ಪತ್ರಗಳಲ್ಲಿ ಕಂಡ ಕುವೆಂಪು
Main Article Content
Abstract
ರಾಷ್ಟ್ರಕವಿ ಕುವೆಂಪು ಅವರು ತಮ್ಮ ಮಗ ಪೂರ್ಣಚಂದ್ರ ತೇಜಸ್ವಿಗೆ ಬರೆದ ಪತ್ರಗಳ ಹಿನ್ನೆಲೆಯಲ್ಲಿ ಅವರ ಬಹುಮುಖಿ ವ್ಯಕ್ತಿತ್ವದ ಅಪರೂಪದ ಮುಖಗಳನ್ನು ಇಲ್ಲಿ ಅನಾವರಣಗೊಳಿಸಲಾಗಿದೆ. 1955ರಿಂದ 1980ರವರೆಗೆ ಬರೆದ ಈ ಪತ್ರಗಳು ಕುವೆಂಪು ಅವರನ್ನು ಕೇವಲ ದಾರ್ಶನಿಕ ಕವಿಯಾಗಿ ಮಾತ್ರವಲ್ಲದೆ, ಕಾಳಜಿಯುಕ್ತ ತಂದೆಯಾಗಿ, ಕೌಟುಂಬಿಕ ಜವಾಬ್ದಾರಿಯುಳ್ಳ ಸಂಸಾರಸ್ಥನಾಗಿ ಹಾಗೂ ಲೌಕಿಕ ವಾಸ್ತವಗಳ ಸ್ಪಷ್ಟ ಅರಿವಿದ್ದ ಮಾರ್ಗದರ್ಶಕನಾಗಿ ಪರಿಚಯಿಸುತ್ತವೆ. ಮಗನ ವಿದ್ಯಾಭ್ಯಾಸ, ಸಾಹಿತ್ಯ ಕೃಷಿ, ತೋಟದ ನಿರ್ವಹಣೆ, ಆರ್ಥಿಕ ಶಿಸ್ತು ಹಾಗೂ ಸಮಕಾಲೀನ ಸಾಮಾಜಿಕ-ರಾಜಕೀಯ ವಿದ್ಯಮಾನಗಳ ಬಗೆಗಿನ ಅವರ ನಿಲುವುಗಳು ಇಲ್ಲಿ ದಾಖಲಾಗಿವೆ. ಕವಿಯೊಬ್ಬ ಕೇವಲ ಕಲ್ಪನಾ ಲೋಕದಲ್ಲಿ ವಿಹರಿಸದೆ, ದೈನಂದಿನ ವಾಸ್ತವ ಬದುಕಿನ ಆಗುಹೋಗುಗಳೊಂದಿಗೆ ಹೇಗೆ ನಿಕಟ ಸಂಪರ್ಕ ಹೊಂದಿರುತ್ತಾನೆ ಎಂಬುದನ್ನು ಸಾಬೀತುಪಡಿಸುವ ಈ ಅಧ್ಯಯನವು, ಕುವೆಂಪು ಅವರ ಆಂತರಿಕ ಹಾಗೂ ಲೌಕಿಕ ಬದುಕಿನ ಸುಂದರ ಸಮನ್ವಯತೆಯನ್ನು ಅತ್ಯಂತ ಆಪ್ತವಾಗಿ ಕಟ್ಟಿಕೊಡುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಹರಿಹರಪ್ರಿಯ, (1979), ಕುವೆಂಪು ಒಲವು ನಿಲುವು, ಬೆಂಗಳೂರು: ಬಯಲು ಪರಿಷತ್ತು.
ರಾಜೇಶ್ವರಿ ತೇಜಸ್ವಿ, (2011), ನನ್ನ ತೇಜಸ್ವಿ, ಮೈಸೂರು: ಪುಸ್ತಕ ಪ್ರಕಾಶನ.
ಶಿವಾ ರೆಡ್ಡಿ ಕೆ. ಸಿ., (2020), ಕುವೆಂಪು ಸಮಗ್ರ ಗದ್ಯ ಸಂಪುಟ 8, ಹಂಪಿ: ಕನ್ನಡ ವಿ. ವಿ.
ತಾರಿಣಿ ಚಿದಾನಂದ, (2006), ಮಗಳು ಕಂಡ ಕುವೆಂಪು, ಮೈಸೂರು: ಪುಸ್ತಕ ಪ್ರಕಾಶನ.