ನೃತ್ಯಸರಸ್ವತಿ ಕಾದಂಬರಿಯ ಶಾಂತಲೆ
Main Article Content
Abstract
ವೈ.ಕೆ. ಸಂಧ್ಯಾ ಶರ್ಮ ವಿರಚಿತ ‘ನೃತ್ಯಸರಸ್ವತಿ’ ಐತಿಹಾಸಿಕ ಕಾದಂಬರಿಯು ಹೊಯ್ಸಳ ದೊರೆ ವಿಷ್ಣುವರ್ಧನನ ಪಟ್ಟದರಸಿ ‘ಶಾಂತಲೆ’ಯ ಬದುಕಿನ ಉತ್ಕರ್ಷ ಮತ್ತು ಅಪಕರ್ಷಗಳ ರೋಚಕ ಕಥನವಾಗಿದೆ. ಶ್ರವಣಬೆಳಗೊಳದ ಬೋಕಿಮಯ್ಯನ ಶಾಸನದ ಪ್ರಧಾನತೆಯ ಮೇಲೆ ರೂಪುಗೊಂಡ ಈ ಕೃತಿಯು, ಶಾಂತಲೆಯ ಅದ್ಭುತ ನೃತ್ಯಪ್ರತಿಭೆ, ಆಡಳಿತಾತ್ಮಕ ಜಾಣ್ಮೆ, ವಾಸ್ತುಶಿಲ್ಪದ ಮೇಲಿನ ಒಲವು ಹಾಗೂ ಸರ್ವಧರ್ಮ ಸಮನ್ವಯತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಒಬ್ಬ ಅಪ್ರತಿಮ ರಾಣಿಯಾಗಿ ಸಾಮ್ರಾಜ್ಯವನ್ನು ಮುನ್ನಡೆಸಿದರೂ, ಸಾಮಾನ್ಯ ಹೆಣ್ಣಾಗಿ ಆಕೆ ಅನುಭವಿಸಿದ ಮಾನಸಿಕ ತುಮುಲಗಳು ಇಲ್ಲಿ ಪ್ರಮುಖವಾಗಿವೆ. ಸವತಿಯ ಮತ್ಸರ, ಪ್ರೀತಿಯ ಪುತ್ರನ ಸಾವು ಹಾಗೂ ಪತಿಯ ನಿರ್ಲಕ್ಷ್ಯದಿಂದ ನೊಂದ ಶಾಂತಲೆಯು ಶಿವಗಂಗೆಯಲ್ಲಿ ಸಲ್ಲೇಖನ ವ್ರತಕ್ಕೆ ಮುಂದಾಗುವ ಅಂತರಂಗದ ಸಂಘರ್ಷವನ್ನು ಕೃತಿ ಮಾರ್ಮಿಕವಾಗಿ ಸೆರೆಹಿಡಿದಿದೆ. ಹೊಯ್ಸಳರ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವೈಭವವನ್ನು ಮಹಿಳಾ ಪ್ರಧಾನ ದೃಷ್ಟಿಕೋನದಿಂದ ವಿಶ್ಲೇಷಿಸಿರುವುದು ಗಮನಾರ್ಹವಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಸಂಧ್ಯಾ ಶರ್ಮ ವೈ.ಕೆ., (2022), ನೃತ್ಯಸರಸ್ವತಿ, ಮೈಸೂರು: ಭಾರತೀ ಪ್ರಕಾಶನ.