‘ಮೈ-ಮನʼ: ಅಸ್ತಿತ್ವದ ಶೋಧ ಹಾಗೂ ಸಾಮಾಜಿಕ ಪ್ರತಿರೋಧ

Main Article Content

ಕಲ್ಪನಾ

Abstract

ಪ್ರಸ್ತುತ ಸಂಶೋಧನಾ ಲೇಖನವು ಲಕ್ಷ್ಮಣ್ (ಮಾಳವಿಕಾ) ಕನಕುಂಟ್ಲಾ ಅವರ ‘ಮೈ-ಮನʼ ಕವನ ಸಂಕಲನವನ್ನು ಆಕರವಾಗಿರಿಸಿಕೊಂಡು, ತೃತೀಯ ಲಿಂಗಿ ಸಮುದಾಯದ ಅಸ್ಮಿತೆ, ಸಾಮಾಜಿಕ ಬಹಿಷ್ಕಾರ ಮತ್ತು ವ್ಯವಸ್ಥಿತ ಸಂಘರ್ಷಗಳನ್ನು ವಿಶ್ಲೇಷಿಸುತ್ತದೆ. ಪ್ರಸ್ತುತ ಕವನ ಸಂಕಲನವು ಹೇಗೆ ವೈಯಕ್ತಿಕ ನೋವನ್ನು ಸಾಮುದಾಯಿಕ ಪ್ರತಿರೋಧವನ್ನಾಗಿ ಪರಿವರ್ತಿಸುತ್ತದೆ ಮತ್ತು ಕನ್ನಡ ಸಾಹಿತ್ಯಿಕ ಸಂದರ್ಭದಲ್ಲಿ ಈ ಕೃತಿಯ ಮಹತ್ವವೇನು ಎಂಬುದನ್ನು ಈ ಲೇಖನದಲ್ಲಿ ವಿಶ್ಲೇಷಿಸಲು ಪ್ರಯತ್ನಿಸಲಾಗಿದೆ. ಇಲ್ಲಿನ ಕವಿತೆಗಳು ಲಿಂಗತ್ವದ ಸಂಕೋಲೆಗಳ ನಡುವೆ ಸಿಲುಕಿದ ಜೀವಗಳ ಅಂತರಾಳದ ತುಡಿತವನ್ನು ಅಭಿವ್ಯಕ್ತಿಸುತ್ತವೆ. ಜೊತೆಜೊತೆಗೇ ಅಂಚಿನ ಅಸ್ಮಿತೆಗಳಿಗೆ ಘನತೆಯ ಬದುಕು ಸಿಗಬೇಕಾದ ಅನಿವಾರ್ಯತೆಯನ್ನು ಸಾರಿ ಹೇಳುತ್ತದೆ. ಸಮಾಜವು ನಿರ್ಮಿಸಿರುವ ತಾರತಮ್ಯದ ಬೇಲಿಗಳನ್ನು ದಾಟಿ, ಮನುಷ್ಯತ್ವದ ನೆಲೆಯಲ್ಲಿ ಸಮಾನತೆಯನ್ನು ಹಂಬಲಿಸುವ ಕವಯಿತ್ರಿಯ ಪ್ರತಿರೋಧದ ದನಿಯನ್ನು ಈ ಲೇಖನವು ಸಂಶೋಧನಾತ್ಮಕವಾಗಿ ಚರ್ಚಿಸುತ್ತದೆ. 

Article Details

Section

Research Articles

Author Biography

ಕಲ್ಪನಾ

ಸಹ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾಡುಗುಡಿ, ಬೆಂಗಳೂರು.

How to Cite

ಕಲ್ಪನಾ. (2026). ‘ಮೈ-ಮನʼ: ಅಸ್ತಿತ್ವದ ಶೋಧ ಹಾಗೂ ಸಾಮಾಜಿಕ ಪ್ರತಿರೋಧ . ಅಕ್ಷರಸೂರ್ಯ (AKSHARASURYA), 16(01), 11 to 20. https://aksharasurya.com/index.php/latest/article/view/2126

References

ಲಕ್ಷ್ಮಣ್ (ಮಾಳವಿಕಾ) ಕನಕುಂಟ್ಲಾ, (2023), ಮೈ-ಮನ, ಬೆಂಗಳೂರು: ಒಂದೆಡೆ ಪ್ರಕಾಶನ.