ಪೂಜ್ಯ ಸ್ವಾಮಿ ರೇಮಂಡರ ಸಾಹಿತ್ಯದಲ್ಲಿ ಧಾರ್ಮಿಕ ಚಿಂತನೆ-ಪ್ರಾರ್ಥನೆ
Main Article Content
Abstract
ಪೂಜ್ಯ ಫಾ. ರೇಮಂಡ್ ಅವರ ಆಧ್ಯಾತ್ಮಿಕ ಚಿಂತನೆಗಳಲ್ಲಿ ‘ಪ್ರಾರ್ಥನೆ’ಯು ಕೇವಲ ಭೌತಿಕ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಸಾಧನವಾಗಿರದೆ, ಪರಮಾತ್ಮನೊಂದಿಗೆ ಜೀವಂತ ಸಂಬಂಧವನ್ನು ಬೆಸೆಯುವ ಆಂತರಿಕ ಪರಿವರ್ತನೆಯ ಮಾರ್ಗವಾಗಿದೆ. ಕರ್ತವ್ಯನಿಷ್ಠೆ, ತ್ಯಾಗ ಮತ್ತು ಸೇವಾಭಾವಗಳ ಸಮನ್ವಯವಾಗಿರುವ ಪ್ರಾರ್ಥನೆಯು ಮನುಷ್ಯನ ಆತ್ಮಪರಿಶೀಲನೆ ಹಾಗೂ ದೇವರ ಪವಿತ್ರ ಚಿತ್ತಕ್ಕೆ ಸಂಪೂರ್ಣವಾಗಿ ಶರಣಾಗುವ ಪ್ರಕ್ರಿಯೆಯಾಗಿದೆ. ಮನಸ್ಸಿನ ಚಂಚಲತೆ, ಪ್ರಲೋಭನೆ, ನಿದ್ರಾಮಗ್ನತೆ ಹಾಗೂ ಆಧ್ಯಾತ್ಮಿಕ ನಿರಾಶೆಯಂತಹ ಸಹಜ ಅಡಚಣೆಗಳನ್ನು ಆತ್ಮನಿಗ್ರಹ ಮತ್ತು ನಂಬಿಕೆಯಿಂದ ಜಯಿಸಿದಾಗ ಮಾತ್ರ ಭಕ್ತಿಯು ಪರಿಪಕ್ವವಾಗುತ್ತದೆ. ದೈವಿಕ ಸಾಂತ್ವನವಿರಲಿ ಅಥವಾ ಆಧ್ಯಾತ್ಮಿಕ ಬರಡುತನವಿರಲಿ, ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ ಅಚಲ ನಿಷ್ಠೆಯಿಂದ ಪ್ರಾರ್ಥನೆಯಲ್ಲಿ ಮುಂದುವರಿಯುವುದೇ ನಿಜವಾದ ಸಮರ್ಪಣೆ. ವ್ಯಕ್ತಿತ್ವ ನಿರ್ಮಾಣ, ವಿನಯಶೀಲತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವಲ್ಲಿ ಪ್ರಾರ್ಥನೆಯು ನಿರ್ವಹಿಸುವ ಮಹತ್ವದ ಪಾತ್ರವನ್ನು ರೇಮಂಡರ ಬೋಧನೆಗಳ ಹಿನ್ನೆಲೆಯಲ್ಲಿ ಇಲ್ಲಿ ವಿಶ್ಲೇಷಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಭಗಿನಿ ಬರ್ತಾ, (1943-1949), ಸಂಸ್ಥಾಪಕರ ವಚನಗಳು, ಮಂಗಳೂರು: ಬೆಥನಿ ಪ್ರಕಾಶನ.
ಬೈಬಲ್ ಸೊಸೈಟಿ ಆಫ್ ಇಂಡಿಯಾ, (1993), ಪವಿತ್ರ ಬೈಬಲ್ ಹಳೆಯ ಮತ್ತು ಹೊಸ ಒಡಂಬಡಿಕೆಗಳು ಮತ್ತಿತರ ಅನುಗ್ರಂಥಗಳು, ಬೆಂಗಳೂರು: ಬೈಬಲ್ ಸೊಸೈಟಿ ಆಫ್ ಇಂಡಿಯಾ.
ಕಥೋಲಿಕ ಚರ್ಚ್, (1994), ಕಥೋಲಿಕ ಚರ್ಚಿನ ಧರ್ಮಶಿಕ್ಷಣ (Catechism of the Catholic Church), ಬೆಂಗಳೂರು: ಥಿಯೋಲಾಜಿಕಲ್ ಪಬ್ಲಿಕೇಶನ್ ಇನ್ ಇಂಡಿಯಾ.
ಎರಡನೇ ವ್ಯಾಟಿಕನ್ ಮಹಾಸಭೆ, (1966), (Perfectae Caritatis)-ಧಾರ್ಮಿಕ ಜೀವನದ ನವೀಕರಣದ ಕುರಿತು ಆದೇಶ, ವ್ಯಾಟಿಕನ್ ಸಿಟಿ: ವ್ಯಾಟಿಕನ್ ಮುದ್ರಣಾಲಯ.