ಡಾ. ಚಂದ್ರಶೇಖರ ಕಂಬಾರರ 'ಸಿರಿಸಂಪಿಗೆ' ನಾಟಕದಲ್ಲಿ ಸ್ತ್ರೀ ಸಂವೇದನೆ

Main Article Content

ಮಲ್ಲಪ್ಪ ಚನ್ನಭತ್ತಿ

Abstract

ಡಾ. ಚಂದ್ರಶೇಖರ ಕಂಬಾರರ 'ಸಿರಿಸಂಪಿಗೆ' ನಾಟಕದ ಮೂಲಕ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಅನುಭವಿಸುವ ತಲ್ಲಣಗಳು ಹಾಗೂ ಅವಳ ಸಂವೇದನೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಗಂಡು-ಹೆಣ್ಣಿನ ಸಹಜ ನೈಸರ್ಗಿಕ ಪ್ರಕ್ರಿಯೆಯಾದ ಕಾಮವನ್ನು ನಿರಾಕರಿಸಿ, ತನ್ನನ್ನು ತಾನೇ ಸೀಳಿಕೊಳ್ಳುವ ಶಿವನಾಗದೇವನ ಅಸಹಜ ಮನಸ್ಥಿತಿ ಹಾಗೂ ಇದರಿಂದ ಪತ್ನಿ ಸಿರಿಸಂಪಿಗೆ ಎದುರಿಸುವ ಮಾನಸಿಕ ಮತ್ತು ಸಾಮಾಜಿಕ ಸಂಕಷ್ಟಗಳನ್ನು ತೆರೆದಿಡಲಾಗಿದೆ. ದ್ವಂದ್ವಾತ್ಮಕ ಪುರುಷನ ಅಹಂಕಾರದ ನಡುವೆ ಸಿಲುಕುವ ಮಹಿಳೆ, ಅಂತಿಮವಾಗಿ ತನ್ನ ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ವಿಮೋಚನೆಯ ಹಾದಿಯನ್ನು ಕಂಡುಕೊಳ್ಳುವ ಬಗೆಯನ್ನು ನಾಟಕದ ವಿವಿಧ ದೃಶ್ಯಗಳ ಹಿನ್ನೆಲೆಯಲ್ಲಿ ನಿರೂಪಿಸಲಾಗಿದೆ.

Article Details

Section

Research Articles

Author Biography

ಮಲ್ಲಪ್ಪ ಚನ್ನಭತ್ತಿ

ಸಂಶೋಧನ ವಿದ್ಯಾರ್ಥಿ, ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

References

ಡಾ. ಚಂದ್ರಶೇಖರ ಕಂಬಾರ 'ಸಿರಿಸಂಪಿಗೆ', ಅಂಕಿತ ಪುಸ್ತಕ ಪ್ರಕಾಶನ, ಬೆಂಗಳೂರು, 2012, ಪು.ಸಂ. 10.