ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರಗಳ ಕೊಂಡಿ ನಾಗತಿಹಳ್ಳಿ ಚಂದ್ರಶೇಖರ್

Main Article Content

ಡಾ. ಶಿವಕುಮಾರ ಸಿ.

Abstract

ಕನ್ನಡ ಸಾಹಿತ್ಯ ಮತ್ತು ಸಿನಿಮಾರಂಗದ ನಡುವೆ ಭದ್ರವಾದ ಸಾಂಸ್ಕೃತಿಕ ಸೇತುವೆ ನಿರ್ಮಿಸಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರ ಬಹುಮುಖಿ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಕಥೆ, ಕಾದಂಬರಿ, ಅಂಕಣ ಹಾಗೂ ಪ್ರವಾಸ ಕಥನಗಳ ಮೂಲಕ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಇವರು, ಕಲಾತ್ಮಕ ಮತ್ತು ವಾಣಿಜ್ಯ ಚಿತ್ರಗಳ ನಡುವಿನ ಗೆರೆ ಅಳಿಸಿ ಸದಭಿರುಚಿಯ ನಿರ್ದೇಶಕರಾಗಿ ಜನಮನ್ನಣೆ ಗಳಿಸಿದ್ದಾರೆ. ಕೇವಲ ಕಲಾತ್ಮಕ ಸೃಜನಶೀಲತೆಗೆ ಮಾತ್ರ ಸೀಮಿತವಾಗದೆ, ‘ಅಭಿವ್ಯಕ್ತಿ’ ವೇದಿಕೆ ಹಾಗೂ ‘ಟೆಂಟ್ ಸಿನಿಮಾ’ ಮೂಲಕ ಹೊಸ ಪ್ರತಿಭೆಗಳನ್ನು ರೂಪಿಸುತ್ತಿದ್ದಾರೆ. ಕೀರ್ತಿಯ ಉತ್ತುಂಗದಲ್ಲಿದ್ದರೂ ತಮ್ಮ ಹುಟ್ಟೂರಿನಲ್ಲಿ ‘ಸಂಸ್ಕೃತಿ ಹಬ್ಬ’ ಆಯೋಜಿಸುವ ಮೂಲಕ ಗ್ರಾಮಮುಖಿ ಚಳವಳಿ, ಪರಿಸರ ಪ್ರಜ್ಞೆ ಹಾಗೂ ರೈತರ ಸ್ವಾವಲಂಬನೆಗೆ ಶ್ರಮಿಸುತ್ತಿದ್ದಾರೆ. ಎಷ್ಟೇ ಎತ್ತರಕ್ಕೆ ಬೆಳೆದರೂ ನೆಲದ ನಂಟನ್ನು ಬಿಡದ ಅವರ ‘ಬೇರು-ರೆಕ್ಕೆ’ ತತ್ವ ಹಾಗೂ ಸಮಾಜಮುಖಿ ಕಾರ್ಯಗಳು ಯುವ ಪೀಳಿಗೆಗೆ ಹೇಗೆ ದಿಕ್ಸೂಚಿಯಾಗಿವೆ ಎನ್ನುವುದನ್ನು ಸಮಗ್ರವಾಗಿ ವಿಶ್ಲೇಷಿಸಲಾಗಿದೆ.

Article Details

Section

Research Articles

Author Biography

ಡಾ. ಶಿವಕುಮಾರ ಸಿ.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕ್ಯಾತನಹಳ್ಳಿ, ಪಾಂಡವಪುರ, ಮಂಡ್ಯ.

How to Cite

ಶಿವಕುಮಾರ ಸಿ. (2026). ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರಗಳ ಕೊಂಡಿ ನಾಗತಿಹಳ್ಳಿ ಚಂದ್ರಶೇಖರ್. ಅಕ್ಷರಸೂರ್ಯ (AKSHARASURYA), 17(05), 178 to 186. https://aksharasurya.com/index.php/latest/article/view/2357

References

Most read articles by the same author(s)