ಕನ್ನಡ ನಾಡು-ನುಡಿ-ಜಲದ ಅಸ್ಮಿತೆ

Main Article Content

ಪ್ರವೀಣ್ ಕುಮಾರ್ ಎಸ್.

Abstract

ಕನ್ನಡ ನಾಡು ನುಡಿ ಮತ್ತು ಸಂಸ್ಕೃತಿಯ ಬಗೆಗೆ ಇಂದು ಪ್ರತಿಯೊಬ್ಬರು ಆಲೋಚಿಸಬೇಕಿದೆ. ಕನ್ನಡ ಸಾಹಿತ್ಯದ ಕವಿಗಳಾದ ಶ್ರೀ ವಿಜಯ, ಪಂಪ, ಆಂಡಯ್ಯ, ನಯಸೇನ ಹಾಗೂ ಹೊಸಗನ್ನಡದ ಸಂದರ್ಭದ ಕವಿಗಳಾದ ಬಿ.ಎಂ.ಶ್ರೀ., ತೀ.ನಂ.ಶ್ರೀ., ಆನಂದಕಂದ, ಕುವೆಂಪು, ವಿ.ಸೀತಾರಾಮಯ್ಯ ಮೊದಲಾದವರು ನಾಡಿನ ಕುರಿತಾಗಿ ನುಡಿಯ ಕುರಿತಾಗಿ ಅಭಿಮಾನವನ್ನು ಹಾಗೂ ಕನ್ನಡದ ಸ್ಥಿತಿಯನ್ನು ಕುರಿತು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ನಾಡಿನ ಏಕೀಕರಣ, ಭಾಷಾ ವರ್ಗೀಕರಣ, ಪ್ರಾಂತ್ಯ ವಿಭಜನೆ, ಕನ್ನಡಿಗರಲ್ಲಿನ ಒಗ್ಗಟ್ಟಿನ ಕೊರತೆ ಮೊದಲಾದವುಗಳ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿ ಕನ್ನಡದ ಅಸ್ತಿತ್ವಕ್ಕಾಗಿ ಶ್ರಮಿಸುವಂತೆ ಕನ್ನಡಿಗರನ್ನು ಎಚ್ಚರಿಸುತ್ತಾರೆ.


 

Article Details

Section

Research Articles

Author Biography

ಪ್ರವೀಣ್ ಕುಮಾರ್ ಎಸ್.

ಕನ್ನಡ ಸಹಾಯಕ ಪ್ರಾಧ್ಯಾಪಕರು, ಸಮಾಜ ವಿಜ್ಞಾನ ಮತ್ತು ಮಾನವಿಕ ಶಿಕ್ಷಣ ವಿಭಾಗ, ಪ್ರಾದೇಶಿಕ ಶಿಕ್ಷಣ ಸಂಸ್ಥೆ, ಎನ್.ಸಿ.ಇ.ಆ‌ರ್.ಟಿ., ಮೈಸೂರು.

References

ಕೇಶವ ಮೂರ್ತಿ ಎಚ್. ಎಲ್. (2007). ಕಾವೇರಿ ತೀರ್ಪು ಅನ್ಯಾಯ ಎಲ್ಲಿ. ಅಭಿರುಚಿ ಪ್ರಕಾಶನ, ಮೈಸೂರು.

ಅಭಿರುಚಿ ಗಣೇಶ್ (ಸಂ), (2012). ಅಖಂಡ ಕರ್ನಾಟಕದ ಕೋ.ಚೆ. ಅಭಿರುಚಿ ಪ್ರಕಾಶನ. ಮೈಸೂರು.

ಸಿದ್ದರಾಮಯ್ಯ ಎಸ್. ಜಿ. (2019). ಕನ್ನಡ ಭಾಷೆ-ಬದುಕು. ನವ ಕರ್ನಾಟಕ ಪ್ರಕಾಶನ. ಬೆಂಗಳೂರು.

ಕನ್ನಡದ ಭಾವುಟ. (1979), ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.

ಜಯಕುಮಾ‌ರ್ ಅನಗೋಳ್. (2011). ಕಡ್ಡಾಯದ ಪ್ರಾಥಮಿಕ ಶಿಕ್ಷಣ. ನವ ಕರ್ನಾಟಕ ಪ್ರಕಾಶನ, ಬೆಂಗಳೂರು.