ಕುವೆಂಪು ಅವರ ವೈಚಾರಿಕತೆ

Main Article Content

ಪುಟ್ಟಸ್ವಾಮಿ

Abstract

ಕನ್ನಡ ಸಾಹಿತ್ಯ ಸಂದರ್ಭದಲ್ಲಿ ‘ಕುವೆಂಪು’ ಎನ್ನುವ ಹೆಸರೇ ಒಂದು ವಿಶಿಷ್ಟವಾದ ಕಂಪನ್ನ, ಸೊಂಪನ್ನ ಒಳಗೊಂಡಿದೆ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಕೃಷಿ ಮಾಡಿರುವ ಇವರು ಸೀಮಾಪುರುಪರೆನಿಸಿಕೊಂಡಿದ್ದಾರೆ. ಮುಖ್ಯವಾಗಿ ಅವರ ವೈಚಾರಿಕ ನಿಲುವು ವೈಜ್ಞಾನಿಕ ದೃಷ್ಟಿಯಿಂದ ಪ್ರೇರಿತವಾದದ್ದು. ವೈಚಾರಿಕತೆ ಎಂಬುದು ಬುದ್ಧಿ ಮತ್ತು ಭಾವಗಳ ವಿದ್ಯುದಾಲಿಂಗನ. ಸೂಕ್ಷ್ಮವಾದ ವಿವೇಚನಾಶಕ್ತಿ, ಆಲೋಚನಾಶಕ್ತಿಗಳ ಅಭಿವ್ಯಕ್ತಿಯ ಸಂಗಮ. ವಿವೇಕಪೂರ್ಣವಾದ ವಿವೇಚನೆಯೇ ವೈಚಾರಿಕತೆಯ ತಳಹದಿಯಾಗಿದೆ. ವೈಚಾರಿಕತೆ ಎಂಬುದು ಮೂಲಭೂತ ಮೌಲ್ಯಗಳನ್ನು ನಿರಾಕರಿಸಬಾರದು. ಸತ್ಯವನ್ನು ಶೋಧಿಸುವಾಗ ಭೌತಿಕವಾಗಿ ಕಣ್ಣಿಗೆ ಕಾಣುವ ವಸ್ತುವಿನ ವೈಜ್ಞಾನಿಕ ದೃಷ್ಟಿಯೊಂದೆ ನಿಜವಾಗಲಾರದು. ಅದರ ಜೊತೆಗೆ ಆ ವಸ್ತುವಿನ ಅಂತರಾಳದ ಚೈತನ್ಯಾತ್ಮಕ ಭಾವಲಹರಿಯು ಕೂಡ ಮುಖ್ಯವಾಗುತ್ತದೆ. ಇದನ್ನು ಹಿನ್ನೆಲೆಯಾಗಿಟ್ಟುಕೊಂಡು ಕುವೆಂಪು ವೈಚಾರಿಕ ಪ್ರಜ್ಞೆಯ ಆಶಯವನ್ನು ನಾಡು, ನುಡಿ, ಸಮಾಜ, ವೃತ್ತಿ, ದೇವರು, ಧರ್ಮ ಮೊದಲಾದ ಚಿಂತನೆಗಳ ಮೂಲಕ ತಿಳಿಯಬೇಕಾಗುತ್ತದೆ.

Article Details

Section

Essay

Author Biography

ಪುಟ್ಟಸ್ವಾಮಿ

ಪ್ರಾದ್ಯಾಪಕರು, ಮೈಸೂರು ವಿಶ್ವವಿದ್ಯಾನಿಲಯ, ಹಾಸನ.

References

ಕುವೆಂಪು. (2014). ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ. ಉದಯರವಿ ಪ್ರಕಾಶನ. ಮೈಸೂರು.

ಕುವೆಂಪು. (2015). ಕಾವ್ಯ ವಿಚಾರ. ಉದಯರವಿ ಪ್ರಕಾಶನ. ಮೈಸೂರು.

ಭಂಡಾರಿ ಆರ್. ವಿ. (2011). ಕುವೆಂಪು ದೃಷ್ಟಿ ಮತ್ತು ಸೃಷ್ಟಿ. ಸುಮುಖ ಪ್ರಕಾಶನ. ಬೆಂಗಳೂರು.

ಅಮೂರ ಜಿ. ಎಸ್. (2015). ಕುವೆಂಪು: ಯುಗದ ಕವಿ. ಮನೋಹರ ಗ್ರಂಥಮಾಲ. ಧಾರವಾಡ.

ಶಿವಾರೆಡ್ಡಿ ಕೆ. ಸಿ. (2004). ಕುವೆಂಪು ವಿಚಾರಧಾರೆಯ ಪ್ರಸ್ತುತತೆ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.

ನಾಗಭೂಷಣ ಡಿ. ಎಸ್. (2012). ಕುವೆಂಪು ಸಾಹಿತ್ಯ ದರ್ಶನ. ಗೀತಾಂಜಲಿ ಪುಸ್ತಕ ಪ್ರಕಾಶನ. ಮೈಸೂರು.

ಚೆನ್ನಬಸಪ್ಪ ಕೋ. (2015). ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ, ಸಾಮಾಜಿಕ ನಿಷ್ಠೆ. ನವಕರ್ನಾಟಕ ಪ್ರಕಾಶನ. ಬೆಂಗಳೂರು.

ಕುವೆಂಪು. (2012). ತಪೋ ನಂದನ. ಉದಯರವಿ ಪ್ರಕಾಶನ. ಮೈಸೂರು.

ಕುವೆಂಪು. (2015). ವಿಚಾರಕ್ರಾಂತಿಗೆ ಆಹ್ವಾನ. ಉದಯರವಿ ಪ್ರಕಾಶನ. ಮೈಸೂರು.

ಕುವೆಂಪು. (1987). ವಿಭೂತಿ ಪೂಜೆ. ಉದಯರವಿ ಪ್ರಕಾಶನ. ಮೈಸೂರು.