ತತ್ವಪದ ಸಾಹಿತ್ಯದ ಉಗಮ ಮತ್ತು ಭಾಷೆ
Main Article Content
Abstract
ತತ್ವಪದಗಳು ಸಮಾಜದಲ್ಲಿ ಮಾನವನ ದೇಹವನ್ನು ಮುಖ್ಯ ನೆಲೆಯಾಗಿ ಮಾಡಿಕೊಂಡು ಆಧ್ಯಾತ್ಮಿಕ ವಿಚಾರಗಳನ್ನು ಸಾಂಕೇತಿಕವಾಗಿ ನಿರೂಪಿಸುತ್ತವೆ. ಹನ್ನೆರಡನೇ ಶತಮಾನದ ವಚನಕಾರರಿಂದ ಆರಂಭವಾದ ಈ ಪರಂಪರೆಗೆ ಹದಿನಾರನೇ ಶತಮಾನದ ನಿಜಗುಣ ಶಿವಯೋಗಿಗಳು ಭದ್ರ ಬುನಾದಿ ಹಾಕಿದರು. ತತ್ವಪದ ಸಾಹಿತ್ಯವು ಪಂಡಿತರ ಮತ್ತು ರಾಜರ ಆಶ್ರಯದಿಂದ ಹೊರಬಂದು, ಜನಸಾಮಾನ್ಯರ, ದುಡಿಯುವ ವರ್ಗದ ಕಾವ್ಯವಾಗಿ ಬೆಳೆಯಿತು. ಶಿಶುನಾಳ ಶರೀಫ, ಕಡಕೋಳ ಮಡಿವಾಳಪ್ಪನಂತಹ ತತ್ವಪದಕಾರರು ಸಂಸಾರದಲ್ಲಿದ್ದುಕೊಂಡೇ ಜಾತಿ, ಮೂಢನಂಬಿಕೆಗಳನ್ನು ವಿರೋಧಿಸಿ ಸಹಬಾಳ್ವೆಯ ಮಾರ್ಗ ತೋರಿದರು. ಜೈನ, ವಚನ ಮತ್ತು ದಾಸ ಸಾಹಿತ್ಯಗಳಂತೆ ತತ್ವಪದ ಸಾಹಿತ್ಯವು ಕನ್ನಡ ನಾಡಿನ ಸಾಂಸ್ಕೃತಿಕ ಚರಿತ್ರೆ ಹಾಗೂ ಭಕ್ತಿ ಚಳುವಳಿಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ತತ್ವಪದ ಸಾಹಿತ್ಯ ಅಧ್ಯಯನ, ಡಾ. ಅಮರೇಶ ನುಗಡೋಣಿ, ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2017.
ತತ್ವಪದಗಳ ಭಾಷೆ ಮತ್ತು ಬಂಧ, ಡಾ. ಚಂದ್ರಶೇಖರನಂಗಲಿ, ಕನ್ನಡ ಸಂಘ, ಕ್ರೈಸ್ಟ್ ಕಾಲೇಜು, ಬೆಂಗಳುರು, 1998.
ಭಾಷೆಯ ಸುತ್ತ-ಮುತ್ತ, ಕೆ. ವಿ. ನಾರಾಯಣ, ಕ್ರೈಸ್ಟ್ ಕಾಲೇಜು, 2000.
ಕನ್ನಡ ಭಾಷಾ ಸ್ವರೂಪ, ಕುವೆಂಪು ಅಧ್ಯಯನ ಸಂಸ್ಥೆ, ಮಾನಸ ಗಂಗೋತ್ರಿ, 1997.