ಸ್ತ್ರೀವಾದಿ ಹಿನ್ನೆಲೆಯಲ್ಲಿ ‘ಭೂಮಿಯಲ್ಲ ಇವಳು’

Main Article Content

ವಾಣಿ ಬಿ.ಎನ್.

Abstract

ಹೆಚ್.ಎಲ್. ಪುಷ್ಪ ಅವರು ರಚಿಸಿದ ‘ಭೂಮಿಯಲ್ಲ ಇವಳು’ ನಾಟಕವು ಜನ್ನನ ‘ಯಶೋಧರ ಚರಿತೆ’ಯ ಅಮೃತಮತಿಯ ಪಾತ್ರವನ್ನು ಆಧುನಿಕ ಸ್ತ್ರೀವಾದಿ ನೆಲೆಗಟ್ಟಿನಲ್ಲಿ ಮರುಸೃಷ್ಟಿಸಿದೆ. ಪುರುಷಪ್ರಧಾನ ಸಮಾಜದ ಕಟ್ಟುಪಾಡುಗಳನ್ನು ಧಿಕ್ಕರಿಸಿ, ತನ್ನ ಆಸೆ-ಆಕಾಂಕ್ಷೆಗಳ ಈಡೇರಿಕೆಗಾಗಿ ಹಾಗೂ ಆಂತರಿಕ ನೆಮ್ಮದಿಗಾಗಿ ಹಾತೊರೆಯುವ ದಿಟ್ಟ ಮಹಿಳೆಯಾಗಿ ಅಮೃತಮತಿ ಇಲ್ಲಿ ಮೂಡಿಬಂದಿದ್ದಾಳೆ. ಯಾಂತ್ರಿಕವಾದ ರಾಜವೈಭೋಗವನ್ನು ತಿರಸ್ಕರಿಸಿ, ತನ್ನಿಚ್ಛೆಯ ಬದುಕನ್ನು ಅರಸುವ ಅವಳ ತುಡಿತವನ್ನು ಕೃತಿಯು ಸೂಕ್ಷ್ಮವಾಗಿ ಕಟ್ಟಿಕೊಡುತ್ತದೆ. ಇದರೊಟ್ಟಿಗೆ, ರಾಣಿ, ಸೇವಕಿ ಮಾದೇವಿ ಮತ್ತು ವೇಶ್ಯೆ ತಿಮ್ಮಕ್ಕನ ಪಾತ್ರಗಳ ಮೂಲಕ ವಿಭಿನ್ನ ವರ್ಗದ ಮಹಿಳೆಯರ ಬದುಕಿನ ಬವಣೆ, ಅಸಹಾಯಕತೆ ಮತ್ತು ಅವರ ಬಂಡಾಯದ ಮನಸ್ಥಿತಿಯನ್ನು ವಿಶ್ಲೇಷಿಸಲಾಗಿದೆ. ಪೌರಾಣಿಕ ಕಥಾವಸ್ತುವಿನ ಮೂಲಕ ವರ್ತಮಾನದ ಸ್ತ್ರೀ ಸಂವೇದನೆ, ಅವಳ ಬಿಡುಗಡೆಯ ಹಂಬಲ ಹಾಗೂ ಬದಲಾದ ಆಲೋಚನಾ ಕ್ರಮಗಳನ್ನು ಈ ವಿಶ್ಲೇಷಣೆಯು ಅತ್ಯಂತ ಮಾರ್ಮಿಕವಾಗಿ ತೆರೆದಿಡುತ್ತದೆ.

Article Details

Section

Research Articles

Author Biography

ವಾಣಿ ಬಿ.ಎನ್.

ಸಂಶೋಧನಾರ್ಥಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

How to Cite

ವಾಣಿ ಬಿ.ಎನ್. (2026). ಸ್ತ್ರೀವಾದಿ ಹಿನ್ನೆಲೆಯಲ್ಲಿ ‘ಭೂಮಿಯಲ್ಲ ಇವಳು’. ಅಕ್ಷರಸೂರ್ಯ (AKSHARASURYA), 15(06), 93 to 99. https://aksharasurya.com/index.php/latest/article/view/2111

References

ಜನ್ನ (ಲೇಖಕ) ಮತ್ತು ಕೆ. ವಿ. ರಾಘವಾಚಾರ್ (ಸಂಪಾದಕರು), (1973), ಯಶೋಧರ ಚರಿತೆ, ಮೈಸೂರು: ಪ್ರಸಾರಾಂಗ, ಮೈಸೂರು ವಿ.ವಿ.

ನಾರಾಯಣ ಬಿ. ಪವಾರ (ಸಂಪಾದಕರು), (2002), ಮಹಿಳಾ ನಾಟಕಗಳು, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ಡಾ. ವಿಜಯಾದೇವಿ (ಸಂಪಾದಕರು), (1998), ಆಧುನಿಕ ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ - ನಾಟಕ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ಹೆಚ್. ಎಸ್. ರಾಘವೇಂದ್ರರಾವ್ (ಸಂಪಾದಕರು), (2001), ಶತಮಾನದ ಸಾಹಿತ್ಯ ವಿಮರ್ಶೆ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.

ತೀ. ನಂ. ಶ್ರೀಕಂಠಯ್ಯ, (2004), ತೀ. ನಂ. ಶ್ರೀ. ಸಮಗ್ರ ಗದ್ಯ (ಜನ್ನನ ಕಾವ್ಯಗಳಲ್ಲಿ ಪ್ರಣಯ ನಿರೂಪಣೆ), ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.