ತುಮಕೂರು ಪರಿಸರದ ಶೂನ್ಯ ಸಂಪಾದನೆಗಳು: ಒಂದು ಅವಲೋಕನ

Main Article Content

ಸಿ. ನಾಗಭೂಷಣ

Abstract

ಹನ್ನೆರಡನೆಯ ಶತಮಾನದ ವಚನಗಳನ್ನು ಸಂವಾದ ರೂಪದಲ್ಲಿ ಸಂಕಲಿಸಿದ 'ಶೂನ್ಯಸಂಪಾದನೆ'ಗಳ ರಚನೆ ಮತ್ತು ವಿಕಾಸದಲ್ಲಿ ತುಮಕೂರು ಜಿಲ್ಲೆಯ ಪಾತ್ರವು ಅತ್ಯಂತ ಮಹತ್ವದ್ದಾಗಿದೆ. ಶಿವಗಣಪ್ರಸಾದಿ ಮಹಾದೇವಯ್ಯನಿಂದ ಆರಂಭವಾದ ಈ ವಿಶಿಷ್ಟ ಪರಂಪರೆಯನ್ನು ತುಮಕೂರು ಪರಿಸರದ ಹಲಗೆಯಾರ್ಯ, ಗುಮ್ಮಳಾಪುರದ ಸಿದ್ಧಲಿಂಗಯತಿ ಮತ್ತು ಗೂಳೂರು ಸಿದ್ಧವೀರಣ್ಣೊಡೆಯರು ಮುಂದುವರೆಸಿದರು. ಮೂಲ ಕೃತಿಗೆ ನೂತನ ಪ್ರಸಂಗಗಳು ಹಾಗೂ ವಚನಗಳನ್ನು ಸೇರ್ಪಡೆಗೊಳಿಸಿ, ಅಂದಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಅಗತ್ಯಗಳಿಗೆ ತಕ್ಕಂತೆ ಪರಿಷ್ಕರಿಸಿದ ಈ ಕೃತಿಗಳು ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆಯಾಗಿವೆ.

Article Details

Section

Byway

Author Biography

ಸಿ. ನಾಗಭೂಷಣ

ಪ್ರಾಧ್ಯಾಪಕರು, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

References

ಭೂಸನೂರಮಠ ಸಂ. ಶಿ. (ಸಂ), ಗೂಳೂರು ಸಿದ್ಧವೀರಣ್‌ಡೆಯ ಶೂನ್ಯಸಂಪಾದನೆ. ಮಠಾಧಿಪತಿಗಳು ಸಿದ್ದಲಿಂಗೇಶ್ವರ ಸಂಸ್ಥಾನಮಠ, ರಾವೂರ. ನಾಲ್ಕನೇ ಮುದ್ರಣ 1999.

ಕಲಬುರ್ಗಿ ಎಂ. ಎಂ. & ವೀರಣ್ಣ ರಾಜೂರ (ಸಂ), ಗೂಳೂರು ಸಿದ್ಧವೀರಣ್ಣೂಡೆಯರು ರಚಿಸಿದ ಪ್ರಭುದೇವರ ಶೂನ್ಯ ಸಂಪಾದನೆ. ಲಿಂಗಾಯತ ಅಧ್ಯಯನ ಸಂಸ್ಥೆ, ಡಂಬಳ-ಗದಗ. 2016.

ರವೀಂದ್ರನಾಥ ಕೆ. ಮತ್ತು ಪ್ರಕಾಶ ಗಿರಿಮಲ್ಲನವರ್ (ಸಂ). ಗುಮ್ಮಳಾಪುರದ ಸಿದ್ಧಲಿಂಗಯತಿಗಳ ಶೂನ್ಯಸಂಪಾದನೆ. ಜನಕಲ್ಯಾಣ ಸಂಸ್ಥೆ, ಸೊಂಡೂರು. 2021.

ವಿದ್ಯಾಶಂಕರ ಎಸ್. ಮತ್ತು ಸಿದ್ದಲಿಂಗಯ್ಯ ಜಿ. ಎಸ್. (ಸಂ), ಹಲಗೆಯಾರ್ಯನ ಶೂನ್ಯ ಸಂಪಾದನೆ. ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು. 1998.

ತಿಪ್ಪೇರುದ್ರಸ್ವಾಮಿ ಹೆಚ್. ಶರಣರ ಅನುಭಾವ ಸಾಹಿತ್ಯ. ಡಿ.ವಿ.ಕೆ.ಮೂರ್ತಿ ಪ್ರಕಾಶನ, ಮೈಸೂರು. ನಾಲ್ಕನೇ ಮುದ್ರಣ 1994.

ಚಿದಾನಂದಮೂರ್ತಿ ಎಂ. ಶೂನ್ಯಸಂಪಾದನೆಯನ್ನು ಕುರಿತು. ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು. 1988.

ಕಲಬುರ್ಗಿ ಎಂ. ಎಂ. ಮಾರ್ಗ-1. ಕರ್ನಾಟಕ ಬುಕ್ ಏಜೆನ್ಸಿ, ಬೆಂಗಳೂರು. 1995.

ವಿದ್ಯಾಶಂಕರ ಎಸ್. ವೀರಶೈವ ಸಾಹಿತ್ಯ ಚರಿತ್ರೆ: ಸಂಪುಟ-3, ಭಾಗ 1. ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು. 2014.

ಶಿವಣ್ಣ ಎಸ್. ಬಿಡುಮುತ್ತು. ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, 2004.

ನಾಗಭೂಷಣ ಸಿ. ಶರಣ ಸಾಹಿತ್ಯ ದೀಪಿಕೆ. ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರಗಿ. 2017.

ನಾಗಭೂಷಣ ಸಿ. ಕನ್ನಡ ಸಾಹಿತ್ಯ-ಸಂಸ್ಕೃತಿ ಬಾಗಿನ. ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು. 2020.

ಬಸವರಾಜ ಸಬರದ (ಸಂ). ಶೂನ್ಯ ಸಂಪಾದನೆ. ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ, 2011.