾರ ಮಾಡುತ್ತಿದ್ದರು ಎಂದು ತಿಳಿದುಬರುತ್ತದೆ. ಪುರಂದರದಾಸರ ಮೊದಲ ಹೆಸರು ಶ್ರೀನಿವಾಸ ನಾಯಕರು ಎಂಬುದಾಗಿತ್ತು. ಶಿಕ್ಷಣದ ಮೂಲಕ ಸಂಗೀತದಲ್ಲಿ ಹೆಚ್ಚಿನ ಪ್ರಾವೀಣ್ಯತೆಯನ್ನು ಗಳಿಸಿದರು. ಶ್ರೀನಿವಾಸ ನಾಯಕರು ತಮ್ಮ 16ನೇ ವಯಸ್ಸಿನಲ್ಲಿ ಸರಸ್ವತಿ ಬಾಯಿ ಎಂಬ ಕನ್ಯೆಯೊಂದಿಗೆ ವಿವಾಹವಾದರು. ನಂತರ ಶ್ರೀನಿವಾಸ ನಾಯಕರು ರತ್ನಪಡಿ ವ್ಯಾಪಾರ ಮಾಡುತ್ತಿದ್ದರು. ಕೆಲವು ವರ್ಷಗಳ ನಂತರ ಅವರ ಬದುಕಿನಲ್ಲಿ ನಡೆದ ಒಂದು ಮೂಗುತಿಯ ಘಟನೆಯ ಕಾರಣದಿಂದಾಗಿ ಶ್ರೀಮಂತಿಕೆಯಲ್ಲಿ ಜಿಗುಪ್ಸೆ ಹೊಂದಿ ತಮ್ಮ ಬಳಿಯಲ್ಲಿದ್ದ ಎಲ್ಲ ಸಂಪತ್ತನ್ನು, ತಮ್ಮ 30ನೇ ವಯಸ್ಸಿನಲ್ಲಿ ದಾನ ಮಾಡಿ, ತಮ್ಮ ಕುಟುಂಬದೊಂದಿಗೆ ಭಿಕ್ಷುಕ ಜೀವನ ನಡೆಸಲು ಮುಂದಾದರು. ಅದರೊಂದಿಗೆ ಕೀರ್ತನೆಗಳನ್ನು ಹಾಡಲು ಪ್ರಾರಂಭಿಸಿದರು.

Read More »

भारतीय ज्ञान परम्परा इस देश के मिजाज में है

दीपक कुमार गोंड

245 to 253

अति-आधुनिक, मिश्रित (भारतीय-पाश्चात्य) ज्ञान प्रणाली व सभ्यता के व्यापक विकास के साथ हम इतनी दूर चले आए कि आज जब भी हम पीछे मुड़ कर देखते हैं तो लगता है कि जैसे भारतीय ज्ञान परम्परा या प्रणाली जैसी अवधारणा हमारे समाज में कभी थी ही नहीं और अगर थी भी तो उसे हम अपनी अज्ञानता, संकुचित परम्परा एवं असभ्यता का प्रतीक मान कर मुँह फेर लेते हैं। जबकि वही हमारे ज्ञान, गौरव और सभ्यता की निशानी थी। जिसे आज भी कुछ जातियाँ व सम्प्रदाय अपनी साँस्कृतिक धरोहर के रूप में, अपने पुरखों के सम्मान के रूप में सुरक्षित रखे हुए हैं। भारतीय ज्ञान प्रणाली को समझना अपनी भारतीयता के सम्मान के प्रति सच्ची निष्ठा एवं प्रेम को समझना है। अगर हम भारतीय होने पर जरा भी सचेत नहीं हैं तो इस विषय पर आगे बात करना या पढ़ना बिलकुल व्यर्थ परिश्रम सा प्रतीत होगा। अतः यह जरुरी है कि हम इस विषय पर विचार करने से पूर्व अपने हृदय में अपने देश या संस्कृति के प्रति एक सकारात्मक व अन्वेषण दृष्टिकोण से अपने भारतीय ज्ञान की विरासत का अवलोकनार्थ अध्ययन करते रहना होगा।
हम जानते हैं कि विश्व में ज्ञान प्रणाली के विविध रूप हैं। ज्ञान प्रणाली के द्वारा मनुष्य भौतिक तथा बौद्धिक सामाजिक क्रियाकलाप करके अनुभव जगत के द्वारा वस्तुनिष्ठ गुणों और संबंधों, प्राकृतिक और मानवीय तत्त्वों के बारे में अभिव्यक्ति करता है। ज्ञान दैनंदिन तथा वैज्ञानिक हो सकता है तथा समाज में ज्ञान की मिथकीय, कलात्मक, धार्मिक तथा अन्य कई अनुभूतियाँ भी होती हैं। सैद्धांतिक रूप में सामाजिक-ऐतिहासिक स्थितियों में मनुष्य के क्रियाकलाप की निर्भरता को प्रकट किए बिना ज्ञान के महत्त्व को नहीं समझा जा सकता है। साधारण शब्दों में कहें तो ‘अनुभव की अनुभूति ही ज्ञान कहलाता है।’ लेकिन अनुभूति मात्र से ही ज्ञान का विकास संभव नहीं होगा, क्योंकि ज्ञान परम्परा मानव समाज में प्राचीन काल से चली आ रही परम्परा है। ज्ञान के उद्भव से लेकर मानव सभ्यता के विकास तक इस परम्परा ने अपनी निरन्तरता को बनाए रखा है। मानव सभ्यता जैसे-जैसे विकास करती गई, वैसे-वैसे यह परम्परा वैज्ञानिकता की दृष्टि से भी विकसित होती गई। लेकिन आज के दौर में या हमारी आधुनिक ज्ञान प्रणाली के विकास में भारतीय ज्ञान प्रणाली की अलग से चर्चा कराने की आवश्यकता क्यों महसूस की जाने लगी है? क्या इस प्रणाली से हम कोई नई परम्परा विकसित करना चाहते हैं या इस प्रणाली के बहाने इतिहास का शव परीक्षण करना चाहते हैं। यह हमें तय करना होगा। क्योंकि भारतीय ज्ञान प्रणाली न तो कोई नई ज्ञान प्रणाली है और न ही इसके द्वारा किसी गड़े मुर्दे को उखाड़ने की बात हो रही है बल्कि हम मानव सभ्यता के विकास में इस ज्ञान परम्परा के कई अंतर्विरोधों को स्पष्ट करते हुए अपनी भारतीयता की अवधारणा को वैश्विक पटल पर अवस्थित करना चाहते हैं।
यहाँ हम एक ऐसी परम्परा को भी देख सकते हैं जो ज्ञान की परम्परा के साथ-साथ विकास की है और वह परम्परा मनुष्य-मनुष्य के बीच सम्प्रेषण के रूप में इस्तेमाल होने वाली वाचिक परम्परा की भाषा है। वाचिक परम्परा भारतीय ज्ञान परम्परा के मिजाज में है, जिसका विकास साथ-साथ चला है और जिसकी चर्चा यहाँ करना भी अनिवार्य होगा। हम वाचिक परम्परा के सहारे भारतीय ज्ञान परम्परा को स्पष्ट एवं गहरे स्तर पर समझ सकते हैं।

Read More »

ज्ञान परंपरा और प्राचीन हिंदी साहित्य (सिद्ध, नाथ, जैन, रासो)

मालती ए. एम.

254 to 257

भारतीय ज्ञान परंपरा और हिंदी प्राचीन साहित्य के बीच गहरा संबंध है। हिंदी साहित्य, भारतीय ज्ञान परंपरा के विभिन्न पहलुओं को व्यक्त करता है, जैसे कि वेदों, उपनिषदों और अन्य प्राचीन ग्रंथों से प्रेरित होकर हिंदी साहित्य ने इन ज्ञान परंपराओं को संरक्षित, प्रचारित और विकसित करने में महत्वपूर्ण भूमिका निभाई है। साहित्य में सिद्ध, नाथ और जैन साहित्य प्रमुख धार्मिक साहित्य के रूप में शामिल हैं। ये तीनों साहित्य अपने-अपने धर्मों के प्रचार-प्रसार और आध्यात्मिक अनुभूतियों को व्यक्त करने के लिए लिखे गए थे। सिद्ध साहित्य में सरहप्पा, शबरप्पा जैसे सिद्धों द्वारा रचित रचनाएँ हैं, जो बौद्ध धर्म के तांत्रिक मार्ग से प्रभावित हैं। नाथ साहित्य में भगवान शिव के उपासक नाथों द्वारा रचित रचनाएँ हैं, जो गुरु महिमा, योग और हठयोग पर बल देती हैं। हिंदी साहित्य परंपरा का मुख्य उद्देश्य आत्मा को ऊँचा उठाना, मनुष्य के गुणों को परिष्कृत करना, और उसे आनंद की अवस्था में पहुँचाना है। साहित्य अतीत से जीवन मूल्यों को आने वाली पीढ़ी तक पहुँचाने में सेतु का काम करता है। यह मनुष्य को उसके कर्तव्यों और दायित्वों से परिचित कराता है और उसे समाज और राष्ट्र के प्रति जागरूक करता है। हिंदी साहित्य परंपरा का परिचय हिंदी भाषा के साहित्यिक इतिहास को दर्शाता है, जो संस्कृत और अपभ्रंश भाषाओं से विकसित हुआ है। यह साहित्य विभिन्न साहित्यिक विधाओं जैसे गद्य, पद्य और चम्पू में रचा गया है और इसमें भक्ति, प्रेम, ज्ञान, और श्रृंगार जैसे विषयों को दर्शाया गया है। हिंदी साहित्य को आदिकाल, भक्तिकाल, रीतिकाल और आधुनिक काल जैसे विभिन्न कालों में विभाजित किया गया है।

Read More »

मध्यकालीन भक्ति काल में हिन्दी ज्ञान परंपरा के विविध आयाम

निशा जैन

258 to 264

भारतीय ज्ञान परंपरा के अंतर्गत हिंदी साहित्य का एक महत्वपूर्ण स्थान रहा है। भारतीय ज्ञान परंपरा और मध्यकालीन साहित्य इन दोनों के मध्य घनिष्ठ संबंध रहा है। ये दोनों ही भारतीय संस्कृति और हमारे इतिहास की एक बेजोड़ कड़ी रहा है। मध्यकालीन साहित्य के भक्ति काल ने भारतीय ज्ञान परंपरा के विभिन्न पक्षों को बेहतरीन तरीके से दीप्तिमान किया है। जहाँ भारतीय ज्ञान परंपरा, वैदिक उपनिषद और बौद्ध काल में प्रखर हुए, वहीं मध्यकालीन साहित्य ने इस ज्ञान को भाषा और भक्ति से जोड़ा। वेदों की गहनता, उपनिषदों की गूढ़ता तथा पुराणों की सांस्कृतिक गौरव जब मध्यकालीन कवियों के मुख में मुखरित हुआ तो भक्तिकाल प्रेम, भक्ति और ज्ञान का जीत जाता निगम बन गया। निर्गुण व सगुण भक्ति के माध्यम से भक्ति का एक विस्तृत रूप देखने को मिलता है, जो हमें हिंदी ज्ञान परंपरा से जोड़ता है। जहाँ कबीर जो निर्गुण भक्ति के उपासक हैं, उनके दोहों से आत्मज्ञान की चमक देखने को मिलती है, वहीं सगुण उपासक तुलसी की चौपाइयों में धर्म और नीति का समर्पण भाव झलकता है। मीरा के भजन प्रेम और अनन्या भक्ति की छाप छोड़ते हैं, वहीं सूर के पदों की भक्ति, मधुर रसधार बनकर बहती है। मध्यकालीन साहित्य के भक्तिकालीन काव्यधारा ने भारत के ज्ञान का केवल ग्रंथों तक सीमित नहीं रखकर ज्ञान परंपरा से जोड़ते हुए अनेक भाषाओं में उतारा, जिससे समाज में धार्मिकता, प्रेम, समभाव, आध्यात्मिकता और नैतिकता का सूर्योदय हुआ। इस शोध पत्र में मध्यकालीन भक्ति काव्यधारा में भारतीय ज्ञान परंपरा के विविध आयामों का विश्लेषण प्रस्तुत किया गया है जिसमें निर्गुण भक्ति, सगुण भक्ति, कबीर दास, तुलसी कृत रामभक्ति व सूर और मीरा कृत कृष्णभक्ति, नीति ज्ञान, प्रेम मार्ग, आत्मसमर्पण आदि की समीक्षा की गई है।

Read More »

प्राचीन ज्ञान परंपरा और हिंदी साहित्य (जैन, सिद्ध, नाथ, रासो साहित्य)

साहिल कुमार

265 to 271

यह आलेख भारतीय ज्ञान परंपरा में हिंदी साहित्य की प्रारंभिक भूमिका पर प्रकाश डालता है, विशेषकर जैन, सिद्ध, नाथ और रासो साहित्य के माध्यम से। जैन साहित्य ने अहिंसा और आत्मसंयम पर बल दिया, जबकि सिद्ध साहित्य ने तांत्रिक साधना और सामाजिक आडंबरों का विरोध किया। नाथ साहित्य ने योग, हठयोग, और गुरु महिमा को स्थापित किया, और रासो साहित्य ने वीरता तथा प्रेम गाथाओं को जनमानस तक पहुंचाया। इन धाराओं ने न केवल हिंदी भाषा को आकार दिया बल्कि भारतीय संस्कृति और सामाजिक चेतना को भी समृद्ध किया, जिससे आधुनिक हिंदी साहित्य की नींव पड़ी।

Read More »

भारतीय ज्ञान परंपरा और हिंदी भाषा की विकास यात्रा

संस्कृति सिन्हा, निशा जैन

272 to 281

भारत की प्राचीन ज्ञान परंपरा में भाषा का अत्यंत महत्वपूर्ण स्थान रहा है। हिंदी भाषा का उद्भव वैदिक संस्कृत की वाचिक परंपरा से जुड़ा है, जहाँ वेदों, उपनिषदों और ब्राह्मण ग्रंथों का मौखिक रूप से संरक्षण हुआ। उस समय ज्ञान को श्रुति परंपरा द्वारा एक पीढ़ी से दूसरी पीढ़ी तक पहुँचाया जाता था। गुरु-शिष्य परंपरा के माध्यम से यह मौखिक ज्ञान आगे बढ़ता रहा और समाज में ज्ञान का प्रसार होता रहा। समय के साथ संस्कृत से सरल भाषाओं की ओर संक्रमण हुआ। प्राकृत, पाली और अर्द्धमागधी भाषाओं ने ज्ञान को जनसाधारण तक पहुँचाने में सहायता की। बौद्ध और जैन धर्मों के प्रचार में इन भाषाओं का विशेष योगदान रहा। इनसे अपभ्रंश भाषाओं का विकास हुआ, जो हिंदी के प्रारंभिक स्वरूप का आधार बनीं। वाचिक परंपरा में इन भाषाओं ने जनता के बीच भक्ति, ज्ञान और दर्शन को सरलता से पहुँचाया।
हिंदी का लिखित विकास 10वीं से 12वीं शताब्दी के अपभ्रंश साहित्य से हुआ। अमीर खुसरो ने हिन्दवी में रचनाएँ कर हिंदी के लिखित रूप को प्रारंभिक पहचान दी। भक्तिकाल (14वीं-17वीं सदी) में तुलसीदास, सूरदास और कबीर ने अवधी, ब्रज और खड़ी बोली में काव्य रचनाएँ कीं, जिससे हिंदी का व्यापक प्रसार हुआ। रीतिकाल में हिंदी साहित्य में शृंगारिकता प्रमुख रही। आधुनिक काल में भारतेन्दु हरिश्चंद्र, महावीर प्रसाद द्विवेदी और प्रेमचंद ने हिंदी को सामाजिक सुधार, यथार्थवाद और राष्ट्रीय चेतना का माध्यम बनाया। स्वतंत्रता संग्राम के दौरान हिंदी ने जनजागरण का कार्य किया। आज हिंदी साहित्य, शिक्षा, विज्ञान, तकनीक और मीडिया की एक सशक्त भाषा है। इस प्रकार हिंदी भाषा भारतीय अस्मिता और ज्ञान परंपरा की अमूल्य धरोहर है।

Read More »

हिन्दी ज्ञान परंपरा और साहित्येतिहास लेखन

वेदमूर्ती सी आर

282 to 287

ज्ञान परंपराएँ धर्म के वैशिष्ट्य से परिपूर्ण होकर इस विश्व को निरंतर परिपूर्णता का चमक देती है। उसका प्रभाव विश्व को प्रत्येक क्षेत्र में बाँटा है। हिन्दी ज्ञान परंपरा, साहित्य जगत का सूर्य है, जो विभिन्न रूपी किरणों से चमकते हुए सम्पूर्ण संसार को आलोकित करता है। ज्ञान परंपरा को प्रभावित करनेवाले इस हिन्दी सूर्य की ओर यदि दृष्टिपात किया जाए तो गद्य, उपन्यास, कहानी, संस्मरण, एकाँकी, नाटक, और यात्रा साहित्य आदि रश्मियों के रूप में यह संसार की विभिन्न यथार्थ भावनाओं को समाज के समक्ष प्रकाशित करने में अग्रणी है। यह जनसामान्य को नवीन चेतना, जागरूकता, सजगता की ओर ले जाता है। इस विषय के किसी भी पक्ष पर दृष्टिपात करने से पूर्व ही यदि परंपरा शब्द की व्याख्या की जाये, तो परंपरा वह संपत्ति है जो बिना रुके निरंतर गति से अपने कर्म पथ की ओर अग्रसारित होती रहती है। यह परंपरा अपने अंदर समेटे हुए ज्ञान को चारों ओर आलोकित करते, व्याप्त दुख, वेदना को अपने अंदर समाहित करते हुए कल्पना और भाव से उसमें ऊर्जा भर उसे जनमानस तक पहुँचाती है और इस प्रकार सुखी मानव के हृदय में एक ऐसी जागृति प्रदान करती है जिससे दूर-दूर तक व्यक्ति एक दूसरे के साथ जुड़कर सद्भावनाओं को अंगीकार करता है। यह परंपरा ज्ञानस्वरूप है, चेतना स्वरूप है, संस्कृति स्वरूप है, नैतिक गुण स्वरूप है। इसलिए यह परंपरा नित्य नवीन है और नई विचार से युक्त है। जो जीवन को नवीन आलोक देनेवाली होती है, नये मूल्यों से जोड़नेवाली होती है, नये ज्ञान का प्रतीक होती है। भारतीय सभ्यता ने ज्ञान को बहुत महत्व दिया है, जैसा कि इसके आश्चर्यजनक रूप से विशाल बौद्धिक ग्रंथों, दुनिया से पांडुलिपियों के सबसे बड़े संग्रह और विभिन्न प्रकार के ग्रंथों, विचारकों और विद्यालयों की अच्छी तरह से प्रलेखित विरासत से पता चलता है। भगवान श्री कृष्ण ने भगवद गीता (४,३३-३८) में अर्जुन को मार्गदर्शन दिया कि ज्ञान आत्म शुद्धि और मुक्ति का सबसे बड़ा साधन है। भारत में ज्ञान का एक लंबा इतिहास है जो गंगा नदी की तरह निरंतर जारी है। वेदों, उपनिषदों से लेकर श्री अरबिंदो तक, ज्ञान सभी शोधों का केंद्र बिंदु रहा है। भारतीय ज्ञान प्रणालियों की भारतीय संस्कृति, दर्शन और आध्यात्मिकता में एक मजबूत नींव है और यह हजारों वर्षों से विकसित हुई है।

Read More »

संस्कृतभाषा इह्परकल्याणसाधिका

N. R. Bahallika Rao

289 to 295

“इह – पर”- इति अस्य जगतः अन्यस्य जगतः विषये ज्ञातुं सुलभतरः उपायः अस्ति ।तदस्माकं पर्यावरणं परितः आदौ कौतूहलेनअवलोकनंकरणीयम् । ततः इदं कः सृष्टवान् कथं सृष्टाः किमर्थं सृष्टाः इति प्रश्नाः मनसि उत्पद्यन्ते । तदेव कौतुकं भारतीयानां जीवनस्य परमलक्ष्यीकृतं तत्वचिन्तनमस्ति । सा चिन्तना एव “ ब्रह्म जिज्ञासा” इति कथ्यते । अनया मानवः जिज्ञासया इह – पर विषये अवगन्तुम् आरभेत ।
इदं जगत्त् – ब्रह्माण्डं समग्रतया विस्मयकारि वर्तते । आदौ भूमिग्रहः यत्र वयं जीवामः तत्र यानिभिन्न - भिन्नानि चराचर वस्तूनि सन्तितेषां स्वरूपाणि प्रत्यक्षतया अनुभवामः । अपि च तत्र अद्यापि अनविष्कृताः अनेके विषयाः वर्तन्ते । अस्माकं पृथिवी अत्यन्तं विशाला अनन्ते अन्तरिक्षे प्लवति । तथैव सूर्यः चन्द्रः अन्ये ग्रहाः असङ्ख्यातनक्षत्राणि तेषां निर्धारितपथे परिभ्रमन्ति ।सर्वेषां सत्तानां एतानि सर्वाणि कार्याणि परस्परम् अनुकूलानि सन्ति ।
जगति जडचेतनौ स्तः । जडाः अस्वतन्त्राः ।किन्तु मनुष्यसहिताः प्राणिनः अन्तः “जीव – आत्म” इति “अदृश्यमानं चालनं स्थायित्वं शक्तियुक्ताः सन् स्वतन्त्रतया यथापेक्षते तथा कार्यं कर्तुं श्क्नुवन्ति । ते विशिष्य चिन्तनमन्थन सामर्थ्ययुक्ताः सन्ति ।प्राणिनां शरीराणि जडप्रकृत्या निर्मितम्। तस्मिन् प्रविष्टाः अप्राकृतिकाः जीवाः यथोचितव्यापार्ं कुर्वन्ति । एषःसन्निवेशः प्राणिनः जन्म इति कथ्यते । किन्तु सर्वं हि आयुः निर्धारितम् । शरीरात् जीवस्य निर्गमनमेव जीवनस्य अन्त्यः ।एवम् आत्मनः स्वरूपं वर्णयति भगवद्गीता ।
न जायते म्रियते वा कदाचिद् नायं भूत्वा भविता वा न भूयः ।
अजो नित्यः शाश्वतोऽयं पुराणो न हन्यते हन्यमाने शरीरे ॥ (२ – २०)

Read More »

नाट्यरङ्गे ध्वनिसिद्धान्तस्य प्रभाव: व्यङ्ग्यव्याख्यामधिकृत्य एकं अध्ययनम् ||

Sarikrishna S.

296 to 304

काव्यशास्त्राचार्येषु आनन्दवर्धन: तस्य ध्वनिसिद्धान्तश्च प्रचुरप्रचार: | तेन ग्रथित: ध्वन्यालोकग्रन्थ: भारतीय काव्यशास्त्रस्य मकुटस्थाने स्थित: | ग्रन्थोऽयं काव्यस्य आत्मा ध्वनिरिति समर्थितम् | ध्वने: निरूपणेन काव्यसमीक्षाजगति नूतनयुगस्य आरंभमेव समायातः| प्रतीयमानार्थस्य प्राधान्यं यस्मिन् काव्ये चमत्कारिरूपेण दृश्यते तदेव ध्वनिकाव्यम् |अयमर्थस्तु सहृदयहृदयानानन्दयति | ये तु वस्त्वलंकाररसरूपेण त्रिविधो भवति| तेषु रसध्वनि: महानीयतमोमन्यते | आनन्दवर्धनेन रसस्य ध्वनेश्च पारस्परिकसंबन्ध: च विशदीकृत: | रसस्तु सदा व्यङ्ग्य:| रसध्वने: चारुत्वाहेतुत्वात् काव्ये तथा नाट्ये तस्योपयोग: सहृदयान् आनन्दयति | आनन्दवर्धनस्तु श्रव्यकाव्यमनुसृत्येव ध्वनि: प्रस्तावित: | प्रायोगिक रूपेण ध्वने: प्रयोग: तदनन्तरकालीन कुलशेखरवर्मणा एव कृत: | स तु चेर साम्राज्यस्य प्रमुख: राजा तथा कवि: आसीत् | तेन महाभारतेतिवृत्तं आश्रित्य विरचित: सुभद्राधनञ्जयम् तथा तपतीसंवरणम् इति नाटकद्वयौ ध्वनिसिद्धान्तप्रयोगेन एव कृत: | ध्वनियुक्तनाटकद्वयौ इति विशेषणेन रङ्गावतरणार्थं नवीन अभिनय प्रयोगोऽपि समन्वितम् | ते तु धनञ्जयध्वनि तथा संवरणध्वनीति नाम्ना प्रसिद्ध : | ये द्वे संस्कृत भाषाया: प्रथम रङ्गपाठ: इति मन्येते | गणपतिशास्त्रि महाभागेन ये द्वे ग्रन्थौ मिलित्वा व्यङ्ग्यव्याख्या इति एकसंज्ञां कृत: | प्रस्तुत लेखनं नाट्यरङ्गे ध्वनिसिद्धान्तस्य प्रभाव:- व्यङ्ग्यव्याख्यामधिकृत्य एकं अध्ययनम्, मुख्यतया नाट्ये ध्वने: प्रयोगमार्गाणि तथा व्यङ्गार्थाभिनयसंकेता:, दृश्यकाव्ये व्यङ्ग्यव्यञ्जक सन्निवेश:, केरलीय रङ्गावतरणे ध्वने: प्रभाव: इत्यादि विषयानधिकृत्य व्यङ्ग्यव्याख्यां पुरस्कृत्य प्रतिपादित:| 

Read More »

भागवतमहापुराणे जीवन मौल्यानि

शिवरामगुप्त बि.

305 to 322

पुरा भवमिति ।  पुरा + “ सायंचिरंप्राह्णेप्रगेऽव्ययेभ्यष्ट्युट्युलौ तुट् च ।”  ४ ।  ३ । २३ ।  इति ट्युः ।  “ पूर्ब्बकालैकसर्व्वजरत्पुराणनवकेवलाः समानाधिकरणेन । “  २ ।  १ ।  ४९ ।  इति निपातनात् तुडभावः ।  यद्वा    “ पुराणप्रोक्तेषु ब्राह्मणकल्पेषु । “  ४ ।  ३ ।  १०५ ।  इति निपातितः ।  यद्वा    पुरा नीयते इति ।  नी + ड । णत्वञ्च ।)  व्यासादिमुनिप्रणीतवेदार्थवर्णितपञ्चलक्षणान्वितशास्त्रम् ।
भारतीयसंस्कृतेः सभ्यतायाः च अवबोधनाय पुराणानां नितरां महत्त्वमस्ति ।
तत्र च अनैतिहासिक्यः कथाः, विष्णुदशावतारवर्णनानि, देवपूजाविधयः, पर्व-व्रतनियमाश्चेति विशेषतः मौल्यानां विषये अपि विचाराः उपलभ्यन्ते। वेदप्रामाण्येन पुराणप्रामाण्यं खलु प्रख्यायते। पुराणसंख्या-विषये मतभेदो नास्ति, सर्ववादिसिद्धं तेषां अष्टादशत्वम्। कस्यापि मानवसमाजस्य इतिहासः तावन्न पूर्णो मन्यते, यावत्तस्य सृष्टेः प्रारम्भकालतः इतिहासो न प्रस्तूयते। पाश्चात्त्यशिक्षाप्रभाविता विद्वांसो नैतदनुमोदयन्ति स्म, अत एव ते पुराणानि सत्यानि न स्वीकुर्वन्ति स्म, परं सम्प्रति दृष्टिकोणपरिवर्तनं जातम्। सुसंस्कृतया दृष्ट्या भारतीयमितिहासं जिज्ञासमानानां कृते पुराणानि निधय इव।

Read More »

पुराणेषु प्रतिपादितानि जीवनमौल्यानि

Shrinivas Phadnis

323 to 331

भारतीय वाङमयेषु भगवतः स्वरूपं, जगतः सृष्टिविशेषं, जीवानां कर्तव्यं बोधयितुं तथैव चतुर्विध पुरुषार्थान साधयितुं वेद वाङमयस्य साररूपेण अष्टादश पुराणाः प्रवर्तन्ते. भगवान वेदव्यासः वेदविभागं कृत्वा ब्रह्मसुत्राणि रचयित्वा महाभारतमपि कृत्वा अष्टादश पुराणानि रचितवन्तः. एतादृश पुराणेषु लौकिक विषयाः अलौकिक विषयाः दृष्टान्तसहित सूत शौनकादि ब्रह्मनारदादि संवादरूपेण उपकुर्वन्ति.

Read More »

संस्कृतभाषा इहपरकल्याणसाधिका

तिरुमल

332 to 339

शोधपत्रप्रविधि:
उत्तरं यत्समुद्रस्यहिमाद्रेश्चैव दक्षिणम् । वर्षं तद्भारतं नामभारती यत्र सन्तति: ॥
इह खलु जगति सत्सु बहुषु जीविषु मानव: मानवेतरजीविभ्य: भिन्न: उन्नतस्तरस्थश्च पशुपक्षिक्रिमिकीटेषु इव
वर्तमानस्वाभाविकज्ञानेन तृप्तेरभावात् । अत एवोच्यते- आहारनिद्रा भयमैथुनञ्च सामान्यमेतत्पशुभिर्नराणाम् ।
धर्मो हि तेषामधिको विशेष: धर्मेण हीना: पशुभि: समाना: ॥
जिज्ञासाहेतो: नैमित्तिकज्ञानावाप्तौ समर्थ: तेन सर्वाङ्गीणविकासश्च । परं नैमित्तिकज्ञानन्तु लभते गुरु-ज्येष्ठानां
शुश्रूषया, ऋषिमुनिभि:, विद्वद्भि: विविधघटनदर्शन-श्रवणेन । किन्तु गम्भीरदृष्ट्या अवलोकनेन
ईदृशनैमित्तिकज्ञानम् इन्द्रियगम्यभौतिकवस्तुमात्रेषु सञ्चरति न तु परमात्म-जीवात्म-बन्ध-मोक्ष-
धर्माद्यतीन्द्रियतत्वस्पर्शने । अतीन्द्रियज्ञानाश्रयकदिव्यज्ञानं परिपूर्णविकासे अनिवार्यम् । आध्यात्मिक-
वैदिकयुगस्य मानवा: जीवनधारणाय धर्मम् आचरन्ति स्म । कोऽयं धर्म: ? यतोऽभ्युदयनि:श्रेयस: सिद्धि: स धर्म:
। यतो हि धर्मो विश्वस्य जगत: प्रतिष्ठा । धर्मेण पापमपनुदति । लोके धर्मिष्ठं प्रजा उपसर्पन्ति । इति च श्रुति: ।

Read More »

Life Values Reflected in Mythological Narratives

Meghana S.

340 to 347

Mythology has always been a powerful guide for human growth, offering life lessons, practical wisdom, and examples of how to face challenges and handle success. It highlights the importance of values and discipline in our lives and often reflects the way we live. One of the highest spiritual goals is moksha, or liberation. While many believe there are 330 crore gods, most people pray to just a few, especially the Trimurti—Brahma, the creator, Vishnu the preserver, and Shiva the destroyer. Every myth carries important teachings, such as the Story of Puranjana, told by Narada to King Prachinabarhi. In this symbolic tale, the soul (Puranjana) becomes separated from the divine (Avigyathan) and becomes attached to the human body (Nawadwarapuri) and intellect (Puranjani), which pulls him into the cycle of karma and rebirth. Age (Durbagai), time (Kaalan), disease (Prajvaran), and fear (Bayan) represent how the body weakens over time. Upon death, the soul is reborn based on its last thoughts. Only through a true guru can the soul find its way back to the divine and achieve liberation. Stories like these remind us of the deeper meaning of life and how to live with wisdom and purpose.

Read More »

Moral Values Brewed in Bhagavatham: Study of Ethics and Narrative Traditions in the Indian Context

Rachakonda Tejesh Nagadurga Manikanta

348 to 360

Regard India as Dharma Bhoomi (land of righteousness) and a Karma Bhoomi (land of action)-- it has been the birthplace of numerous classical scriptures which has dominated the world ethical thought. Śrīmad Bhāgavatam serves as one of the basic Purāṇa which combines ethical and moral values with devotion narrations. Bhagavatham, like all other eighteenth major Purāṇas, eighteen minor Upapurāṇas and other great epics like Ramayana and Mahabharata, was produced in a cultural region that is actively participating in the multiplying tradition of moral education in India .
This paper looks into the moral considerations in the scope of the mankind propounded through the medium of qualitative literature with well knit narratives, dialogues, and elaborate philosophical discussions. Through analysis of outstanding stories and teachings, the research attempts to determine fundamental moral values concerning the Indian milieu like dharma, truth, non-violence (ahimsa), compassionate (karuna), detachment (vairagya) and devotion (bhakti ) that are most frequently cited and most heavily emphasized. It also analyzes how effective the Bhagavatham is in the molding of morals through held beliefs.

Read More »

Folk and Tribal Art of India

Usha Rani G.

362 to 367

India’s folk and tribal art represents a vibrant confluence of culture, tradition, and community life. Rooted in rural and indigenous societies, these art forms serve as powerful vehicles of storytelling, spiritual expression, and socio-cultural identity. Unlike classical art with its codified rules, folk and tribal art is spontaneous, deeply symbolic, and passed down through generations via oral traditions and communal practices. This paper explores the origins, characteristics, regional diversity, and cultural significance of prominent Indian folk and tribal art forms, including Madhubani, Warli, Gond, Pattachitra, Bhil, and Kalighat paintings. It further analyses the symbolism embedded within these artworks and highlights the challenges faced due to modernization, commercialization, and lack of institutional support. By examining current efforts for preservation and the growing global interest in these traditional forms, the study underscores their contemporary relevance. Ultimately, the paper argues for the need to recognize and sustain these living traditions as essential carriers of India’s intangible cultural heritage.

Read More »