ಕನ್ನಡ ರಂಗಗೀತೆಗಳಲ್ಲಿ ಷಟ್ಟದಿ ಸಾಹಿತ್ಯದ ಹೊಸ ಶೋಧ
Main Article Content
Abstract
ಕನ್ನಡ ಸಾಹಿತ್ಯದ ದೇಸಿ ಛಂದೋಪ್ರಕಾರವಾದ ಷಟ್ಪದಿಯು ಉತ್ತರ ಕರ್ನಾಟಕದ ವೃತ್ತಿ ರಂಗಭೂಮಿಯ ರಂಗಗೀತೆಗಳಲ್ಲಿ ಹೇಗೆ ಬಳಕೆಯಾಗಿದೆ ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಕಂದಗಲ್ಲ ಹಣಮಂತರಾಯ ಹಾಗೂ ಗರುಡ ಸದಾಶಿವರಾಯರಂತಹ ಪ್ರಮುಖ ರಂಗಕವಿಗಳು ಕುಮಾರವ್ಯಾಸನ ಭಾಮಿನಿ ಷಟ್ಪದಿಯಿಂದ ಪ್ರಭಾವಿತರಾಗಿ, ತಮ್ಮ ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳಲ್ಲಿ ಇದನ್ನು ಸಮರ್ಥವಾಗಿ ದುಡಿಸಿಕೊಂಡಿದ್ದಾರೆ. ಮುಖ್ಯವಾಗಿ ಸಂಭಾಷಣೆ, ಪ್ರಾರ್ಥನೆ ಮತ್ತು ಸೌಂದರ್ಯ ವರ್ಣನೆಯ ಸನ್ನಿವೇಶಗಳಲ್ಲಿ ಷಟ್ಪದಿಯನ್ನು ಗಾಯನಕ್ಕೆ ಅನುಕೂಲವಾಗುವಂತೆ ಮಾತ್ರೆಗಳನ್ನು ಸಡಿಲಿಸಿ, ತದ್ಭವ ಶಬ್ದಗಳನ್ನು ಬಳಸಿ ರಂಗಗೀತೆಗಳಾಗಿ ಮಾರ್ಪಡಿಸಿದ ಬಗೆಯನ್ನು ಇಲ್ಲಿ ಚರ್ಚಿಸಲಾಗಿದೆ. ಛಂದಸ್ಸಿನ ಕಟ್ಟುಪಾಡುಗಳಿಗಿಂತ ನಾಟಕೀಯತೆ ಮತ್ತು ಗಾಯನದ ಅಗತ್ಯಗಳಿಗೆ ರಂಗಕವಿಗಳು ನೀಡಿದ ಆದ್ಯತೆಯನ್ನು ಇದು ಕಟ್ಟಿಕೊಡುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಅಳಗಿ ಎಸ್. ಬಿ., ಕಂದಗಲ್ಲ ಹಣಮಂತರಾಯರ ನಾಟಕಗಳ ಸಮೀಕ್ಷೆ, ಲಿಪಿ ಪ್ರಕಾಶನ, ಬೆಂಗಳೂರು, 1994.
ಆಚಾರ್ ಕೆ. ಎ.(ಸಂ), ಹಂ. ಪ. ನಾಗರಾಜಯ್ಯ (ಪ್ರಸಂ), ರಂಗಗೀತೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, 1981.
ಕರ್ಕಿ ಡಿ. ಎಸ್., ಕನ್ನಡ ಛಂದೋವಿಕಾಸ, ಭಾರತ ಪ್ರಕಾಶನ, ಧಾರವಾಡ, 2002.
ಕಂದಗಲ್ಲ ಹಣಮಂತರಾಯ, ವರಪ್ರದಾನ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 1996.
ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಸಂ), ಕುಮಾರವ್ಯಾಸ ಮಹಾಕವಿಯ ಕರ್ಣಾಟ ಭಾರತ ಕಥಾಮಂಜರಿ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, 1988.
ಪರಮಶಿವಯ್ಯ ಜೀ. ಶಂ., ಹ. ಕ. ರಾಜೇಗೌಡ, ಪ. ಸು. ಭಟ್ಟ (ಸಂ.), ದೇ. ಜವರೇಗೌಡ (ಪ್ರ.ಸಂ.), ಶ್ರೀ ಕೆ. ವಿ. ಶಂಕರಗೌಡ ಅಭಿನಂದನ ಗ್ರಂಥ ಕಬ್ಬಿನ ಹಾಲು, ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್, ಮೈಸೂರು, 1975.
ಬಸವರಾಜ ಜಗಜಂಪಿ, ಗರೂಡ ಸದಾಶಿವರಾಯರು ನಾಟಕ ಸಾಹಿತ್ಯ ಹಾಗೂ ವೃತ್ತಿರಂಗಭೂಮಿಯ ಅಧ್ಯಯನ, ವೀರಶೈವ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ಸಂಸ್ಥಾನಮಠ, ಗದಗ, 1993.
ಬೆಳಗಲಿ ದು. ನಿಂ.(ನಿರೂಪಕರು)., ನನ್ನ ಬಣ್ಣದ ಬದುಕು ('ನಾಟ್ಯಭೂಷಣ' ಏಣಗಿ ಬಾಳಪ್ಪನವರ ಆತ್ಮಕಥನ), ಕನ್ನಡ ವಿಶ್ವವಿದ್ಯಾಲಯ, ಹಂಪಿ, 1999.
ಮಲ್ಲಯ್ಯ ಸಂಡೂರು, ರಂಗದೊಳಗಿನ ಗೀತೆ, ಅರುಣ್ ಪ್ರಕಾಶನ, ಹೊಸಪೇಟೆ, 2016.
ಮಲ್ಲಿಕಾರ್ಜುನ ಮನ್ಸೂರ್, ನನ್ನ ರಸಯಾತ್ರೆ, ಅಭಿನವ, ಬೆಂಗಳೂರು.
ರಮಾಕಾಂತ ಜೋಶಿ, ಪ್ರಕಾಶ ಗರುಡ(ಸಂ.), ಗರುಡ ಸದಾಶಿವರಾಯರ ಸಮಗ್ರ ನಾಟಕ (ಸಂಪುಟ:1, 2), ಮನೋಹರ ಗ್ರಂಥಮಾಲಾ, ಧಾರವಾಡ, 2011.
ರಮಾಕಾಂತ ಜೋಶಿ, ಸವಣೂರ ವಾಮನರಾವ ಸಮಗ್ರ ನಾಟಕ ಸಂಪುಟ, ಮನೋಹರ ಗ್ರಂಥಮಾಲಾ, ಧಾರವಾಡ, 2011.
ರಂಗನಾಥ್ ಎಚ್. ಕೆ., ಕರ್ನಾಟಕ ರಂಗಭೂಮಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2000.
ರಾಮಕೃಷ್ಣ ಮರಾಠ, ಉತ್ತರ ಕರ್ನಾಟಕದ ವೃತ್ತಿರಂಗಭೂಮಿ, ಇಳಾ ಪ್ರಕಾಶನ, ಬೆಂಗಳೂರು, 1994.
ರಾಮನಾಥ್ ಎಚ್. ಕೆ., ಕನ್ನಡ ರಂಗಭೂಮಿ ವಿಕಾಸ, ಅಭಿನಯ ಪ್ರಕಾಶನ, ಬೆಂಗಳೂರು, 1990.