ನಲ್ಲೂರರ ʼನೀನೆಂಬ ನಾನುʼ ಕವನ ಸಂಕಲನದ ವಿಭಿನ್ನ ನೆಲೆಗಳು
Main Article Content
Abstract
ಆಧುನಿಕ ಕನ್ನಡ ಸಾಹಿತಿಗಳಲ್ಲಿ ಆರ್.ಕೆ.ನಲ್ಲೂರು ಪ್ರಸಾದ್ರವರು ಒಬ್ಬರು. ಯಾವುದೇ ಒಂದು ಸಾಹಿತ್ಯಿಕ ಪಂಥಕ್ಕೆ ಸೀಮಿತರಾಗದ ಇವರು ಸಮನ್ವಯತೆಯಿಂದ ಕಾವ್ಯ ಕಟ್ಟುತ್ತಿರುವವರು. ಇವರು ಕವಿಯಾಗಿ, ಜಾನಪದ ವಿದ್ವಾಂಸರಾಗಿ, ಕಲಾವಿದರಾಗಿ, ಕನ್ನಡ ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿ, ವಿಚಾರವಾದಿಯಾಗಿ, ಸಂಸ್ಕೃತಿ ಚಿಂತಕರಾಗಿ, ಲೇಖಕರಾಗಿಯೂ ಗುರುತಿಸಲ್ಪಟ್ಟಿದ್ದಾರೆ. ಸಾಹಿತಿಯಾದವನಿಗೆ ತಾನು ಬದುಕುತ್ತಿರುವ ಸಮಾಜದ ಬಗ್ಗೆ ಸದಾಕಾಲ ಕೃತಜ್ಞತಾ ಭಾವವೇ ಇರುತ್ತದೆ. ಸಮಾಜದ ಪ್ರತಿಯೊಂದು ಆಗು-ಹೋಗುಗಳನ್ನು ಆತ ಸದಾ ತೆರೆದ ಹೃದಯದಿಂದ ಸ್ವೀಕರಿಸಿ, ಅನುಭವಿಸಿ ಅವುಗಳಿಗೆ ಅಭಿವ್ಯಕ್ತಿಸುತ್ತಾ ಬದುಕುತ್ತಾನೆ. ಅವನ ಅಭಿವ್ಯಕ್ತಿಯು ಮೌಖಿಕವಾಗಿ ಇಲ್ಲವೇ ಕಾರ್ಯರೂಪದಲ್ಲಿ ಅಭಿವ್ಯಕ್ತಿಸಲ್ಪಡುತ್ತದೆ. ಸಾಹಿತಿಯು ತಾನು ಕಂಡುಂಡ ಅನೇಕ ಘಟನೆಗಳಿಗೆ ಪ್ರತಿಕ್ರಿಯಿಸುತ್ತಲೇ ಇರುತ್ತಾನಾದರೂ ಆತನ ಕಾವ್ಯ ರಚನೆಗೆೆ ಪ್ರೇರಣೆ, ಪ್ರಭಾವಗಳಿರುವುದನ್ನು ಅಲ್ಲಗಳೆಯಲಾಗದು. ಈ ನಿಟ್ಟಿನಲ್ಲಿ ನಲ್ಲೂರರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ʼದಗ್ಧ, ಸೋನೆ ಮುಗಿಲು, ನೀನೆಂಬ ನಾನು, ರೆಕ್ಕೆ ಬಡಿಯುವ ಮುನ್ನ ಹಾಗೂ ನಿವೃತ್ತೋಪನಿಷತ್ತುʼ ಎಂಬ ಕವನ ಸಂಕಲನಗಳು ಸಹ ಮುಖ್ಯವಾದವುಗಳಾಗಿವೆ. ಈ ಎಲ್ಲಾ ಕವನ ಸಂಕಲನಗಳಲ್ಲಿ ಕಾವ್ಯ, ಸಮಾಜ, ಸಂಬಂಧಗಳು, ಸಾಹಿತ್ಯ, ಆಧ್ಯಾತ್ಮಿಕ ಹಾಗೂ ಭಾವನಾತ್ಮಕ ವಿಚಾರಗಳ ಒಳನೋಟಗಳನ್ನು ತೆರೆದಿಟ್ಟಿದ್ದಾರೆ. ಪ್ರಸ್ತುತ ಲೇಖನದಲ್ಲಿ ಇವರ ಪ್ರಥಮ ಕವನ ಸಂಕಲನವಾದ ʼನೀನೆಂಬ ನಾನುʼ ಕೃತಿಯಲ್ಲಿರುವ ಕವನಗಳಲ್ಲಿ ಅಭಿವ್ಯಕ್ತವಾಗಿರುವ ವಿಭಿನ್ನ ನೆಲೆಗಳನ್ನು ಅವಲೋಕಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಚಂದ್ರಪ್ಪ ಎನ್. (ಸಂ), (2010), ನಿಕಷ: ಭೂತದಿಂದ ಭವಿಷ್ಯದೆಡೆಗೆ ಸಾಗಿದ ನಲ್ಲೂರು ಪ್ರಸಾದ್ರವರ ಕಾವ್ಯ, ಮುಂಡ ಪ್ರಕಾಶನ, ಬೆಂಗಳೂರು, ಪು.ಸಂ. 31
ನಲ್ಲೂರು ಪ್ರಸಾದ್, (1977), ನೀನೆಂಬ ನಾನು, ಕೃಷಿ ಪ್ರಕಾಶನ, ಚನ್ನರಾಯಪಟ್ಟಣ, ಪು.ಸಂ. 20
ಅದೇ, ಪು.ಸಂ. 14-15
ಅದೇ, ಪು.ಸಂ. 14
ಅದೇ, ಪು.ಸಂ. 38
ಅದೇ, ಪು.ಸಂ. 3
ಅದೇ, ಪು.ಸಂ. 6
ಅದೇ, ಪು.ಸಂ. 28
ನಲ್ಲೂರು ಪ್ರಸಾದ್, 1977, ಪೂರ್ವೋಕ್ತ, ನಿನ್ನನ್ನು ಕುರಿತು, ಪುಟ.33
ಅದೇ, ಪು.ಸಂ. 26
ಅದೇ, ಪು.ಸಂ. 27
ಅದೇ, ಪು.ಸಂ. 30
ಅದೇ, ಪು.ಸಂ. 40
ಅದೇ, ಪು.ಸಂ. 43
ಅದೇ, ಪು.ಸಂ. 7
ಅದೇ, ಪು.ಸಂ. 25
ಅದೇ, ಪು.ಸಂ. 35
ಅದೇ, ಪು.ಸಂ. 9
ಅದೇ, ಪು.ಸಂ. 10
ಅದೇ, ಪು.ಸಂ. 32
ಅದೇ, ಪು.ಸಂ. 11
ಅದೇ, ಪು.ಸಂ. 19
ಅದೇ, ಪು.ಸಂ. 21
ಚಂದ್ರಪ್ಪ ಎನ್. (ಸಂ), (2010), ನಿಕಷ: ಭೂತದಿಂದ ಭವಿಷ್ಯದೆಡೆಗೆ ಸಾಗಿದ ನಲ್ಲೂರು ಪ್ರಸಾದ್ರವರ ಕಾವ್ಯ, ಮುಂಡ ಪ್ರಕಾಶನ, ಬೆಂಗಳೂರು, ಪು.ಸಂ. 85
ಅದೇ, ಪು.ಸಂ. 15