ವಚನಗಳಲ್ಲಿ ಪ್ರಸಾದ ತತ್ವ: ಆಯ್ದಕ್ಕಿ ದಂಪತಿಗಳ ವಚನಗಳನ್ನು ಅನುಲಕ್ಷಿಸಿ
Main Article Content
Abstract
೧೨ನೇ ಶತಮಾನದ ವಚನ ಚಳುವಳಿಯು ಸಮಾಜಕ್ಕೆ ನೀಡಿದ ಶ್ರೇಷ್ಠ ಪರಿಕಲ್ಪನೆಗಳಲ್ಲಿ ‘ಪ್ರಸಾದ’ ಅತ್ಯಂತ ಮಹತ್ವದ್ದಾಗಿದೆ. ಇದು ಕೇವಲ ಅನ್ನ ಅಥವಾ ದೇವರಿಗೆ ಅರ್ಪಿಸುವ ನೈವೇದ್ಯಕ್ಕೆ ಮಾತ್ರ ಸೀಮಿತವಾಗಿರದೆ; ಅಹಂಕಾರವನ್ನು ತೊರೆದು ಸಮರ್ಪಣಾಭಾವದಿಂದ ಸ್ವೀಕರಿಸುವ ಆಂತರಿಕ ಶುದ್ಧತೆಯ ಪ್ರತೀಕವಾಗಿದೆ. ಷಟ್ಸ್ಥಲ ಸಿದ್ಧಾಂತದಲ್ಲಿ ಪ್ರಮುಖವಾದ ಪ್ರಸಾದದ ಕುರಿತು ವಚನಕಾರರಲ್ಲಿರುವ ಬಹುಮುಖಿ ನಿಲುವುಗಳನ್ನು ಶೋಧಿಸುತ್ತಾ, ವಿಶೇಷವಾಗಿ ಕಾಯಕನಿಷ್ಠರಾದ ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮ ದಂಪತಿಗಳ ವಚನಗಳ ಹಿನ್ನೆಲೆಯಲ್ಲಿ ಈ ತತ್ವವನ್ನು ವಿಶ್ಲೇಷಿಸಲಾಗಿದೆ. ಮಾರಯ್ಯನವರ ಪ್ರಕಾರ ಸತ್ಯ ಮತ್ತು ಚಿತ್ತಶುದ್ಧಿಯೇ ಪ್ರಸಾದವಾದರೆ, ಲಕ್ಕಮ್ಮನವರ ದೃಷ್ಟಿಯಲ್ಲಿ ಅದು ಶರಣರ ಸಂಪರ್ಕದಿಂದ ಕಾಯ, ಜೀವ, ಅಂತರಂಗಗಳನ್ನು ಶುದ್ಧೀಕರಿಸುವ ಉನ್ನತ ಜ್ಞಾನವಾಗಿದೆ. ದಾಸೋಹದ ಮುಂದುವರಿದ ರೂಪವಾದ ‘ಪ್ರಸಾದ’ವು ಆರ್ಥಿಕ ಸಮಾನತೆ ಹಾಗೂ ಮಾನವನ ಆಂತರಿಕ-ಬಾಹ್ಯ ಬದುಕನ್ನು ಪಾವನಗೊಳಿಸುವ ಸಾಂಸ್ಕೃತಿಕ ಆಶಯವಾಗಿ ಹೇಗೆ ರೂಪುಗೊಂಡಿದೆ ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕಲಬುರ್ಗಿ ಎಂ. ಎಂ., (2001), ಸಮಗ್ರ ವಚನ ಸಂಪುಟ: 01 (ಬಸವಣ್ಣನವರ ವಚನಗಳು), ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.
ವೀರಣ್ಣ ರಾಜೂರ ಮತ್ತು ಡಾ. ಎಂ. ಎಂ. ಕಲಬುರ್ಗಿ, (2001), ಸಮಗ್ರ ವಚನ ಸಂಪುಟ: 05 (ಶಿವಶರಣೆಯರ ವಚನಗಳು), ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.
ಕಲಬುರ್ಗಿ ಎಂ. ಎಂ., (2001), ಸಮಗ್ರ ವಚನ ಸಂಪುಟ: 06 (ಸಂಕೀರ್ಣ ವಚನ ಸಂಪುಟ), ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.
ಮಹದೇವಪ್ಪ ಎಂ. ಜಿ., (2001), ಸಮಗ್ರ ವಚನ ಸಂಪುಟ: 15 (ವಚನ ಪಾರಿಭಾಷಾ ಕೋಶ), ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.
ತಿಪ್ಪೇರುದ್ರಸ್ವಾಮಿ ಹೆಚ್., (1969), ವಚನಗಳಲ್ಲಿ ವೀರಶೈವ ಧರ್ಮ, ಮೈಸೂರು: ಡಿ. ವಿ. ಕೆ. ಮೂರ್ತಿ ಪ್ರಕಾಶನ.
ವಿದ್ವಾನ್ ಎಂ. ಮಲ್ಲಣ್ಣ, (1997), ಶೈವಾಗಮ ಸಾರ, ಮೈಸೂರು: ಶ್ರೀ ಮಲ್ಲಿಕಾರ್ಜುನ ಗ್ರಂಥ ಪ್ರಕಾಶನ.