ವಚನಕಾರರ ವಚನಗಳಲ್ಲಿ ಆರ್ಥಿಕ ಚಿಂತನೆಗಳು

Main Article Content

ತಿಮ್ಮೇಗೌಡ ಬಿ. ಪಿ.
ಸುಮಾ ಆರ್.

Abstract

12 ನೇ ಶತಮಾನವು ಅನೇಕ ಕಾರಣಗಳಿಂದಾಗಿ ಪ್ರಾಮುಖ್ಯತೆಯನ್ನು ಪಡೆದಿದೆ. ರಾಜಕೀಯ ಮತ್ತು ಸಂಘರ್ಷ, ಮೇಲು ಕೀಳೆಂಬ ಅಂಶಗಳಿಗೆ ಒಳಗಾಗಿದ್ದ ಕಾಲದಲ್ಲಿ ಬಂದವರು ಶಿವಶರಣರು, ಇವರು ವೀರಶೈವ ಧರ್ಮವನ್ನು ಹರಡುವುದಕ್ಕೆ ಸೀಮಿತವಾಗಿರದೇ ಧರ್ಮ ಪ್ರಚಾರದಲ್ಲಿ ಅನೇಕ ಜೀವನ ಮೌಲ್ಯಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ವಚನಗಳ ಮೂಲಕ ಪ್ರಚಾರಮಾಡಿದರು. ಮಾನವನ ಜೀವನ ನಿರ್ವಹಣೆಗೆ ಹಣಕಾಸು ಕೂಡ ಪ್ರಮುಖವಾದದ್ದು ಅದು ಸಮಾಜದ ಉತ್ಪಾದನೆ, ವಿನಿಮಯ ಹಂಚಿಕೆಗೆ ಸಂಬಂಧಪಟ್ಟಿದೆಯಲ್ಲದೆ, ಉದ್ಯೋಗ ಮತ್ತು ವರಮಾನಕ್ಕೂ ಆಧಾರವಾಗಿದೆ. ರಾಷ್ಟ್ರದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಆರ್ಥಿಕ ವ್ಯವಸ್ಥೆಯನ್ನು ಜಾರಿಗೆ ತರುವಂತಹ ಜವಾಬ್ದಾರಿಯನ್ನು ಕೈಗೊಂಡವರು ಶಿವಶರಣರಾಗಿದ್ದಾರೆ. ಅರ್ಥಕ್ಕೆ ನಿರ್ಣಾಯಕ ಪಾತ್ರವಿದೆ ಎಂದು ಗುರುತಿಸಿ ಅದನ್ನು ಜಾರಿಗೆ ತರಲು ಭಕ್ತಿಮಾರ್ಗವನ್ನು ಅನುಸರಿಸಿದರು. 20ನೇ ಶತಮಾನದಲ್ಲಿ ಕಾರ್ಲ್ ಮಾರ್ಕ್ಸ್, ಮಾರ್ಷಲ್, ಹೇಗೆಲ್, ಕೇನ್ಸ್, ಗಾಂಧೀಜಿ ಇತ್ತೀಚಿನ ಅಮರ್ಥ್ಯಸೇನ್ ಪ್ರಚಾರಕ್ಕೆ ತಂದ ವಿಚಾರಗಳನ್ನು 800 ವರ್ಷಗಳ ಹಿಂದೆಯೇ ನಮ್ಮ ಶಿವಶರಣರು ಅಳವಡಿಸಿಕೊಳ್ಳಲು ಪ್ರೇರೇಪಿಸಿದವರು.

Article Details

Section

Research Articles

Author Biographies

ತಿಮ್ಮೇಗೌಡ ಬಿ. ಪಿ.

ಸಂಶೋಧನಾ ವಿದ್ಯಾರ್ಥಿ, ಎಸ್.ಜೆ.ಬಿ.ಸಿ.ಎಂ.ಎಸ್. ಕನ್ನಡ ಸಂಶೋಧನಾ ಕೇಂದ್ರ, ಬಿ.ಜಿ.ಎಸ್ ಆರೋಗ್ಯ ಮತ್ತು ಶಿಕ್ಷಣ ನಗರ, ಕೆಂಗೇರಿ, ಬೆಂಗಳೂರು.

ಸುಮಾ ಆರ್.

ಪ್ರಾಧ್ಯಾಪಕರು, ಕನ್ನಡ ವಿಭಾಗ, ಎಸ್.ಜೆ.ಬಿ.ಸಿ.ಎಂ.ಎಸ್. ಕನ್ನಡ ಸಂಶೋಧನಾ ಕೇಂದ್ರ, ಬಿ.ಜಿ.ಎಸ್ ಆರೋಗ್ಯ ಮತ್ತು ಶಿಕ್ಷಣ ನಗರ, ಕೆಂಗೇರಿ, ಬೆಂಗಳೂರು.

References

ಬಸವರಾಜು ಎಲ್., ಅಲ್ಲಮನ ವಚನಗಳು (1997), ಗೀತಾ ಬುಕ್ ಹೌಸ್, ಮೈಸೂರು.

ಚಿದಾನಂದ ಮೂರ್ತಿ ಎಂ., ವಚನ ಸಾಹಿತ್ಯ (2009), ಸಪ್ನ ಬುಕ್ ಹೌಸ್, ಬೆಂಗಳೂರು.

ಮಹದೇವಯ್ಯ ಟಿ. ಆರ್. ಬಸವಣ್ಣನವರ ವಚನ ಸಂಗ್ರಹ (2011), ಬಸವ ಸಮಿತಿ, ಬೆಂಗಳೂರು.

ಬಸವ ಪಥ, ಬಸವ ಜಯಂತಿ ವಿಶೇಷ ಸಂಚಿಕೆ (ಮೇ 2005), ಬಸವ ಸಮಿತಿ, ಬೆಂಗಳೂರು.