ಅಂಬೇಡ್ಕರ್ ಎಂಬ ಅಮರ ವ್ಯಕ್ತಿತ್ವ

Main Article Content

ಡಾ. ಶಿವಲಿಂಗೇಗೌಡ ಡಿ.

Abstract

ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಕೇವಲ ಸಂವಿಧಾನ ಶಿಲ್ಪಿ ಅಥವಾ ಸೀಮಿತ ಚೌಕಟ್ಟಿನ ದಲಿತ ನಾಯಕರನ್ನಾಗಿ ಬಿಂಬಿಸುವ ಪ್ರವೃತ್ತಿಯನ್ನು ಮೀರಿ, ಅವರೊಬ್ಬ ಕ್ರಾಂತಿಕಾರಿ, ಆರ್ಥಿಕ ತಜ್ಞ ಹಾಗೂ ಬಹುಮುಖಿ ವಿದ್ವಾಂಸ ಎಂಬುದನ್ನು ಇಲ್ಲಿ ಎತ್ತಿತೋರಿಸಲಾಗಿದೆ. ಅಸ್ಪೃಶ್ಯತೆಯ ನಿವಾರಣೆ, ಸಾಮಾಜಿಕ ಸಮಾನತೆ ಮತ್ತು ಶೋಷಿತರ ಸ್ವಾಭಿಮಾನದ ಜಾಗೃತಿಗಾಗಿ ಅವರು ತಮ್ಮ ಇಡೀ ಬದುಕನ್ನೇ ಮುಡಿಪಾಗಿಟ್ಟರು. ಕಬೀರ್, ಬುದ್ಧ ಮತ್ತು ಫುಲೆ ಅವರ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಅವರು, ಮನುಷ್ಯನ ಘನತೆಯನ್ನು ಎತ್ತಿಹಿಡಿಯುವ ನೈತಿಕ ಧರ್ಮವನ್ನು ಪ್ರತಿಪಾದಿಸಿದರು. ಕೇವಲ ಸವರ್ಣೀಯರ ಅನುಕಂಪವನ್ನು ನಿರಾಕರಿಸಿ, ‘ಶಿಕ್ಷಣ, ಸಂಘಟನೆ ಮತ್ತು ಹೋರಾಟ’ಗಳ ಮೂಲಕ ಸಾಂವಿಧಾನಿಕ ಹಕ್ಕುಗಳನ್ನು ಪಡೆದುಕೊಳ್ಳುವ ದಿಟ್ಟ ಮಾರ್ಗವನ್ನು ತೋರಿದರು. ಇಂದಿನ ಭಾರತದ ಸಾಮಾಜಿಕ ಹಾಗೂ ರಾಜಕೀಯ ಬಿಕ್ಕಟ್ಟುಗಳನ್ನು ಪರಿಹರಿಸಲು ಅಂಬೇಡ್ಕರರ ವಿಚಾರಧಾರೆಗಳನ್ನು ಸಮಗ್ರವಾಗಿ ಗ್ರಹಿಸಿ, ದೇಶದ ಪುನರ್‌ನಿರ್ಮಾಣದ ತಾತ್ವಿಕ ತಳಹದಿಯಾಗಿ ಅಳವಡಿಸಿಕೊಳ್ಳಬೇಕಾದ ತುರ್ತು ಅಗತ್ಯವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

Article Details

Section

Research Articles

Author Biography

ಡಾ. ಶಿವಲಿಂಗೇಗೌಡ ಡಿ.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಮನಗರ, ಬೆಂಗಳೂರು ದಕ್ಷಿಣ ಜಿಲ್ಲೆ.

How to Cite

ಶಿವಲಿಂಗೇಗೌಡ ಡಿ. (2026). ಅಂಬೇಡ್ಕರ್ ಎಂಬ ಅಮರ ವ್ಯಕ್ತಿತ್ವ. ಅಕ್ಷರಸೂರ್ಯ (AKSHARASURYA), 17(04), 160 to 168. https://aksharasurya.com/index.php/latest/article/view/2346

References

Most read articles by the same author(s)