ಆಧುನಿಕ ಕನ್ನಡ ಸಾಹಿತ್ಯ: ಸಂಶೋಧನೆಯ ಸವಾಲುಗಳು

Main Article Content

ಶಿವರಾಜು ಎನ್‌.

Abstract

ಮನುಷ್ಯ ಸಂಘ ಜೀವಿ. ಮನುಷ್ಯ ಸಮಾಜದ ನಿಕಟ ಸಂಪರ್ಕವಿಲ್ಲದೆ ಬಾಳಿ ಬದುಕಲಾರ. ಮನುಷ್ಯ ತನ್ನ ಸುಖೀ ಜೀವನಕ್ಕಾಗಿ ಹಲವಾರು ಸಂಶೋಧನೆಗಳನ್ನು ಮಾಡಿದ್ದಾನೆ. ಮನುಷ್ಯ ತನ್ನ ಮಿತಿಮೀರಿದ ಸಂಶೋಧನೆಗಳಿಂದ ಅವನತಿಯ ಹಾದಿಯನ್ನು ತಲುಪಿದ್ದಾನೆ. ಮಿತಿ ಮೀರಿದ ಸಂಶೋಧನೆಗಳಿಂದ ಸಾಕಷ್ಟು ರೋಗ, ರುಜಿನಗಳು ಹುಟ್ಟಿಕೊಂಡಿವೆ. ಪ್ರಪಂಚದ ಸಾಕಷ್ಟು ಕೃಷಿ ಭೂಮಿ ಮರುಭೂಮಿಯಾಗಿ ಪರಿವರ್ತನೆಯಾಗಿದೆ. ಪ್ರಪಂಚದ ಹಲವಾರು ನದಿಗಳು ತಮ್ಮ ಹರಿಯುವಿಕೆಯನ್ನು ನಿಲ್ಲಿಸಿವೆ. ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ನಿಜವಾದ ಸಂಶೋಧನೆಗಳಿಗೆ ಪ್ರೋತ್ಸಾಹವಿಲ್ಲ. ಪಿಹೆಚ್.ಡಿ. ಸಂಶೋಧಕರಿಗೆ ಮೀಸಲಾತಿ, ಸ್ವಜನಪಕ್ಷಪಾತ, ಭ್ರಷ್ಟಾಚಾರ ಇತ್ಯಾದಿ ಕಾರಣಗಳಿಂದ ಮಾರ್ಗದರ್ಶಕರು ಲಭ್ಯವಾಗುವುದಿಲ್ಲ. ಪ್ರತಿಭಾವಂತ ಸಂಶೋಧಕರಿಗೆ ಅವಕಾಶ ಸಿಗಬೇಕು. ಅಂತಹ ಸಂಶೋಧಕರು ಕೈಗೊಳ್ಳುವ ಸಂಶೋಧನೆಗಳಿಂದ ರಾಷ್ಟ್ರ ಪ್ರಗತಿಯ ಪಥದತ್ತ ಸಾಗಲಿ ಎಂಬುದು ಪ್ರಸ್ತುತ ಲೇಖನದ ಆಶಯ.

Article Details

Section

Research Articles

Author Biography

ಶಿವರಾಜು ಎನ್‌.

ಸಂಶೋಧನಾರ್ಥಿ, ಕುವೆಂಪು ಕನ್ನಡ ಅಧ್ಯಯನ ಕೇಂದ್ರ, ಕುಪ್ಪಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.

References

ಶಿರೂರ ಬಿ. ವಿ., ಸಂಶೋಧನಾ ಸ್ವರೂಪ (2015), ಅನ್ನಪೂರ್ಣ ಪ್ರಕಾಶನ, ಹುಬ್ಬಳಿ.

ತಾರಾನಾಥ ಎನ್. ಎಸ್. (ಸಂ), ಶತಮಾನದ ಸಂಶೋಧನೆ (2001), ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ಶ್ರೀನಿವಾಸ ಹಾವನೂರ ಹಾಗೂ ಹೋ. ರಾ. ಸತ್ಯನಾರಾಯಣರಾವ್ (ಸಂ), ಪುರಂದರದಾಸರ ಜನಪ್ರಿಯ ಕೀರ್ತನೆಗಳು (2008), ಅಂಕಿತ ಪುಸ್ತಕ, ಬೆಂಗಳೂರು.