ಜನಪದ ಗೀತೆಗಳಲ್ಲಿ ಕಾವ್ಯ ಸೌಂದರ್ಯ

Main Article Content

ವೇದಾವತಿ ಎಸ್.

Abstract

ಕಾವ್ಯ ಮೀಮಾಂಸೆಯ ಪ್ರಮುಖ ಅಂಶಗಳಾದ ‘ಧ್ವನಿ’ ಮತ್ತು ‘ರಸ’ಗಳು ಜನಪದ ಗೀತೆಗಳಲ್ಲಿ ಸಹಜವಾಗಿ ಮೈಗೂಡಿವೆ. ಗ್ರಾಮೀಣರು ಕವಿಯಾಗುವ ಉದ್ದೇಶದಿಂದ ಬರೆಯದಿದ್ದರೂ, ಅವರ ಜೀವನಾನುಭವ ಮತ್ತು ಭಾವನೆಗಳು ಉನ್ನತ ಮಟ್ಟದ ಕಾವ್ಯವಾಗಿ ಹೊರಹೊಮ್ಮಿವೆ. ಸ್ತುತಿಗೀತೆಗಳು, ತಾಯ್ತನದ ವಾತ್ಸಲ್ಯ, ಬಂಜೆಯ ನೋವು ಹಾಗೂ ನೀತಿಗೀತೆಗಳ ಮೂಲಕ ಜನಪದರು ಬದುಕಿನ ಮೌಲ್ಯಗಳನ್ನು ಮತ್ತು ಸೌಂದರ್ಯವನ್ನು ಹೇಗೆ ಕಟ್ಟಿಕೊಟ್ಟಿದ್ದಾರೆ ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ತ್ರಿಪದಿಗಳಲ್ಲಿನ ಉಪಮೆ, ರೂಪಕ ಮತ್ತು ಆಡುಮಾತಿನ ಸೊಗಸು ಶಿಷ್ಟ ಕಾವ್ಯಕ್ಕೂ ಮಾದರಿಯಾಗಿದೆ. ಒಟ್ಟಾರೆಯಾಗಿ, ಜನಪದ ಸಾಹಿತ್ಯವು ಭಾರತೀಯ ಸಂಸ್ಕೃತಿಯ ಮತ್ತು ಬದುಕಿನ ನೈಜ ಕನ್ನಡಿಯಾಗಿದ್ದು, ಕಾವ್ಯದ ಮೂಲಸತ್ವವನ್ನು ಸಾಕ್ಷಾತ್ಕರಿಸಿಕೊಂಡಿದೆ ಎಂಬುದನ್ನು ಸಾಬೀತುಪಡಿಸಲಾಗಿದೆ.

Article Details

Section

Research Articles

Author Biography

ವೇದಾವತಿ ಎಸ್.

ಸಹ ಪ್ರಾಧ್ಯಾಪಕರು, ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಸರ್ಕಾರಿ ಕಾಲೇಜು ಕಾಸರಗೋಡು.

References

ಜವರೇಗೌಡ ದೇ., (2015), ಜನಪದ ಗೀತಾಂಜಲಿ, ಬೆಂಗಳೂರು: ಸಪ್ನ ಬುಕ್ ಹೌಸ್.

ಜವರೇಗೌಡ ದೇ., (2015), ಜಾನಪದ ಅಧ್ಯಯನ, ಬೆಂಗಳೂರು: ಸಪ್ನ ಬುಕ್ ಹೌಸ್.