ತತ್ವಪದಗಳ ಪರಂಪರೆ ಮತ್ತು ಜಾತಿಯ ಕಲ್ಪನೆ
Main Article Content
Abstract
ಕನ್ನಡ ನಾಡಿನ ಜೀವಂತ ಪರಂಪರೆಯಾಗಿರುವ ತತ್ವಪದಗಳು ಸಮಾಜದ ಜಾತಿ, ಧರ್ಮ ಮತ್ತು ವರ್ಣಾಶ್ರಮ ವ್ಯವಸ್ಥೆಯನ್ನು ಕಟುವಾಗಿ ವಿರೋಧಿಸುತ್ತವೆ. ಭಾರತೀಯ ಶ್ರಮಣಧಾರೆಗಳ ಪ್ರಭಾವವನ್ನು ಒಳಗೊಂಡಿರುವ ಈ ಅನುಭಾವ ಸಾಹಿತ್ಯವು, ಎಲ್ಲರಿಗೂ ಮುಕ್ತಿಯ ಸಮಾನ ಹಕ್ಕಿದೆ ಎಂದು ಸಾರುತ್ತದೆ. ಸಿದ್ಧ ಮತ್ತು ಗುರು ಪರಂಪರೆಗೆ ಸೇರಿದ ಸಾಧಕರು ದೇಹವನ್ನೇ ಸಾಧನೆಯ ವೇದಿಕೆಯನ್ನಾಗಿಸಿಕೊಂಡು, ಜ್ಞಾನಮಾರ್ಗದ ಮೂಲಕ ಸತ್ಯದ ಅನುಸಂಧಾನ ನಡೆಸುತ್ತಾರೆ. ಈ ಪಂಥದಲ್ಲಿ ಕುಲ, ಜಾತಿ, ಸೂತಕ ಮತ್ತು ಲಿಂಗ ಅಸಮಾನತೆಗೆ ಯಾವುದೇ ಸ್ಥಾನವಿಲ್ಲ; ಬದಲಾಗಿ ವಿಶ್ವಕುಟುಂಬಿಯ ಮನೋಭಾವ ಎದ್ದು ಕಾಣುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನೂ ಒಳಗೊಳ್ಳುವ ಈ ಪರಂಪರೆಯು, ತತ್ವಪದಗಳ ಮೂಲಕ ಸಾಮಾಜಿಕ ಅಸಮಾನತೆಗಳನ್ನು ನಿರಾಕರಿಸಿ ಮನುಷ್ಯರೆಲ್ಲರೂ ಸಮಾನರು ಎಂಬ ತಾತ್ವಿಕತೆಯನ್ನು ಬಲವಾಗಿ ಪ್ರತಿಪಾದಿಸಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ತನ್ನ ತಾನು ತಿಳಿದ ಮೇಲೆ, ಡಾ. ಮೀನಾಕ್ಷಿಬಾಳಿ, ಶ್ರೀ ವೀರೇಶ್ವರ ಪ್ರಕಾಶನ, 2006, ಶ್ರೀ ಮಡಿವಾಳೇಶ್ವರ ಮಠ, ಕಡಕೋಳ.
ಶಿಶುನಾಳ ಶರೀಪರ ಗೀತೆಗಳು, ಡಾ. ಶಿವಾನಂದ ಗುಬ್ಬಣ್ಣನವರ (ಸಂ), ಅಕ್ಷರ ಪ್ರಕಾಶನ, ಧಾರವಾಡ, 2002.
ಕಡಕೋಳ ಮಡಿವಾಳಪ್ಪನವರು, ಎಲ್. ಬಿ. ಕೆ. ಅಲ್ಪಾಳ, ಕನ್ನಡ ಸಾಹಿತ್ಯ ಪರಿಷತ್ತು, 2018.
ಎಲ್ಲ ಜಾತಿಯ ಮರಗಳ ಕಾಡು, ತತ್ವಪದಕಾರರು, ಅಭಿನವ ಪ್ರಕಾಶನ, ರಾಜಾಜಿನಗರ, ಬೆಂಗಳೂರು, 1995.