ಶಾಸನಗಳ ಹಿನ್ನಲೆಯಲ್ಲಿ 'ಆನೇಕಲ್ ತಾಲ್ಲೂಕು' ಒಂದು ಅವಲೋಕನ
Main Article Content
Abstract
ಕ್ರಿ.ಶ. 4ನೇ ಶತಮಾನದ ಐತಿಹಾಸಿಕ ದಾಖಲೆ ಹೊಂದಿರುವ ಆನೇಕಲ್ ತಾಲ್ಲೂಕಿನಲ್ಲಿ ಪ್ರಮುಖ ಶಾಸನಗಳು ಲಭ್ಯವಾಗಿವೆ. ಪ್ರಾಚೀನ ಆನೆಮಲೆ ಪ್ರದೇಶದ ಹುಲಿಕಲ್ಲು ಎಂಬ ಸ್ಥಳದಲ್ಲೇ ಆನೇಕಲ್ಲನ್ನು ಸ್ಥಾಪಿಸಲಾಯಿತೆಂಬ ವಿವರ ಆನೇಕಲ್ ಪಾಳೆಯಗಾರರ ಕೈಫಿಯತ್ತಿನಲ್ಲಿ ಗುರುತಿಸಲಾಗಿದೆ. ಕ್ರಿ.ಶ. 4ನೇ ಶತಮಾನದಿಂದ ಗಂಗರು, ಚೋಳರು, ಹೊಯ್ಸಳರು, ವಿಜಯನಗರದ ಅರಸರು, ಮೈಸೂರು ಅರಸರು, ಸುಗಟೂರು ಪಾಳೆಗಾರರು ತಾಲ್ಲೂಕಿನ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ. ಲಭ್ಯವಾಗಿರುವ ಪ್ರತಿಯೊಂದು ಶಾಸನಗಳು ಆನೇಕಲ್ ತಾಲ್ಲೂಕಿನ ಸಮಗ್ರ ದಾಖಲೆಗಳನ್ನು ಒದಗಿಸುವಲ್ಲಿ ಮಹತ್ವದ ಆಧಾರವನ್ನು ಒದಗಿಸಿವೆ ಎಂಬುದರ ಬಗ್ಗೆ ತಿಳಿಸುವ ಪ್ರಯತ್ನವೇ ಈ ಲೇಖನ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಕೃಷ್ಣಮೂರ್ತಿ ಪಿ. ವಿ. (1994), ಸುಗಟೂರು ವೀರಶೈವ ಅರಸ ಮನೆತನ. ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ. ಧಾರವಾಡ.
ಕೃಷ್ಣಮೂರ್ತಿ ಪಿ. ವಿ. (2018). ಆನೆನಾಡು. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು ನಗರ ಜಿಲ್ಲೆ.
ವಿಜಯ್ ಕುಮಾರ್ ಸಿ. ಆರ್. (2004). ಆನೇಕಲ್ ತಾಲ್ಲೂಕು ದರ್ಶನ ಶ್ರೀ ಗೀತಾಲಯ ಪ್ರಕಾಶನ, ಬೆಂಗಳೂರು.
ಸೂರ್ಯನಾಥ್ ಕಾಮತ್. (1995). ಇತಿಹಾಸ ದರ್ಶನ, ಕರ್ನಾಟಕ ಇತಿಹಾಸ ಅಕಾಡೆಮಿ. ಬೆಂಗಳೂರು.
ರೈಸ್ ಬಿ. ಎಲ್. (ಸಂ), (1905), ಎಫಿಗ್ರಾಫಿಯ ಕರ್ನಾಟಕ. ಪ್ರಾಚ್ಯ ವಸ್ತು ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು.