ಆಧುನಿಕೋತ್ತರ ಸಮಾಜ ಮತ್ತು ಕನ್ನಡ ಸಾಹಿತ್ಯದ ಪ್ರತಿಸ್ಪಂದನೆ

Main Article Content

ಅರುಂಧತಿ ಎಫ್. ಬದಾಮಿ

Abstract

ಆಧುನಿಕತೆ ‘ಹೊಸತು’ ಎಂಬ ಅರ್ಥವನ್ನು ನೀಡಿದರೆ ಆಧುನಿಕೋತ್ತರವು ಈ ಹೊಸತಿನ ನಂತರದ ‘ಪುನರ್ ಹೊಸತಿ’ನ ಕುರಿತಾದ ಚರ್ಚೆ. ಈ ಆಧುನಿಕತೆಯು ವಸಾಹತುಶಾಹಿಯ ಒಂದು ದೊಡ್ಡ ಕೊಡುಗೆ. ಈ ಆಧುನಿಕತೆಯು ಸರಿಯೋ ತಪ್ಪೋ ಎಂಬ ಜಿಜ್ಞಾಸೆಯಲ್ಲಿರುವ, ಅದನ್ನು ಸ್ವೀಕರಿಸಬೇಕೋ ಬೇಡವೋ ಎಂಬ ದ್ವಂದ್ವ, ಒತ್ತಡದಲ್ಲಿರುವಾಗಲೇ ನಾವುಗಳು ಈಗ ಆಧುನಿಕೋತ್ತರ ಕಾಲಘಟ್ಟವನ್ನು ಪ್ರವೇಶಿಸಿದ್ದೇವೆ. ಈ ಸಂದರ್ಭದಲ್ಲಿ ಉಂಟಾಗುತ್ತಿರುವ ಅನೇಕ ಬದಲಾವಣೆಗಳನ್ನು ಯಾವ ಚರ್ಚೆಗೆ ಒಳಪಡಿಸದೆ, ಒಳಪಡಿಸಿದರೂ ಕೇವಲ ಅದು ಚರ್ಚೆಗೆ ಮಾತ್ರ ಸೀಮಿತವಾಗುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಪರಂಪರೆ-ಆಧುನಿಕತೆ-ಆಧುನಿಕೋತ್ತರತೆಗಳು ಅನೇಕ ಸಂಘರ್ಷಗಳನ್ನು ಹುಟ್ಟುಹಾಕಿವೆ. ಕೌಟುಂಬಿಕ, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ, ವೈಜ್ಞಾನಿಕ, ನೈತಿಕ, ಸಾಂಸ್ಕೃತಿಕ, ಗಂಡು-ಹೆಣ್ಣಿನ ಸಂಬಂಧದಲ್ಲಿ ಅನೇಕ ಸ್ಥಿತ್ಯಂತರಗಳು, ಬದಲಾವಣೆಗಳು ಉಂಟಾಗಿವೆ. ಈ ಪ್ರಕ್ರಿಯೆಯಲ್ಲಿ ಆಧುನಿಕೋತ್ತರ-ಆಧುನಿಕತೆ-ಪರಂಪರೆಗಳ ನಡುವಿನ ಕುತೂಹಲ, ತಿಕ್ಕಾಟ, ಎಚ್ಚರಿಕೆಯ ಸಂದೇಶ, ಸಂಘರ್ಷ, ಆತಂಕ ಇವು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಒಂದರ ಮೇಲೆ ಮತ್ತೊಂದು ಪ್ರಭಾವ ಬೀರುತ್ತ ಕಲಿಯುತ್ತಲೇ ಇರುತ್ತವೆ.

Article Details

Section

Research Articles

Author Biography

ಅರುಂಧತಿ ಎಫ್. ಬದಾಮಿ

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಕೆ.ಎಲ್.ಇ ಸಂಸ್ಥೆಯ ಎಸ್.ವಿ.ಎಸ್ ಬೆಳ್ಳುಬ್ಬಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಸವದತ್ತಿ.

References

ರಾಘವೇಂದ್ರರಾವ್ ಎಚ್. ಎಸ್., (1989), ನಿಲುವು, ಬೆಂಗಳೂರು: ಕನ್ನಡ ಸಂಘ, ಕ್ರೈಸ್ಟ್ ಕಾಲೇಜ್.

ಕೀರ್ತಿನಾಥ ಕುರ್ತಕೋಟಿ, (1989), ಸಂಸ್ಕೃತಿ ಸ್ಪಂದನ, ಧಾರವಾಡ: ಮನೋಹರ ಗ್ರಂಥಮಾಲೆ.

ಅಶೋಕಟಿ. ಪಿ., (1990), ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಆಧುನೀಕರಣದ ಪ್ರಕ್ರಿಯೆ, ಪುತ್ತೂರು: ಕರ್ನಾಟಕ ಸಂಘ.

ಕರಿಗೌಡ ಬೀಚನಹಳ್ಳಿ, (1992), ಕನ್ನಡ ಕಥನ ಕಲೆಯ ನೆಲೆಗಳು, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.

ರಹಮತ್ ತರೀಕೆರೆ, ಕನ್ನಡ ಅಧ್ಯಯನ (ಗಾಳಿ ಸಂಚಿಕೆ), ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ದೇವಿಕಾ ನಗರಕರ ಮತ್ತು ಶಿವಾನಂದ ಹೊಸಮನಿ (ಸಂ), (2022), ತೆರೆದ ಮನ, ಬೆಳಗಾವಿ: ಪ್ರಸಾರಾಂಗ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ.

ಶಾಂತಿನಾಥ ದೇಸಾಯಿ, (1961), ಮುಕ್ತಿ, ಧಾರವಾಡ: ಮನೋಹರ ಗ್ರಂಥಮಾಲೆ.

ಶಶಿಕಲಾ ಮೊರಬದ (ಸಂ), (2017), ಸಾಹಿತ್ಯ ಸ್ಪಂದನ-4, ಬೆಳಗಾವಿ: ಪ್ರಸಾರಾಂಗ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ.

ಶಕುಂತಲಾ ನಾವಲಗಿ, (2022), ಸಾಧನೆಗೆ ಕೊನೆಯಿಲ್ಲ, ಬೆಳಗಾವಿ: ಪ್ರಸಾರಾಂಗ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ.