ಕಾರಂತರ ಕಾದಂಬರಿಗಳಲ್ಲಿ ಮಣ್ಣು ಮತ್ತು ಮನುಷ್ಯ

Main Article Content

ಎಚ್. ಎಲ್. ರವೀಂದ್ರ

Abstract

ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಮನುಷ್ಯ ಮತ್ತು ನಿಸರ್ಗದ ನಡುವಿನ ಅವಿನಾಭಾವ ಸಂಬಂಧವನ್ನು ಪ್ರಧಾನವಾಗಿ ವಿವೇಚಿಸಲಾಗಿದೆ. ಮಾನವ ಸಮಾಜದ ಬಗೆಗೆ ಕಾರಂತರ ನಿಲುವುಗಳು ಪ್ರಕೃತಿ ಪರಿಸರದ ಹಿನ್ನೆಲೆಯಲ್ಲಿ ಮೂಡಿಬಂದಿವೆ. ಮರಳಿ ಮಣ್ಣಿಗೆ, ಬೆಟ್ಟದ ಜೀವ, ಚಿಗುರಿದ ಕನಸು ಮುಂತಾದ ಕಾದಂಬರಿಗಳಲ್ಲಿ ನಿಸರ್ಗ ಮತ್ತು ಮನುಷ್ಯನ ಸಂಬಂಧದಲ್ಲಿನ ಹೋರಾಟ ಮತ್ತು ಸಾಮರಸ್ಯವನ್ನು ಕಾರಂತರು ಸಮರ್ಥವಾಗಿ ಚಿತ್ರಿಸಿದ್ದಾರೆ. ಮನುಷ್ಯ ಪ್ರಕೃತಿಯ ಒಡೆಯನಲ್ಲ, ಬದಲಾಗಿ ಸಹಬಾಳ್ವೆಯ ದೃಷ್ಟಿಯಿಂದ ಇತರ ಜೀವಿಗಳೊಂದಿಗೆ ಬದುಕಬೇಕು ಎಂಬ ಪರಿಸರ ಕಾಳಜಿಯನ್ನು ಅವರ ಕೃತಿಗಳು ಸಾರುತ್ತವೆ. ಹಳ್ಳಿಗಾಡಿನ ಬದುಕು, ಪರಿಸರ, ಸ್ತ್ರೀ ಮತ್ತು ದಲಿತರ ಮೇಲಿನ ಕಾಳಜಿಗಳನ್ನು ಸಮಗ್ರ ದೃಷ್ಟಿಕೋನದಿಂದ ವಿಶ್ಲೇಷಿಸಲಾಗಿದೆ.

Article Details

Section

Research Articles

Author Biography

ಎಚ್. ಎಲ್. ರವೀಂದ್ರ

ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ, ಶ್ರೀ ಕುವೆಂಪು ಮಹಾವಿದ್ಯಾಲಯ ಪ್ರಥಮ ದರ್ಜೆ ಕಾಲೇಜು, ಕೆಂಗಲ್, ಚನ್ನಪಟ್ಟಣ ತಾ, ರಾಮನಗರ ಜಿಲ್ಲೆ.

References

ಚೋಮನದುಡಿ, ಶಿವರಾಮ ಕಾರಂತ.

ನಾಗರೀಕತೆಯ ಹೊಸ್ತಿಲಲ್ಲಿ, ಶಿವರಾಮ ಕಾರಂತ.

ಬಾಳ್ವೆಯೇ ಬೆಳಕು, ಶಿವರಾಮ ಕಾರಂತ.

ಇನ್ನೊಂದೇ ದಾರಿ, ಶಿವರಾಮ ಕಾರಂತ.

ಬೆಟ್ಟದ ಜೀವ, ಶಿವರಾಮ ಕಾರಂತ.