ತುಂಗಭದ್ರಾ ಅಣೆಕಟ್ಟು: ಚಾರಿತ್ರಿಕ ವಿಶ್ಲೇಷಣೆ
Main Article Content
Abstract
ತುಂಗಭದ್ರಾ ಅಣೆಕಟ್ಟು ನಿರ್ಮಾಣಕ್ಕೂ ಮೊದಲು ತುಂಗಭದ್ರಾ ನದಿಗೆ ವಿಜಯನಗರ ಸಾಮ್ರಾಜ್ಯದ ಆಡಳಿತದ ಅವಧಿಯಲ್ಲಿ ನಿರ್ಮಿಸಿದ ಅಣೆಕಟ್ಟುಗಳ ಪರಿಚಯ ಹಾಗೂ ಅವುಗಳ ಕಾರ್ಯಗಳನ್ನು ತಿಳಿಸುವುದು ಇದರ ಉದ್ದೇಶವಾಗಿದೆ. ನಂತರ ಅವುಗಳ ಸಂರಕ್ಷಣೆ ಮತ್ತು ವಿಫಲತೆಗೆ ಕಾರಣ, ತುಂಗಭದ್ರಾ ಅಣೆಕಟ್ಟು ನಿರ್ಮಾಣಕ್ಕೂ ಪೂರ್ವದಲ್ಲಿ ಜಲಾನಯನ ಪ್ರದೇಶದ ಜೀವಸಂಕುಲಗಳ ಸ್ಥಿತಿ-ಗತಿ ವಿವರಿಸಲಾಗಿದೆ. ಜಲಾಶಯದ ನಿರ್ಮಾಣಕ್ಕೆ ಬೆವರು ಸುರಿಸಿದ ಶ್ರಮಜೀವಿಗಳ ಪಾತ್ರ ಕುರಿತು ಸಂಕ್ಷಿಪ್ತವಾಗಿ ವಿಶ್ಲೇಷಿಸುವ ಪ್ರಯತ್ನ ಮಾಡಲಾಗಿದೆ. ವಿಜಯನಗರ ಕಾಲದ ಬಲದಂಡೆ ಮತ್ತು ಎಡದಂಡೆ ಅಣೆಕಟ್ಟುಗಳು, ಬ್ರಿಟಿಷ್ ಮತ್ತು ಹೈದರಾಬಾದ್ ನಿಜಾಮರ ಕಾಲದ ನೀರಿನ ಹಂಚಿಕೆ ಒಪ್ಪಂದಗಳ ಕುರಿತಾದ ಐತಿಹಾಸಿಕ ಮಾಹಿತಿಯನ್ನು ಇದರಲ್ಲಿ ಕಟ್ಟಿಕೊಡಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಚಂದ್ರಶೇಖರ್ ಎನ್. (೨೦೧೮), ಕರ್ನಾಟಕ ಕೈಪಿಡಿ ಭಾಗ-೧, ಕರ್ನಾಟಕ ಗ್ಯಾಸೆಟಿಯರ್ ಇಲಾಖೆ, ಬೆಂಗಳೂರು. ಪುಟ-೨೪.
ಶ್ರೀನಿವಾಸ ಹಾವನೂರು (೨೦೦೮), ತುಂಗಭದ್ರೆ ನಾಡಿಗೆ ವರವೊ - ಶಾಪವೊ, ಭಾಗ್ಯಲಕ್ಷ್ಮೀ ಪ್ರಕಾಶನ, ಬೆಂಗಳೂರು. ಪುಟ-೧೮.
ನಾಯಕ ಹಾ. ಮಾ. (೨೦೧೭, ೧೨ನೇ ಮುದ್ರಣ), ಕನ್ನಡ ರತ್ನಕೋಶ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ಪುಟ-೨೨೦.
ಶ್ರೀಧರ್ ಎಂ. ಕೆ. (ಪ್ರ.ಸಂ) (೨೦೧೯, ೫ನೇ ಮುದ್ರಣ), ಸಂಕ್ಷಿಪ್ತ ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ಪುಟ-೧೦೭೨.
ಸಿ. ಟಿ. ಎಂ. ಕೊಟ್ರಯ್ಯ (ಮೂಲ), ವಿ. ಧ್ರುವನಾರಾಯಣ (ಕನ್ನಡಕ್ಕೆ ಅನುವಾದ) (೨೦೦೧), ವಿಜಯನಗರ ಸಾಮ್ರಾಜ್ಯದ ನೀರಾವರಿ ವ್ಯವಸ್ಥೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪುಟ-೫೨.