ಕಾರಂತರ 'ಮರಳಿ ಮಣ್ಣಿಗೆ' ಕಾದಂಬರಿಯಲ್ಲಿ ದೇಶಿಯತೆಯ ಶೋಧನೆ
Main Article Content
Abstract
ಡಾ. ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’ ಕಾದಂಬರಿಯ ಹಿನ್ನೆಲೆಯಲ್ಲಿ ವಸಾಹತುಶಾಹಿ ಆಧುನಿಕತೆ ಮತ್ತು ಸಾಂಪ್ರದಾಯಿಕತೆಯ ನಡುವಿನ ಸಂಘರ್ಷ ಹಾಗೂ ದೇಶೀಯತೆಯ ಶೋಧನೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಮೂರು ತಲೆಮಾರುಗಳ ಬ್ರಾಹ್ಮಣ ಕುಟುಂಬದ ಕಥೆಯ ಮೂಲಕ ಪ್ರಕೃತಿ ಮತ್ತು ಮನುಷ್ಯನ ಅವಿನಾಭಾವ ಸಂಬಂಧವನ್ನು, ವಿಶೇಷವಾಗಿ ಕಡಲಿನೊಡನೆ ಪಾತ್ರಗಳಿಗಿರುವ ನಂಟನ್ನು ವಿಶ್ಲೇಷಿಸಲಾಗಿದೆ. ಪಾರೋತಿ, ಸರಸೋತಿ ಮತ್ತು ನಾಗವೇಣಿಯಂತಹ ಸ್ತ್ರೀ ಪಾತ್ರಗಳ ಸಂಕಷ್ಟಗಳು ಹಾಗೂ ಪುರುಷ ಪ್ರಧಾನ ವ್ಯವಸ್ಥೆಯ ದ್ವಂದ್ವಗಳನ್ನು ಗುರುತಿಸಲಾಗಿದೆ. ಅಂತಿಮವಾಗಿ, ಆಧುನಿಕ ಶಿಕ್ಷಣ ಪಡೆದರೂ ತನ್ನ ಅಸ್ತಿತ್ವಕ್ಕಾಗಿ ಮರಳಿ ಹಳ್ಳಿಗೆ ಬಂದು ಕೃಷಿಯಲ್ಲಿ ತೊಡಗುವ ರಾಮನ ಪಾತ್ರದ ಮೂಲಕ ದೇಶೀಯ ಸಂಸ್ಕೃತಿಯ ಸತ್ವಶೀಲತೆಯನ್ನು ಎತ್ತಿಹಿಡಿಯಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಅಮೂರ ಜಿ. ಎಸ್., 1983, ಕನ್ನಡ ಕಾದಂಬರಿಯ ಬೆಳವಣಿಗೆ, ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು.
ಅಮೂರ ಜಿ. ಎಸ್., 1986, ಸಮಕಾಲೀನ ಕಥೆ-ಕಾದಂಬರಿ ಹೊಸ ಪ್ರಯೋಗಗಳು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-18.
ಅಶೋಕ ಟಿ. ಪಿ., 1990, ಶಿವರಾಮ ಕಾರಂತ ಎರಡು ಅಧ್ಯಯನಗಳೂ, ಅಕ್ಷರ ಪ್ರಕಾಶನ, ಹೆಗ್ಗೋಡು(ಸಾಗರ), ಕರ್ನಾಟಕ.
ಕೇಶವ ಶರ್ಮ ಕೆ., 1988, ಶಬ್ದರೇಖೆ, ಅಭಿನವ ಪ್ರಕಾಶನ, ಬೆಂಗಳೂರು-560010.
ಕೋದಂಡ ರಾಮ ಎನ್. ಕೆ., 1996, ಕನ್ನಡ ಕಥಾ ಸಹಿತ್ಯದಲ್ಲಿ ಸಾಂಸ್ಕೃತಿಕ ಸಂಘರ್ಷ, ಗಾಯತ್ರಿ ಸ್ಮಾರಕ ಗ್ರಂಥ ಮಾಲೆ, ಬೋಗಾದಿ, ಮೈಸೂರು.