ತತ್ವಪದಗಳ ಪಾರಂಪರಿಕತೆ ಮತ್ತು ಆಧುನಿಕತೆ
Main Article Content
Abstract
ಕನ್ನಡ ಸಾಹಿತ್ಯ ತನ್ನ ಸೃಜನಶೀಲ ಶಕ್ತಿಯಿಂದ ಹಾಗೂ ಕಲ್ಪನಾಶೀಲ ಆಯಾಮಗಳಿಂದ ಸಮೃದ್ಧವಾಗಿರುವುದರ ಜೊತೆಗೆ ಈ ಲೋಕ ಮತ್ತು ಆ ಲೋಕಗಳ ಅನುಭವವನ್ನು ಹಾಗೂ ದೈವ ಪರವಾದ ನಂಬಿಕೆಗಳನ್ನು ಒಳಗೊಂಡ ಆಧ್ಯಾತ್ಮಿಕ ಸಂಗತಿಗಳನ್ನು ಜೀವದ್ರವ್ಯವಾಗಿಸಿಕೊಂಡ ವಿಶಿಷ್ಟ ಮೌಲಿಕತೆಯನ್ನು ಕೂಡ ಪಡೆದಿದೆ. ಕನ್ನಡ ಜನಪದ ಸಾಹಿತ್ಯ ಕೂಡ ಇದಕ್ಕೆ ಹೊರತಾಗಿಲ್ಲ. ದೈನಂದಿನ ಜೀವನಾನುಭವಗಳನ್ನು ಅತ್ಯಂತ ಹೃದಯಂಗಮವಾಗಿ ತಮ್ಮದೇ ಆದ ವಿಶಿಷ್ಟ ಅಭಿವ್ಯಕ್ತಿ ಕ್ರಮದಲ್ಲಿ ಸಾದರಪಡಿಸುವ ಜನಪದ ಕವಿಗಳು ಭಕ್ತಿ, ವೈರಾಗ್ಯ, ಅನುಭವ ಹಾಗೂ ಅನುಭಾವಗಳನ್ನು ತುಂಬಾ ಸಮರ್ಥವಾಗಿ ಮತ್ತು ಸಹೃದಯರ ಮನದಲ್ಲಿ ನೆಟ್ಟು ನಿಲ್ಲುವಂತೆ ಸಂಗೀತ ಮತ್ತು ಭಾಷೆಗಳ ಸಮ್ಮಿಲನದೊಡನೆ ಪ್ರಕಟಿಸಿದ್ದಾರೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಮೀನಾಕ್ಷಿ ಬಾಳಿ, (2017), ಕಡಕೋಳ ಮಡಿವಾಳಪ್ಪ ಮತ್ತು ಶಿಷ್ಯರ ತತ್ವಪದಗಳು, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು.
ವಿಜಯಶ್ರೀ ಸಬರದ, (1997), ಗುರು ಶಿಷ್ಯರ ತತ್ವಪದಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು.