ನಿರ್ಮಾಪಕ ಜಯಣ್ಣ - ಬೊಗೇಂದ್ರ ಅವರ ಕನ್ನಡ ಪ್ರೇಮ

Main Article Content

ಶಿವರಾಜು ಎನ್‌.

Abstract

ಪಂಚ ದ್ರಾವಿಡ ಭಾಷೆಗಳಲ್ಲಿ ಕನ್ನಡ ಭಾಷೆಯು ಅತಿ ಪ್ರಾಚೀನ ಭಾಷೆಯಾಗಿದ್ದು, ಕನಿಷ್ಠ 2 ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಸರಿ ಸುಮಾರು 2 ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆ ಒಂದರ್ಥದಲ್ಲಿ ಅವನತಿಯ ಅಂಚಿನಲ್ಲಿದೆ. ಬೆಂಗಳೂರಿನಂತಹ ಮಹಾನಗರದಲ್ಲಿ ಕನ್ನಡಿಗರು ಭಾಷಿಕ ಅಲ್ಪಸಂಖ್ಯಾತರಾಗಿದ್ದಾರೆ. ಆಂಗ್ಲ ಮಾಧ್ಯಮದ ಪೈಪೊಟಿ, ಪರಭಾಷಿಕರ ಹಾವಳಿ, ಸರ್ಕಾರದ ಕಠಿಣ ನೀತಿ ನಿಯಮಗಳು, ಆಡಳಿತದಲ್ಲಿ ಕನ್ನಡ ಭಾಷೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಸರ್ಕಾರಗಳು ವಿಫಲವಾಗಿರುವುದು ಇತ್ಯಾದಿ ಕಾರಣಗಳಿಂದ ಕನ್ನಡ ಭಾಷೆ ಅಳಿವಿನಂಚಿನಲ್ಲಿದೆ. ಯಾವುದೇ ಒಂದು ಭಾಷೆಯ ಅಸ್ತಿತ್ವದ ಉಳಿವಿಗಾಗಿ ಶ್ರಮಿಸುವ ಮಾಧ್ಯಮಗಳ ಪೈಕಿ ದೃಶ್ಯ ಮಾಧ್ಯಮಗಳ ಪಾತ್ರ ಮಹತ್ವಪೂರ್ಣವಾದದ್ದು. ನಿರ್ಮಾಪಕ ಜಯಣ್ಣ-ಬೋಗೇಂದ್ರರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವ ಕೊಡುಗೆಯನ್ನು ಕುರಿತು ಬೆಳಕು ಚೆಲ್ಲುವುದು ನನ್ನ ಲೇಖನ ರಚನೆಯ ಹಿಂದಿನ ಉದ್ದೇಶ.

Article Details

Section

Essay

Author Biography

ಶಿವರಾಜು ಎನ್‌.

ಸಂಶೋಧನಾರ್ಥಿ, ಕುವೆಂಪು ಕನ್ನಡ ಅಧ್ಯಯನ ಕೇಂದ್ರ, ಕುಪ್ಪಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.

References

ಕುವೆಂಪು, ಸಮಗ್ರ ಕಾವ್ಯ ಸಂಪುಟ-01 (2016), ಉದಯರವಿ ಪ್ರಕಾಶನ, ಮೈಸೂರು

ಮುಖ್ಯಮಂತ್ರಿ ಚಂದ್ರು (ಸಂ), ಕರ್ನಾಟಕ ಏಕೀಕರಣಕ್ಕೆ ದುಡಿದ ಮಹನೀಯರು (2011). ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು

ಮೊಗಳ್ಳಿ ಗಣೇಶ (ಸಂ), ಕನ್ನಡ ಚಲನಚಿತ್ರ ಇತಿಹಾಸ: ಭಾಗ-01 (2011), ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ