ವಿಮಲಕೀರ್ತಿ ಎಂಬ ನಿತ್ಯಜ್ಞಾನಿ
Main Article Content
Abstract
ಭಾರತೀಯ ತತ್ವಜ್ಞಾನದ ಪರಂಪರೆಯಲ್ಲಿ ಸಂವಾದಗಳ ಮೂಲಕ ಜ್ಞಾನದ ವಿಸ್ತಾರವನ್ನು ಕಾಣಬಹುದು. ಬೌದ್ಧ ಧರ್ಮದ ಮಹಾಯಾನ ಪಂಥದ ಪ್ರಮುಖ ದಾರ್ಶನಿಕನಾದ ವಿಮಲಕೀರ್ತಿಯು ತನ್ನ 'ನಿರ್ದೇಶ ಸೂತ್ರ'ದ ಮೂಲಕ ಲೋಕಕಲ್ಯಾಣ, ಜ್ಞಾನ, ಕರುಣೆ ಮತ್ತು ಅಹಿಂಸೆಯನ್ನು ಭಿನ್ನ ನೆಲೆಯಲ್ಲಿ ವ್ಯಾಖ್ಯಾನಿಸಿದ್ದಾನೆ. ಬುದ್ಧನ ಪ್ರಮುಖ ಶಿಷ್ಯರೊಂದಿಗಿನ ಆತನ ಸಂವಾದಗಳು ನಿರ್ವಾಣ, ಧ್ಯಾನ, ಭಾಷೆ ಮತ್ತು ಧರ್ಮದ ಸಾಂಪ್ರದಾಯಿಕ ಕಲ್ಪನೆಗಳನ್ನು ಪ್ರಶ್ನಿಸುತ್ತವೆ. ದ್ವಂದ್ವವಾದಗಳನ್ನು ಮೀರಿ, ಲೋಕದ ದೈನಂದಿನ ಬದುಕಿನಲ್ಲೇ ನಿತ್ಯಜ್ಞಾನವನ್ನು ಕಂಡುಕೊಳ್ಳುವ ಆತನ ಮಾರ್ಗವು ಅಲ್ಲಮಪ್ರಭುಗಳಂತಹ ಶರಣರ ಅನುಭಾವಿ ಚಿಂತನೆಗಳಿಗೆ ಹತ್ತಿರವಾಗಿದೆ. ಭಾಷೆಯನ್ನು ಬಂಧನವೆನ್ನದೆ ಮುಕ್ತ ಅಭಿವ್ಯಕ್ತಿಯ ಸಾಧನವಾಗಿಸುವ, ವೈರಾಗ್ಯಕ್ಕಿಂತ ನಿರ್ಮೋಹವನ್ನು ಎತ್ತಿಹಿಡಿಯುವ ಹಾಗೂ ರೋಗ-ದುಃಖಗಳನ್ನು ಅರಿವಿನ ಸಾಧನವನ್ನಾಗಿಸುವ ವಿಮಲಕೀರ್ತಿಯ ದಾರ್ಶನಿಕತೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.