ಗಂಗಾವತಿ ತಾಲೂಕಿನ ಜಲವೀರರ ವೀರಗಲ್ಲುಗಳು
Main Article Content
Abstract
ವೀರಪೂಜೆಯ ಪರಂಪರೆ ಪ್ರಾಚೀನ ಕಾಲದಿಂದಲೂ ಮುಂದುವರಿದುಕೊಂಡು ಬಂದಿದೆ. ಯುದ್ಧ, ತುರುಗಾಳಗ, ಬೇಟೆ, ದರೋಡೆಕೋರರಿಂದ ಗ್ರಾಮಗಳ ರಕ್ಷಣೆ, ಕಳ್ಳರೊಡನೆ ಹೋರಾಡಿ ಮಡಿದವರ, ನೀರಿನಲ್ಲಿ ಬಿದ್ದವರ ರಕ್ಷಣೆ ಮುಂತಾದ ಸಂದರ್ಭದಲ್ಲಿ ಮಡಿದ ವೀರರ ನೆನಪಿಗಾಗಿ ವೀರಗಲ್ಲುಗಳನ್ನು ಹಾಕಿಸುವ ಪರಂಪರೆ ಪ್ರಾಚೀನಕಾಲದಿಂದಲೂ ಬೆಳೆದು ಬಂದಿದೆ. ಅದರಲ್ಲಿ ಕೆರೆ, ಹೊಂಡ, ನದಿ, ಸಮುದ್ರದ ನೀರಿನಲ್ಲಿ ರಕ್ಷಣೆ ಮಾಡುವ ಸಂದರ್ಭದಲ್ಲಿ ಮಡಿದವರ ಜಲವೀರರ ವೀರಗಲ್ಲುಗಳು ದೊರಕುವುದು ಬಹಳ ವಿರಳ. ಅಂತದರಲ್ಲಿ ತುಂಗಭದ್ರಾ ನದಿ ಎಡದಂಡೆಯ ಮೇಲಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಮೂರು ಜಲವೀರರ(ಅಂಬಿಗರ) ವೀರಗಲ್ಲುಗಳು ಕಂಡುಬರುತ್ತವೆ. ಅವುಗಳನ್ನು ವಿಶ್ಲೇಷಿಸುವ ಪ್ರಯತ್ನ ಈ ಲೇಖನದಲ್ಲಿ ಮಾಡಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಶೇಷಶಾಸ್ತ್ರಿ ಆರ್. (2004), ಕರ್ನಾಟಕದ ವೀರಗಲ್ಲುಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ಪುಟ-25.
ಅದೇ, ಪುಟ-168.
ದೇವರಕೊಂಡಾರೆಡ್ಡಿ (2006), ಹಂಪಿ ಸಂಪುಟ ಕಲೆ, ಕ್ರೀಡೆ ಮತ್ತು ಕೌಶಲ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ. ಪುಟ-387.
ಲಕ್ಷ್ಮಣ್ ತೆಲಗಾವಿ (2017), ಹಂಪಿ ವಿಜಯನಗರ ಕೆಲವು ಬರಹಗಳು, ವಾಲ್ಮೀಕಿ ಸಾಹಿತ್ಯ ಸಂಪದ, ಹರ್ತಿಕೋಟೆ. ಪುಟ-155.
ಗೀತಾ ಪಾಟೀಲ (2021), ಕೊಪ್ಪಳ ಜಿಲ್ಲೆಯ ವಾಸ್ತು-ಶಿಲ್ಪ-ಸಂಸ್ಕೃತಿ, ತಿಳಿವು ಪ್ರಕಾಶನ, ವಳವಂಡಿವಾಡ. ಪುಟ-76.