ಸಾಮಾಜಿಕ ಜಾಲತಾಣಗಳು ಮತ್ತು ವಸಾಹತೋತ್ತರ ಸಾಹಿತ್ಯದ ಅಂತರ್ ಸಂಬಂಧ

Main Article Content

ರಾಮರೆಡ್ಡಿ ಕೆ.

Abstract

ಅನ್ವೇಷಣಾ ಬುದ್ಧಿಯನ್ನು ಹೊಂದಿದ ಮಾನವನ ದೃಷ್ಟಿಕೋನ ಅವನು ಕಲ್ಪಿಸಿಕೊಳ್ಳುವ ಸಂಗತಿಗಳನ್ನೆಲ್ಲ ಸಾಕಾರಗೊಳ್ಳುವಷ್ಟರ ಮಟ್ಟಿಗೆ ಇಂದು ತಾಂತ್ರಿಕವಾಗಿ ಬೆಳೆದಿದ್ದೇವೆ ಮತ್ತು ಮುಂದೆಯೂ ಬೆಳೆಯುತ್ತಿದ್ದೇವೆ. ಹೀಗಾಗಿ ಇಂದು ಸಾಮಾಜಿಕ ಜಾಲತಾಣಗಳು ಮಾನವ ಸಮುದಾಯವನ್ನು ಬಹುತೇಕ ಆಕ್ರಮಿಸಿಕೊಂಡಿದೆ. ಇದು ಮಾನವನ ಬದುಕಿನಲ್ಲಿ ಮಹತ್ತರವಾದ ಬದಲಾವಣೆಯನ್ನು ತಂದಿದೆ. ಇದಕ್ಕೆಲ್ಲ ಕಾರಣ ಪ್ರಪಂಚದ ಎಲ್ಲ ದೇಶ ದೇಶಗಳೊಡನೆ ಬೆಸೆದಿರುವ ಅಂತರಾಷ್ಟ್ರೀಯ ಸಂಬಂಧಗಳು ಮತ್ತು ವಿಜ್ಞಾನ-ತಂತ್ರಜ್ಞಾನದ ಬೆಳವಣಿಗೆಯೇ ಕಾರಣ. 1990ರ ನಂತರ ಜಾರಿಗೊಂಡ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣವು ಭಾರತದಲ್ಲಿ ನವ ಮನ್ವಂತರವನ್ನು ಸೃಷ್ಟಿಸಿದೆ. ಇದು ಪ್ರಪಂಚದ ಎಲ್ಲ ದೇಶಗಳೊಡನೆ ಕೊಳುಕೊಡೆ ಸಂಬಂಧವನ್ನು ಗಟ್ಟಿಗೊಳಿಸಿದೆ.
ಹದಿನೈದನೇ ಶತಮಾನದಲ್ಲಿ ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಪೋರ್ಚುಗೀಸರಿಂದ ಹಿಡಿದು ಬ್ರಿಟಿಷರವರೆಗೆ ವಸಾಹತುಶಾಹಿ ಕಾಲವೆಂದು ಕರೆದರೆ, ಸ್ವಾತಂತ್ರ್ಯ ನಂತರದ ಕಾಲವನ್ನು ವಸಾಹತೋತ್ತರ ಕಾಲವೆಂದು ಕರೆಯಲಾಗುತ್ತದೆ. ಪಾಶ್ಚಾತ್ಯರು ನಮ್ಮ ದೇಶದಲ್ಲಿ ವ್ಯಾಪಾರದೊಂದಿಗೆ ಶಿಕ್ಷಣ, ಸಾಹಿತ್ಯ, ಆಡಳಿತ, ತಂತ್ರಜ್ಞಾನವನ್ನು ಪರಿಚಯಿಸಿದರು. ಹಾಗಂತ ನಮ್ಮಲ್ಲಿ ತಂತ್ರಜ್ಞಾನ ಬೆಳೆದಿರಲಿಲ್ಲ ಅಂತಲ್ಲ. ಇದು ಭಾರತದಂತಹ ಬಹುಭಾಷಿಕ, ಬಹುಧಾರ್ಮಿಕ ದೇಶದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿತು. ಶಿಕ್ಷಣವು ಮಾನವನ ಬದುಕನ್ನೇ ಬದಲಿಸಿದರೆ, ತಂತ್ರಜ್ಞಾನವು ಅಭಿವೃದ್ಧಿಯ ಪಥವನ್ನು ರೂಪಿಸಿತು. ರೈಲು, ವಿದ್ಯುತ್, ಕೈಗಾರಿಕೆ, ಸಾರಿಗೆ, ದೂರವಾಣಿಯಂತಹ ತಾಂತ್ರಿಕತೆಗಳು ಹೊಸ ಕ್ರಾಂತಿಯನ್ನುಂಟುಮಾಡಿದವು. ಇದರ ಪರಿಣಾಮವಾಗಿ ಸಾಹಿತ್ಯದಲ್ಲಿ ಹೊಸ ರಚನೆಗಳು ಕಾಣಿಸಿಕೊಂಡವು. ಬಿ.ಎಂ.ಶ್ರೀಯವರ ಇಂಗ್ಲಿಷ್ ಗೀತಗಳಿಂದ ಇತ್ತೀಚಿನ ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ಅವರ ಎದೆಯ ಹಣತೆಯವರೆಗೆ ಕನ್ನಡ ಸಾಹಿತ್ಯವು ಸಮೃದ್ಧ ಫಸಲನ್ನು ಕಂಡಿದೆ.
ಇಂದು ತಂತ್ರಜ್ಞಾನವು ಮನುಷ್ಯನ ಆಲೋಚನೆಯನ್ನು ಕ್ಷಣ ಕ್ಷಣದಲ್ಲಿ ಸಮಾಜದಲ್ಲಿ ಬಿತ್ತರಿಸಲು ಸಾಧ್ಯಮಾಡಿದೆ. ಹೀಗಾಗಿ ಈ ಲೇಖನದಲ್ಲಿ ತಂತ್ರಜ್ಞಾನಾಧಾರಿತವಾದ ಸಾಮಾಜಿಕ ಜಾಲತಾಣಗಳು ಮತ್ತು ವಸಾಹತೋತ್ತರ ಕಾಲಘಟ್ಟದಲ್ಲಿ ರಚನೆಯಾದ ಸಾಹಿತ್ಯವು ಹೇಗೆ ಮಿಳಿತಗೊಂಡಿದೆ ಎನ್ನುವುದನ್ನು ಚರ್ಚಿಸಲಾಗಿದೆ. ಪ್ರಧಾನವಾಗಿ ಫೇಸ್‌ಬುಕ್, ವಾಟ್ಸಪ್ ಮತ್ತು ಬ್ಲಾಗ್‌ಗಳಲ್ಲಿ ಸೃಷ್ಟಿಯಾಗುತ್ತಿರುವ ಸಾಹಿತ್ಯವನ್ನು ಗಮನಿಸಲಾಗಿದೆ.

Article Details

Section

Research Articles

Author Biography

ರಾಮರೆಡ್ಡಿ ಕೆ.

ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ, ಕೆ.ಎಲ್.ಇ. ಸಂಸ್ಥೆಯ, ಎಸ್.ವಿ.ಎಸ್. ಬೆಳ್ಳುಬ್ಬಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಸವದತ್ತಿ, ಬೆಳಗಾವಿ.

References

https://education.cfr.org/learn/reading/what-colonialism-and-how-did-it-arise

Avadhi Blog ಜಿ.ಪಿಬಸವರಾಜು ಕವಿತೆ