ಸಮಕಾಲೀನ ಕನ್ನಡ ಭಾಷಾಂತರ: ಪ್ರಕ್ರಿಯಾತ್ಮಕ ಸ್ವರೂಪ
Main Article Content
Abstract
ಸಾಹಿತ್ಯ, ಭಾಷಾಂತರ ಪ್ರಕ್ರಿಯೆ ಹಾಗೂ ಪ್ರಕ್ರಿಯಾ ಫಲಗಳ ಸಂಬಂಧವು ಬಹು ಸೂಕ್ಷ್ಮವಾದದ್ದಾಗಿದೆ. ಪ್ರತಿ ಭಾಷೆಯ ಸಾಹಿತ್ಯದಲ್ಲಿ ಭಾಷಾಂತರವು ಒಂದು ಅನಿವಾರ್ಯ ಪ್ರಕ್ರಿಯೆಯಾಗಿ ಅದರ ಸಾಹಿತ್ಯಿಕ ಪ್ರೇರಣೆ ಪ್ರಭಾವವು ಸೂಕ್ಷ್ಮ ರೀತಿಯಲ್ಲಿ ಏರ್ಪಟ್ಟಿರುತ್ತದೆ. ಈ ಅಂಶ ಆಯಾ ಸಾಹಿತ್ಯದ ಅಧ್ಯಯನ ಮತ್ತು ಅವಲೋಕನಕ್ಕೆ ಅಗತ್ಯವಾದದ್ದಾಗಿದೆ. ಸಮಕಾಲೀನ ಕನ್ನಡ ಭಾಷಾಂತರ ಸಾಹಿತ್ಯವು ಕಳೆದ ಶತಮಾನದ ಬಹುತೇಕ ಸ್ವರೂಪವನ್ನು ಮುಂದುವರೆಸಿಕೊಂಡು ಬಂದಿದ್ದರೂ ಹೆಚ್ಚು ಪ್ರೋತ್ಸಾಹ ನೆಲೆಗಳನ್ನು ವ್ಯವಸ್ಥಿತವಾಗಿ ವಿಸ್ತರಿಸಿಕೊಂಡಿದೆ. ಕೆಲವು ಭಾಷಾಂತರಬದ್ಧ ಸಂಸ್ಥೆಗಳ ಯೋಜನೆ ಹಾಗೂ ಪ್ರೋತ್ಸಾಹಗಳು ನಿರ್ದಿಷ್ಟ ಪ್ರಕ್ರಿಯಾತ್ಮಕ ಸ್ವರೂಪವು ರೂಪಗೊಳ್ಳಲು ಕಾರಣವಾಗಿದೆ. ಈ ಸಂಗತಿಯನ್ನು ಪ್ರಸ್ತುತ ಲೇಖನವು ಸ್ಥೂಲವಾಗಿ ಅವಲೋಕಿಸುತ್ತದೆ.
ಸಮಕಾಲೀನ ಕನ್ನಡ ಭಾಷಾಂತರದ ಪ್ರೋತ್ಸಾಹಗಳು, ಅವುಗಳ ಧೋರಣೆ, ಭಾಷಾಂತರಕಾರರ ವೈವಿಧ್ಯತೆ, ಭಾಷಾಂತರ ಮಾದರಿ ವಿನ್ಯಾಸಗಳು, ಭಾಷಾಂತರ ಸಾಹಿತ್ಯವನ್ನು ಮುಖ್ಯವಾಗಿಸಿಕೊಂಡು ಅವಲೋಕನವನ್ನು ಕೈಗೊಂಡಿದೆ. ಸಮಕಾಲೀನ ಸಂದರ್ಭದಲ್ಲೂ ಒಂದು ನಿರ್ದಿಷ್ಟ ಗುಂಪನ್ನು ರಚಿಸಿಕೊಂಡು ಸ್ವಾತಂತ್ರ್ಯೋತ್ತರ ಭಾಷಾಂತರ ಸಾಹಿತ್ಯ ಚರಿತ್ರೆಯನ್ನು ರೂಪಿಸಿಕೊಂಡರೆ, ಕನ್ನಡ ಸಾಹಿತ್ಯ ಅಧ್ಯಯನದ ದಾರಿ ಮತ್ತು ಸಾಧ್ಯತೆಗಳು ಬದಲಾಗುತ್ತವೆಂಬುದನ್ನು ಪರೋಕ್ಷವಾಗಿ ಗಮನಕ್ಕೆ ತರುತ್ತದೆ. ಜೊತೆಗೆ ನಮ್ಮ ಅರಿವು ಇನ್ನೂ ವಿಸ್ತಾರ ಮತ್ತು ವೈವಿಧ್ಯವಾಗಿರುತ್ತದೆ ಎಂಬುದನ್ನು ಪ್ರಸ್ತುತ ಲೇಖನವು ತನ್ನ ಆಶಯವಾಗಿಸಿಕೊಂಡಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕೀರ್ತಿನಾಥ ಕುರ್ತಕೋಟಿ, (1992), ಬಯಲು ಆಲಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಗಿರಡ್ಡಿ ಗೋವಿಂದರಾಜ, (1981), ಸಾಹಿತ್ಯ ಮತ್ತು ಪರಂಪರೆ, ಅಭಿಜಾತ ಗ್ರಂಥಮಾಲೆ, ಬೆಂಗಳೂರು.
ಪ್ರಧಾನ ಗುರುದತ್, (2004), ಅನಾವರಣ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.