ಆಧುನಿಕ ವಚನಕಾರರ ವಚನಗಳಲ್ಲಿ ಸಾಮಾಜಿಕ ವಿಚಾರಗಳು
Main Article Content
Abstract
ಆಧುನಿಕ ಯುಗದಲ್ಲೂ ಶರಣರ ಜಾಡನ್ನು ಹಿಡಿದು 20ನೇ ಶತಮಾನದಲ್ಲಿ ಆಧುನಿಕ ಕನ್ನಡ ವಿದ್ವಾಂಸರು ಪ್ರಸ್ತುತ ಸಮಾಜವನ್ನು ತಿದ್ದುವ ಪ್ರಯತ್ನದಲ್ಲಿ ತಮ್ಮದೇ ಆದ ವಿಚಾರಗಳನ್ನು ವಚನ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಆಧುನಿಕ ವಚನಗಳು ಯಾರ ಹಂಗಿಲ್ಲದೆ, ನೇರವಾಗಿ, ಕಿರಿದಾಗಿ ಹೇಳುವ ಸಾಮರ್ಥ್ಯ ಪಡೆದಿವೆ. ಅಂದಿನ ನಡುಗನ್ನಡ ವಚನಕಾರರಂತೆ ಇಂದಿನ ಹೊಸಗನ್ನಡ ವಚನಕಾರರು ತಮ್ಮ ವಚನದ ಕೊನೆಗೆ ಅಂಕಿತನಾಮವಾಗಿ ತಮ್ಮದೇ ನಾಮಧೇಯ, ಇಷ್ಟದೈವ ಅಥವಾ ಇನ್ಯಾವುದೋ ಕುರುಹನ್ನು ಬಳಸಿಕೊಂಡಿರುವುದುಂಟು. ಇಬ್ಬರ ಆಶಯಗಳು ಜನಮುಖಿ ಮತ್ತು ಜೀವನಮುಖಿಯಾಗಿವೆ. ಸಮಾಜ ಪರಿವರ್ತನೆಗೆ ಬೇಕಾಗುವ ಗುಣಗಳಲ್ಲಿ ಸಮೃದ್ಧವಾಗಿ ಕಂಡುಬರುವ ದೈವೀಶ್ರದ್ಧೆ, ಶ್ರಮದ ದುಡಿಮೆ, ಗುಣದೋಷಗಳ ವಿಮರ್ಶೆ, ಆತ್ಮನಿರೀಕ್ಷೆ, ಜೀವನ ಪ್ರೀತಿ, ಉಪಕಾರ ಸ್ಮರಣೆ, ನಿಸರ್ಗ ನಂಬಿಕೆ, ಪ್ರಾಮಾಣಿಕತೆ, ವಿಚಾರಶೀಲತೆ, ಮನೋವೈಶಾಲ್ಯತೆ, ಸಭ್ಯತೆ ಇತ್ಯಾದಿ ಅಂಶಗಳನ್ನು ವಚನಗಳಲ್ಲಿ ಕಾಣುತ್ತೇವೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಅಪ್ಪಾಸಾಹೇಬ ಅಲಿಬಾದಿ, (2012), ವಚನೋಲ್ಲಾಸ, ಅಥಣಿ: ವಿನೂತನ ಪ್ರಕಾಶನ.
ಚಿದಾನಂದ ಮೂರ್ತಿ ಎಂ., (2000), ವಚನ ಸಾಹಿತ್ಯ, ಬೆಂಗಳೂರು: ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾನಿಲಯ.
ಪಲ್ಲವಿ ಪಾಟೀಲ, (2022), ವಚನ ಪಲ್ಲವಿ, ಬಸವಕಲ್ಯಾಣ: ಪಲ್ಲವಿರಾಜ್ ಪ್ರಕಾಶನ.
ಸೋಮನಾಥ ಯಾಳವಾರ, (2017), ಆಧುನಿಕ ವಚನಕಾರರು ಹಾಗೂ ಸಾಹಿತ್ಯ ಚಿಂತನೆ, ಕಲಬುರಗಿ: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ.
ವಿಜಯರೂಪ ತಂಬಾಕದ, (2018), ವಚನಧಾರೆ, ಮೈಸೂರು: ಕಣಿವೆ ಪ್ರಕಾಶನ.
ಶೇಖರಯ್ಯ ಟಿ.ಹೆಚ್.ಎಂ., (2021), ವಚನಸಿರಿ, ಗೆದ್ದಲಕಟ್ಟೆ: ವಿಶ್ವಾಸ ಕಣಿವೆ ಪ್ರಕಾಶನ.
ಸುಭಾಷ ಹರ್ವಾಪೂರ, (2014), ಸುದರ್ಶನಪ್ರಿಯನ ವಚನಗಳು, ಹರ್ವಾಪೂರ: ಸುದರ್ಶನ ಪ್ರಕಾಶನ.