ಕನ್ನಡ ಸಾಹಿತ್ಯ ಮತ್ತು ವಿಜ್ಞಾನದ ಸಾತತ್ಯ
Main Article Content
Abstract
ವಿಜ್ಞಾನದ ಜಟಿಲ ಸಿದ್ಧಾಂತಗಳು ಮತ್ತು ಸಂಶೋಧನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಕನ್ನಡ ಸಾಹಿತ್ಯವು ನಿರ್ವಹಿಸುತ್ತಿರುವ ಮಹತ್ವದ ಪಾತ್ರವನ್ನು ಈ ಬರಹವು ವಿಶ್ಲೇಷಿಸುತ್ತದೆ. ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಕಥೆಗಳಲ್ಲಿ ಕಂಡುಬರುವ ಜೀವವಿಕಾಸ, ಪರಿಸರ ವಿಜ್ಞಾನ ಮತ್ತು ವಿಸ್ಮಯಗಳ ಲೋಕವು ಸಾಮಾನ್ಯ ಓದುಗನಲ್ಲಿ ವೈಜ್ಞಾನಿಕ ಪ್ರಜ್ಞೆಯನ್ನು ಹೇಗೆ ಜಾಗೃತಗೊಳಿಸುತ್ತದೆ ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೆಯೇ, ಬಿ.ಜಿ.ಎಲ್. ಸ್ವಾಮಿಯವರ ‘ಹಸುರು ಹೊನ್ನು’ ಕೃತಿಯ ಮೂಲಕ ಸಸ್ಯಶಾಸ್ತ್ರವು ಸಾಹಿತ್ಯಿಕ ಚೌಕಟ್ಟಿನಲ್ಲಿ ಹಾಸ್ಯ ಮತ್ತು ಕುತೂಹಲದೊಂದಿಗೆ ಮೈದಾಳಿರುವುದನ್ನು ಲೇಖನವು ಗುರುತಿಸುತ್ತದೆ. ಒಟ್ಟಾರೆಯಾಗಿ, ಸಾಹಿತ್ಯವು ವಿಜ್ಞಾನವನ್ನು ಕೇವಲ ಮಾಹಿತಿಯನ್ನಾಗಿಸದೆ, ಮಾನವನ ಅನುಭವದ ಭಾಗವಾಗಿಸಿ ಮೂಢನಂಬಿಕೆಗಳನ್ನು ದೂರಮಾಡುವ ಸಾಧನವಾಗಿರುವ ಬಗೆಯನ್ನು ಈ ಲೇಖನವು ಸ್ಫುಟಗೊಳಿಸುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಪೂರ್ಣಚಂದ್ರ ತೇಜಸ್ವಿ ಕೆ.ಪಿ., (1991), ಪರಿಸರದ ಕತೆ, ಮೈಸೂರು: ಪುಸ್ತಕ ಪ್ರಕಾಶನ.
ಪೂರ್ಣಚಂದ್ರ ತೇಜಸ್ವಿ ಕೆ.ಪಿ., (1993), ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು, ಮೈಸೂರು: ಪುಸ್ತಕ ಪ್ರಕಾಶನ.
ಸ್ವಾಮಿ ಬಿ.ಜಿ.ಎಲ್., (1977), ಹಸುರು ಹೊನ್ನು, ಬೆಂಗಳೂರು: ಕಾವ್ಯಾಲಯ ಪ್ರಕಾಶಕರು.
ಪೂರ್ಣಚಂದ್ರ ತೇಜಸ್ವಿ ಕೆ.ಪಿ., (1980), ಕರ್ವಾಲೊ, ಮೈಸೂರು: ಪುಸ್ತಕ ಪ್ರಕಾಶನ.
ಪೂರ್ಣಚಂದ್ರ ತೇಜಸ್ವಿ ಕೆ.ಪಿ., (1993), ವಿಸ್ಮಯ 1, ಮೈಸೂರು: ಪುಸ್ತಕ ಪ್ರಕಾಶನ.
ಪೂರ್ಣಚಂದ್ರ ತೇಜಸ್ವಿ ಕೆ.ಪಿ., (1993), ವಿಸ್ಮಯ 2, ಮೈಸೂರು: ಪುಸ್ತಕ ಪ್ರಕಾಶನ.
ಪೂರ್ಣಚಂದ್ರ ತೇಜಸ್ವಿ ಕೆ.ಪಿ., (1993), ವಿಸ್ಮಯ 3, ಮೈಸೂರು: ಪುಸ್ತಕ ಪ್ರಕಾಶನ.