ಕುವೆಂಪು ನಾಟಕಗಳಲ್ಲಿ ವೈಚಾರಿಕತೆ
Main Article Content
Abstract
ಕುವೆಂಪುರವರು ತಮ್ಮ ಕಾಲಮಾನದ ಎಲ್ಲ ಮೌಲ್ಯಗಳನ್ನು ವೈಚಾರಿಕತೆಯ ಪ್ರಖರ ಬೆಳಕಿನಲ್ಲಿ ಕಂಡವರು. ಅಸಮಾನತೆಯ ತಳಹದಿಯ ಮೇಲೆ ನಿರ್ಮಾಣಗೊಂಡಿರುವ ಸ್ಥಾಪಿತ ಯಜಮಾನಿಕೆಗಳನ್ನು ಬುಡಮೇಲು ಮಾಡಿ, ಪರ್ಯಾಯಗಳನ್ನು ಸೃಷ್ಟಿಸುವ ಮಹತ್ತರ ಕಾರ್ಯವನ್ನು ಕುವೆಂಪು ತಮ್ಮ ಕೃತಿಗಳ ಮೂಲಕ ಮಾಡಿದ್ದಾರೆ. ಇವರ ವೈಚಾರಿಕ ಪ್ರಜ್ಞೆ ನಾಟಕಗಳಲ್ಲಿ ಪುರೋಹಿತಶಾಹಿಯ ಪ್ರತಿರೋಧ, ನಗರ ಮತ್ತು ಅರಣ್ಯ ಸಂಸ್ಕೃತಿಗಳ ಮುಖಾಮುಖಿ, ದೇಸೀ ಮತ್ತು ವಸಾಹತು ಸಂಸ್ಕೃತಿಗಳ ವೈರುಧ್ಯಗಳ ರೂಪದಲ್ಲಿ ಪ್ರಕಟಗೊಂಡಿದೆ. 'ಬೆರಳೆ ಕೊರಳ್', 'ಶೂದ್ರ ತಪಸ್ವಿ', 'ಜಲಗಾರ' ಮೊದಲಾದ ನಾಟಕಗಳಲ್ಲಿ ಕುವೆಂಪುರವರ ವಿಶ್ವಮಾನವ ಕಲ್ಪನೆ, ಶ್ರಮ ಸಂಸ್ಕೃತಿ ಹಾಗೂ ಮೌಢ್ಯತೆಯ ವಿರೋಧಗಳು ಅತ್ಯಂತ ಪರಿಣಾಮಕಾರಿಯಾಗಿ ಚಲನಶೀಲಗೊಂಡಿವೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಸ್ಮಶಾನ ಕುರುಕ್ಷೇತ್ರಂ (1996), ಕುವೆಂಪು, ಉದಯರವಿ ಪ್ರಕಾಶನ.
ಬೆರಳ್ ಗೆ ಕೊರಳ್ (1996), ಕುವೆಂಪು, ಉದಯರವಿ ಪ್ರಕಾಶನ.
ಜಲಗಾರ (1997), ಕುವೆಂಪು, ಉದಯರವಿ ಪ್ರಕಾಶನ.
ಶೂದ್ರತಪಸ್ವಿ (1987), ಕುವೆಂಪು, ಉದಯರವಿ ಪ್ರಕಾಶನ.
ಕುವೆಂಪು ಸಮಗ್ರ ಗದ್ಯ; ಸಂಪುಟ-2 (2004), ಸಂ. ಕೆ. ಸಿ. ಶಿವಾರೆಡ್ಡಿ, ಪ್ರಸಾರಾಂಗ, ಕನ್ನಡ ವಿ.ವಿ. ಹಂಪಿ.
ಕುವೆಂಪು ನಾಟಕಗಳ ಅಧ್ಯಯನ (2002), ನರಹಳ್ಳಿ ಬಾಲಸುಬ್ರಹ್ಮಣ್ಯ, ಅಂಕಿತ ಪುಸ್ತಕ, ಬೆಂಗಳೂರು.
ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ (2014), ಕೋ. ಚನ್ನಬಸಪ್ಪ, ನವಕರ್ನಾಟಕ ಪ್ರಕಾಶನ.