ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಮೌಲ್ಯಗಳು
Main Article Content
Abstract
ಕನಕದಾಸರು ಸಾಮಾಜಿಕ ಚಿಂತನೆ ಮತ್ತು ವೈಚಾರಿಕ ದೃಷ್ಟಿಕೋನದ ಮೂಲಕ ಸಮಾಜವನ್ನು ಕಟ್ಟಲು ಪ್ರಯತ್ನಿಸಿದರು. ಇವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದುದು. ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವುದರ ಮೂಲಕ ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ. ಇವರು ತಮ್ಮ ಹರಿತವಾದ ಮಾತುಗಳಿಂದ ಸಮಾಜದ ಅನ್ಯಾಯಗಳನ್ನು, ಕುಂದು ಕೊರತೆಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ ಖಂಡಿಸಿದ್ದಾರೆ. ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಕಳಕಳಿ ಮತ್ತು ಮಾನವೀಯ ಮೌಲ್ಯಗಳ ಮಿಡಿತಗಳಿವೆ. ಇವರ ಕಾವ್ಯಗಳು ಮತ್ತು ಕೀರ್ತನೆಗಳು ಸಾಮಾಜಿಕ ಪರಿವರ್ತನೆಗೆ ದಾರಿದೀಪಗಳಾಗಿವೆ. ಇವುಗಳು ಅಂದಿಗೆ ಮಾತ್ರ ಸೀಮಿತವಾಗದೆ ಇಂದಿಗೂ ಕೂಡ ಪ್ರಸ್ತುತವಾಗಿವೆ. ಇವರ ಕೀರ್ತನೆಗಳ ಒಳ ಮರ್ಮವನ್ನು ಅರಿತುಕೊಳ್ಳುವುದು ಇಂದು ಅಗತ್ಯವಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಸುಧಾಕರ (ಸಂ), (2012), ಕನಕದಾಸರ ಕೀರ್ತನೆಗಳು ಮತ್ತು ಮಂಡಿಗೆಗಳು, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
ಚಿಕ್ಕಣ್ಣ ಕಾ. ತ. (ಸಂ), (2015), ಕನಕ ಓದು, ಬೆಂಗಳೂರು: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ.
ರುದ್ರಪ್ಪ ತಳವಾರ, (2001), ಕನಕದಾಸರ ಕೀರ್ತನೆಗಳು ಮತ್ತು ಲಘು ಕೃತಿಗಳು ಒಂದು ಅಧ್ಯಯನ, ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ (ಕ. ವಿ. ವಿ).
ವಾಲಿ ಎ. ಸಿ., (2018), ಶಿಶುನಾಳಧೀಶ, ಬಂಡಿವಾಡ: ಆಧ್ಯಾತ್ಮ ಟ್ರಸ್ಟ್.
ಪ. ಪೂ. ಶ್ರೀ ಶ್ರೀಧರ ಗಂಗಾಧರ ಮುರಾಳೆ ಶಿವಯೋಗಿಗಳು, (2019), ಶ್ರೀ ಶರೀಫರ ನೂರೊಂದು ತತ್ವಪದಗಳ ಭಾವಾರ್ಥ ದೀಪಿಕೆ, ಶಿಶುವಿನಾಳ: ಪಂಚಾಗ್ನಿಮಠ ಟ್ರಸ್ಟ್.
ಚನ್ನಕ್ಕ ಪಾವಟೆ, (2003), ಶಾಸನ ಸಂಜೀವಿನಿ, ಧಾರವಾಡ: ಚನ್ನಗಂಗಾ ಪ್ರಕಾಶನ.
ಪಾಟೀಲ ಭೋಜರಾಜ, (1995), ನಾಗರಖಂಡ-70 ಒಂದು ಅಧ್ಯಯನ, ಆನಂದಪುರಂ.
ಚನ್ನಪ್ಪ ಉತ್ತಂಗಿ (ಸಂ), (1999), ಸರ್ವಜ್ಞನ ವಚನಗಳು, ಬೆಂಗಳೂರು: ಪ್ರಕಾಶ ಸಾಹಿತ್ಯ.
ಬಸವರಾಜ ಎಲ್. (ಸಂ), (2012), ಸರ್ವಜ್ಞನ ವಚನಗಳು, ಮೈಸೂರು: ಗೀತಾ ಬುಕ್ ಹೌಸ್.