ಆರ್. ಕೆ. ನಲ್ಲೂರು ಪ್ರಸಾದ್ ಅವರ ಕಾವ್ಯಗಳಲ್ಲಿ ಕೌಟುಂಬಿಕ ನೆಲೆಗಳು
Main Article Content
Abstract
ಕನ್ನಡ ಸಾಹಿತ್ಯಕ್ಕೆ 1500 ವರ್ಷಗಳ ಇತಿಹಾಸವಿದೆ ಎಂಬುದು ಚರಿತ್ರೆಕಾರರ ಅಭಿಪ್ರಾಯ. ಅಭಿಪ್ರಾಯಕ್ಕೆ ಕನ್ನಡಿ ಹಿಡಿದ ಹಾಗೆ ಕನ್ನಡ ಸಾಹಿತ್ಯ ನಿಂತ ನೀರಾಗದೆ ಚಲನಶೀಲತೆಯನ್ನು ಪಡೆದು ಸಾಗುತ್ತಾ ಬಂದಿದೆ. ಪಂಪ, ರನ್ನ, ಕುಮಾರವ್ಯಾಸ, ಮುದ್ದಣ ಹೀಗೆ ಬಹುದೊಡ್ಡ ಪರಂಪರೆಯಿದೆ. ಚಂಪುವಿನಿಂದ ಪ್ರಾರಂಭವಾಗಿ ಅನೇಕ ಪ್ರಕಾರಗಳಲ್ಲಿ ಬೆಳೆದು ಬಂದಿರುವುದನ್ನು ಗಮನಿಸಬಹುದು. ಆತ್ಮಕಥೆ ವ್ಯಕ್ತಿಯ ಬದುಕಿನ ಪ್ರಮುಖ ಚಿತ್ರಣಗಳನ್ನು ಪ್ರತಿಬಿಂಬಿಸುತ್ತದೆ. ಹಾಗೆಯೇ ವ್ಯಕ್ತಿ ಚಿತ್ರಣಗಳು ಸಾಹಿತ್ಯ, ಕ್ರೀಡೆ ಅಥವಾ ಇನ್ನಿತರ ಯಾವುದೇ ಕ್ಷೇತ್ರದಲ್ಲಿ ಬಹುಮುಖ ಸಾಧನೆ ಮಾಡಿ ಸಮಾಜದ ಬಗ್ಗೆ ತನ್ನದೇ ಆದ ಕಾಳಜಿ ಹೊಂದಿರುವ ಅನೇಕರು ನಮ್ಮ ನಡುವೆ ಇದ್ದಾರೆ. ಕೆಲವರದು ವೃತ್ತಿ ಒಂದಾದರೆ ಪ್ರವೃತ್ತಿ ಇನ್ನೊಂದಾಗಿರುತ್ತದೆ. ಅಂತೆಯೇ ಆರ್. ಕೆ. ನಲ್ಲೂರು ಪ್ರಸಾದರು ಅಧ್ಯಾಪಕ ವೃತ್ತಿಯ ಜೊತೆಗೆ ಸಾಹಿತ್ಯ ರಚನೆ ಮಾಡಿ ಸಮಾಜವನ್ನು ತಿದ್ದುವ ಕೆಲಸ ಮಾಡಿದವರು. ಅಷ್ಟಕ್ಕೇ ಅವರ ಕಾರ್ಯ ನಿಲ್ಲದೆ ಕರ್ನಾಟಕ ರಾಜ್ಯದ ಅತ್ಯುತ್ತಮ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಸಾಧಾರಣ ಸೇವೆ ಸಲ್ಲಿಸಿದವರು. ಅವರ ಕಾವ್ಯಗಳಲ್ಲಿ ಹಳ್ಳಿಯ ಸೊಗಡಿದೆ, ತಂದೆ-ತಾಯಿಯ ಕರುಳು ಬಳ್ಳಿಯ ಸಂಬಂಧವಿದೆ, ನೋವಿಗೆ ಮಿಡಿಯುವ ಸಹನೆ ಇದೆ, ಬಡ ಜನರ ಬದುಕಿನ ಅನಾವರಣವಿದೆ. ಇವರ ಕಾವ್ಯಗಳಲ್ಲಿನ ಕೌಟುಂಬಿಕ ನೆಲೆಯನ್ನು ತಿಳಿಸಿಕೊಡುವುದೇ ಈ ಲೇಖನದ ಮುಖ್ಯ ಉದ್ದೇಶ. ಚುರುಕಾದ ವ್ಯಕ್ತಿತ್ವದಿಂದ ಸೂಜಿಗಲ್ಲಿನಂತೆ ಸೆಳೆಯುವ ನಲ್ಲೂರರು ನಮ್ಮ ನಡುವೆ ಎಲೆ ಮರೆ ಕಾಯಿಯಂತೆ ಇರುವವರು. ಈ ನಿಟ್ಟಿನಲ್ಲಿ ಅವರ ಕಾವ್ಯದ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ನಲ್ಲೂರು ಪ್ರಸಾದ್. (1977). ನೀನೆಂಬ ನಾನು (ಕವನ ಸಂಕಲನ). ಕೃಷಿ ಪ್ರಕಾಶನ. ಚನ್ನರಾಯಪಟ್ಟಣ. ಪು. ಸಂ. 14-15
ನಲ್ಲೂರು ಪ್ರಸಾದ್. (1977). ನೀನೆಂಬ ನಾನು (ಕವನ ಸಂಕಲನ). ಕೃಷಿ ಪ್ರಕಾಶನ. ಚನ್ನರಾಯಪಟ್ಟಣ. ಪು. ಸಂ. 14
ನಲ್ಲೂರು ಪ್ರಸಾದ್. (1977). ನೀನೆಂಬ ನಾನು (ಕವನ ಸಂಕಲನ). ಕೃಷಿ ಪ್ರಕಾಶನ. ಚನ್ನರಾಯಪಟ್ಟಣ. ಪು. ಸಂ. 15
ನಲ್ಲೂರು ಪ್ರಸಾದ್. (1996). ಸೋನೆ ಮುಗಿಲು (ಕವನ ಸಂಕಲನ). ಅರ್ಪಿತಾ ಪ್ರಕಾಶನ. ಬೆಂಗಳೂರು. ಪು.ಸಂ. 8
ನಲ್ಲೂರು ಪ್ರಸಾದ್. (1996). ಸೋನೆ ಮುಗಿಲು (ಕವನ ಸಂಕಲನ). ಅರ್ಪಿತಾ ಪ್ರಕಾಶನ. ಬೆಂಗಳೂರು. ಪು.ಸಂ. 8-9
ನಲ್ಲೂರು ಪ್ರಸಾದ್. (2004). ರೆಕ್ಕೆ ಬಡಿಯುವ ಮುನ್ನ (ಕವನ ಸಂಕಲನ). ಸಿವಿಜಿ ಪಬ್ಲಿಕೇಷನ್ಸ್. ಬೆಂಗಳೂರು. ಪು.ಸಂ. 4-5 (ಮುನ್ನುಡಿ)
ನಲ್ಲೂರು ಪ್ರಸಾದ್. (2004). ರೆಕ್ಕೆ ಬಡಿಯುವ ಮುನ್ನ (ಕವನ ಸಂಕಲನ). ಸಿವಿಜಿ ಪಬ್ಲಿಕೇಷನ್ಸ್. ಬೆಂಗಳೂರು ಪು.ಸಂ. 3
ನಲ್ಲೂರು ಪ್ರಸಾದ್. (2004). ರೆಕ್ಕೆ ಬಡಿಯುವ ಮುನ್ನ (ಕವನ ಸಂಕಲನ). ಸಿವಿಜಿ ಪಬ್ಲಿಕೇಷನ್ಸ್. ಬೆಂಗಳೂರು ಪು.ಸಂ. 3-4
ನಲ್ಲೂರು ಪ್ರಸಾದ್. (1996). ಸೋನೆ ಮುಗಿಲು (ಕವನ ಸಂಕಲನ). ಅರ್ಪಿತಾ ಪ್ರಕಾಶನ. ಬೆಂಗಳೂರು. ಪು.ಸಂ. 18
ನಲ್ಲೂರು ಪ್ರಸಾದ್. (1996). ಸೋನೆ ಮುಗಿಲು (ಕವನ ಸಂಕಲನ). ಅರ್ಪಿತಾ ಪ್ರಕಾಶನ. ಬೆಂಗಳೂರು. ಪು.ಸಂ. 18
ನಲ್ಲೂರು ಪ್ರಸಾದ್. (1996). ಸೋನೆ ಮುಗಿಲು (ಕವನ ಸಂಕಲನ). ಅರ್ಪಿತಾ ಪ್ರಕಾಶನ. ಬೆಂಗಳೂರು. ಪು.ಸಂ. 18
ನಲ್ಲೂರು ಪ್ರಸಾದ್. (2007). ನಿವೃತ್ತೋಪನಿಷತ್ತು (ಕವನ ಸಂಕಲನ). ಸಾಗರ ಪ್ರಕಾಶನ. ಬೆಂಗಳೂರು. ಪು.ಸಂ. 20
ನಲ್ಲೂರು ಪ್ರಸಾದ್. (1986). ದಗ್ಧ (ಕವನ ಸಂಕಲನ). ಅರ್ಪಿತ ಪ್ರಕಾಶನ.ಬೆಂಗಳೂರು. ಪು.ಸಂ. 26
ನಲ್ಲೂರು ಪ್ರಸಾದ್. (2004). ರೆಕ್ಕೆ ಬಡಿಯುವ ಮುನ್ನ (ಕವನ ಸಂಕಲನ). ಸಿವಿಜಿ ಪಬ್ಲಿಕೇಷನ್ಸ್. ಬೆಂಗಳೂರು ಪು.ಸಂ. 1
ನಲ್ಲೂರು ಪ್ರಸಾದ್. (2004). ರೆಕ್ಕೆ ಬಡಿಯುವ ಮುನ್ನ (ಕವನ ಸಂಕಲನ). ಸಿವಿಜಿ ಪಬ್ಲಿಕೇಷನ್ಸ್. ಬೆಂಗಳೂರು ಪು.ಸಂ. 2
ನಲ್ಲೂರು ಪ್ರಸಾದ್. (1996). ಸೋನೆ ಮುಗಿಲು (ಕವನ ಸಂಕಲನ). ಅರ್ಪಿತಾ ಪ್ರಕಾಶನ. ಬೆಂಗಳೂರು. ಪು.ಸಂ. 19
ನಲ್ಲೂರು ಪ್ರಸಾದ್. (1996). ಸೋನೆ ಮುಗಿಲು (ಕವನ ಸಂಕಲನ). ಅರ್ಪಿತಾ ಪ್ರಕಾಶನ. ಬೆಂಗಳೂರು. ಪು.ಸಂ. 19
ನಲ್ಲೂರು ಪ್ರಸಾದ್. (2007). ನಿವೃತ್ತೋಪನಿಷತ್ತು (ಕವನ ಸಂಕಲನ). ಸಾಗರ ಪ್ರಕಾಶನ. ಬೆಂಗಳೂರು. ಪು.ಸಂ. 14
ನಲ್ಲೂರು ಪ್ರಸಾದ್. (2007). ನಿವೃತ್ತೋಪನಿಷತ್ತು (ಕವನ ಸಂಕಲನ). ಸಾಗರ ಪ್ರಕಾಶನ. ಬೆಂಗಳೂರು. ಪು.ಸಂ. 33
ಚಂದ್ರಪ್ಪ ಎನ್. (ಸಂ). (2010). ನಿಕಷ, ಬಂಧನ-ಬಿಡುಗಡೆ ನಡುವೆ: ನಿವೃತ್ತೋಪನಿಷತ್ತು. ಮುಂಡ ಪ್ರಕಾಶನ. ಬೆಂಗಳೂರು. ಪು.ಸಂ. 48
ಚಂದ್ರಪ್ಪ ಎನ್. (ಸಂ). (2010). ನಿಕಷ, ಬಂಧನ-ಬಿಡುಗಡೆ ನಡುವೆ: ನಿವೃತ್ತೋಪನಿಷತ್ತು. ಮುಂಡ ಪ್ರಕಾಶನ. ಬೆಂಗಳೂರು. ಪು.ಸಂ. 84
ನಲ್ಲೂರು ಪ್ರಸಾದ್. (2008). ನವಿಲ ಜಾಗರ. ಐಬಿಎಚ್ ಪ್ರಕಾಶನ. ಬೆಂಗಳೂರು. ಪು.ಸಂ. 168