Aksharasurya Journal is a premier, multidisciplinary, and multilingual academic publication dedicated to disseminating high-quality research and intellectual discourse. As a peer-reviewed, open-access, and monthly journal, we are committed to bridging the gap between diverse domains of knowledge and linguistic traditions.
The name Aksharasurya symbolizes the illumination of knowledge through the written word. We serve as a vibrant platform for researchers, academicians, and practitioners worldwide to publish original research, critical reviews, and scholarly articles.
Aims and Scope
The journal aims to foster an inclusive academic ecosystem that encourages interdisciplinary collaboration. We welcome submissions from a broad spectrum of disciplines, including but not limited to:
- Humanities & Social Sciences: Law, History, Sociology, Political Science, Philosophy, and Literature.
- Indian Knowledge Systems (IKS): Traditional knowledge frameworks, manuscripts, and inscriptions.
- Commerce & Management: Economics, Business Strategies, and Finance.
|
Journal Particular |
|
|
Title |
|
|
Frequency |
Monthly |
|
ISSN |
2583-620X |
|
Publisher Name |
Dr. Mahesh M. |
|
Publisher Address |
Head Office: Maddenahatti Village, G. Bhommanahalli Post, Devalapura Hobli, Nagamangala Taluk, Mandya District-571425 |
|
Reginal Office: 'Sri Kalleshwara Nilaya', No. 55, 2nd Cross, Andrahalli, Near ABBS College, Bengaluru-560 093. |
|
|
Starting Year |
2022 |
|
Subject |
Multidisciplinary |
|
Language |
Multilingual |
|
Publication Format |
Online |
|
E-Mail ID |
|
|
Mobile Number |
9008588133 |
Current Issue
Vol. 11 No. 06 (2025): History and Kannada Literature: A Cultural Perspective
Table of Contents
Research Articles
ಕರ್ನಾಟಕ ಇತಿಹಾಸ ಮತ್ತು ಕನ್ನಡ ಸಾಹಿತ್ಯ: ಸಾಂಸ್ಕೃತಿಕ ದೃಷ್ಟಿಕೋನ
01 to 14
ಇತಿಹಾಸ ಮತ್ತು ಕನ್ನಡ ಸಾಹಿತ್ಯದ ನಡುವಿನ ಆಳವಾದ ಸಂಬಂಧವನ್ನು ಸಾಂಸ್ಕೃತಿಕ ದೃಷ್ಟಿಯಿಂದ ವಿಶ್ಲೇಷಿಸುತ್ತದೆ. ಇತಿಹಾಸವು ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ದಾಖಲಿಸುವುದಾದರೆ, ಸಾಹಿತ್ಯವು ಅವುಗಳ ಮಾನವೀಯ ಅನುಭವಗಳು, ಭಾವನೆಗಳು ಮತ್ತು ಮೌಲ್ಯಗಳನ್ನು ಅಭಿವ್ಯಕ್ತಗೊಳಿಸುತ್ತದೆ. ಕನ್ನಡ ಸಾಹಿತ್ಯವು ವಿಭಿನ್ನ ಯುಗಗಳಲ್ಲಿ (ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ) ಆಗಿನ ಸಂಸ್ಕೃತಿ, ಜನಜೀವನ, ನಂಬಿಕೆಗಳು ಮತ್ತು ಪರಂಪರೆಗಳನ್ನು ಪ್ರತಿಬಿಂಬಿಸಿದೆ. ಪಂಪ, ರನ್ನ, ಬಸವಣ್ಣ, ಹರಿಹರರಿಂದ ಮೊದಲ್ಗೊಂಡು ನವೋದಯ, ನವ್ಯ, ದಲಿತ ಸಾಹಿತ್ಯದವರೆಗೂ ಕನ್ನಡ ಸಾಹಿತ್ಯವು ಇತಿಹಾಸದ ಸಾಮಾಜಿಕ ಚಲನೆಗಳಿಗೆ ಸ್ಪಂದಿಸಿರುವುದು ಕಂಡುಬರುತ್ತದೆ. ವಚನ ಸಾಹಿತ್ಯ ಮತ್ತು ಜನಪದ ಸಾಹಿತ್ಯ ಸಮಾನತೆ, ಸಹಕಾರ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರೆ, ಆಧುನಿಕ ಸಾಹಿತ್ಯವು ವಸಾಹತುಶಾಹಿ ಅನುಭವ, ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ಅಸಮಾನತೆಗಳ ಚಿತ್ರಣ ನೀಡುತ್ತದೆ.
ಶಾಸನಗಳಲ್ಲಿ ಶಿವಶರಣರು
15 to 25
ಶಿವಶರಣರ ಜೀವನ, ಚಿಂತನೆ ಮತ್ತು ಸಮಾಜಸೇವೆಯ ಗುರುತುಗಳು ಸ್ಪಷ್ಟವಾಗಿ ಕಂಡುಬರುತ್ತವೆ. ಅವುಗಳು ಅವರು ಸಮಾಜದಲ್ಲಿಟ್ಟಿದ್ದ ಸಮಾನತೆ, ಶ್ರಮ ಮತ್ತು ನೈತಿಕ ಮೌಲ್ಯಗಳ ಅಭಿಯಾನವನ್ನು ದೃಢಪಡಿಸುತ್ತವೆ. ಶರಣರು ಜಾತಿ-ಧರ್ಮ ಭೇದಗಳನ್ನು ತೊಡೆದು ಹಾಕಿ ಎಲ್ಲರಿಗೂ ಒಂದೇ ಆದ್ಯತೆ ನೀಡಬೇಕು ಎಂದು ಬೋಧಿಸಿದರು. ಶಾಸನಗಳು ಅವರ ವಚನಪ್ರಚಾರ, ಅನಿಸಿಕೆಗಳು ಮತ್ತು ಜನಜಾಗೃತಿ ಕಾರ್ಯಗಳ ನೈಜ ದಾಖಲೆಗಳಾಗಿವೆ. ಸಮಾಜ ಪರಿವರ್ತನೆಗಾಗಿ ಅವರು ಮಾಡಿದ ಹೋರಾಟವನ್ನು ಶಾಸನಗಳು ಇತಿಹಾಸದ ಸಾಕ್ಷಿಯಾಗಿ ಉಳಿಸಿವೆ. ಶಿವಶರಣರ ಜೀವನಪರ ಪದ್ಧತಿ ಮತ್ತು ಸೇವಾಧರ್ಮದ ಮೌಲ್ಯಗಳು ಶಾಸನಗಳಲ್ಲಿ ಸ್ಪಷ್ಟವಾಗಿ ಅಭಿನಿವೇಶಗೊಂಡಿವೆ. ಲಿಂಗಾಯತ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಗಳ ವಿಸ್ತರಣೆಯಲ್ಲಿ ಅವರ ಪಾತ್ರ ಮಹತ್ತರವಾಗಿತ್ತು.
ದಕ್ಷಿಣಾಪಥೇಶ್ವರ ಇಮ್ಮಡಿ ಪುಲಿಕೇಶಿ ಮತ್ತು ಅರಬ್ಬರು
26 to 34
ಬಾದಾಮಿಯನ್ನು ರಾಜಧಾನಿಯಾಗಿಸಿಕೊಂಡು ಸುಮಾರು 2 ಶತಮಾನಗಳವರೆಗೆ ವೈಭವದಿಂದ ರಾಜ್ಯಭಾರ ಮಾಡಿದ ಕನ್ನಡದ ಪ್ರಸಿದ್ಧ ಸಾಮ್ರಾಜ್ಯ ಚಾಲುಕ್ಯರ ಸಾಮ್ರಾಜ್ಯ. ರಣರಾಗ-ಜಯಸಿಂಹರಿಂದ ಉದಯವಾದ ಈ ಸಾಮ್ರಾಜ್ಯವು ಇಮ್ಮಡಿಯ ಪುಲಿಕೇಶಿಯ ಕಾಲಾವಧಿಯಲ್ಲಿ ಭಾರತದಾಚೆ ತನ್ನ ಪ್ರಭುತ್ವವನ್ನು ಸಾಧಿಸಿತ್ತು. ಇಮ್ಮಡಿ ಪುಲಿಕೇಶಿ ಸಾಮ್ರಾಜ್ಯದ ಅತ್ಯಂತ ಬಲಿಷ್ಠ ಹಾಗೂ ಪ್ರಭಾವಶಾಲಿ ರಾಜನಾಗಿದ್ದನು ಈತನ ಆಡಳಿತಾತ್ಮಕ ಕಾರ್ಯಗಳಿಂದ ಭಾರತದ ರಾಜಕೀಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಹತ್ವದ ಸ್ಥಾನವನ್ನು ಪಡೆದಿತ್ತು. ಈ ಅವಧಿಯಲ್ಲಿ ಭಾರತದತ್ತ ದಾಳಿಗೆ ಹವಣಿಸುತ್ತಿದ್ದ ಅರಬ್ಬರನ್ನು ಹಿಮ್ಮೆಟ್ಟಿಸಿದ, ಅರಬ್ಬ ನಾಡಿನಲ್ಲಿಯೂ ಭಾರತೀಯ ವ್ಯಾಪಾರಿಗಳ ರಕ್ಷಣೆ ಮಾಡಿದ ನಾಯಕ. ಅಲ್ಲದೇ ಭಾರತ ಮತ್ತು ಅರಬ್ಬ ವಾಣಿಜ್ಯ ವ್ಯವಸ್ಥೆಗೆ ಭದ್ರವಾದ ಅಡಿಪಾಯವನ್ನು ಹಾಕಿ ಸ್ನೇಹತ್ವವನ್ನು ಸ್ಥಾಪಿಸಿದ ದೊರೆ. ಅರಬ್ಬ ನಾಯಕ ಇಮ್ಮಡಿ ಖುಸ್ರುವಿನೊಂದಿಗೆ ರಾಯಭಾರತ್ವದ ಸಂಬಂಧವನ್ನು ಬೆಳೆಸುವುದರ ಮೂಲಕ ಆರ್ಥಿಕ ಸಮೃದ್ಧತೆಯನ್ನು ಸಾಧಿಸಿದ ನಾಯಕನೆಂಬ ಕೀರ್ತಿಗೆ ಭಾಜನನಾಗಿದ್ದಾನೆ.
ಸ್ಥಳೀಯ ಪ್ರಭುತ್ವಗಳು ಮತ್ತು ವಸಾಹತುಶಾಹಿ ದಾಖಲೆಗಳು (ಸಶಸ್ತ್ರ ಬಂಡಾಯಗಳನ್ನು ಅನುಲಕ್ಷಿಸಿ)
35 to 41
ವಸಾಹತುಶಾಹಿ ಆಡಳಿತದ ಕಾಲದಲ್ಲಿ ರೂಪಗೊಂಡ ದಾಖಲೆಗಳು ಸ್ಥಳೀಯ ಪ್ರಭುತ್ವಗಳು, ಆಡಳಿತ ವ್ಯವಸ್ಥೆಗಳು ಮತ್ತು ಸಾಮಾಜಿಕ-ಆರ್ಥಿಕ ಸಂಬಂಧಗಳನ್ನು ಹೇಗೆ ಪ್ರತಿನಿಧಿಸುತ್ತವೆ ಎಂಬುದನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸುತ್ತದೆ. ವಸಾಹತುಶಾಹಿ ದಾಖಲೆಗಳನ್ನು ಸಾಮಾನ್ಯವಾಗಿ ಅಧಿಕೃತ ಮೂಲಗಳೆಂದು ಪರಿಗಣಿಸಿದರೂ ಅವುಗಳಲ್ಲಿ ವಸಾಹತುಶಾಹಿ ಅಧಿಕಾರದ ದೃಷ್ಟಿಕೋನ, ರಾಜಕೀಯ ಉದ್ದೇಶಗಳು ಮತ್ತು ಸ್ಥಳೀಯ ಧ್ವನಿಗಳ ನಿರ್ಲಕ್ಷ್ಯ ಅಡಗಿರುವುದನ್ನು ಈ ಲೇಖನ ಸ್ಪಷ್ಟಪಡಿಸುತ್ತದೆ. ಸ್ಥಳೀಯ ಆಡಳಿತಗಾರರು, ಸಂಸ್ಥೆಗಳು ಮತ್ತು ಸಮುದಾಯಗಳು ವಸಾಹತುಶಾಹಿ ಶಕ್ತಿಯೊಂದಿಗೆ ನಡೆಸಿದ ಪ್ರತಿರೋಧ ಮತ್ತು ಸಹಕಾರದ ರೂಪಗಳನ್ನು ಈ ಲೇಖನ ಪ್ರತಿಪಾದಿಸುವುದರ ಮೂಲಕ ಇತಿಹಾಸ ಲೇಖನದಲ್ಲಿ ವಸಾಹತುಶಾಹಿ ದಾಖಲೆಗಳ ಮಿತಿಗಳು ಮತ್ತು ಸಾಧ್ಯತೆಗಳನ್ನು ಗುರುತಿಸುವ ಮೂಲಕ ಸ್ಥಳೀಯ ಅನುಭವಗಳನ್ನು ಪುನರ್ ವ್ಯಾಖ್ಯಾನಿಸುವ ಅಗತ್ಯವಿದೆ ಎಂಬುದನ್ನು ಈ ಲೇಖನ ಒತ್ತಿಹೇಳುತ್ತದೆ.
ಪ್ರಾಚೀನ ಇತಿಹಾಸ ಮತ್ತು ಕನ್ನಡ ಸಾಹಿತ್ಯ ಪರಂಪರೆ
42 to 48
ಪ್ರಾಚೀನ ಭಾರತದ ಇತಿಹಾಸದ ಬೆಳವಣಿಗೆ ಮತ್ತು ಕನ್ನಡ ಸಾಹಿತ್ಯ ಪರಂಪರೆಯ ಉದಯ ಮತ್ತು ವಿಕಾಸವನ್ನು ವಿಶ್ಲೇಷಿಸುತ್ತದೆ. ಶಾಸನಗಳು, ತಾಮ್ರಪಟಗಳು, ನಾಣ್ಯಗಳು ಮತ್ತು ಪುರಾತತ್ವ ಸಾಕ್ಷ್ಯಗಳ ಮೂಲಕ ಪ್ರಾಚೀನ ಕನ್ನಡ ಪ್ರದೇಶದ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನವನ್ನು ಅರಿಯಲು ಸಾಧ್ಯವಾಗುತ್ತದೆ. ಕದಂಬರು, ಗಂಗರು, ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಹಿತ್ಯಕ್ಕೆ ರಾಜಾಶ್ರಯ ದೊರಕಿತು. ಪಂಪ, ರನ್ನ, ಜನ್ನ ಮೊದಲಾದ ಕವಿಗಳು ಮಹಾಕಾವ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದರು. ಜೈನ ಮತ್ತು ವೈದಿಕ ಸಂಸ್ಕೃತಿಯ ಪ್ರಭಾವದಿಂದ ನೀತಿ, ಧರ್ಮ, ವೀರತ್ವ ಹಾಗೂ ರಾಜಧರ್ಮವು ಸಾಹಿತ್ಯದ ಪ್ರಮುಖ ವಿಷಯಗಳಾಗಿ ರೂಪಗೊಂಡವು. ಪ್ರಾಚೀನ ಇತಿಹಾಸದ ಘಟನೆಗಳು ಮತ್ತು ಸಮಾಜದ ಮೌಲ್ಯಗಳು ಕನ್ನಡ ಸಾಹಿತ್ಯದಲ್ಲಿ ಪ್ರತಿಬಿಂಬಗೊಂಡಿದ್ದು, ಸಾಹಿತ್ಯವು ಆ ಕಾಲದ ಜನಜೀವನ ಮತ್ತು ಸಂಸ್ಕೃತಿಯ ಜೀವಂತ ದಾಖಲೆಯಾಗಿದೆ. ಹೀಗಾಗಿ ಪ್ರಾಚೀನ ಇತಿಹಾಸ ಮತ್ತು ಕನ್ನಡ ಸಾಹಿತ್ಯ ಪರಂಪರೆ ಪರಸ್ಪರ ಪೂರಕವಾಗಿದ್ದು, ಒಂದನ್ನು ತಿಳಿಯದೇ ಮತ್ತೊಂದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದೇ ಈ ಲೇಖನದ ಕೇಂದ್ರ ಸಾರ.
ಜಾನಪದ ಸಾಹಿತ್ಯದಲ್ಲಿ ಐತಿಹಾಸಿಕ ನಾಯಕರು
49 to 55
ಜಾನಪದ ಸಾಹಿತ್ಯವು ಜನರ ಬದುಕು, ನಂಬಿಕೆ, ಹೋರಾಟ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುವ ಜೀವಂತ ಪರಂಪರೆ. ಈ ಸಾಹಿತ್ಯದಲ್ಲಿ ಐತಿಹಾಸಿಕ ನಾಯಕರು ಜನಮನದಲ್ಲಿ ರೂಪುಗೊಂಡ ವೀರತ್ವದ ಪ್ರತಿರೂಪಗಳಾಗಿ ಕಾಣಿಸುತ್ತಾರೆ. ಅವರು ಕೇವಲ ಐತಿಹಾಸಿಕ ವ್ಯಕ್ತಿಗಳಷ್ಟೇ ಅಲ್ಲ; ಜನರ ಆಶೆ-ಆಕಾಂಕ್ಷೆ, ನ್ಯಾಯ, ಬುದ್ಧಿ ಮತ್ತು ಸ್ವಾಭಿಮಾನವನ್ನು ಪ್ರತಿನಿಧಿಸುವ ಪಾತ್ರಗಳಾಗಿದ್ದಾರೆ. ಜನಪದ ಹಾಡುಗಳು, ಕಥೆಗಳು, ಕಾವ್ಯಗಳು ಮತ್ತು ಬಯಲಾಟಗಳಲ್ಲಿ ಈ ನಾಯಕರು ಅತಿಶಯೋಕ್ತಿಯಿಂದ, ಪೌರಾಣಿಕ ಅಂಶಗಳೊಂದಿಗೆ ಚಿತ್ರಿತರಾಗುತ್ತಾರೆ. ಅವರ ಶೌರ್ಯ, ತ್ಯಾಗ, ಧೈರ್ಯ ಮತ್ತು ಜನಪರ ಹೋರಾಟಗಳು ಪ್ರಮುಖವಾಗಿ ಹೇಳಲ್ಪಡುತ್ತವೆ. ಇತಿಹಾಸದಲ್ಲಿ ಕಂಡ ಘಟನೆಗಳು ಜನಪದ ರೂಪದಲ್ಲಿ ಕಾಲಕಾಲಾಂತರವಾಗಿ ರೂಪಾಂತರಗೊಂಡು ಜನರ ಮನದಾಳದಲ್ಲಿ ಶಾಶ್ವತವಾಗಿ ಉಳಿಯುತ್ತವೆ.
ಕನ್ನಡ ಪತ್ರಿಕೆಗಳಲ್ಲಿ ಕಪ್ಪತ್ತಗುಡ್ಡ ಒಂದು ಅವಲೋಕನ
56 to 65
ಕಪ್ಪತ್ತಗುಡ್ಡವು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಒಂದು ಪ್ರಮುಖ ಪರ್ವತ ಶ್ರೇಣಿ ಇದನ್ನು ಚಿನ್ನದ ಬೆಟ್ಟ ಎಂತಲೂ ಕರೆಯುತ್ತಾರೆ. ಪ್ರಕೃತಿಯ ಸೊಬಗು, ಅಪರೂಪದ ಜೀವವೈವಿಧ್ಯ ಹಾಗೂ ಸಾಂಸ್ಕೃತಿಕ ಪರಂಪರೆಯಿಂದಾಗಿ ಇದು ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಕನ್ನಡ ಪತ್ರಿಕೆಗಳು ಮತ್ತು ಪರಿಸರ ಹೋರಾಟಗಾರರು ಈ ಗುಡ್ಡದ ರಕ್ಷಣೆಗಾಗಿ ನಿರಂತರವಾಗಿ ದನಿ ಎತ್ತುತ್ತಲೇ ಬರುತ್ತಿದ್ದಾರೆ. ಕಪ್ಪತ್ತಗುಡ್ಡ ಕೇವಲ ಒಂದು ಬೆಟ್ಟವಲ್ಲ ಅದು ಕರ್ನಾಟಕದ ಜೀವವೈವಿಧ್ಯದ ಆಸ್ತಿ. ಸಾಂಸ್ಕೃತಿಕ ನೆಲೆ, ಪರಿಸರ ಹೋರಾಟದ ಸಂಕೇತ ಇದರ ಸಂರಕ್ಷಣೆಯು ನಮ್ಮ ಮುಂದಿನ ಪೀಳಿಗೆಗೆ ನಾವು ನೀಡುವ ದೊಡ್ಡ ಕೊಡುಗೆಯಾಗಿದೆ. ಸರ್ಕಾರ, ಸಾರ್ವಜನಿಕರು ಮತ್ತು ಸ್ಥಳೀಯ ಸಮುದಾಯಗಳು ನಿರಂತರವಾಗಿ ಇದರ ರಕ್ಷಣೆಗೆ ಶ್ರಮಿಸಿದರೆ ಮಾತ್ರ ಈ ಸಂಜೀವಿನಿ ಬೆಟ್ಟ ಸುರಕ್ಷಿತವಾಗಿ ಉಳಿಯಲು ಸಾಧ್ಯವೆಂದು ತಿಳಿಸುವುದೇ ಈ ಲೇಖನದ ಮುಖ್ಯ ಆಶಯ.
ಮಧ್ಯಕಾಲೀನ ಇತಿಹಾಸ ಮತ್ತು ಕನ್ನಡ ಸಾಹಿತ್ಯ
66 to 74
ಮಧ್ಯಕಾಲೀನ ಇತಿಹಾಸ ಮತ್ತು ಕನ್ನಡ ಸಾಹಿತ್ಯದ ಪರಂಪರೆಯು ಆಳವಾಗಿ ಪರಸ್ಪರ ಸಂಬಂಧ ಹೊಂದಿದ್ದು, 9 ರಿಂದ 16 ನೇ ಶತಮಾನದವರೆಗಿನ ಅವಧಿಯು ರಾಜಕೀಯ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಗಮನಾರ್ಹ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಜೈನ ಬರಹಗಾರರು ಆರಂಭಿಕ ಮಧ್ಯಕಾಲೀನ ಸಾಹಿತ್ಯದಲ್ಲಿ ಪ್ರಾಬಲ್ಯ ಸಾಧಿಸಿದರು, ನಂತರ ವೀರಶೈವ ಮತ್ತು ವೈಷ್ಣವ ಸಂಪ್ರದಾಯಗಳ ಉದಯವಾಯಿತು, ಇದು ರಾಜಕೀಯ ಪ್ರೋತ್ಸಾಹ ಮತ್ತು ಧರ್ಮ, ಮಹಾಕಾವ್ಯಗಳು ಮತ್ತು ತತ್ತ್ವಶಾಸ್ತ್ರದ ಕುರಿತು ವೈವಿಧ್ಯಮಯ ಕೃತಿಗಳ ರಚನೆಯ ಮೇಲೆ ಪ್ರಭಾವ ಬೀರಿತು. ಈ ಯುಗವು ವಚನ ಮತ್ತು ಷಟ್ಪದಿಯಂತಹ ವಿಶಿಷ್ಟ ಸಾಹಿತ್ಯ ಪ್ರಕಾರಗಳ ಪ್ರವರ್ಧಮಾನವನ್ನು ಮತ್ತು ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಮತ್ತು ಧಾರ್ಮಿಕ ಜೀವನವನ್ನು ಪ್ರತಿಬಿಂಬಿಸುವ ಜಾತ್ಯತೀತ ಮತ್ತು ಭಕ್ತಿ ಸಾಹಿತ್ಯದ ಬೆಳವಣಿಗೆಯನ್ನು ಕಂಡಿತು.
ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಉದಯಿಸಿದ ರಾಜಕೀಯ ಪಕ್ಷಗಳು
75 to 83
ಭಾರತದ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಉದಯಿಸಿದ ಪ್ರಮುಖ ರಾಜಕೀಯ ಪಕ್ಷಗಳ ಹಿನ್ನೆಲೆ, ಉದ್ದೇಶಗಳು ಮತ್ತು ಅವುಗಳ ಪಾತ್ರವನ್ನು ವಿವರಿಸುವುದರೊಂದಿಗೆ ಬ್ರಿಟಿಷರ ಆಡಳಿತದ ವಿರುದ್ಧ ಭಾರತೀಯರಲ್ಲಿ ರಾಜಕೀಯ ಜಾಗೃತಿಯನ್ನು ಮೂಡಿಸುತ್ತ, ಸಂಘಟಿತ ಹೋರಾಟದ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಅನೇಕ ರಾಜಕೀಯ ಪಕ್ಷಗಳು ಹುಟ್ಟಿಕೊಂಡವು. 1885ರಲ್ಲಿ ಉದಯವಾದ ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟದ ಪ್ರಮುಖ ವೇದಿಕೆಯಾಗಿತ್ತು. ಅದು ದೇಶದಾದ್ಯಂತ ಜನರಲ್ಲಿ ರಾಷ್ಟ್ರೀಯ ಏಕತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿತು. ನಂತರ ತೀವ್ರವಾದ ರಾಜಕೀಯ ಅಭಿವ್ಯಕ್ತಿಗೆ ಕಾರಣವಾದ 1906ರಲ್ಲಿ ಉದಯವಾದ ಮುಸ್ಲಿಂಲೀಗ್, ಕ್ರಾಂತಿಕಾರಿ ಸಂಘಟನೆಗಳು, ಕಮ್ಯುನಿಷ್ಟ ಪಕ್ಷ, ಹಿಂದೂ ಮಹಾಸಭೆ, ಸ್ವರಾಜ್ಯ ಪಕ್ಷ ಮುಂತಾದ ಪಕ್ಷಗಳು ವಿಭಿನ್ನ ತತ್ವಾಧಾರಗಳೊಂದಿಗೆ ಚಳುವಳಿಯಲ್ಲಿ ಪ್ರವೇಶಿಸಿದವು. ಈ ರಾಜಕೀಯ ಪಕ್ಷಗಳು ಸತ್ಯಾಗ್ರಹ, ಅಸಹಕಾರ ಚಳುವಳಿ, ನಾಗರೀಕ ಅವಿಧೇಯತೆ, ಕ್ರಾಂತಿಕಾರಿ ಚಟುವಟಿಕೆಗಳು ಮತ್ತು ಜನಜಾಗೃತಿ ಕಾರ್ಯಕ್ರಮಗಳ ಮೂಲಕ ಸ್ವಾತಂತ್ರ್ಯ ಹೋರಾಟವನ್ನು ಬಲಪಡಿಸಿದವು. ವಿಭಿನ್ನ ಧೋರಣೆಗಳಿದ್ದರೂ ಇವುಗಳ ಸಮೂಹ ಪ್ರಯತ್ನದ ಫಲವೇ 1947 ಆಗಸ್ಟ್ 15 ರಂದು ಭಾರತ ಸ್ವಾತಂತ್ರ್ಯ ದೊರಕಲು ಕಾರಣವಾಯಿತು ಎಂದು ತಿಳಿಸುವ ಪ್ರಯತ್ನ ಈ ಲೇಖನದ ಮೂಲಕ ಮಾಡಲಾಗಿದೆ.
ಭಾರತ ಸಂವಿಧಾನ ರಚನಾ ಸಭೆಯಲ್ಲಿ ಮಹಿಳೆಯರು
84 to 92
ಭಾರತದ ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾತ್ರ ಅವಿಸ್ಮರಣೀಯ. ಅವರ ಬೌದ್ಧಿಕ ಕೊಡುಗೆಗಳು, ಸಾಮಾಜಿಕ ರಾಜಕೀಯ ಪ್ರಭಾವವನ್ನು ವಿಶ್ಲೇಷಿಸುತ್ತವೆ. ಸಂವಿಧಾನ ಸಭೆಯಲ್ಲಿ ಭಾಗವಹಿಸಿದ 15 ಮಹಿಳೆಯರು ಮೂಲಭೂತ ಹಕ್ಕುಗಳು, ಸಮಾನತೆ, ಲಿಂಗ ನ್ಯಾಯ, ಸಾಮಾಜಿಕ ಸುಧಾರಣೆ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ವಿಷಯದಲ್ಲಿ ಮಹತ್ವದ ವಿಚಾರಗಳನ್ನು ಮಂಡಿಸಿದರು. ಮಹಿಳೆಯರ ಹಸ್ತಕ್ಷೇಪದಿಂದ ಸಂವಿಧಾನದ ಮೌಲ್ಯಾಧಾರಿತ ಸ್ವರೂಪ ಬಲಪಟ್ಟಿದ್ದು ಹೇಗೆ ಎಂಬುದನ್ನು ದಾಖಲೆಗಳು, ಭಾಷಣಗಳು ಮತ್ತು ಸಮಿತಿಗಳ ಕಾರ್ಯವಿವರಣೆಗಳ ಆಧಾರದಲ್ಲಿ ಪರಿಶೀಲಿಸಬಹುದಾಗಿದೆ. ಸಂವಿಧಾನ ರಚನೆ ಪುರುಷಾಧಿಪತ್ಯದ ಪ್ರಕ್ರಿಯೆಯಷ್ಟೇ ಅಲ್ಲ; ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಸಮಾವೇಶಿತ ಪ್ರಜಾಸತ್ತಾತ್ಮಕ ಚೌಕಟ್ಟು ನಿರ್ಮಾಣವಾಯಿತು ಎಂಬ ನಿರ್ಣಯಕ್ಕೆ ಬರುತ್ತದೆ. ಇತಿಹಾಸದಲ್ಲಿ ಕಡಿಮೆ ದಾಖಲಾದ ಮಹಿಳೆಯರ ಕೊಡುಗೆಗಳನ್ನು ಪುನರ್ಮೌಲ್ಯಮಾಪನ ಮಾಡುವ ಅಗತ್ಯತೆಯನ್ನು ಈ ಲೇಖನದ ಮೂಲಕ ತಿಳಿಸಲಾಗುತ್ತದೆ.
ಬಿಜಾಪುರ ಆದಿಲ್ಶಾಹಿಗಳ ಕಾಲದ ಕನ್ನಡ ಸಾಹಿತ್ಯ
93 to 100
ಬಿಜಾಪುರವನ್ನು ಕೇಂದ್ರವಾಗಿ ಹೊಂದಿದ್ದ ಆದಿಲ್ಶಾಹಿ ವಂಶದ ಆಳ್ವಿಕೆಯಲ್ಲಿ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟವಾದ ಪ್ರೋತ್ಸಾಹ ದೊರಕಿತು. ದಕ್ಷಿಣ ಭಾರತದಲ್ಲಿ ರಾಜಕೀಯವಾಗಿ ಮುಸ್ಲಿಂ ಆಡಳಿತವಿದ್ದರೂ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಗೆ ಗೌರವ ನೀಡಿದ ಕಾರಣದಿಂದ ಕನ್ನಡ ಸಾಹಿತ್ಯ ಸಮೃದ್ಧಿಯಾಗಿ ಬೆಳೆದಿತ್ತು. ಈ ಕಾಲಾವಧಿಯಲ್ಲಿ ವೀರಶೈವ ಮತ್ತು ಜೈನ ಪರಂಪರೆಗಳ ಪ್ರಭಾವ ಸಹ ಮುಂದುವರೆದಿತ್ತು. ರಾಜಾಶ್ರಯ ಹಾಗೂ ಸಾಮಂತ ದೊರೆಗಳ ಆಶ್ರಯದಿಂದ ಕವಿಗಳು ಧಾರ್ಮಿಕ, ತಾತ್ವಿಕ ಹಾಗೂ ನೀತಿಪರ ಕೃತಿಗಳನ್ನು ರಚಿಸಿದರು. ಷಟ್ಪದಿ, ತ್ರಿಪದಿ, ವಚನ, ಸಾಂಗತ್ಯ ಮತ್ತು ದಾಸ ಸಾಹಿತ್ಯ ಕೃಷಿ ಬೆಳವಣಿಗೆ ಕಂಡಿತ್ತು. ಮಹಿಪತಿದಾಸರು, ಯತಿರಾಯ, ರುಕ್ಮಾಂಗದ ಪಂಡಿತ, ಜಕ್ಕಪ್ಪಯ್ಯ, ಷಡಕ್ಷರದೇವ, ಭೀಮಕವಿ ಮುಂತಾದವರು ಗಮನಾರ್ಹರು. ಇವರ ಕೃತಿಗಳಲ್ಲಿ ಶಿವಭಕ್ತಿ, ನೈತಿಕತೆ, ಸಮಾಜಚಿಂತನೆ ಹಾಗೂ ಜೀವನಮೌಲ್ಯಗಳ ಪ್ರತಿಪಾದನೆ ಕಂಡುಬರುತ್ತದೆ. ಈ ಕಾಲದ ಸಾಹಿತ್ಯ ಸರಳ ಭಾಷೆಯಲ್ಲಿ ಜನಸಾಮಾನ್ಯರಿಗೆ ತಲುಪುವ ಗುಣ ಹೊಂದಿತ್ತು.
ವಿಜಯನಗರ ಸಾಮ್ರಾಜ್ಯದ ಸಾಹಿತ್ಯ ಸಂಸ್ಕೃತಿ ಮತ್ತು ಕನ್ನಡದ ಪುನರುತ್ಥಾನ
101 to 107
ವಿಜಯನಗರ ಸಾಮ್ರಾಜ್ಯ (ಕ್ರಿ.ಶ. 1336–1646) ದಕ್ಷಿಣ ಭಾರತದ ಇತಿಹಾಸದಲ್ಲಿ ರಾಜಕೀಯ–ಸೈನಿಕ ಶಕ್ತಿಯ ಜೊತೆಗೆ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಪುನರ್ಜಾಗರಣದ ಪ್ರಮುಖ ಕೇಂದ್ರವಾಗಿತ್ತು. ಕನ್ನಡ, ತೆಲುಗು, ಸಂಸ್ಕೃತ ಮತ್ತು ತಮಿಳು ಭಾಷೆಗಳ ಪೋಷಣೆಯಾದರೂ, ಕನ್ನಡ ಸಾಹಿತ್ಯದ ಪುನರುತ್ಥಾನದಲ್ಲಿ ಇದರ ಕೊಡುಗೆ ವಿಶೇಷವಾಗಿದೆ. ಜೈನ ಪ್ರಾಬಲ್ಯದಿಂದ ಹೊರಬಂದು ವೀರಶೈವ ಮತ್ತು ವೈಷ್ಣವ ಭಕ್ತಿ ಚಳವಳಿಗಳ ಮೂಲಕ ಕನ್ನಡವು ಜನಸಾಮಾನ್ಯರ ಭಾಷೆಯಾಗಿ ರೂಪುಗೊಂಡಿತು. ಧಾರ್ಮಿಕ ಸಹಿಷ್ಣುತೆ, ರಾಜಾಶ್ರಯ ಮತ್ತು ಜನಪದ ಶೈಲಿಗಳ ಪ್ರೋತ್ಸಾಹವು ಸಾಹಿತ್ಯದ ವೈವಿಧ್ಯತೆಯನ್ನು ವೃದ್ಧಿಸಿತು. ಈ ಲೇಖನವು ವಿಜಯನಗರದ ಐತಿಹಾಸಿಕ ಹಿನ್ನೆಲೆ, ಸಾಹಿತ್ಯ ಸಂಸ್ಕೃತಿ, ಪ್ರಮುಖ ಕವಿಗಳು–ಕೃತಿಗಳು ಮತ್ತು ಕನ್ನಡದ ಪುನರುತ್ಥಾನದ ಮೇಲಿನ ಅದರ ಪ್ರಭಾವವನ್ನು ವಿಶ್ಲೇಷಿಸಿ, ಅದರ ಪರಂಪರೆ ಆಧುನಿಕ ಕನ್ನಡ ಸಾಹಿತ್ಯದಲ್ಲಿಯೂ ಮುಂದುವರಿಯುತ್ತಿದೆ ಎಂಬುದನ್ನು ತಿಳಿಸಿಕೊಡುತ್ತದೆ.
ಕೂಡಲಸಂಗಮದ ಸಂಗಮೇಶ್ವರ ದೇವಾಲಯ: ಒಂದು ವಿಶ್ಲೇಷಣೆ
108 to 116
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐತಿಹಾಸಿಕ, ಧಾರ್ಮಿಕ ಹಾಗೂ ಬಸವೇಶ್ವರನ ಐಕ್ಯಸ್ಥಳವಾದ ಕೂಡಲಸಂಗಮವು ಕೃಷ್ಣೆ, ಮಲಪ್ರಭೆ ನದಿಗಳ ಸಂಗಮ ತಾಣವಾಗಿದ್ದು ತನ್ನದೇ ಆದ ಪಾವಿತ್ರತೆಯನ್ನು ಉಳಿಸಿಕೊಂಡು ಬೆಳೆದು ಬಂದ ಪ್ರದೇಶವಾಗಿದೆ. ಬಸವೇಶ್ವರರು ಅಧ್ಯಯನ ಮಾಡಿದ ಹಾಗೂ ಐಕ್ಯವಾದ ಸ್ಥಳ ಇದಾಗಿದ್ದು ಇಲ್ಲಿರುವ ಕಲ್ಯಾಣದ ಚಾಲುಕ್ಯರ ಶೈಲಿಯ ಸುಂದರವಾದ ದೇವಾಲಯವೇ ಸಂಗಮೇಶ್ವರ ದೇವಾಲಯ. ಈ ದೇವಾಲಯದ ಸಮಗ್ರವಾದ ಮಾಹಿತಿಯನ್ನು ತಿಳಿಸಿಕೊಡುವುದೇ ಈ ಲೇಖನದ ಉದ್ದೇಶ.
ಶಿರಸಿ ಪ್ರದೇಶದ ಅಪರೂಪದ ಲಜ್ಜಾಗೌರಿ ಶಿಲ್ಪ
117 to 120
ಶಿರಸಿ ಪ್ರದೇಶದಲ್ಲಿ ಪತ್ತೆಯಾಗಿರುವ ಅಪರೂಪದ ಲಜ್ಜಾಗೌರಿ ಶಿಲ್ಪವು ಕರ್ನಾಟಕದ ಪ್ರಾಚೀನ ಧಾರ್ಮಿಕ ಹಾಗೂ ಕಲಾತ್ಮಕ ಪರಂಪರೆಯನ್ನು ಪ್ರತಿಬಿಂಬಿಸುವ ಮಹತ್ವದ ಸಾಂಸ್ಕೃತಿಕ ಸಾಕ್ಷಿಯಾಗಿದೆ. ಲಜ್ಜಾಗೌರಿ ದೇವಿಯನ್ನು ಫಲವತ್ತತೆ, ಸೃಷ್ಟಿ ಮತ್ತು ಮಾತೃಶಕ್ತಿಯ ಸಂಕೇತವಾಗಿ ಪೂಜಿಸಲಾಗುತ್ತಿದ್ದು, ಈ ಶಿಲ್ಪವು ಪ್ರಾಚೀನ ಭಾರತದಲ್ಲಿ ಮಾತೃದೇವತಾ ಆರಾಧನೆಯ ವ್ಯಾಪ್ತಿಯನ್ನು ಸೂಚಿಸುತ್ತದೆ. ಈ ಶಿಲ್ಪದಲ್ಲಿ ಮಾನವಾಕಾರದ ಬದಲಿಗೆ ಪೂರ್ಣವಾಗಿ ವಿಕಸಿತ ಯೋನಿರೂಪ, ವಿಸ್ತಾರಗೊಂಡ ಪಾದಗಳು ಮತ್ತು ತಲೆಯ ಸ್ಥಾನದಲ್ಲಿ ಕಮಲ ಅಥವಾ ಅಲಂಕೃತ ರೂಪಗಳನ್ನು ಕಾಣಬಹುದು. ಇದು ಶಿಲ್ಪಕಲೆಯಲ್ಲಿನ ವೈಶಿಷ್ಟ್ಯತೆ ಮತ್ತು ತಾತ್ವಿಕ ಅರ್ಥವನ್ನು ತೋರಿಸುತ್ತದೆ. ಶಿರಸಿ ಪ್ರದೇಶದ ಈ ಶಿಲ್ಪವು ಸಾಮಾನ್ಯ ಲಜ್ಜಾಗೌರಿ ಶಿಲ್ಪಗಳಿಗಿಂತ ಶೈಲಿಯಲ್ಲಿಯೂ ವಿನ್ಯಾಸದಲ್ಲಿಯೂ ವಿಭಿನ್ನವಾಗಿದೆ. ಶಿಲ್ಪದ ಶೈಲಿಯ ಅಧ್ಯಯನದಿಂದ ಇದನ್ನು ಪ್ರಾರಂಭಿಕ ಮಧ್ಯಯುಗಕ್ಕೆ ಸೇರಿದ್ದೆಂದು ಪಂಡಿತರು ಅಭಿಪ್ರಾಯಪಡುತ್ತಾರೆ. ಸ್ಥಳೀಯ ಶಿಲ್ಪ ಪರಂಪರೆ, ಧಾರ್ಮಿಕ ನಂಬಿಕೆಗಳು ಮತ್ತು ಗ್ರಾಮೀಣ ಆರಾಧನಾ ಪದ್ಧತಿಗಳ ಸಂಗಮವನ್ನು ಇದು ಪ್ರತಿಬಿಂಬಿಸುತ್ತದೆ. ಈ ಶಿಲ್ಪವು ಶೈವ, ಶಾಕ್ತ ಹಾಗೂ ಜನಪದ ನಂಬಿಕೆಗಳ ಪರಸ್ಪರ ಸಂಬಂಧವನ್ನು ತಿಳಿಯಲು ಸಹಕಾರಿಯಾಗಿದೆ.
ಪ್ರಾಚೀನ ಸ್ಮಾರಕಗಳ ಸಂರಕ್ಷಣೆಯಲ್ಲಿ ಪ್ರವಾಸೋದ್ಯಮದ ಪಾತ್ರ
121 to 126
ಪ್ರಾಚೀನ ಸ್ಮಾರಕಗಳು ಒಂದು ದೇಶದ ಸಂಸ್ಕೃತಿ, ಇತಿಹಾಸ ಮತ್ತು ವೈಶಿಷ್ಟ್ಯಗಳನ್ನು ಪ್ರತಿನಿಧಿಸುವ ಅಮೂಲ್ಯ ಸಂಪತ್ತು. ಅವುಗಳಲ್ಲಿ ನಮ್ಮ ಹಿಂದಿನ ಪೀಳಿಗೆಯ ಜ್ಞಾನ, ಕಲೆ, ಜೀವನಶೈಲಿಯ ಗುರುತುಗಳು ಅಡಗಿಕೊಂಡಿವೆ. ಸ್ಮಾರಕಗಳನ್ನು ರಕ್ಷಿಸುವುದು ಕೇವಲ ಸರ್ಕಾರದ ಕರ್ತವ್ಯವಷ್ಟೇ ಅಲ್ಲ, ಸಮಾಜದ ಸಮಗ್ರ ಜವಾಬ್ದಾರಿಯೂ ಆಗಿದೆ. ಈ ಸಂರಕ್ಷಣೆಯಲ್ಲಿ ಪ್ರವಾಸೋದ್ಯಮದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರವಾಸೋದ್ಯಮವು ಸ್ಮಾರಕಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತದೆ ಮತ್ತು ಅವುಗಳ ಮಹತ್ವವನ್ನು ಪ್ರಪಂಚದಾದ್ಯಂತ ಹರಡುತ್ತದೆ. ಪ್ರವಾಸಿಗರಿಂದ ದೊರೆಯುವ ಆದಾಯವು ಸ್ಮಾರಕಗಳ ಮರುಸ್ಥಾಪನೆ, ನಿರ್ವಹಣೆ ಹಾಗೂ ಅಭಿವೃದ್ಧಿಗೆ ನೆರವಾಗುತ್ತದೆ ಮತ್ತು ಸ್ಥಳೀಯ ಜನರ ನಿರುದ್ಯೋಗ ನಿವಾರಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಜವಾಬ್ದಾರಿಯುತ ಪ್ರವಾಸೋದ್ಯಮವು ಸ್ಮಾರಕಗಳ ಸುತ್ತಲಿನ ಪರಿಸರವನ್ನು ರಕ್ಷಿಸುತ್ತದೆ. ಅಲ್ಲದೇ ಅಲ್ಲಿ ದೊರೆಯುವ ಮಾರ್ಗದರ್ಶಕರು, ವಸ್ತುಸಂಗ್ರಹಾಲಯಗಳು ಹಾಗೂ ಮಾಹಿತಿ ಕೇಂದ್ರಗಳ ಮೂಲಕ ಜನಸಾಮಾನ್ಯರಲ್ಲಿಯೂ ಇತಿಹಾಸ ಮತ್ತು ಸಂಸ್ಕೃತಿಯ ಪರಿಕಲ್ಪನೆ ವೃದ್ಧಿಯಾಗುತ್ತದೆ.
ಗಾಣದ ಕನ್ನಪ್ಪ: ಒಂದು ಚಾರಿತ್ರಿಕ ಚಿಂತನೆ
127 to 132
ಗಾಣದ ಕನ್ನಪ್ಪ ಕುಟುಂಬದಿಂದ ಗಾಣಿಗನಾಗಿದ್ದನೆಂಬುದು ಸ್ಪಷ್ಟವಾಗಿದ್ದರೂ, ವೃತ್ತಿಯಿಂದ ಗಾಳಹಾಕಿ ಮೀನು ಹಿಡಿಯುವ ಮೀನುಗಾರನೆಂಬುದು ಲೇಖನದಲ್ಲಿ ಕಾಣಸಿಗುತ್ತದೆ. ತನ್ನ ಕಾಯಕದಿಂದ ಪವಾಡಪುರುಷನಾಗಿ ಶಿವನ ಪರಮಭಕ್ತನಾಗಿ ವಚನಗಳ ಮೂಲಕ ಜನರಲ್ಲಿರುವ ಅಹಂಕಾರ, ಮೌಢ್ಯಗಳನ್ನು ದೂರೀಕರಿಸಿದ ಶರಣ. ಕೆಲವೇ ವಚನಗಳನ್ನು ಬರೆದಿದ್ದರೂ ಸಹ ಬಹುಸಂಖ್ಯಾತರಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಿಸಿದ ಮಹಾನ್ ಶರಣ. ಜಂಭದಿಂದ ಮೆರೆಯುತ್ತಿರುವ ಕೆಲವು ಜಂಗಮರಿಗೆ ತನ್ನ ಶಿವಭಕ್ತಿಯಿಂದಲೇ ಅರಿವನ್ನು ಮೂಡಿಸಿ ಅಹಂಕಾರವನ್ನು ದೂರಮಾಡಿದ ಮಹಾಮಹಿಮ ಎಂದೇ ಚರಿತ್ರೆಯಲ್ಲಿ ಸ್ಥಾನ ಪಡೆದುಕೊಂಡವ ಗಾಣದ ಕನ್ನಪ್ಪ. ಆದರೆ ಈತನ ಕುಟುಂಬದ ಕುರಿತಾಗಿ ಇನ್ನೂ ಅನೇಕ ಅಧ್ಯಯನಗಳಾದಾಗ ಮಾತ್ರ ಈತನು ಗಾಣದ ಕನ್ನಪ್ಪನೋ? ಗಾಳದ ಕನ್ನಪ್ಪನೋ ಎಂಬುದು ನಿರ್ಧರಿಸಲು ಸಾಧ್ಯ.
ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಕನ್ನಡ ಸಾಹಿತ್ಯದ ಪಾತ್ರ
133 to 137
ಈ ಸಂಶೋಧನಾ ಪ್ರಬಂಧವು ಕರ್ನಾಟಕ ಏಕೀಕರಣ ಚಳುವಳಿಯ ಆಂತರಿಕ ತತ್ತ್ವ, ಭಾವನಾತ್ಮಕ ಶಕ್ತಿ ಮತ್ತು ಸಾಂಸ್ಕೃತಿಕ ನೆಲೆಯನ್ನು ರೂಪಿಸುವಲ್ಲಿ ಕನ್ನಡ ಸಾಹಿತ್ಯ ವಹಿಸಿದ ಮಹತ್ವದ ಪಾತ್ರವನ್ನು ಆಳವಾಗಿ ವಿಶ್ಲೇಷಿಸುತ್ತದೆ. ಆಡಳಿತಾತ್ಮಕ ಪುನರ್ ಸಂಘಟನೆಯ ದೃಷ್ಟಿಯಲ್ಲಿ ಏಕೀಕರಣ ಚಳುವಳಿಯು ರಾಜಕೀಯ ಕ್ರಮಗಳಾಗಿ ಗೋಚರಿಸಿದರೂ, ಅದರ ಮನೋನಿರ್ಮಾಣ, ಸಾಂಸ್ಕೃತಿಕ ಸಮರ್ಥನೆ ಹಾಗೂ ಭಾಷಾ ಗುರುತಿನ ಸಂರಕ್ಷಣೆಯ ತತ್ತ್ವಾತ್ಮಕ ಬಲಗಳು ಸಾಹಿತ್ಯದಲ್ಲಿಯೇ ಅಡಕವಾಗಿದ್ದವೆಂದು ಈ ಅಧ್ಯಯನ ಪ್ರತಿಪಾದಿಸುತ್ತದೆ. 19ನೇ ಶತಮಾನದ ಕೊನೆಯಿಂದಲೇ ಕನ್ನಡನಾಡಿನ ರಾಜಕೀಯ ವಿಭಜನೆ ಭಾಷಾ ಅಸ್ತಿತ್ವದ ಸಂಕಟವನ್ನು ಉಂಟುಮಾಡಿದಾಗ, ಕವಿಗಳು, ಪ್ರಬಂಧಕಾರರು, ಇತಿಹಾಸಕರ್ತರು ಮತ್ತು ಪತ್ರಕರ್ತರು ಕನ್ನಡಿಗರಲ್ಲಿ ಒಗ್ಗಟ್ಟಿನ ಮನೋಭಾವವನ್ನು ಹುಟ್ಟುಹಾಕಿದರು. ಆಲೂರು ವೆಂಕಟರಾವ್, ಕುವೆಂಪು, ದ.ರಾ. ಬೇಂದ್ರೆ, ಮಂಜಮ್ಮ ಸುಳ್ಳಿಕೇರಿ, ಗೋವಿಂದ ಪೈ ಮೊದಲಾದ ಸಾಹಿತ್ಯಕರ್ತರ ಕೃತಿಗಳು ಕನ್ನಡ ಗುರುತು, ಸಂಸ್ಕೃತಿ ಮತ್ತು ನಾಡಭಾವನೆಗಳನ್ನು ಸಾಮೂಹಿಕ ಚೇತನದ ರೂಪಕ್ಕೆ ತಂದವು. ಕವಿತೆ, ನಾಟಕ ಮತ್ತು ಪ್ರಬಂಧ ಸಾಹಿತ್ಯವು “ಕರ್ನಾಟಕ” ಎಂಬ ಕಲ್ಪಿತ-ಸಾಂಸ್ಕೃತಿಕ ಸಮುದಾಯವನ್ನು ರೂಪಿಸುವಲ್ಲಿ ಮಾತ್ರವಲ್ಲ, ಭಾಷಾ ಹಕ್ಕು ಮತ್ತು ಏಕೀಕರಣದ ಅವಶ್ಯಕತೆಗಳನ್ನು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ತಂದವು. ಪ್ರಬುದ್ಧ ಕರ್ನಾಟಕ, ಜಯ ಕರ್ನಾಟಕ ಮೊದಲಾದ ಪತ್ರಿಕೆಗಳ ಮೂಲಕ ಏಕೀಕರಣ ಚಳುವಳಿಯ ತತ್ತ್ವವು ಜನಸಾಮಾನ್ಯರ ನಡುವೆ ವ್ಯಾಪಕವಾಗಿ ಹರಡಿತು.
ಹೈದರಾಬಾದ್ ಸಂಸ್ಥಾನದಲ್ಲಿ ಭೂ ಹಿಡುವಳಿ ವ್ಯವಸ್ಥೆ
138 to 145
ಹೈದರಾಬಾದ್ ಸಂಸ್ಥಾನದ ಭೂ ಹಿಡುವಳಿ ವ್ಯವಸ್ಥೆ ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ವಪೂರ್ಣ ಘಟ್ಟವಾಗಿದೆ. ಅಸಫ್ ಜಾಹಿ ಆಡಳಿತದಲ್ಲಿ ಜಾರಿಯಲ್ಲಿದ್ದ ವಿವಿಧ ಭೂ ಹಿಡುವಳಿಯ ಪ್ರಕಾರಗಳು, ಅವುಗಳ ರಾಜಕೀಯ ಬದಲಾವಣೆಗಳು, ಆಡಳಿತಾತ್ಮಕ ಸುಧಾರಣೆಗಳು ಮತ್ತು ಅವುಗಳ ಮೇಲಿನ ಬ್ರಿಟಿಷ್ ಆಡಳಿತ ವ್ಯವಸ್ಥೆಯ ಪ್ರಭಾವ ಬೀರುವಂತೆ ಆಳಿದಂತಹ ನಿಜಾಮರು ತಮ್ಮ ಆಳ್ವಿಕೆಯ ಕಾಲಾವಧಿಯಲ್ಲಿ ಜಾರಿಗೆ ತಂದಂತಹ ಆಡಳಿತ ಪದ್ಧತಿಗಳು ಹಾಗೂ ಒಂದನೇ ನಿಜಾಮನಿಂದ ಹಿಡಿದು ಏಳನೇ ನಿಜಾಮನ ಕಾಲದ ಆಡಳಿತಾತ್ಮಕ ಕೊಡುಗೆಗಳು, ಆಡಳಿತ ವ್ಯವಸ್ಥೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಪ್ರಸ್ತುತ ಅಧ್ಯಯನ ಕೈಗೊಳ್ಳಲಾಗಿದೆ. ಇವರು ತಮ್ಮ ಆಡಳಿತ ಪದ್ಧತಿಯಲ್ಲಿ ಮೊಘಲರ ಮತ್ತು ಬ್ರಿಟಿಷರ ಆಡಳಿತದ ಅಂಶಗಳನ್ನು ಕೆಲವೊಂದು ಮಾರ್ಪಾಡುಗಳೊಂದಿಗೆ ತಮ್ಮದೇ ಆದ ರೀತಿಯಲ್ಲಿ ಹೊಸ ನಿಯಮಗಳನ್ನು ರೂಪಿಸಿಕೊಂಡು ಆಡಳಿತ ನಡೆಸಿರುವುದನ್ನು ನೋಡಬಹುದು.
ಕರ್ನಾಟಕ ಚರಿತ್ರೆಗೆ ಇತಿಹಾಸಕಾರರಾದ ಷ.ಶೆಟ್ಟರ್ ಅವರ ಕೊಡುಗೆ
146 to 150
ಸ್ವಾತಂತ್ರ್ಯೋತ್ತರ ಭಾರತದ ಚರಿತ್ರೆ ರಚನಾಶಾಸ್ತ್ರದಲ್ಲಿ ಅತಿದೊಡ್ಡ ಹೆಸರು ಷ.ಶೆಟ್ಟರ್ ಅವರದ್ದು. ಮಧ್ಯಕಾಲೀನ ಹಾಗೂ ಪ್ರಾಚೀನ ಚರಿತ್ರೆ ಬರವಣಿಗೆಯಲ್ಲಿ ಅವರ ಬರಹಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೊಳಪಟ್ಟಿವೆ. ಇಂಗ್ಲಿಷ್ ಭಾಷೆಯಲ್ಲಿ ಅವರ ಆರಂಭಿಕ ಗ್ರಂಥಗಳು ಪ್ರಕಟಗೊಂಡರೂ ನಂತರದಲ್ಲಿ ಅವರು ಕನ್ನಡದಲ್ಲಿ ಬರೆದ ಗ್ರಂಥಗಳು ವಿದ್ವಾಂಸರ ಗಮನ ಸೆಳೆದವು. ಅವರ ಸಾಮಾಜಿಕ ಕಳಕಳಿ ಮತ್ತು ರಾಜಕೀಯ ಸಿದ್ಧಾಂತಗಳು ಎಲ್ಲ ಸಂದರ್ಭದಲ್ಲಿಯೂ ಜನಪರವಾಗಿರುವುದನ್ನು ನಾವು ಗಮನಿಸಬಹುದಾಗಿದೆ. ಕನ್ನಡ-ಕರ್ನಾಟಕ ಕೇಂದ್ರಿಕೃತವಾದ ನಂತರದ ಬರಹಗಳು ಕನ್ನಡದಲ್ಲಿ ಲಭ್ಯವಿದ್ದ ಅನೇಕ ಆಕರಗಳನ್ನು ಆಧರಿಸಿವೆ. ಅವು ಕರ್ನಾಟಕ ಚರಿತ್ರೆಯನ್ನು ಮರು ರಚಿಸಲು ಸಾಧ್ಯವಾಗಿವೆ.
ಗುಳೇದಗುಡ್ಡ ತಾಲೂಕಿನ ಸಾಹಿತ್ಯ ಚರಿತೆ
151 to 159
ಗುಳೇದಗುಡ್ಡ ತಾಲೂಕು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಹಿತ್ಯಿಕವಾಗಿ ಮತ್ತು ಸಾಂಸ್ಕೃತಿಕವಾಗಿ ತನ್ನದೇಯಾದ ಅನನ್ಯತೆಯಿಂದ ಸಮ್ಮಿಳಿತವಾದ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಈ ಸಾಹಿತ್ಯ ಪರಂಪರೆಯು 16 ನೇ ಶತಮಾನದಲ್ಲಿ ಗುಳೇದಗುಡ್ಡದ ಮುರಿಗೆ ದೇಶೀಕೇಂದ್ರರು ರಚಿಸಿದ ಹಮ್ಮೀರ ಕಾವ್ಯದಿಂದ ಆರಂಭವಾಗಿ ಇತ್ತೀಚಿನ ನವಯುಗದ ಪ್ರಯೋಗಶೀಲ ಕವಿ ಕಾವ್ಯಗಳವರೆಗೂ ಅವ್ಯಾಹತವಾಗಿ ಮುಂದುವರೆಯುತ್ತಿದೆ. ಹಮ್ಮೀರ ಕಾವ್ಯದ ನಂತರ ಈ ಅಧ್ಯಯನವು ಬೇಂದ್ರೆಯವರ ಶಿಷ್ಯರೆಂದೇ ಖ್ಯಾತನಾಮರಾದ ಡಾ. ಎಸ್. ಎಸ್. ಬಸುಪಟ್ಟದರವರಿಂದ ಆರಂಭವಾಗಿ ಅವರ ಶಿಷ್ಯೋತ್ತಮರಾದ ಡಾ. ಮಹಾದೇವ ಕಣವಿ, ಶ್ರೀ ಮಲ್ಲಿಕಾರ್ಜುನ ಬನ್ನಿ, ಡಾ. ಭೀಮನಗೌಡ ಪಾಟೀಲ, ಶ್ರೀ ಅಶೋಕ ಸಮಗಂಡಿ, ಶ್ರೀ ಕೆ. ಎನ್. ಯರಗಾ ಇವರು ರಚಿಸಿರುವ ಮೌಲಿಕ ಕೃತಿಗಳ ಒಳನೋಟಗಳಿಂದ ಮುಂದುವರೆದು, ಡಾ. ರಾಜಶೇಖರ ಬಸುಪಟ್ಟದ, ಡಾ. ವಿ. ಎ. ಬೆನಕನಾಳ, ಶ್ರೀ ಸಿದ್ಧಲಿಂಗಪ್ಪ ಬರಗುಂಡಿ, ಶ್ರೀ ಎಂ.ಪಿ. ನೀಲಕಂಠಮಠ, ಡಾ. ಸಿ. ಎಂ. ಜೋಶಿ ಇವರ ಕೃತಿರತ್ನಗಳ ಒಳಪೊಕ್ಕು ಶೋಧಿಸುವ ಕ್ರಮವನ್ನೊಳಗೊಂಡಿದೆ. ಮುಂದುವರೆದು ಇತ್ತೀಚಿನ ಪ್ರಯೋಗಶೀಲ ಯುಗದ ಕವಿ ಕಾವ್ಯಗಳವರೆಗೂ ಶೋಧನಾ ಕಾರ್ಯ ಆವರಿಸಿಕೊಂಡು ಇಡೀ ಗುಳೇದಗುಡ್ಡ ತಾಲೂಕಿನ ಸಾಹಿತ್ಯಿಕ ಚರಿತ್ರೆ ಹಾಗೂ ಪರಂಪರೆಯನ್ನು ಕಟ್ಟಿಕೊಡುವ ಉದ್ದೇಶವನ್ನು ಹೊಂದಿದೆ.
ಆದಿಲ್ಶಾಹಿ ಸಾಮ್ರಾಜ್ಯದ ಪತನೋತ್ತರ ಮುಸ್ಲಿಂ ವೃತ್ತಿಪರ ಪಂಗಡಗಳ ಐತಿಹಾಸಿಕ ವಿಶ್ಲೇಷಣೆ
160 to 166
ಕ್ರಿ. ಶ. 7ನೇ ಶತಮಾನದಲ್ಲಿ ಅರೇಬಿಯಾದ ಮರುಭೂಮಿ ಮಣ್ಣಿಗೆ ಹೊಸ ದಾರಿಯನ್ನು ತೋರಿಸುವಂತೆ, ಹಜರತ್ ಮೊಹಮ್ಮದ್ ಅವರ ದಿವ್ಯ ಬೋಧನೆಗಳಿಂದ ಇಸ್ಲಾಂ ಧರ್ಮ ಉದಯಗೊಂಡಿತು. ಏಕೇಶ್ವರವಾದ, ಸಹೋದರತ್ವ ಮತ್ತು ಮಾನವೀಯತೆ ಎಂಬ ಮೌಲ್ಯಗಳನ್ನು ಕೇಂದ್ರೀಕರಿಸಿಕೊಂಡ ಈ ಧರ್ಮವು ಕ್ಷಿಪ್ರವೇಗದಲ್ಲಿ ವಿಶ್ವದ ಹಲವು ಭಾಗಗಳಿಗೆ ಹರಡಿತು. ಅರೇಬಿಯಾದ ಸೀಮೆಯನ್ನು ದಾಟಿ, ಇಸ್ಲಾಂ ಸಿರಿಯಾ–ಪಾಲೆಸ್ಟೈನ್ನ ಉತ್ತರ ಭಾಗ, ಈಜಿಪ್ಟ್–ಉತ್ತರ ಆಫ್ರಿಕಾದ ಪಶ್ಚಿಮ ವಲಯ, ಪರ್ಷಿಯಾ–ಮಧ್ಯ ಏಷ್ಯಾದ ಪೂರ್ವ ಪ್ರದೇಶಗಳು ಎಲ್ಲೆಡೆ ತನ್ನ ಸಾಂಸ್ಕೃತಿಕ ಸ್ಪಂದನವನ್ನು ಹರಡಿತು. ಭಾರತಕ್ಕೆ ಇಸ್ಲಾಂ ಪ್ರವೇಶವು ಮೊದಲಿಗೆ ಗಜ್ನಿ ಮತ್ತು ಘೋರಿಯರ ದಾಳಿಗಳ ಮೂಲಕ ಆರಂಭವಾಗಿ, ನಂತರ ದೆಹಲಿ ಸುಲ್ತಾನರು ಮತ್ತು ಮೊಘಲರ ವೈಭವಶಾಲಿ ಆಳ್ವಿಕೆಯಿಂದ ತನ್ನ ಚರಿತ್ರೆಯ ಮಹತ್ವವನ್ನು ಹೆಚ್ಚಿಸಿಕೊಂಡಿತು. ಕೊನೆಗೆ ಈ ಸಾಮ್ರಾಜ್ಯಶ್ರೇಣಿ ಬ್ರಿಟಿಷರ ಆಡಳಿತ ಉದಯದೊಂದಿಗೆ ನಿಧಾನವಾಗಿ ಶ್ರಾಂತವಾಯಿತು. ಮುಸ್ಲಿಂ ಸಮಾಜದಲ್ಲಿ ವೃತ್ತಿಯನ್ನು ಆಧಾರವಾಗಿಸಿಕೊಂಡ ಅನೇಕ ಪಂಗಡಗಳು ರೂಪುಗೊಂಡವು. ಮೊದಲಿಗೆ 73 ಇದ್ದ ಈ ಪಂಗಡಗಳು ಇಂದಿಗೆ 150ಕ್ಕೂ ಹೆಚ್ಚು ವಿಸ್ತರಣೆಯನ್ನು ಪಡೆದು, ತಮ್ಮದೇ ಆದ ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಕೌಶಲ್ಯಗಳಿಂದ ಗುರುತಿಸಿಕೊಂಡಿವೆ. ಚಪ್ಪರಬಂದ, ಭಗವಾನ, ಪಿಂಜಾರ, ನಾಲಬಂದ, ಖುರೇಷಿ, ಮೆಹತಾರ, ಮಾಪಿಳ್ಳೆ, ಬ್ಯಾರಿ ಮುಂತಾದ ಪಂಗಡಗಳು ತಮ್ಮ ವೃತ್ತಿಯನ್ನು ಕುಟುಂಬದ ಗುರುತಾಗಿಸಿಕೊಂಡಿವೆ. ಈ ವೃತ್ತಿಪರ ಪಂಗಡಗಳು ಭಾರತದ ಸಾಮಾಜಿಕ–ಆರ್ಥಿಕ ಜೀವನದಲ್ಲಿ ವೈವಿಧ್ಯ, ಕೌಶಲ್ಯ ಹಾಗೂ ಸಾಂಸ್ಕೃತಿಕ ಬಣ್ಣವನ್ನು ತುಂಬಿದ್ದು, ಮುಸ್ಲಿಂ ಸಮಾಜದ ಅಧ್ಯಯನಕ್ಕೆ ವಿಶಿಷ್ಟ ಆಯಾಮವನ್ನು ನೀಡುತ್ತವೆ.
ಕರ್ನಾಟಕದ ಏಕೀಕರಣ ಹೋರಾಟ - ಒಂದು ಅವಲೋಕನ
167 to 175
ಸ್ವಾತಂತ್ರ್ಯದ ನಂತರ ಕನ್ನಡ ಭಾಷಾಭಿಮಾನ ಮತ್ತು ಸಾಂಸ್ಕೃತಿಕ ಏಕತೆಯ ಆಧಾರವಾಗಿ ರಾಜ್ಯಗಳ ಪುನರ್ರಚನೆಯ ಬೇಡಿಕೆ ಬಲವಾಯಿತು. ಆಲೂರು ವೆಂಕಟರಾಯರಂತಹ ನಾಯಕರು “ಏಕೀಕೃತ ಕರ್ನಾಟಕ”ದ ಪರವಾಗಿ ಚಳವಳಿಯನ್ನು ಮುನ್ನಡೆಸಿದರು. ಇದರ ಫಲವಾಗಿ 1956ರ ರಾಜ್ಯಗಳ ಪುನರ್ರಚನಾ ಕಾಯ್ದೆಯ ಮೂಲಕ ವಿವಿಧ ಪ್ರದೇಶಗಳನ್ನು ಒಂದಾಗಿ ಸೇರಿಸಿ ಮೈಸೂರು ರಾಜ್ಯ ರಚಿಸಲಾಯಿತು; ನಂತರ 1973ರಲ್ಲಿ ಇದಕ್ಕೆ ಕರ್ನಾಟಕ ಎಂಬ ಹೆಸರು ನೀಡಲಾಯಿತು. ಈ ರೀತಿಯಾಗಿ, ಭಾರತದ ಸ್ವಾತಂತ್ರ್ಯ ಹೋರಾಟವು ರಾಜಕೀಯ ಮುಕ್ತಿಗೆ ದಾರಿ ಮಾಡಿಕೊಟ್ಟರೆ, ಕರ್ನಾಟಕದ ಏಕೀಕರಣವು ಭಾಷಾ-ಸಾಂಸ್ಕೃತಿಕ ಗುರುತಿನ ಆಧಾರದಲ್ಲಿ ರಾಜ್ಯ ನಿರ್ಮಾಣಕ್ಕೆ ಕಾರಣವಾಯಿತು. ಎರಡೂ ಚಳವಳಿಗಳು ಜನ ಏಕತೆ, ತ್ಯಾಗ ಮತ್ತು ರಾಷ್ಟ್ರೀಯ ಚೇತನೆಯ ಮಹತ್ವವನ್ನು ಪ್ರತಿಬಿಂಬಿಸುತ್ತವೆ.
ಕರ್ನಾಟಕದ ಏಕೀಕರಣಕ್ಕೆ ಸ್ಫೂರ್ತಿಯಾದ ವಿಜಯನಗರ ಸಾಮ್ರಾಜ್ಯ
176 to 181
19 ಮತ್ತು 20ನೇ ಶತಮಾನದ ಆದಿಭಾಗದಲ್ಲಿನ ವಸಾಹತುಶಾಹಿ ಆಡಳಿತದಿಂದ ಹರಿದು ಹಂಚಿಹೋಗಿರುವ ಕನ್ನಡ ನಾಡನ್ನು ಒಂದಾಗಿಸುವ ಉದ್ದೇಶದಿಂದ ವಸಾಹತುಶಾಹಿಗಳ ವಿರುದ್ಧವಾಗಿ ಕನ್ನಡಿಗರಲ್ಲಿ ಜಾಗೃತಿಯನ್ನು ಉಂಟು ಮಾಡುವುದು. ಮತ್ತು 14ನೇ ಶತಮಾನದಲ್ಲಿ ಉದಯವಾದ ವಿಜಯನಗರ ಸಾಮ್ರಾಜ್ಯದ ವೈಭವ ಮತ್ತು ಚಾರಿತ್ರಿಕ ನೆನಪುಗಳ ಮೂಲಕ ಕನ್ನಡಿಗರು ತಮ್ಮ ಅಸ್ಮಿತೆಯನ್ನು ಕಟ್ಟಿಕೊಳ್ಳಲು ಆ ಅವಧಿಯಲ್ಲಿ ರಚನೆಯಾದ ಸಾಹಿತ್ಯವು ಹೇಗೆ ಪ್ರೇರೇಪಿಸಿತು ಎಂಬುದನ್ನು ತಿಳಿಸುವ ಉದ್ದೇಶ ಹೊಂದಿದೆ. ‘ಕೇಳುತಿದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಕಾಣುತಿದೆ ಹೊನ್ನಚರಿತೆಯಲಿ ಹಂಪೆಯ ಗುಡಿ ವೈಭವದ ತವರು ಕೂಗಿದೆ ಪ್ರೀತಿಸುವ ಹೃದಯ ಬೇಡಿದೆ ಕೇಳು ನೀನು’ ಎಂದು ವಿಜಯನಗರ ಸಾಮ್ರಾಜ್ಯವನ್ನು ಕುರಿತು ಸಾಹಿತಿ ಡಾ.ದೊಡ್ಡರಂಗೆಗೌಡರು ಬರೆದ ಕವಿತೆಯ ಸಾಲುಗಳು ಹಂಪೆಯ ಶಿಲ್ಪಗಳಲ್ಲಿ ಕನ್ನಡದ ಅಸ್ಮಿತೆಯನ್ನು ಕಾಣುವ ಮತ್ತು ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಈ ಸಾಮ್ರಾಜ್ಯದ ಜೊತೆಗೆ ತೋರುವಂತೆ ತಮ್ಮ ಕವಿತೆಯ ಮೂಲಕ ಕನ್ನಡ ಸಾಹಿತ್ಯಕ್ಕೆ ಜೀವ ತುಂಬಿದ್ದಾರೆ. ಇಂತಹ ಕನ್ನಡ ಕವಿಗಳ ಜಾಗೃತಿ ಸಂದೇಶವನ್ನು ಪರಿಚಯಿಸುವುದೇ ಈ ಲೇಖನದ ಮೂಲ ಉದ್ದೇಶ.
ಕುಮಟಗಿ ಜಲಮಹಲ್: ಆದಿಲ್ಶಾಹಿ ವಂಶದ ಜಲಸಂಸ್ಕೃತಿಯ ಶಿಲಾ ಅದ್ಭುತ
182 to 187
ಕುಮಟಗಿ ಜಲಮಹಲ್ ವಿಜಯಪುರ ಜಿಲ್ಲೆಯ ಆದಿಲ್ಶಾಹಿ ಕಾಲದಲ್ಲಿ ನಿರ್ಮಾಣವಾದ ಪ್ರಮುಖ ಜಲವಾಸ್ತು ಸ್ಮಾರಕವಾಗಿದೆ. ಮಧ್ಯಯುಗೀನ ಭಾರತದಲ್ಲಿ ಅಭಿವೃದ್ಧಿಪಡಿಸಲಾದ ವೈಜ್ಞಾನಿಕ ಜಲ ನಿರ್ವಹಣಾ ತಂತ್ರಜ್ಞಾನ ಮತ್ತು ಶಿಲ್ಪಕಲೆಯ ಸಮನ್ವಯವನ್ನು ಈ ಸ್ಮಾರಕ ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಮಹಮ್ಮದ್ ಆದಿಲ್ಶಾ (1627-1656)ನ ಆಳ್ವಿಕೆಯ ಅವಧಿಯಲ್ಲಿ ನಿರ್ಮಿಸಲಾದ ಈ ಜಲಮಹಲ್ ಸ್ಥಳೀಯ ಭೌಗೋಳಿಕ ಪರಿಸ್ಥಿತಿಗೆ ಹೊಂದಿಕೊಂಡು ರೂಪುಗೊಂಡ ಸುಧಾರಿತ ನೀರಿನ ಸಂಗ್ರಹಣೆ ಹಾಗೂ ವಿತರಣಾ ವ್ಯವಸ್ಥೆಯನ್ನು ಹೊಂದಿದೆ. ಬಲಿಷ್ಠ ಕಲ್ಲಿನ ನಿರ್ಮಾಣ, ಭೂಗತ ನೀರಿನ ಹರಿವು, ಮಳೆನೀರು ಸಂಗ್ರಹಣೆ ಮತ್ತು ಸಹಜ ತಾಪಮಾನ ನಿಯಂತ್ರಣದ ವಿನ್ಯಾಸಗಳು ಆದಿಲ್ಶಾಹಿ ಯುಗದ ತಾಂತ್ರಿಕ ಜ್ಞಾನವನ್ನು ಪ್ರದರ್ಶಿಸುತ್ತವೆ. ಈ ಲೇಖನವು ಜಲಮಹಲ್ನ ಇತಿಹಾಸ, ವಾಸ್ತುಶಿಲ್ಪ, ಜಲತಂತ್ರಜ್ಞಾನ, ಸಾಂಸ್ಕೃತಿಕ ಮಹತ್ವ ಮತ್ತು ಸಂರಕ್ಷಣಾ ಸಮಸ್ಯೆಗಳ ಕುರಿತು ವಿಶ್ಲೇಷಿಸುತ್ತದೆ.
ವಿಜಯನಗರ ಸಾಮ್ರಾಜ್ಯದ ಸ್ಮಾರಕಗಳ ಸಂರಕ್ಷಣೆ ಮತ್ತು ವೈವಿಧ್ಯತೆ
188 to 194
ವಿಜಯನಗರ ಸಾಮ್ರಾಜ್ಯ ದಕ್ಷಿಣ ಭಾರತದ ಅತ್ಯಂತ ಶಕ್ತಿಶಾಲಿ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಾದ ಸಾಮ್ರಾಜ್ಯಗಳಲ್ಲೊಂದಾಗಿದೆ. ಇದರ ರಾಜಧಾನಿಯಾದ ಹಂಪಿ ಯುನೆಸ್ಕೋ ವಿಶ್ವ ಪರಂಪರೆ ತಾಣವಾಗಿದ್ದು ಅನನ್ಯ ವಾಸ್ತುಶಿಲ್ಪ, ಕಲಾ ಪರಂಪರೆ ಮತ್ತು ಜಲ ವ್ಯವಸ್ಥೆಗಳಿಗಾಗಿ ಪ್ರಸಿದ್ಧವಾಗಿದೆ. ವಿಜಯನಗರ ಸಾಮ್ರಾಜ್ಯದ ಸ್ಮಾರಕಗಳು ದಕ್ಷಿಣ ಭಾರತದ ರಾಜಕೀಯ, ಸಾಂಸ್ಕೃತಿಕ ಮತ್ತು ತಾಂತ್ರಿಕ ಸಾಧನೆಗಳನ್ನು ಪ್ರತಿನಿಧಿಸುವ ಮಹತ್ವದ ಪುರಾತತ್ವ ಸಂಪತ್ತಾಗಿವೆ. ಹಂಪಿ ಕೇಂದ್ರವಾಗಿರುವ ಈ ಸಾಮ್ರಾಜ್ಯದ ಅವಶೇಷಗಳು ದ್ರಾವಿಡ ವಾಸ್ತುಶೈಲಿ, ಇಸ್ಲಾಮಿಕ್ ಪ್ರಭಾವ, ಸ್ಥಳೀಯ ಕಲಾಕೌಶಲ್ಯ ಮತ್ತು ನವೀನ ನೆಲೆನಿಲುವುಗಳ ಸಮನ್ವಯವನ್ನು ಪ್ರತಿಬಿಂಬಿಸುತ್ತವೆ. ದೇವಾಲಯಗಳು, ಮಂಟಪಗಳು, ಬಜಾರ್ ಬೀದಿಗಳು, ಜಲವಿನ್ಯಾಸ ವ್ಯವಸ್ಥೆಗಳು, ಕೋಟೆಬಾಗಿಲುಗಳು ಮತ್ತು ಶಿಲ್ಪಗಳು ಮಧ್ಯಕಾಲೀನ ದಕ್ಷಿಣ ಭಾರತದ ರಾಜಕೀಯ ವ್ಯವಸ್ಥೆ, ಆರ್ಥಿಕ ಚಟುವಟಿಕೆ, ಧಾರ್ಮಿಕ ಸಹಿಷ್ಣುತೆ ಮತ್ತು ಕಲಾತ್ಮಕ ವೈವಿಧ್ಯತೆಯ ನೈಜ ದಾಖಲೆಗಳಾಗಿವೆ. ಆದಾಗ್ಯೂ, ಈ ಸ್ಮಾರಕಗಳ ಅಸ್ತಿತ್ವ ಇಂದು ವಿವಿಧ ಅಪಾಯಗಳಿಗೆ ಒಳಪಡುತ್ತಿದೆ. ಪ್ರಕೃತಿ ಶಿಲೀಂಧ್ರ, ಹವಾಮಾನ ಬದಲಾವಣೆ, ಅನಧಿಕೃತ ಗಣಿಗಾರಿಕೆ, ಸಂಚಾರ–ವ್ಯಾಪಾರದ ಒತ್ತಡ, ಪ್ರವಾಸೋದ್ಯಮ, ಮಾನವ ಹಸ್ತಕ್ಷೇಪ ಮತ್ತು ಸಂರಕ್ಷಣಾತ್ಮಕ ಕಾನೂನುಗಳ ಅನ್ವಯದ ಕೊರತೆ ಸ್ಮಾರಕಗಳ ನಾಶವನ್ನು ವೇಗಗೊಳಿಸುತ್ತಿವೆ. ಈ ಹಿನ್ನೆಲೆ, ಭಾರತೀಯ ಪುರಾತತ್ವ ಇಲಾಖೆ (ASI), ಯುನೆಸ್ಕೋ, ಕರ್ನಾಟಕ ಸರ್ಕಾರ ಮತ್ತು ಸ್ಥಳೀಯ ಸಮುದಾಯಗಳು ಕೈಗೊಂಡಿರುವ ಸಂರಕ್ಷಣೆ ಪ್ರಯತ್ನಗಳು— ವೈಜ್ಞಾನಿಕ ಸಂರಕ್ಷಣೆ, ಡಿಜಿಟಲ್ ಮ್ಯಾಪಿಂಗ್, ಹಾನಿ–ಮೌಲ್ಯಮಾಪನ, ಪರಂಪರೆ ಶಿಕ್ಷಣ, ಸಮುದಾಯ–ಆಧಾರಿತ ಸಂರಕ್ಷಣೆ ಮತ್ತು ಸ್ಥಿರ ಪ್ರವಾಸೋದ್ಯಮ— ಆಧುನಿಕ ಸಂರಕ್ಷಣಾ ನೀತಿಯ ಪ್ರಮುಖ ಅಂಗವಾಗಿ ಹೊರಹೊಮ್ಮಿವೆ. ಈ ಸಂಶೋಧನೆ ವಿಜಯನಗರದ ಸ್ಮಾರಕಗಳ ಕಲಾ–ಸಾಂಸ್ಕೃತಿಕ ವೈವಿಧ್ಯತೆಯನ್ನು ವಿಶ್ಲೇಷಿಸುವ ಜೊತೆಗೆ ಅವುಗಳ ಹಾನಿಯ ಕಾರಣಗಳು, ಸಂರಕ್ಷಣೆ–ರಾಜಕೀಯ, ಆಡಳಿತಾತ್ಮಕ ವ್ಯವಸ್ಥೆಗಳು ಮತ್ತು ಭವಿಷ್ಯದ ಸವಾಲುಗಳನ್ನು ಸಂಕ್ಷಿಪ್ತ ಅಧ್ಯಯನ ಮಾಡುತ್ತದೆ. ಸ್ಮಾರಕಗಳ ಸಂರಕ್ಷಣೆ ಕೇವಲ ಇತಿಹಾಸದ ಪುನರುಜ್ಜೀವನವಲ್ಲ; ಅದು ಸಂಸ್ಕೃತಿಯ ಗುರುತು, ರಾಷ್ಟ್ರೀಯ ಪರಂಪರೆ, ಸ್ಥಿರ ಅಭಿವೃದ್ಧಿ ಮತ್ತು ಜ್ಞಾನ ಪರಂಪರೆಯ ರಕ್ಷಣೆಯ ಅವಶ್ಯಕ ಪ್ರಕ್ರಿಯೆಯಾಗಿರುವುದನ್ನು ಈ ಅಧ್ಯಯನ ಒತ್ತಿಹೇಳುತ್ತದೆ.
Ancient Jain Literature in Karnataka
195 to 201
Ancient Jain literature in Karnataka stands as a cornerstone in shaping the linguistic, cultural, and intellectual heritage of the region. Flourishing especially between 400 and 1200 AD, this golden era—celebrated as the Augustan Age of Kannada literature—was profoundly enriched by the contributions of eminent Digambara Jain poets, monks, and scholars. Their works, composed in Kannada, Sanskrit, and Prakrit, laid the foundation for classical Kannada prose and poetry, while also influencing moral thought, religious philosophy, historiography, and narrative traditions. This vibrant literary legacy not only elevated Kannada to a sophisticated literary medium but also played a pivotal role in nurturing Karnataka’s early cultural identity.
Conservation and Diversity of Historical Monuments
202 to 207
Historical monuments are tangible records of past societies their technology, beliefs, aesthetics and power relations. Conserving these monuments preserves cultural memory, supports social identity and can provide economic benefits through sustainable heritage tourism. This paper examines the diversity of historical monuments (typologies, materials, cultural meanings), surveys main threats, reviews international and Indian conservation doctrines and practices, and proposes integrated strategies combining scientific conservation, legal protection, community participation and digital documentation. Key reference works and policy documents are listed to support further scholarship and practice.
Narratives of the Medieval Deccan: Kannada Literary Heritage and Historical Imagination in India
208 to 216
This article examines the narrative strategies and cultural functions of Kannada literary production in the medieval Deccan, arguing that these texts played a vital role in shaping historical imagination and regional identity. Drawing on a close reading of epics, hagiographies, courtly chronicles, and inscriptional poetry, the study traces how authors and patrons used storytelling techniques mythic interpolation, genealogical framing, and Syncretic historiography to negotiate political legitimacy, social hierarchies, and communal memory. Attention is given to the interplay between oral performance and written text, and to the ways vernacular Kannada reworked Sanskritic paradigms to address local concerns: landholding, temple patronage, and the sacralization of rulers. Methodologically, the article combines literary analysis with historical contextualization, using comparative readings of selected manuscripts and epigraphic evidence to reconstruct how narrative forms mediated historical knowledge for diverse audiences. The findings suggest that medieval Kannada narratives were not passive reflections of events but active agents in producing a layered historical consciousness—one that could legitimize dynasties, circulate moral norms, and accommodate cultural pluralism across the Deccan.
Conservation and Diversity of Historical Monuments: A Comprehensive Study
217 to 222
Historical monuments represent the architectural legacy, cultural memory, and civilizational identity of a nation. Their preservation is essential not only for historical continuity but also for strengthening the collective sense of belonging among present and future generations. This article examines the concepts, principles, and practices of monument conservation, along with government initiatives, technical mechanisms, and public–private partnerships that have significantly contributed to heritage protection, with specific reference to Karnataka.
Medieval Indian History and Kannada Literary Heritage: A Civilizational Interface
223 to 227
This paper explores the dynamic intersection between Medieval Indian History and the evolution of Kannada literary heritage. The medieval period, stretching from the 8th to the 18th century, witnessed profound political changes, cultural negotiations, and intellectual transformations. These developments shaped regional identities across the subcontinent, particularly in Karnataka. The paper analyses how political structures, religious movements, and socio-economic patterns—especially under the Rashtrakutas, Chalukyas, Hoysalas, and Vijayanagara rulers—contributed to the growth of Kannada literature, including the Vachana, courtly epics, Dasa Sahitya, and classical poetic traditions.
The Role of Sharanas and Anubhavamantapa in the Rise of Women
228 to 234
Women are given only a secondary role to play especially in the indian society. Right from the birth discrimination between a boy and girl is found in almost every household. Basaveshwara was probably the after Buddha to recognize and realize the individuality and rights of women and he launched a social revolution for their emancipation. The vachana movement started by Basveshwara for emancipation of women was a movement for self respect and dignity. The vachanas (sayings) of Basveshwara speak about liberty, equality, fraternity, dignity and respect which the human rights ensure and which ultimately contribute to the common good. Women were given patronage at the Anubhava mantapa among whom Akka Mahadevi received highest praise from Basavanna. There were women followers with their respective vocations. All Sharanas, including Basaveshwara, accorded mothers position to woman, we evidence of Basveshwara’s broad view of women in his treatment of his wives, and a good number of sharanes (women saints) who participated in the religious discussions at Anubhava Mantapa. Married women also took part in the movement. There were also women devotees of lower background.