ವಿಜಯಶ್ರೀ ಸಬರದರವರ ಕಾವ್ಯಗಳಲ್ಲಿ ಮಹೀಳಾ ಚಿಂತನೆ

Main Article Content

ನಾಗೇಂದ್ರಪ್ಪ ಶಿವಶರಣಪ್ಪ

Abstract

ಆಧುನಿಕ ಕಾವ್ಯಗಳನ್ನು ಅವಲೋಕಿಸಿದಾಗ ವಿಜಯಶ್ರೀ ಸಬರದರವರ ಕಾವ್ಯಗಳಲ್ಲಿ ಮಹಿಳಾ ಪರ ಚಿಂತನೆಗಳನ್ನು ಕಾಣುತ್ತೇವೆ. ಮಹಿಳೆಯನ್ನು ಪುರುಷ ಪ್ರಧಾನವಾದ ವ್ಯವಸ್ಥೆಯಲ್ಲಿ ಎರಡನೆಯ ದರ್ಜೆಯ ಪ್ರಜೆ ಎಂದು ಪರಿಗಣಿಸಿ ಆಕೆಯನ್ನು ವಿದ್ಯೆಯಿಂದ, ಅಸ್ತಿಯಿಂದ, ಸ್ವಾತಂತ್ರ್ಯದಿಂದ ದೂರವಿಡಲಾಗಿತ್ತು. ಆಕೆಗೆ ಸ್ವಾತಂತ್ರ್ಯವನ್ನು ಕೊಡಬಾರದು ಎಂದು ಈ ದೇಶದ ಧರ್ಮ ಗ್ರಂಥಗಳು ಹೇಳುತ್ತವೆ. ಆಕೆ ಮೈಲಿಗೆ, ಮಾಯೆ, ಚಂಚಲೆ, ಎಂದು ಕರೆಯುವುದರ ಮೂಲಕ ಅತ್ಯಂತ ಕೀಳಾಗಿ ಕಾಣುತ್ತಿದ್ದರು. ಮಹಿಳೆ ಜೀವನ ಪರ್ಯಂತ ಅಸ್ಪೃಶ್ಯಳಾಗಿ ಬದುಕುವಂತಹ ಅನಿವಾರ್ಯ ಪದ್ಧತಿ ಈ ದೇಶದ ಚರಿತ್ರೆಯಲ್ಲಿತ್ತು. ವೇದಗಳಲ್ಲಿ ಆಕೆಯನ್ನು ತುಂಬಾ ಹೀನಾಯವಾಗಿ ನೋಡುತ್ತಾರೆ. ಮಹಿಳೆಗೆ ಬುದ್ಧಿ ಕಡಿಮೆ ಇದೆ, ಅವಳ ಹೃದಯ ಕಿರುಬನಿಗಿಂತಲೂ ಕ್ರೂರವಾದುದು ಎಂದು ಹೇಳುತ್ತಾರೆ. ದೇಶದ ಪುರಾಣ, ಇತಿಹಾಸ, ಚರಿತ್ರೆ, ಯಜ್ಞಾವಲ್ಕ ಚಾಣುಕ್ಯ, ಮುಂತಾದವರು ಅವರ ಅಸ್ಥಿತ್ವವನ್ನು ನಿರಾಕರಿಸುತ್ತಲೇ ಬಂದಿದ್ದಾರೆ.

Article Details

Section

Research Articles

Author Biography

ನಾಗೇಂದ್ರಪ್ಪ ಶಿವಶರಣಪ್ಪ

ಅತಿಥಿ ಉಪನ್ಯಾಸಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಹುಲಸೂರು, ಬಸವಕಲ್ಯಾಣ, ಬೀದರ.

References

ವಿಜಯಶ್ರೀ ಸಬರದ, (2019), ಕಾವ್ಯ ಸಂಗಮ (ಆಯ್ದ ಕವಿತೆಗಳು), ಸಿವಿಜಿ ಇಂಡಿಯಾ, ಬೆಂಗಳೂರು.

ಶೇಷಗಿರಿ ರಾವ್ ಎಲ್.ಎಸ್. (2017), ಹೊಸಗನ್ನಡ ಸಾಹಿತ್ಯ ಚರಿತ್ರೆ, ಅಂಕಿತ ಪುಸ್ತಕ, ಬೆಂಗಳೂರು,

ಮುಗಳಿ ರಂ.ಶ್ರೀ. (2018), ಕನ್ನಡ ಸಾಹಿತ್ಯ ಚರಿತ್ರೆ, ಗೀತಾ ಬುಕ್‌ ಹೌಸ್‌, ಮೈಸೂರು.