ಕನ್ನಡದ ಕೆಲವು ಅಪರೂಪದ ಕವಿತೆಗಳು

Main Article Content

ಪ್ರವೀಣ್ ಕುಮಾರ್ ಎಸ್.

Abstract

ಹೊಸಗನ್ನಡದ ಭಾವಗೀತೆಗಳಲ್ಲಿ ಅಷ್ಟೇನು ಪರಿಚಿತವಿರದ ಕೆಲವು ಕವಿತೆಗಳ ಮಹತ್ವವನ್ನು ಚರ್ಚಿಸುವ ಉದ್ದೇಶವಿದೆ. ಇಲ್ಲಿ ಕೆ. ಎಸ್. ನರಸಿಂಹಸ್ವಾಮಿ, ದ. ರಾ. ಬೇಂದ್ರೆ, ಕುವೆಂಪು, ಅಡಿಗರ ಕವಿತೆಗಳ ಕೆಲವು ಸಾಲಗಳನ್ನು ಉಲ್ಲೇಖ ನೀಡಲಾಗಿದೆ. ಪ್ರಕೃತಿಯ ಮಹತ್ವವನ್ನು ಸಾರುವ ಕವಿತೆಗಳನ್ನು ಓದುಗರಿಗೆ ಪರಿಚಯಿಸುವ ಮೂಲಕ ಭಾವಗೀತೆಗಳ ಹಿರಿಮೆಯನ್ನು ಪರಿಚಯಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಬದಲಾದ ಸಾಮಾಜಿಕ ಸಂದರ್ಭಗಳಲ್ಲಿ ವ್ಯಕ್ತಿಯನ್ನು ಮನುಷ್ಯನನ್ನಾಗಿಸುವಲ್ಲಿ ಕಲೆ, ಸಾಹಿತ್ಯ, ಸಂಗೀತ ಪ್ರಮುಖವಾಗುತ್ತವೆ. ಆದರೆ, ಅತ್ಯಂತ ಅಮುಲ್ಯವಾದ ಹಲವು ಕವಿತೆಗಳು ನಾನಾ ಕಾರಣಗಳಿಗಾಗಿ ಶಾಲಾ, ಕಾಲೇಜು, ವಿಶ್ವವಿದ್ಯಾನಿಯಲಗಳ ಪಠ್ಯಗಳಲ್ಲಿ ಸೇರದಿರುವುದು ದುರಂತ.


 

Article Details

Section

Research Articles

Author Biography

ಪ್ರವೀಣ್ ಕುಮಾರ್ ಎಸ್.

ಕನ್ನಡ ಸಹಾಯಕ ಪ್ರಾಧ್ಯಾಪಕರು, ಸಮಾಜವಿಜ್ಞಾನ ಮತ್ತು ಮಾನವಿಕ ಶಿಕ್ಷಣ ವಿಭಾಗ, ಪ್ರಾದೇಶಿಕ ಶಿಕ್ಷಣ ಸಂಸ್ಥೆ, ಎನ್.ಸಿ.ಇ.ಆ‌ರ್.ಟಿ., ಮೈಸೂರು.

References

ವಿಠಲರಾವ್ ಗಾಯಕ್ವಾಡ್. (2002), ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ. ಚೇತನ ಬುಕ್ ಹೌಸ್, ಮೈಸೂರು.

ಬರಗೂರು ರಾಮಚಂದ್ರಪ್ಪ (ಸಂ). (2017). ಕನ್ನಡ ಸಾಹಿತ್ಯ ಸಂಗಾತಿ, ಕರ್ನಾಟಕ ಸಾಹಿತ್ಯ ಆಕಾಡೆಮಿ, ಬೆಂಗಳೂರು.

ನಾಯಕ್ ಜಿ. ಎಚ್. (ಸಂ). (2017), ಹೊಸಗನ್ನಡ ಕವಿತೆ, ಅಭಿನವ ಪ್ರಕಾಶನ, ಬೆಂಗಳೂರು.

ನಾಗರಾಜ್ ಡಿ. ಆರ್. (2013), ಶಕ್ತಿಶಾರದೆಯ ಮೇಳ. ಅಕ್ಷರ ಪ್ರಕಾಶನ. ಸಾಗರ.

ನಟರಾಜ ಬೂದಾಳು. (2016). ಕನ್ನಡ ಕಾವ್ಯಮೀಮಾಂಸೆ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.