ಬಸವರಾಜ ಕಟ್ಟೀಮನಿ ಅವರ ಕಾದಂಬರಿಯಲ್ಲಿ ಸಾಮಾಜಿಕತೆ
Main Article Content
Abstract
ಕನ್ನಡ ಸಾಹಿತ್ಯದ ಪುನರಾವಲೋಕನ ನಡೆಯುತ್ತಿರುವ ಇಂದಿನ ದಿನಗಳಲ್ಲಿ ಸಾಹಿತ್ಯ ಅಧ್ಯಯನ ಕೈಗೊಳ್ಳುವುದು ಅರ್ಥಪೂರ್ಣವಾಗಿದೆ. ಸಾಹಿತ್ಯದ ಮಹತ್ವ ಹಾಗೂ ಲೇಖಕರ ಅಥವಾ ಕೃತಿಗಳು ಪಡೆದುಕೊಂಡ ಹೊಸ ಆಯಾಮಗಳನ್ನು ಅವಲೋಕನ ಮಾಡುವುದೇ ಅಧ್ಯಯನದ ಉದ್ದೇಶ. ಈ ದಿಸೆಯಲ್ಲಿ ಆಧುನಿಕ ಕನ್ನಡ ಸಾಹಿತ್ಯ ಪ್ರಕಾರಗಳ ಪರಿಚಯ ಮಾಡಿಕೊಳ್ಳುವುದು ಅವಶ್ಯಕ. ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಒಂದಾದ ಕಾದಂಬರಿ, ಸಮರ್ಥವಾಗಿ ಬೆಳೆದು ಬಂದ ಸಾಹಿತ್ಯ ಪ್ರಕಾರವಾಗಿದೆ. ಪ್ರಗತಿಶೀಲ ಸಾಹಿತ್ಯದಲ್ಲಿ ತಮ್ಮದೇ ಆದ ರೀತಿಯಲ್ಲಿ ಅರ್ಥಪೂರ್ಣತೆಯನ್ನು ತಂದುಕೊಟ್ಟವರಲ್ಲಿ ಕಟ್ಟೀಮನಿಯವರು ಒಬ್ಬರು. ಅವರ ಸಾಮಾಜಿಕ ಕಾದಂಬರಿಗಳು ಬೆಳೆದು ಬಂದ ಬಗ್ಗೆಯನ್ನು ವಿವೇಚಿಸುವುದೇ ಪ್ರಸ್ತುತ ಪ್ರಬಂಧದ ಉದ್ದೇಶ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಬಸವರಾಜ ಕಟ್ಟೀಮನಿ, (2014), ಸಮಗ್ರ ಸಾಹಿತ್ಯ: ಕಾದಂಬರಿ, ಸಂಪುಟ-2, ಪ್ರಸಾರಂಗ, ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ.
ಬಸವರಾಜ ಕಟ್ಟೀಮನಿ, (2014), ಸಮಗ್ರ ಸಾಹಿತ್ಯ: ಕಾದಂಬರಿ, ಸಂಪುಟ-5, ಪ್ರಸಾರಂಗ, ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ.
ಬಸವರಾಜ ಕಟ್ಟೀಮನಿ, (2014), ಸಮಗ್ರ ಸಾಹಿತ್ಯ: ಕಾದಂಬರಿ, ಸಂಪುಟ-6, ಪ್ರಸಾರಂಗ, ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ.