ಮತ-ಮತಿಗಳ ಸಾಮರಸ್ಯದ ತಾಣವಾಗಿ ‘ಮುತ್ತತ್ತಿ’

Main Article Content

ಹೇಮಲತ ಪಿ. ಎನ್.

Abstract

ಪ್ರಾಚೀನ ಕಾಲದಿಂದಲೂ ಕನ್ನಡ ನಾಡಿನಲ್ಲಿ ಸಾಮರಸ್ಯವನ್ನು ಪ್ರತಿಬಿಂಬಿಸುವ ಅನೇಕ ಘಟನೆಗಳು ನಡೆಯುತ್ತಾ ಬಂದಿವೆ; ಅನೇಕ ಸ್ಥಳಗಳು ರೂಪುಗೊಂಡಿವೆ. ಸಂತ ಸಮುದಾಯವು ಸಾಮಾಜಿಕ ಸಾಮರಸ್ಯಕ್ಕಾಗಿ ಬೋಧಿಸುತ್ತಾ ನಡೆದು ಕನ್ನಡ ಸಂಸ್ಕೃತಿಯಲ್ಲಿ ಬಹುದೊಡ್ಡ ಕ್ರಾಂತಿಯನ್ನುಂಟುಮಾಡಿರುವುದು ಚಾರಿತ್ರಿಕ ಸಂಗತಿಯಾಗಿದೆ. ದಕ್ಷಿಣ ಕರ್ನಾಟಕದ ಮೇರುಸಂತರೂ ಧರೆಗೆ ದೊಡ್ಡವರೂ ಆದ ಶ್ರೀಮಂಟೇಸ್ವಾಮಿ ಅವರ ಪ್ರಭಾವದಿಂದಾಗಿ ಸಾಮಾಜಿಕ ಸ್ವಾಸ್ಥ್ಯವೂ ಸಾಮರಸ್ಯವೂ ಸಾಧಿತಗೊಂಡು ಇಂದಿಗೂ ಜನಸಮುದಾಯಗಳು ಒಕ್ಕಲಾಗಿ ನಡೆದುಕೊಳ್ಳುತ್ತಿದ್ದಾರೆ. ಮಂಟೇಸ್ವಾಮಿ ಪರಂಪರೆಯು ಮೂಲತಃ ಶೈವಮೂಲದ್ದಾದರೂ ವೈಷ್ಣವಮೂಲದ ಮುತ್ತತ್ತಿರಾಯನೊಂದಿಗೆ ಏರ್ಪಟ್ಟ ಸಾಮರಸ್ಯವು ಮಹೋನ್ನತವಾದುದು. ಇದರೊಂದಿಗೆ ಪ್ರಾಕೃತಿಕವಾದ ಶ್ರೀಮಂತ ಸೊಬಗನ್ನು ಹೊಂದಿರುವ ಮುತ್ತತ್ತಿ ತಾಣವು ಮತ-ಮತಿಗಳ ಸಾಮರಸ್ಯದ ನೆಲೆಯಾಗಿ ಇಂದಿಗೂ ಬಹುಜನರನ್ನು ನಿರಂತರವಾಗಿ ಆಕರ್ಷಿಸುತ್ತಿರುವುದು ಕನ್ನಡ ನೆಲದ ಹೆಮ್ಮೆಯಾಗಿದೆ.

Article Details

Section

Byway

References

ಪರಮಶಿವಯ್ಯ ಜೀ. ಶಂ. (ಸಂ). (1973). ಶ್ರೀ ಮಂಟೇಸ್ವಾಮಿ ಮಹಾಕಾವ್ಯ. ಸಾಹಿತ್ಯ ಸದನ. ಮೈಸೂರು.

ಮುತ್ತತ್ತಿ ಮುತ್ತಪ್ಪನ ಕಥೆ ಭಾಗ - 1 ತಂಬೂರಿ ಶೈಲಿ | | Konamanahalli Lakshmana Swamy: https://youtu.be/6SUui9tE5Hc?si=W42GePI2a83v3nPj

ಮುತ್ತತ್ತಿ ಮುತ್ತಪ್ಪನ ಕಥೆ ಭಾಗ - 2 ತಂಬೂರಿ ಶೈಲಿ |Konamanahalli Lakshmana Swamy: https://youtu.be/-e1D_HAeTk8?si=3lNjpzinsOoMCziX

ಪೂರ್ಣ ಹಾಡಿಗಾಗಿ ನೋಡಿ: Eththalo Maayavaada Lyrical| Dr.Rajkumar, Upendrakumar: https://youtu.be/yNFCVEwKIZA?si=wGE4h7uZbtW0Fk2y

ಹೆಚ್ಚಿನ ಮಾಹಿತಿಗಾಗಿ ನೋಡಿ: https://www.nativeplanet.com/travel-guide/muthathi-a-place-where-goddess-sita-gave-a-special-name-to-lord-hanuman-check-how-007903.html

ವಕ್ತೃ ಸಂದರ್ಶನ: ಡಾ.ಪ್ರದೀಪ್‌ಕುಮಾರ್, ಸಂಶೋಧಕರು ಹಾಗೂ ಪ್ರಾಧ್ಯಾಪಕರು, ಹಲಗೂರು.