ಗಂಗರಸ: ಮೈಲಾರದ ಶಾಸನೋಕ್ತ ವಿಜಯನಗರ ಅಧಿಕಾರಿ

Main Article Content

ಎನ್. ಎಸ್. ವೀರೇಶ ಉತ್ತಂಗಿ

Abstract

ವಿಜಯನಗರ ಸಾಮ್ರಾಟರ ಆಡಳಿತವು ಅತ್ಯಂತ ವೈಭವದಿಂದ ನಡೆದಿರುವುದು ಅವರ ಕೈಕೆಳಗಿನ ಅಧಿಕಾರಿಗಳಿಂದ. ಅವರು ಆಡಳಿತಾಧಿಕಾರಿಗಳಾಗಿರಬಹುದು, ಅಥವಾ ಸೇನಾಧಿಕಾರಿಗಳಾಗಿರಬಹುದು ಅಥವಾ ಭಂಡಾರದ ಅಧಿಕಾರಿಗಳಾಗಿರಬಹುದು ಅಥವಾ ಸ್ಥಳೀಯ ಅಧಿಕಾರಿಗಳಾಗಿರಬಹುದು. ಇಂಥ ಅಧಿಕಾರಿಗಳು ತಮ್ಮ ಶ್ರದ್ದೆ, ನಿಷ್ಠೆ, ಪ್ರಾಮಾಣಿಕತನದಿಂದ ಸಾಮ್ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅಂಥ ಪ್ರಾಮಾಣಿಕ ಅಧಿಕಾರಿಗಳಲ್ಲಿ ಮೈಲಾರದ ಮೈಲಾರಲಿಂಗೇಶ್ವರ ದೇವಾಲಯದ ಭಂಡಾರದ ಅಧಿಕಾರಿ ಗಂಗರಸನೂ ಒಬ್ಬ. ಈತ ವಂಶಪಾರಂಪರ್ಯ ಭಂಡಾರಿಯಾಗಿದ್ದಾನೆ. ತನಗೆ ಬಂದ ಆದಾಯದಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾನೆ. ಈತನು ವಿಜಯನಗರ ಸಂಗಮ ದೊರೆಗಳಾದ 1ನೇ ದೇವರಾಯ, ವಿಜಯರಾಯ ಮತ್ತು 2ನೇ ದೇವರಾಯನ ಆಳ್ವಿಕೆಯಲ್ಲಿ ಭಂಡಾರಿಯಾಗಿ ಕಾರ್ಯನಿರ್ವಹಿಸಿದ್ದಾನೆ.

Article Details

Section

Research Articles

Author Biography

ಎನ್. ಎಸ್. ವೀರೇಶ ಉತ್ತಂಗಿ

ಉಪನ್ಯಾಸಕರು, ಕೊಪ್ಪಳ ವಿಶ್ವವಿದ್ಯಾಲಯ, ಕೊಪ್ಪಳ.

References

ದೇವರಕೊಂಡಾರೆಡ್ಡಿ ಮತ್ತು ಇತರರು (ಸಂ), (1998), ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-1. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.