ವಚನ ಸಾಹಿತ್ಯ: ಸ್ತ್ರೀವಾದದ ನೆಲೆಗಳು
Main Article Content
Abstract
ಹನ್ನೆರಡನೇ ಶತಮಾನದ ವಚನ ಚಳುವಳಿಯು ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾನತೆಯ ಹಾದಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿತು. ಲಿಂಗ ತಾರತಮ್ಯ, ವರ್ಣಭೇದ ಮತ್ತು ವೈದಿಕ ಸಂಪ್ರದಾಯದ ಕಟ್ಟುಪಾಡುಗಳನ್ನು ಮೀರಿ, ಸ್ತ್ರೀ-ಪುರುಷರಿಬ್ಬರೂ ಸಮಾನರು ಎಂಬ ತತ್ವವನ್ನು ಶರಣರು ಪ್ರತಿಪಾದಿಸಿದರು. ದೇವರ ದಾಸಿಮಯ್ಯ, ಬಸವಣ್ಣ, ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿಯರ ವಚನಗಳಲ್ಲಿ ಸ್ತ್ರೀಪರ ಕಾಳಜಿ ಮತ್ತು ಮಹಿಳಾ ವಿಮೋಚನೆಯ ದನಿಗಳು ಸ್ಪಷ್ಟವಾಗಿವೆ. ಹೆಣ್ಣು ಮಾಯೆಯಲ್ಲ, ಅವಳು ಪ್ರತ್ಯಕ್ಷ ದೇವತೆ ಹಾಗೂ ಸಮಾಜದ ನಿರ್ಮಾಣಕ್ಕೆ ಆಧಾರಸ್ತಂಭ ಎಂಬುದನ್ನು ವಚನಕಾರರು ತಮ್ಮ ಅನುಭವದ ಮೂಲಕ ತೋರಿಸಿಕೊಟ್ಟರು. ಆತ್ಮಕ್ಕೆ ಲಿಂಗಭೇದವಿಲ್ಲ ಎಂಬ ತಾತ್ವಿಕ ನೆಲೆಯಲ್ಲಿ ಸ್ತ್ರೀವಾದದ ಬೇರುಗಳನ್ನು ವಚನ ಸಾಹಿತ್ಯದಲ್ಲಿ ಗುರುತಿಸುವುದು ಈ ಅಧ್ಯಯನದ ಮುಖ್ಯ ಆಶಯವಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ದೇವರ ದಾಸಿಮಯ್ಯನ ವಚನ: ಸಂ- ಸಿ.ಭೂಸನೂರ ಮಠ, ವಚನ ಸಾಹಿತ್ಯ ಸಂಗ್ರಹ.
ವಚನ ವೈಭವ: ಶಂಕರ ಮ. ಪಾಟೀಲ ಸಂಗಮ ಪ್ರಕಾಶನ, ಕೊಲ್ಲಾಪುರ, 2013.
ಸಮಗ್ರ ವಚನ ಸಂಪುಟ : ಸಂ : ಬಿ.ವಿ ಮಲ್ಲಾಪುರ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, 1996.
ನಡುಗನ್ನಡ ಸಾಹಿತ್ಯ: ಡಾ ಪ್ರೇಮ್ ಚಂದ್ ಚವ್ಹಾಣ, ಉದಯೋನ್ಮುಖ ಯುವ ಬರಹಗಾರರ ಬಳಗ ಕಲಬುರ್ಗಿ, 2021.
ವಚನ ಸಾಹಿತ್ಯ ಮತ್ತು ಸಂಸ್ಕೃತಿ : ಡಾ.ಎಸ್.ಎನ್.ಅಂಗಡಿ, ಪ್ರಿಯದರ್ಶನಿ ಪ್ರಕಾಶನ ಬೆಂಗಳೂರು, 2013.
ಬಸವ ಮತ್ತು ದಲಿತೋದಯ : ಬಸವ ಸಮಿತಿ, ಬಸವೇಶ್ವರ ವೃತ್ತ ಬೆಂಗಳೂರು, 1984.
ಬಸವಯುಗದ ವಚನ ಮಹಾ ಸಂಪುಟ : ಡಾ.ಎಂ.ಎಂ ಕಲಬುರ್ಗಿ, ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, 2016.