ದಲಿತ ಆತ್ಮಕತೆಗಳಲ್ಲಿ ಬಾಲ್ಯ ಮತ್ತು ಶಾಲಾ ಶಿಕ್ಷಣದ ನಿರೂಪಣೆಗಳು

Main Article Content

ಕಾಂತರಾಜ ಯಾದವ್ ಸಿ.

Abstract

ಮನುಷ್ಯನ ಬದುಕಿನಲ್ಲಿ ಬಾಲ್ಯದ ಅನುಭವವು ತುಂಬಾ ಮುಖ್ಯವಾದದ್ದು. ಬಾಲ್ಯದ ಬದುಕು ಎಲ್ಲರಿಗೂ ಒಂದೇ ರೀತಿಯದಾಗಿರುವುದಿಲ್ಲ. ಆ ವಯಸ್ಸಿನ ಶಿಕ್ಷಣವೂ ಕೂಡ ಬಾಲ್ಯದ ಅನುಭವವಗಳನ್ನು ದಟ್ಟವಾಗಿ ಆವರಿಸಿಕೊಂಡಿರುತ್ತದೆ. ಜಾತಿಯಾಧಾರಿತ ಸಾಮಾಜಿಕ ವ್ಯವಸ್ಥೆಯೂ ಕೂಡ ಈ ಬಾಲ್ಯದ ಮೇಲೆ ಪ್ರಭಾವವನ್ನು ಬೀರುತ್ತದೆ. ಮೇಲ್ಜಾತಿ, ಮಧ್ಯಮ ಜಾತಿಗಳು ಮೂಲಭೂತ ಸೌಕರ್ಯಗಳು ಮತ್ತು ಶಿಕ್ಷಣದ ಕುರಿತಂತೆ ಎಚ್ಚರಿಕೆಯಿಂದಿದ್ದರೆ, ತಳ ಸಮುದಾಯಗಳು ಮತ್ತು ಶ್ರಮಿಕ ವರ್ಗ ಮೂಲಭೂತ ಸೌಕರ್ಯಗಳಿಗಾಗಿಯೇ ಹೋರಾಟ ನಡೆಸುತ್ತಿರುವುದನ್ನು ಕಾಣಬಹುದು. ಈ ಸಂಧರ್ಭದಲ್ಲಿ ಶಿಕ್ಷಣದ ಕುರಿತ ಮಾತು ಕನಸಿನ ಪಯಣವೇ ಸರಿ. ಹಸಿವು ಮತ್ತು ಅವಮಾನಗಳಾಚೆಗಿನ ಬದುಕನ್ನು ದಲಿತ ಆತ್ಮಕಥೆಗಳಲ್ಲಿ ಕಾಣಬಹುದು. ಶಾಲೆಯ ಕುರಿತಂತೆ, ಶಿಕ್ಷಕರ ಕುರಿತಂತೆ ದಲಿತ ಆತ್ಮಕತೆಗಳು ಚಿತ್ರಿಸುವ ಸೂಕ್ಷ್ಮ ಪ್ರಜ್ಞೆಯು ಶಿಕ್ಷಣ ವ್ಯವಸ್ಥೆ ಕುರಿತ ಹೊಸ ಆಯಾಮವನ್ನು ತೆರೆದಿಡುತ್ತವೆ. ಆ ಕುರಿತ ಒಂದು ಸೂಕ್ಷ್ಮ ಚಿತ್ರಣವನ್ನು ಇಲ್ಲಿ ವಿಶ್ಲೇಷಿಸ ಲಾಗಿದೆ. 

Article Details

Section

Research Articles

Author Biography

ಕಾಂತರಾಜ ಯಾದವ್ ಸಿ.

ಸಂಶೋಧನಾರ್ಥಿ, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

References

ಅರವಿಂದ ಮಾಲಗತ್ತಿ, (2024), ಗೌರ್ಮೆಂಟ್‌ ಬ್ರಾಹ್ಮಣ, ಚೇತನ ಬುಕ್‌ ಹೌಸ್‌, ಮೈಸೂರು.

ಲಲಿತಾ ನಾಯಕ್‌ ಬಿ.ಟಿ., (2014), ಸಮಗ್ರ ಸಾಹಿತ್ಯ ಸಂಪುಟ-2, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ಮೊಗಳ್ಳಿ ಗಣೇಶ್‌, (2023), ನಾನೆಂಬುದು ಕಿಂಚಿತ್ತು, ದೇಸಿ ಪುಸ್ತಕ, ಬೆಂಗಳೂರು.

ತುಂಬಾಡಿ ರಾಮಯ್ಯ, (2014), ಮಣೆಗಾರ, ತುಂಬಾಡಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್‌, ತುಮಕೂರು.

ಸರಸ್ವತಿ ದು., (2001), ಈಗೇನ್‌ ಮಾಡೀರಿ?, ಮಾನಸ, ಬೆಂಗಳೂರು.