ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸಾಮಾಜಿಕ ಸಮಸ್ಯೆಗಳು
Main Article Content
Abstract
ಈ ಆಧುನಿಕ, ಆಧುನಿಕೋತ್ತರ, ವಸಾಹತು, ವಸಾಹತುಶಾಹಿ, ವಸಾಹತೋತ್ತರ, ಸ್ತ್ರೀವಾದ, ವಾಸ್ತವವಾದ, ಅಸ್ತಿತ್ವವಾದ, ರಾಚನಿಕವಾದ, ಸಂರಚನೋತ್ತರವಾದ, ಪ್ರಜ್ಞಾಪ್ರವಾಹತಂತ್ರ - ಇವೇ ಮೊದಲಾದ ವಾದವನ್ನು ಗುರುತಿಸುತ್ತೇವೆ, ಎಲ್ಲವೂ ಪಾಶ್ಚಿಮಾತ್ಯರ ಕೊಡುಗೆಯೇ. ಭಾರತವನ್ನಾಳಿದ ಬ್ರಿಟಿಷರ ಆಳ್ವಿಕೆಯ ಕಾಲ ವಸಾಹತು ಕಾಲ. ಅನಂತರದ್ದೆಲ್ಲಾ ವಸಾಹತೋತ್ತರವೇ. ಸರಳವಾಗಿ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ಎಂದಿಟ್ಟುಕೊಳ್ಳಬಹುದು. ಬದಲಾವಣೆ ಜಗದ ನಿಯಮ. ಇಡೀ ಜಗತ್ತಿನ ಸಾಮಾಜಿಕ, ರಾಜಕೀಯ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಚಲನೆಯಲ್ಲಿ ಯಾವುದೇ ಸ್ಥಿತ್ಯಂತರಗಳಾದರೂ ಆಯಾ ಕಾಲದ ಸಾಮಾಜಿಕ ಚಿಂತಕರು, ಕವಿಗಳು, ಬರಹಗಾರರು, ವಿಜ್ಞಾನಿಗಳು, ಆ ಕಾಲಘಟ್ಟದ ಸೂಕ್ಷ್ಮಗಳನ್ನು, ಬದುಕಿನ ಏರಿಳಿತಗಳನ್ನು, ಹೊಸ ಆಲೋಚನೆಗಳನ್ನು, ಮುನ್ನೋಟಗಳನ್ನು, ಹುಡುಕಾಟಗಳನ್ನು, ಆವಿಷ್ಕಾರಗಳನ್ನು, ಹಲವಾರು ಕಾಣಿಕೆಗಳನ್ನು ಕಟ್ಟಿಕೊಡುತ್ತಿರುತ್ತಾರೆ. ಈ ಮೊದಲು ಹೇಳಿದ ವಾದಗಳೆಲ್ಲ ಹಾಗೆ ಹುಟ್ಟಿದವುಗಳೇ. ಇಂಥ ವಾದಗಳು ವಸಾಹತುಶಾಹಿ ಅಥವಾ ಜಾಗತೀಕರಣದ ಪ್ರಭಾವದಿಂದ ಹಲವು ದೇಶಗಳಿಗೆ ತಲುಪಿ, ಅಲ್ಲಿನ ಚಿಂತಕರನ್ನು ಪ್ರಭಾವಿಸಿ, ಆಯಾ ದೇಶಕಾಲಕ್ಕನುಗುಣವಾಗಿ ರೂಪಾಂತರಗೊಂಡು ಅವುಗಳದ್ದೇ ಆದ ರೀತಿಯಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳುತ್ತವೆ. ಪ್ರಸ್ತುತ ವಿಷಯದ ಆಧುನಿಕೋತ್ತರ ಅಥವಾ ವಸಾಹತೋತ್ತರದ ಚಿಂತನೆಗಳು ನಮ್ಮ ಕನ್ನಡದ ಚಿಂತಕರನ್ನು ಪ್ರಭಾವಿಸಿದ್ದು ಹೇಗೆ? ಅವು ನಮ್ಮ ಸಾಹಿತ್ಯದ ಮೇಲೆ ಬೀರಿದ ಪ್ರಭಾವ ಯಾವ ರೀತಿಯದ್ದು? ಇವು ಕನ್ನಡ ಸಾಹಿತ್ಯದಲ್ಲಿ ಉಂಟುಮಾಡಿದ ಸಾಮಾಜಿಕ ಬದಲಾವಣೆಗಳೇನು? ಎನ್ನುವುದರ ಒಂದು ಪುಟ್ಟ ಪ್ರಯತ್ನ ಈ ಲೇಖನದ ಉದ್ದೇಶ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಶೇಷಗಿರಿ ರಾವ್ ಎಲ್. ಎಸ್., (2016), ಹೊಸಗನ್ನಡ ಸಾಹಿತ್ಯ, ಬೆಂಗಳೂರು: ಸಪ್ನ ಬುಕ್ ಹೌಸ್.
ರಾಮಚಂದ್ರನ್ ಸಿ. ಎನ್., (2002), ವಸಾಹತೋತ್ತರ ಚಿಂತನೆ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.
ಶಿವರುದ್ರಪ್ಪ ಜಿ. ಎಸ್., (2016), ಹೊಸಗನ್ನಡ ಸಾಹಿತ್ಯ ಸಮೀಕ್ಷೆ, ಬೆಂಗಳೂರು: ಸಪ್ನ ಬುಕ್ ಹೌಸ್.
ರಾಘವೇಂದ್ರರಾವ್ ಎಚ್. ಎಸ್. (ಸಂ), (2001), ಶತಮಾನದ ಸಾಹಿತ್ಯ ವಿಮರ್ಶೆ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.
ಶ್ರೀಮತಿ ಎಚ್. ಎಸ್. (ಸಂ), (2006), ಮಹಿಳಾ ಸಾಹಿತ್ಯ ಚರಿತ್ರೆ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ರಾಮಚಂದ್ರನ್ ಸಿ. ಎನ್., (2008), ಸಾಹಿತ್ಯ ವಿಮರ್ಶೆ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.
ಸಿದ್ಧಲಿಂಗಯ್ಯ, (2005), ನನ್ನ ಜನಗಳು ಮತ್ತು ಇತರ ಕವಿತೆಗಳು, ಬೆಂಗಳೂರು: ಕ್ರಾಂತಿಸಿರಿ ಪ್ರಕಾಶನ.