ಕನ್ನಡ ಮಹಿಳಾ ನಾಟಕಗಳಲ್ಲಿ ಸಾಮಾಜಿಕ ಪುನರ್‌ಮೌಲೀಕರಣದ ನೆಲೆ-ನಿಲುವು

Main Article Content

ಹೇಮಲತ ಪಿ. ಎನ್.

Abstract

ಪ್ರಾಚೀನಕಾಲದಿಂದಲೂ ಈ ಹೊತ್ತಿನ ವರೆಗೂ ಸ್ತ್ರೀಯರು ಸಾಮಾಜಿಕವಾಗಿ ಶೋಷಣೆ, ಅವಮಾನಗಳನ್ನು ಅನುಭವಿಸುತ್ತಲೇ ಬಂದಿದ್ದಾರೆ. ಸಾಮಾಜಿಕ ಸಮಾನತೆಯನ್ನು ಗಳಿಸುವ ಹೋರಾಟದಲ್ಲಿ ಇಂದಿನ ಸ್ತ್ರೀಯ ಸ್ಥಾನವನ್ನು ಗುರುತಿಸುವುದು ತುಂಬಾ ಅವಶ್ಯಕವಾದದ್ದು. ಸ್ತ್ರೀಯು ಭಾರತದ ಸಂದರ್ಭದಲ್ಲಿ ತನ್ನ ಬದುಕಿನ ಸ್ವಾತಂತ್ರ್ಯಕ್ಕಾಗಿ ಕಾಲಕಾಲಕ್ಕೆ ಸಾಮಾಜಿಕವಾಗಿ ನೆರವಾದ ದಾರ್ಶನಿಕ ದಾರಿಗಳು ಹಾಗೂ ಕ್ರಾಂತಿಕಾರಿಣಿಯಾಗಿ ತಾನೇ ಕಂಡುಕೊಂಡ ಪ್ರತಿರೋಧ ಮಾರ್ಗಗಳು ಹಲವಾರಿವೆ. ಆಧುನಿಕ ಕನ್ನಡ ನಾಟಕಕಾರ್ತಿಯರು ತಮ್ಮ ನಾಟಕಗಳಲ್ಲಿ ಇಂತಹ ಮಾರ್ಗಗಳನ್ನು ಹೇಗೆ ಪುನರ್‌ಮೌಲೀಕರಿಸಿದ್ದಾರೆ ಎಂಬುದನ್ನು ಇಲ್ಲಿ ಆಯ್ದ ನಾಟಕಗಳ ಅನುಸಂಧಾನದ ಮೂಲಕ ಅರಿತುಕೊಳ್ಳಲು ಪ್ರಯತ್ನಿಸಲಾಗಿದೆ.

Article Details

Section

Research Articles

Author Biography

ಹೇಮಲತ ಪಿ. ಎನ್.

#1156, 4/10 ಇ ಮತ್ತು ಎಫ್ ಬ್ಲಾಕ್, 2ನೇ ಹಂತ ರಾಮಕೃಷ್ಣನಗರ, ಮೈಸೂರು.

How to Cite

ಹೇಮಲತ ಪಿ. ಎನ್. (2023). ಕನ್ನಡ ಮಹಿಳಾ ನಾಟಕಗಳಲ್ಲಿ ಸಾಮಾಜಿಕ ಪುನರ್‌ಮೌಲೀಕರಣದ ನೆಲೆ-ನಿಲುವು. ಅಕ್ಷರಸೂರ್ಯ (AKSHARASURYA), 2(12), 38 to 49. https://aksharasurya.com/index.php/latest/article/view/274

References

ಬರಗೂರು ರಾಮಚಂದ್ರಪ್ಪ (ಸಂ), ಕನ್ನಡ ಸಾಹಿತ್ಯ ಮತ್ತು ಸ್ತ್ರೀವಾದಿ ಚಿಂತನೆ (1993), ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ಕಮಲಾ ಹಂಪನಾ, ಕುಲದ ನೆಲೆಯ ಬಲ್ಲಿರಾ (1988), ಅನುಗ್ರಹ ಪ್ರಕಾಶನ, ಬೆಂಗಳೂರು.

ಬಂಜಗೆರೆ ಜಯಪ್ರಕಾಶ್ (ಸಂ), ಕನಕ-ಮರುದರ್ಶನ (2015), ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು.

ಮಲ್ಲಿಕಾ ಘಂಟಿ, ಚಾಜ (2015), ಗೌತಮ ಪ್ರಕಾಶನ, ಬಳ್ಳಾರಿ.

ಮಾಲತಿ ಎಸ್., ದಲಿತ ಲೋಕ (2000), ನವಕರ್ನಾಟಕ ಪ್ರಕಾಶನ, ಬೆಂಗಳೂರು.

ಪುಷ್ಪ ಎಚ್. ಎಲ್., ಭೂಮಿಯಲ್ಲಿ ಇವಳು (2004), ಸಿವಿಜಿ ಪಬ್ಲಿಕೇಷನ್ಸ್, ಬೆಂಗಳೂರು.

Most read articles by the same author(s)