ಕುವೆಂಪು ಅವರ ಸಾಲದ ಮಗು: ಮರು ಓದು

Main Article Content

ಶಿವರಾಜು ಎನ್‌.

Abstract

ರಾಷ್ಟ್ರಕವಿ ಕುವೆಂಪು ಅವರ ‘ಸಾಲದ ಮಗು’ ಕಥೆಯು ಸ್ವಾತಂತ್ರ್ಯಪೂರ್ವ ಹಾಗೂ ೧೯೪೦ರ ದಶಕದ ಮಲೆನಾಡಿನ ಜಮೀನ್ದಾರಿ ವ್ಯವಸ್ಥೆ ಮತ್ತು ಜೀತಪದ್ಧತಿಯ ಕರಾಳತೆಯನ್ನು ಎಳೆಎಳೆಯಾಗಿ ಬಿಚ್ಚಿಡುತ್ತದೆ. ತಂದೆ ಮಾಡಿದ ಸಾಲ ತೀರಿಸಲಾಗದೆ ಜೀತಕ್ಕೆ ನಿಲ್ಲುವ ಎಳೆಯ ಬಾಲಕ ಸುಬ್ಬನ ಬದುಕು, ಭೂಮಾಲೀಕ ಗೌಡರ ಕ್ರೌರ್ಯ, ಮತ್ತು ಶೋಷಣೆಗೆ ಬಲಿಯಾಗಿ ಕೃಷ್ಣಸರ್ಪದಿಂದ ಆತ ಸಾಯುವ ಹೃದಯವಿದ್ರಾವಕ ಚಿತ್ರಣ ಇಲ್ಲಿದೆ. ಜೀತಪದ್ಧತಿ ನಿಷೇಧಗೊಂಡಿದ್ದರೂ ಪ್ರಸ್ತುತ ಸಮಾಜದಲ್ಲಿ ಅದು ಬೇರೆ ಬೇರೆ ರೂಪಗಳಲ್ಲಿ ಜೀವಂತವಾಗಿದೆ ಎಂಬುದನ್ನು ಈ ಕಥೆಯು ಪ್ರಸ್ತುತಪಡಿಸುತ್ತದೆ. ಕಡುಬಡವರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಲಭಿಸುವಂತಾಗಬೇಕು ಮತ್ತು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಯಾಗಬೇಕು ಎಂಬ ಆಶಯವನ್ನು ಈ ಕೃತಿ ಧ್ವನಿಸುತ್ತದೆ.

Article Details

Section

Research Articles

Author Biography

ಶಿವರಾಜು ಎನ್‌.

ಸಂಶೋಧನಾರ್ಥಿ, ಕುವೆಂಪು ಕನ್ನಡ ಅಧ್ಯಯನ ಕೇಂದ್ರ, ಕುಪ್ಪಳ್ಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.

References

ಕುವೆಂಪು, ನನ್ನ ದೇವರು ಮತ್ತು ಇತರ ಕಥೆಗಳು, ಉದಯರವಿ ಪ್ರಕಾಶನ, ಮೈಸೂರು, ೧೯೯೩.

ನರಹಳ್ಳಿ ಬಾಲಸುಬ್ರಹ್ಮಣ್ಯ, ಕುವೆಂಪು ಕಥನ ಕೌತುಕ, ಅಭಿನವ ಪ್ರಕಾಶನ, ಬೆಂಗಳೂರು, ೨೦೧೮.

ಬೆಸಗರಹಳ್ಳಿ ರಾಮಣ್ಣ, ಕಣಜ, (ಡಾ. ಬೆಸಗರಹಳ್ಳಿ ರಾಮಣ್ಣ ಸಮಗ್ರ ಕಥನ) ಲೋಹಿಯಾ ಪ್ರಕಾಶನ, ಬಳ್ಳಾರಿ, ೨೦೧೨.