ಆಧುನಿಕೋತ್ತರ ಸಮಾಜ ಮತ್ತು ಕನ್ನಡ ಸಾಹಿತ್ಯದ ಪ್ರತಿಸ್ಪಂದನೆ
Main Article Content
Abstract
ಆಧುನಿಕತೆ ‘ಹೊಸತು’ ಎಂಬ ಅರ್ಥವನ್ನು ನೀಡಿದರೆ ಆಧುನಿಕೋತ್ತರವು ಈ ಹೊಸತಿನ ನಂತರದ ‘ಪುನರ್ ಹೊಸತಿ’ನ ಕುರಿತಾದ ಚರ್ಚೆ. ಈ ಆಧುನಿಕತೆಯು ವಸಾಹತುಶಾಹಿಯ ಒಂದು ದೊಡ್ಡ ಕೊಡುಗೆ. ಈ ಆಧುನಿಕತೆಯು ಸರಿಯೋ ತಪ್ಪೋ ಎಂಬ ಜಿಜ್ಞಾಸೆಯಲ್ಲಿರುವ, ಅದನ್ನು ಸ್ವೀಕರಿಸಬೇಕೋ ಬೇಡವೋ ಎಂಬ ದ್ವಂದ್ವ, ಒತ್ತಡದಲ್ಲಿರುವಾಗಲೇ ನಾವುಗಳು ಈಗ ಆಧುನಿಕೋತ್ತರ ಕಾಲಘಟ್ಟವನ್ನು ಪ್ರವೇಶಿಸಿದ್ದೇವೆ. ಈ ಸಂದರ್ಭದಲ್ಲಿ ಉಂಟಾಗುತ್ತಿರುವ ಅನೇಕ ಬದಲಾವಣೆಗಳನ್ನು ಯಾವ ಚರ್ಚೆಗೆ ಒಳಪಡಿಸದೆ, ಒಳಪಡಿಸಿದರೂ ಕೇವಲ ಅದು ಚರ್ಚೆಗೆ ಮಾತ್ರ ಸೀಮಿತವಾಗುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಪರಂಪರೆ-ಆಧುನಿಕತೆ-ಆಧುನಿಕೋತ್ತರತೆಗಳು ಅನೇಕ ಸಂಘರ್ಷಗಳನ್ನು ಹುಟ್ಟುಹಾಕಿವೆ. ಕೌಟುಂಬಿಕ, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ, ವೈಜ್ಞಾನಿಕ, ನೈತಿಕ, ಸಾಂಸ್ಕೃತಿಕ, ಗಂಡು-ಹೆಣ್ಣಿನ ಸಂಬಂಧದಲ್ಲಿ ಅನೇಕ ಸ್ಥಿತ್ಯಂತರಗಳು, ಬದಲಾವಣೆಗಳು ಉಂಟಾಗಿವೆ. ಈ ಪ್ರಕ್ರಿಯೆಯಲ್ಲಿ ಆಧುನಿಕೋತ್ತರ-ಆಧುನಿಕತೆ-ಪರಂಪರೆಗಳ ನಡುವಿನ ಕುತೂಹಲ, ತಿಕ್ಕಾಟ, ಎಚ್ಚರಿಕೆಯ ಸಂದೇಶ, ಸಂಘರ್ಷ, ಆತಂಕ ಇವು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಒಂದರ ಮೇಲೆ ಮತ್ತೊಂದು ಪ್ರಭಾವ ಬೀರುತ್ತ ಕಲಿಯುತ್ತಲೇ ಇರುತ್ತವೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ರಾಘವೇಂದ್ರರಾವ್ ಎಚ್. ಎಸ್., (1989), ನಿಲುವು, ಬೆಂಗಳೂರು: ಕನ್ನಡ ಸಂಘ, ಕ್ರೈಸ್ಟ್ ಕಾಲೇಜ್.
ಕೀರ್ತಿನಾಥ ಕುರ್ತಕೋಟಿ, (1989), ಸಂಸ್ಕೃತಿ ಸ್ಪಂದನ, ಧಾರವಾಡ: ಮನೋಹರ ಗ್ರಂಥಮಾಲೆ.
ಅಶೋಕಟಿ. ಪಿ., (1990), ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಆಧುನೀಕರಣದ ಪ್ರಕ್ರಿಯೆ, ಪುತ್ತೂರು: ಕರ್ನಾಟಕ ಸಂಘ.
ಕರಿಗೌಡ ಬೀಚನಹಳ್ಳಿ, (1992), ಕನ್ನಡ ಕಥನ ಕಲೆಯ ನೆಲೆಗಳು, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.
ರಹಮತ್ ತರೀಕೆರೆ, ಕನ್ನಡ ಅಧ್ಯಯನ (ಗಾಳಿ ಸಂಚಿಕೆ), ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ದೇವಿಕಾ ನಗರಕರ ಮತ್ತು ಶಿವಾನಂದ ಹೊಸಮನಿ (ಸಂ), (2022), ತೆರೆದ ಮನ, ಬೆಳಗಾವಿ: ಪ್ರಸಾರಾಂಗ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ.
ಶಾಂತಿನಾಥ ದೇಸಾಯಿ, (1961), ಮುಕ್ತಿ, ಧಾರವಾಡ: ಮನೋಹರ ಗ್ರಂಥಮಾಲೆ.
ಶಶಿಕಲಾ ಮೊರಬದ (ಸಂ), (2017), ಸಾಹಿತ್ಯ ಸ್ಪಂದನ-4, ಬೆಳಗಾವಿ: ಪ್ರಸಾರಾಂಗ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ.
ಶಕುಂತಲಾ ನಾವಲಗಿ, (2022), ಸಾಧನೆಗೆ ಕೊನೆಯಿಲ್ಲ, ಬೆಳಗಾವಿ: ಪ್ರಸಾರಾಂಗ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ.