ಹೊಯ್ಸಳ ಅರಸ ಎರಡನೇ ಬಲ್ಲಾಳನ ಆಡಳಿತದಲ್ಲಿ ಮಾವಂತ ಮನೆತನದ ಕೊಡುಗೆಗಳು

Main Article Content

ರಾಜು ಕೂಡಗಿ

Abstract

ಹೊಯ್ಸಳರ ಆಳ್ವಿಕೆಯಲ್ಲಿ, ವಿಶೇಷವಾಗಿ ಇಮ್ಮಡಿ ಬಲ್ಲಾಳನ ಕಾಲದಲ್ಲಿ, ಮಾವಂತ ಮನೆತನದವರು ಆಡಳಿತಾತ್ಮಕ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಕೋಳಗುಂದ ಗ್ರಾಮವನ್ನು ಕೇಂದ್ರವಾಗಿಟ್ಟುಕೊಂಡು ಆಡಳಿತ ನಡೆಸಿದ ಈ ಮನೆತನದ ನಾಯಕರು, ಮಹಾಪಸಾಯಿತ ಮತ್ತು ಮಹಾಪ್ರಧಾನರಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಯುದ್ಧಗಳಲ್ಲಿ ರಾಜನಿಗೆ ಗಜಪಡೆಯನ್ನು ಒದಗಿಸುವುದರ ಜೊತೆಗೆ, ಹೊಸ ಊರು, ಕೆರೆಗಳ ನಿರ್ಮಾಣ, ಜೀರ್ಣೋದ್ಧಾರ, ಕೃಷಿ ಅಭಿವೃದ್ಧಿ, ಮತ್ತು ದೇವಾಲಯಗಳ ನಿರ್ಮಾಣದಲ್ಲಿ ಇವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ತಳಸಮುದಾಯದಿಂದ ಬಂದಿದ್ದರೂ ತಮ್ಮ ನಿಷ್ಠೆ ಮತ್ತು ಶೌರ್ಯದಿಂದ ಉನ್ನತ ಸ್ಥಾನಕ್ಕೇರಿದ ಇವರ ಇತಿಹಾಸವನ್ನು ಅರಸೀಕೆರೆ ತಾಲೂಕಿನ ಕೋಳಗುಂದದಲ್ಲಿ ದೊರೆತಿರುವ ಶಾಸನಗಳ ಆಧಾರದ ಮೇಲೆ ವಿಶ್ಲೇಷಿಸಲಾಗಿದೆ.

Article Details

Section

Research Articles

Author Biography

ರಾಜು ಕೂಡಗಿ

ಸಹಾಯಕ ಪ್ರಾಧ್ಯಾಪಕರು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆ, ನವನಗರ, ಹುಬ್ಬಳ್ಳಿ.

References

ಕೇಶವಭಟ್ಟ ಎಂ. ವಿ. & ಕೃಷ್ಣರಾವ್ ಎಂ. (ಸಂ): ಕರ್ನಾಟಕದ ಇತಿಹಾಸ ದರ್ಶನ, ಬೆಂಗಳೂರು. 1979.

ದಿವಾಕರ್ ಆರ್. ಆರ್. (ಸಂ): ಕರ್ನಾಟಕದ ಪರಂಪರೆ ಸಂಪುಟ-1, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, 2014.

ಲಲಿತಾಂಬ ಎನ್. ಆರ್.: ಮಧ್ಯಕಾಲೀನ ಕರ್ನಾಟಕದ ಸಾಮಾಜಿಕ ಸಂಚಲನ, ಮುದ್ದುಶ್ರೀ ಗ್ರಂಥಮಾಲೆ, ಬೆಂಗಳೂರು, 2011.

ಷೇಕ್‌ ಅಲಿ ಬಿ. (ಸಂ): ಕರ್ನಾಟಕ ಚರಿತ್ರೆ ಸಂಪುಟ- 2, ಕನ್ನಡ ವಿಶ್ವವಿದ್ಯಾಲಯ, ಹಂಪಿ, 1997.

Shivanna. K. S.: A Critque of Hoysala Polity, Mysore 1998.

William Coehlo: THE HOYSALA VAMSHA, Indian Historical Institute, St. Xavier's College, Bombay. 1950.

ಎಪಿಗ್ರಾಫಿಯ ಕರ್ನಾಟಿಕ, ಸಂಪುಟ-10, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, 1997.

ಕನ್ನಡ ವಿಷಯ ವಿಶ್ವಕೋಶ: ಇತಿಹಾಸ ಮತ್ತು ಪುರಾತತ್ವ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, 2009.