ಕವಿಯನ್ನು ರೂಪಿಸಿದ ಪರಿಸರ...

Main Article Content

ಸಿದ್ಧಲಿಂಗಯ್ಯ
ಶ್ರೀಧರ್ ಆರ್.

Abstract

“ನನ್ನ ಬದುಕಿನ ಹಿನ್ನೆಲೆಯನ್ನು ನೆನೆಸಿಕೊಂಡರೆ ನಾನು ಯಾರೋ ಭೂಮಾಲೀಕರ ಮನೆಯ ಜೀತಗಾರನಾಗಿಯೋ, ಬೆಂಗಳೂರಿನ ಯಾವುದಾದರೂ ಗಿರಣಿಯ ಕಾರ್ಮಿಕನಾಗಿಯೋ ಇರಬೇಕಾಗಿತ್ತು. ಆದರೆ ಕೂದಲೆಳೆಯ ಅಂತರದಲ್ಲಿ ಪಾರಾದ ನಾನು ಅನೇಕರ ಸಹಾನುಭೂತಿ, ಪ್ರೀತಿ, ಕರುಣೆಯಿಂದ ಕವಿಯಾಗಿದ್ದೇನೆ, ಲೇಖಕನಾಗಿದ್ದೇನೆ.
ನಾನು ನನ್ನ ಹಿನ್ನೆಲೆಯನ್ನು ಮರೆಯದೆ ಜೀತಗಾರರು, ಕೂಲಿಕಾರರು, ರೈತರು, ಕಾರ್ಮಿಕರು ಮತ್ತು ಜಾತೀಯತೆ, ಅಸ್ಪೃಶ್ಯತೆಯ ಕಾರಣದಿಂದ ನೊಂದ ಜೀವಿಗಳ ಪರವಾದ ನಿಲುವನ್ನು ರೂಢಿಸಿಕೊಂಡೆ. ಆದ್ದರಿಂದ ನನ್ನ ಸಾಹಿತ್ಯ ವಿಭಿನ್ನ ಮಾರ್ಗದಲ್ಲಿ ಮುನ್ನಡೆಯಲು ಕಾರಣವಾಯಿತು.”
ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಗೊಂಡಿರುವ ‘ಡಾ. ಸಿದ್ಧಲಿಂಗಯ್ಯ: ಸಮಗ್ರ ಸಾಹಿತ್ಯ’ ಸಂಪುಟಗಳ (2018) ಲೇಖಕರ ಮಾತಿನಲ್ಲಿ ಈ ಸಾಲುಗಳನ್ನು ಓದುಗರು ಗಮನಿಸಿರಬಹುದು.‌ ಆಧುನಿಕ ಕನ್ನಡ ಸಾಹಿತ್ಯ ಹಾಗೂ ದಲಿತ ಚಳವಳಿಗೆ ತಮ್ಮ ಹೋರಾಟದ ಹಾಡುಗಳ ಮೂಲಕ ಜೀವತುಂಬಿದ ಕವಿ ತಾನು ಹುಟ್ಟಿದ ಊರಿನ ಪರಿಸರದಿಂದ ಪ್ರೇರಣೆಗೊಂಡು ಹಾಗೂ ಆತನ ಸಂವೇದನೆಯ ಅಖಂಡ ಸ್ಥಿತಿಯಾದ ಬಾಲ್ಯಕಾಲದ ವಿಶಿಷ್ಟ ಅನುಭವಗಳು ಮತ್ತು ವಿಮೋಚನಾ ಹೋರಾಟಗಳ ಮೂಲಕ ತನ್ನ ಅಭಿವ್ಯಕ್ತಿಯಲ್ಲಿ ಕಂಡುಕೊಂಡ ಸೃಜನಶೀಲ ಅನುಸಂಧಾನವನ್ನು ನಾವಿಲ್ಲಿ ಕಾಣಬಹುದು.

Article Details

Section

Byway

Author Biography

ಶ್ರೀಧರ್ ಆರ್.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಾಗಡಿ, ರಾಮನಗರ.

 

References

ಡಾ. ಸಿದ್ಧಲಿಂಗಯ್ಯ (ಸಮಗ್ರ ಸಾಹಿತ್ಯ: ಸಂಪುಟ-3, ಸಾಹಿತ್ಯ- ಸಂಸ್ಕೃತಿ- ಸಮಾಜ, 2018). ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು. ಪುಟ ಸಂಖ್ಯೆ: 533-535