ವಚನಸಾಹಿತ್ಯ
Main Article Content
Abstract
12ನೇ ಶತಮಾನದ ಆದ್ಯ ವಚನಕಾರರಾದ ದೇವರದಾಸಿಮಯ್ಯನವರ ಬದುಕು, ವ್ಯಕ್ತಿತ್ವ ಮತ್ತು ಸಾಹಿತ್ಯ ಕೃಷಿಯನ್ನು ಇಲ್ಲಿ ಸಂಕ್ಷಿಪ್ತವಾಗಿ ಪರಿಚಯಿಸಲಾಗಿದೆ. ಸುರಪುರದ ಮುದನೂರು ಇವರ ಜನ್ಮಸ್ಥಳವಾಗಿದ್ದು, ನೆಯ್ದೆ ಇವರ ಕಾಯಕವಾಗಿತ್ತು. ಇವರು "ರಾಮನಾಥ" ಎಂಬ ಅಂಕಿತನಾಮದಲ್ಲಿ ರಚಿಸಿದ ವಚನಗಳು ಭಕ್ತಿ, ಕಾಯಕನಿಷ್ಠೆ ಮತ್ತು ಸಾಮಾಜಿಕ ಕಳಕಳಿಯ ಪ್ರತೀಕವಾಗಿವೆ. ಕಪಟ ಭಕ್ತಿಯನ್ನು ಖಂಡಿಸಿ, ಅರಿವು ಮತ್ತು ಆಚಾರಗಳ ಮಹತ್ವವನ್ನು ಇವರು ಸಾರಿದ್ದಾರೆ. ಇವರ ವಚನಗಳಲ್ಲಿನ ಆಡುಮಾತಿನ ಸೊಗಸು ಮತ್ತು ಅರ್ಥಶ್ರೀಮಂತಿಕೆಯನ್ನು ವಿಶ್ಲೇಷಿಸುತ್ತಾ, ಬಸವಣ್ಣನವರಂತಹ ಸಮಕಾಲೀನ ಶರಣರು ದಾಸಿಮಯ್ಯನವರ ಭಕ್ತಿಯನ್ನು ಹೇಗೆ ಪ್ರಶಂಸಿಸಿದ್ದಾರೆ ಎಂಬುದನ್ನು ವಿವರಿಸಲಾಗಿದೆ. ಜಂಗಮ ಮತ್ತು ಪ್ರಕೃತಿಯ ನಡುವಿನ ಸಂಬಂಧ, ಹಾಗೂ ಸತಿ-ಪತಿಗಳ ಅನ್ಯೋನ್ಯತೆಯ ಕುರಿತಾದ ದಾಸಿಮಯ್ಯನವರ ತಾತ್ವಿಕ ನಿಲುವುಗಳನ್ನು ಲೇಖನವು ಎತ್ತಿ ತೋರಿಸುತ್ತದೆ.
Article Details
Issue
Section
Research Articles

This work is licensed under a Creative Commons Attribution-NonCommercial-ShareAlike 4.0 International License.
References
ಡಾ.ಎಚ್. ತಿಪ್ಪೇರುದ್ರಸ್ವಾಮಿ: ಕರ್ನಾಟಕ ಸಂಸ್ಕೃತಿ ಸಮೀಕ್ಷೆ-2018.
ಮರುಳಸಿದ್ದಪ್ಪ, ಕಿ.ರಂ. ನಾಗರಾಜ: ವಚನಕಮ್ಮಟ -2017.
ಹಾ. ಮಾ. ನಾ. (ಸಂ) ಕರ್ನಾಟಕ ವಿಷಯ ವಿಶ್ವಕೋಶ- 1979.
ವಚನ ಸಂಪುಟಗಳು, ಕರ್ನಾಟಕ ಸರ್ಕಾರ ಬೆಂಗಳೂರು.